AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆ ಬಟ್ಟೆಯಲ್ಲೇ ಹೊಸ ಸೂರು ಕಟ್ಟಿಕೊಂಡ ಅಲೆಮಾರಿಗಳು!

ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು. ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್​ಡೌನ್​ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್​ಡೌನ್​ನಿಂದ ಅಲ್ಲೇ […]

ಹಳೆ ಬಟ್ಟೆಯಲ್ಲೇ ಹೊಸ ಸೂರು ಕಟ್ಟಿಕೊಂಡ ಅಲೆಮಾರಿಗಳು!
ಆಯೇಷಾ ಬಾನು
|

Updated on:Jun 11, 2020 | 4:09 PM

Share

ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು.

ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್​ಡೌನ್​ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್​ಡೌನ್​ನಿಂದ ಅಲ್ಲೇ ಉಳಿಯುವಂತಾಯ್ತು. ಇನ್ನು ಜೀವನೋಪಾಯದ ದಾರಿಯೇ ಮುಚ್ಚಿಹೋದ ಮೇಲೆ ಮುಂದೇನು ಎಂಬ ಯೋಚನೆ ಇವರಿಗೂ ಕಾಡಿತ್ತು.

ಅಲೆಮಾರಿಗಳ ನೆರವಿಗೆ ಬಂದ ಸ್ಥಳೀಯರು, ಸಂಘ ಸಂಸ್ಥೆಗಳು ಲಾಕ್​ಡೌನ್​ನಿಂದ ಎದುರಾದ ಸಮಸ್ಯೆಯಿಂದ ಅಲೆಮಾರಿಗಳು ಕೊಂಚ ವಿಚಲಿತರಾದರೂ ಧೃತಿಗೆಡದೆ ಇದ್ದುದ್ದರಲ್ಲಿ ಬದುಕು ಸಾಗಿಸೋಣ ಎಂಬ ನಿರ್ಧಾರಕ್ಕೆ ಮುಂದಾದರು. ತಲಗುಂದ ಗ್ರಾಮದವರ ನೆರವಿನಿಂದ ತಮ್ಮ ಬಳಿ ಇದ್ದ ಹಳೇ ಬಟ್ಟೆಗಳಿಂದಲೇ ಸುಂದರ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡರು. ಜೊತೆಗೆ ಕಳೆದ 2 ತಿಂಗಳಿಂದ ಕೆಲವು ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಹೊಟ್ಟೆ ತುಂಬಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೆ ಬರೀ ಅಷ್ಟಕ್ಕೇ ಸೀಮಿತವಾಗದೆ ಸ್ವಾವಲಂಬಿಗಳಾದ ಇವರು ಅವಕಾಶ ಸಿಕ್ಕಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಕೂಡ ಮಾಡುತ್ತಿದ್ದಾರೆ .

ಒಟ್ನಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿ ತಮ್ಮ ತಮ್ಮ ಊರುಗಳತ್ತ ಮುಖಮಾಡಿ ಹೊರಟ ಕೂಲಿ ಕಾರ್ಮಿಕರಿಗೆ ಮತ್ತು ಇತರರಿಗೆ ಈ ಅಲೆಮಾರಿಗಳು ಒಂದು ರೀತಿಯ ಸ್ಫೂರ್ತಿಯಾಗಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಎಂಬ ಡಾ.ವಿಷ್ಣುವರ್ಧನ್​ ಅವರ ಸಿನಿಮಾದ ಹಾಡಿನ ಸಾಲುಗಳಂತೆ ಹಳೆ ಬಟ್ಟೆಯಿಂದ ಮಾಡಿದ ಸೂರು ಸಾಕು ಹಾಯಾಗಿರೋಕೆ ಎಂದು ಈ ಅಲೆಮಾರಿಗಳು ಎಲ್ಲರಿಗೆ ತೋರಿಸಿಕೊಟ್ಟಿದ್ದಾರೆ.

Published On - 11:29 am, Thu, 11 June 20

Follow Us
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ಗ್ಯಾಸ್ ​ಇಲ್ಲದಿದ್ರೂ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರಸಾದ ಲಭ್ಯ!
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
ನೀವು ಮಾಡುವ ಒಂದು ಸಣ್ಣ ತಪ್ಪಿನಿಂದ ದೊಡ್ಡ ಅಪಘಾತವೇ ಸಂಭವಿಸಬಹುದು ಎಚ್ಚರ
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
2 ನಿಮಿಷ ತಡವಾಗಿ ಬಂದ ಬಾಲಕನಿಗೆ 2 ಗಂಟೆ ಬಿಸಿಲಲ್ಲಿ ನಿಲ್ಲಿಸಿ ಶಿಕ್ಷೆ!
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ
ಯುಗಾದಿ- ರಂಜಾನ್ ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆ ಬೆಲೆ ಭಾರೀ ಏರಿಕೆ