ಕಸಗುಡಿಸ್ತಿದ್ದವನ ಬಳಿ 100 ಕೋಟಿ ರೂ ಆಸ್ತಿ: ಬಗೆದಷ್ಟು ಬಯಲಾಗುತ್ತಿದೆ ಕೆಆರ್​ಐಡಿಎಲ್​​ನ ಅಕ್ರಮ

ಕೊಪ್ಪಳದ ಕೆಆರ್​ಐಡಿಎಲ್‌ನಲ್ಲಿ 72 ಕೋಟಿ ರೂಪಾಯಿಗಳ ಅಕ್ರಮ ನಡೆದಿರುವುದು ತನಿಖೆಯಲ್ಲಿ ಬಯಲಾಗಿದೆ. 108 ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು, ಪ್ರಮುಖ ಆರೋಪಿ ಝಡ್. ಎಂ. ಚಿಂಚೋಳಿಕರ್ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಗುತ್ತಿಗೆದಾರರಿಗೂ ತೀವ್ರ ಸಂಕಷ್ಟ ಎದುರಾಗಿದೆ.

ಕಸಗುಡಿಸ್ತಿದ್ದವನ ಬಳಿ 100 ಕೋಟಿ ರೂ ಆಸ್ತಿ: ಬಗೆದಷ್ಟು ಬಯಲಾಗುತ್ತಿದೆ ಕೆಆರ್​ಐಡಿಎಲ್​​ನ ಅಕ್ರಮ
ಕಳಕಪ್ಪ ನೀಡಗುಂದಿ
Edited By:

Updated on: Aug 03, 2025 | 9:53 AM

ಕೊಪ್ಪಳ, ಆಗಸ್ಟ್​ 03: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRIDL) ಬಗೆದಷ್ಟು ಅಕ್ರಮ ಬಯಲಾಗುತ್ತಿದೆ. ಹೊರಗುತ್ತಿಗೆ ನೌಕರ ಬಳಿಕ ಇದೀಗ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ನಡುಕ ಶುರುವಾಗಿದೆ. ಏಕೆಂದರೆ 108 ಕಾಮಗಾರಿಗಳಲ್ಲಿ ಸುಮಾರು 72 ಕೋಟಿ ರೂ ಅಕ್ರಮ ನಡೆದಿರುವುದು ಸಾಬೀತಾಗಿದೆ. ಹೀಗಾಗಿ ಎ1 ಆರೋಪಿ ಝಡ್.ಎಂ ಚಿಂಚೋಳಿಕರ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಲೋಕಾಯುಕ್ತ (Lokayukta) ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಪ್ಪಳದ ಕೆಆರ್​ಐಡಿಎಲ್​ನಲ್ಲಿ 72 ಕೋಟಿ ರೂ ಅಕ್ರಮ ಹಿನ್ನಲೆ ಈ ಹಿಂದಿನ ಕಾರ್ಯಾಪಾಲಕ ಅಭಿಯಂತರ ಎ1 ಝಡ್ ಎಂ ಚಿಂಚೋಳಿಕರ್​, ನೆಲಗೋಗಿಪುರದ ಹೊರಗುತ್ತಿಗೆ ಸಹಾಯಕ ನೌಕರ, ಸಹಾಕಯ ಅಭಿಯಂತರ ಎ2 ಕಳಕಪ್ಪ ನೀಡಗುಂದಿ, ಎ3 ಕಾಮಗಾರಿಗೆ ಸಂಬಂಧಿಸಿದ ಗುತ್ತಿಗೆದಾರರು ಮತ್ತು ಎ4 ಇತರರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕೆಆರ್​ಐಡಿಎಲ್ ದಿನಗೂಲಿ ನೌಕರನಾಗಿದ್ದವ ಇಂದು ಆಗರ್ಭ ಶ್ರೀಮಂತ: ಕೊಪ್ಪಳ, ಭಾಗ್ಯ ನಗರದಲ್ಲಿ 24 ಮನೆ!

