ಮಂಡ್ಯದ ಸರ್ಕಾರಿ ಕಾಲೇಜನ್ನು ಕಾರಾಗೃಹವಾಗಿ ಪರಿವರ್ತಿಸಿ ಸಿನಿಮಾ ಶೂಟಿಂಗ್: ಚಿತ್ರತಂಡದ ವಿರುದ್ಧ ಸ್ಥಳೀಯರು ಆಕ್ರೋಶ

ಮಂಡ್ಯದ ಪ್ರತಿಷ್ಠಿತ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು "ಜೆಸಿ" ಚಿತ್ರತಂಡ ಕಾರಾಗೃಹ ಸೆಟ್ ಆಗಿ ಪರಿವರ್ತಿಸಿ ಚಿತ್ರೀಕರಣ ಮಾಡಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜಿನ ಸ್ವರೂಪ ಬದಲಿಸಿ ಅನುಮತಿ ನೀಡಿದ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

ಮಂಡ್ಯದ ಸರ್ಕಾರಿ ಕಾಲೇಜನ್ನು ಕಾರಾಗೃಹವಾಗಿ ಪರಿವರ್ತಿಸಿ ಸಿನಿಮಾ ಶೂಟಿಂಗ್: ಚಿತ್ರತಂಡದ ವಿರುದ್ಧ ಸ್ಥಳೀಯರು ಆಕ್ರೋಶ
ಮಂಡ್ಯದ ಸರ್ಕಾರಿ ಕಾಲೇಜನ್ನು ಕಾರಾಗೃಹವಾಗಿ ಪರಿವರ್ತಿಸಿ ಸಿನಿಮಾ ಶೂಟಿಂಗ್: ಚಿತ್ರತಂಡದ ವಿರುದ್ಧ ಸ್ಥಳೀಯರು ಆಕ್ರೋಶ
Edited By:

Updated on: Nov 03, 2024 | 7:22 PM

ಮಂಡ್ಯ, ನವೆಂಬರ್​ 03: ಅದು ಸಕ್ಕರೆನಾಡಿನ ಪ್ರತಿಷ್ಠಿತ ಸರ್ಕಾರಿ ಕಾಲೇಜು (College). ಗ್ರಾಮೀಣ ಹೆಣ್ಣು ಮಕ್ಕಳ ಪಾಲಿನ ವಿದ್ಯಾ ದೇಗುಲ. ವಿದ್ಯಾರ್ಥಿಗಳ ಕಲರವದಿಂದ ಕೂಡಿರಬೇಕಿದ್ದ ಆ ಕಾಲೇಜು ಜೈಲಾಗಿ ಪರಿವರ್ತನೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜಿನ ಸ್ವರೂಪ ಬದಲಾಯಿಸಿ ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಒತ್ತಾಯಿಸಲಾಗಿದೆ.

ಸರ್ಕಾರಿ ಕಾಲೇಜನ್ನೇ ಜೈಲಾಗಿ ಪರಿವರ್ತಿಸಿ ಶೂಟಿಂಗ್

ಕಲ್ಲುಕಟ್ಟಡ ಎಂದೇ ಫೇಮಸ್ ಆಗಿರುವ ಬಾಲಕಿಯರ ಕಾಲೇಜಿಗೆ ನಿತ್ಯವೂ ಸಾವಿರಾರು ಹೆಣ್ಣು ಮಕ್ಕಳು  ಬರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್ಭಟದ ನಡುವೆಯೂ ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಪಾಲಿಗೆ ವಿದ್ಯಾ ದೇಗಲವಾಗಿದೆ. ಇಂತಹ ಕಾಲೇಜಿನಲ್ಲಿ ಜೈಲ್ ಸೆಟ್ ಹಾಕಿ ಚಿತ್ರೀಕರಣ ಮಾಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ವಕ್ಫ್ ವಿವಾದ: ಸರ್ಕಾರಿ ಶಾಲೆಯ ಭೂಮಿಯ ಪಹಣಿಯಲ್ಲಿ ವಕ್ಫ್​ ಹೆಸರು

ಹೌದು. ‘ಜೆಸಿ’ ಚಿತ್ರತಂಡ ಭರದಿಂದ ಶೂಟಿಂಗ್​ನಲ್ಲಿ ತೊಡಗಿದ್ದು, ಕಾರಾಗೃಹ ಸನ್ನಿವೇಶಗಳನ್ನ ಮಂಡ್ಯದಲ್ಲಿ ಚಿತ್ರೀಕರಣ ಮಾಡುತ್ತಿದೆ. ಶೂಟಿಂಗ್​ಗಾಗಿ ಕೆಲವು ಮಾರ್ಪಾಡು ಮಾಡಲಾಗಿದ್ದು, ಸರ್ಕಾರಿ ಕಾಲೇಜಿಗೆ ಬೆಂಗಳೂರು ಕೇಂದ್ರ ಕಾರಾಗೃಹ ಎಂದು ಫಲಕ ಹಾಕಿದ್ದಾರೆ. ಕಾಲೇಜಿನ ಮುಂದೆ ಇದ್ದ ಧ್ವಜಕಂಬ ಕಟ್ ಮಾಡಿ, ಕಟ್ಟಡದ ಕಿಟಕಿ ಬಾಗಿಲು ಬದಲಾವಣೆ ಮಾಡಲಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ‘ಜೆಸಿ’ ಎಂಬ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮೂಲಕ ನಟ ಡಾಲಿ ಧನಂಜಯ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಡಾಲಿ ಧನಂಜಯ್ ಸ್ಯಾಂಡಲ್ ವುಡ್​ನಲ್ಲಿ ‌ಉತ್ತುಂಗದಲ್ಲಿರುವ ನಟರ ಪೈಕಿ ಒಬ್ಬರು. ನಟನೆಗೆ ಸಮೀತವಾಗದೆ ನಿರ್ಮಾಣ ಸಂಸ್ಥೆಯನ್ನು‌ ಹುಟ್ಟು ಹಾಕಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.

ಇದನ್ನೂ ಓದಿ: ಕೆಆರ್​ಎಸ್​ ಹಳೇ ಗೇಟ್​ಗಳು​ ಕೇವಲ ಕೆಜಿ 6 ರೂ.ಗೆ ಮಾರಾಟ?, ರೈತ ಸಂಘ ಆಕ್ರೋಶ

ಆದರೆ ‘ಜೆ.ಸಿ‌’ ಚಿತ್ರತಂಡ ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್​ನ್ನು ಕಾರಾಗೃಹ ಪರಿವರ್ತಿಸಿ ಶೂಟಿಂಗ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜಿನಲ್ಲಿ ಶೂಟಿಂಗ್ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us