ಇದನ್ನೂ ಓದಿ
Lokayukta Raid: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಲೋಕಾಯುಕ್ತ ದಾಳಿ
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕಂತೆ-ಕಂತೆ ಹಣ, ವಜ್ರ-ವೈಡೂರ್ಯ ಪತ್ತೆ
ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ಕರ್ನಾಟಕದ 7 ಕಡೆ ಲೋಕಾಯುಕ್ತ ದಾಳಿ

72 ಕೋಟಿ ರೂ ಅಕ್ರಮದ ರೂವಾರಿ ಝಡ್.ಎಂ ಚಿಂಚೋಳಿಕರ್​​ ಒಬ್ಬರೇ ವಿವಿಧ ಹುದ್ದೆ ನಿರ್ವಹಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಆರೋಪಿ ನಂಬರ್ 1 ಝಡ್ ಎಂ ಚಿಂಚೋಳಿಕರ್​​ ಕೆಆರದದಐಡಿಎಲ್ ನೆಲೋಗಿಪುರ, ಕೊಪ್ಪಳ ವಿಭಾಗದ ಕಿರಿಯ ಸಹಾಯಕ ಅಭಿಯಂತರರು, ಸಹಾಯಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರು ಈ ಎಲ್ಲಾ ಹುದ್ದೆಗಳನ್ನು ನಿರ್ವಹಿಸಿರುವುದು ತನಿಖೆಯಲ್ಲಿ ಧೃಡವಾಗಿದೆ. ಹೀಗಾಗಿ ಚಿಂಚೋಳಿಕರ್​ ಸೇರಿದಂತೆ ಗುತ್ತಿಗೆದಾರರಿಗೂ ಸಂಕಷ್ಟ ಶುರುವಾಗಿದೆ. ಯಾವುದೇ ಕ್ಷಣದಲ್ಲಾದರೂ ಚಿಂಚೋಳಿಕರ್​ ಹಾಗೂ ಗುತ್ತಿಗೆದಾರರ ಮನೆ ಮೇಲೆ ಲೋಕಾಯುಕ್ತ ದಾಳಿಯಾಗುವ ಸಾಧ್ಯತೆ ಇದೆ.

ನೌಕರ ಕಳಕಪ್ಪ ನೀಡಗುಂದಿ ಮನೆ ಮೇಲೆ ಲೋಕಾ ದಾಳಿ

ಇತ್ತೀಚೆಗೆ ಹೊರಗುತ್ತಿಗೆ ನೌಕರ ಕಳಕಪ್ಪ ನೀಡಗುಂದಿ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿತ್ತು. ಮೊದಲು ಕಸ ಬಳೆಯುವ ದಿನಗೂಲಿ ನೌಕರನಾಗಿ ಕೆಲಸಕ್ಕೆ ಸೇರಿಸೇರಿದ್ದ ಕಳಕಪ್ಪ ನೀಡಗುಂದಿ ಇಂದು ಕುಬೇರನಾಗಿದ್ದಾನೆ. ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಆಸ್ತಿ ಪತ್ತೆಯಾಗಿತ್ತು. 24 ಮನೆಗಳು 4 ನಿವೇಶನ ಮತ್ತು 40 ಎಕರೇ ಕೃಷಿ ಜಮೀನು ಹೊಂದಿದ್ದಾನೆ.

ಇದನ್ನೂ ಓದಿ: ಲೋಕಾಯುಕ್ತ ದಾಳಿ: ಕೇಜಿಗಟ್ಟಲೇ ಚಿನ್ನ-ಬೆಳ್ಳಿ, ಕಂತೆ-ಕಂತೆ ಹಣ, ಅಪಾರ ಪ್ರಮಾಣದ ಆಸ್ತಿ ಪತ್ತೆ

ಸದ್ಯ ಕಳಕಪ್ಪ ನೀಡಗುಂದಿ ಜೊತೆಗೆ ಎ1 ಆರೋಪಿ ಝಡ್.ಎಂ ಚಿಂಚೋಳಿಕರ್​ ಮತ್ತು ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೂ ಲೋಕಾಯುಕ್ತ ಪೊಲೀಸರು ಹದ್ದಿಣ ಕಣ್ಣಿಟ್ಟಿದ್ದು, ಚಲನವಲನ ಗಮನಿಸಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Shivakumar Pattar

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Follow Us