ಮಂಡ್ಯದಲ್ಲೊಂದು ವಿನೂತನ ಯತ್ನ: ರೈತರಿಂದ ರೈತರಿಗಾಗಿ ರೈತ ಶಾಲೆ, ಇದು ಕರ್ನಾಟಕದಲ್ಲೇ ಮೊದಲು!

ಬರ, ಅತಿವೃಷ್ಟಿ, ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದಿರುವುದು ಮತ್ತಿತರ ಸಮಸ್ಯೆಗಳ ಮಧ್ಯೆ ರೈತರ ಬದುಕನ್ನು ಹಸನಾಗಿಸುವುದು ಹೇಗೆ? ಆಧುನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಹೆಚ್ಚು ಆದಾಯ ಗಳಿಸುವುದು ಹೇಗೆ? ಇತರ ಕ್ಷೇತ್ರಗಳಿಂದ ಕೃಷಿಯತ್ತ ಮುಖ ಮಾಡಿದವರಿಗೆ ತರಬೇತಿ ಹೇಗೆ? ಇದಕ್ಕೆಲ್ಲ ಮಂಡ್ಯದ ಕೃಷಿ ಕುಟುಂಬಗಳಿಂದ ಬಂದ ಉಪನ್ಯಾಸಕರ ತಂಡವೊಂದು ಉತ್ತರ ಕಂಡುಕೊಂಡಿದೆ. ಅದುವೇ ರೈತ ಶಾಲೆ! ಏನಿದು ಹೊಸ ಪರಿಕಲ್ಪನೆ? ಇಲ್ಲಿದೆ ವಿವರ.

ಮಂಡ್ಯದಲ್ಲೊಂದು ವಿನೂತನ ಯತ್ನ: ರೈತರಿಂದ ರೈತರಿಗಾಗಿ ರೈತ ಶಾಲೆ, ಇದು ಕರ್ನಾಟಕದಲ್ಲೇ ಮೊದಲು!
ಮಂಡ್ಯದಲ್ಲೊಂದು ವಿನೂತನ ಯತ್ನ: ರೈತರಿಂದ ರೈತರಿಗಾಗಿ ರೈತ ಶಾಲೆ, ಇದು ಕರ್ನಾಟಕದಲ್ಲೇ ಮೊದಲು!
Follow us
|

Updated on: Oct 22, 2024 | 12:18 PM

ಮಂಡ್ಯ, ಅಕ್ಟೋಬರ್ 22: ಕೃಷಿ ಮಾಡಿ ಜೀವನ ನಡೆಸುವವರ ಸಮಸ್ಯೆಗಳ ಪರಿಹಾರಕ್ಕಾಗಿ ರೈತರಿಂದಲೇ ರೈತರಿಗಾಗಿ ‘ರೈತರ ಶಾಲೆ’ಯೊಂದನ್ನು ಆರಂಭಿಸಲು ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ಉಪನ್ಯಾಸಕರೊಬ್ಬರು ಮುಂದಾಗಿದ್ದಾರೆ. ಅವರಿಗೆ ಕೃಷಿ ಕುಟುಂಬಗಳ ಹಿನ್ನೆಲೆಯುಳ್ಳ ಶಿಕ್ಷಕರ ಗುಂಪು ಸಾಥ್ ನೀಡಲು ಮುಂದೆ ಬಂದಿದೆ. ಕೃಷಿಯಲ್ಲಿ ತೊಡಗಿರುವವರನ್ನು ಮತ್ತು ಅದನ್ನು ವೃತ್ತಿಯಾಗಿ ಅಥವಾ ಹವ್ಯಾಸವಾಗಿ ಮಾಡಿಕೊಳ್ಳಲು ಉತ್ಸಾಹ ಹೊಂದಿರುವವರನ್ನು ಸಬಲೀಕರಣಗೊಳಿಸುವುದು ಈ ‘ರೈತ ಶಾಲೆ’ಯ ಉದ್ದೇಶವಾಗಿದೆ.

ಕಳೆದ ವರ್ಷದ ಬರ ಪರಿಸ್ಥಿತಿ, ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ರೈತರು ಎದುರಿಸಿದ ಕಷ್ಟಗಳು, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳು, ರೈತರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಯನ್ನು ತೆರೆಯಲು ಮಂಡ್ಯದ ಉಪನ್ಯಾಸಕ ಸತ್ಯಮೂರ್ತಿ ಅವರ ನೇತೃತ್ವದಲ್ಲಿ ಏಳು ಸದಸ್ಯರ ತಂಡ ನಿರ್ಧರಿಸಿದೆ. ಈ ತಂಡದಲ್ಲಿ ರೈತ ಕುಟುಂಬದಿಂದ ಬಂದ ಶಿಕ್ಷಕರೇ ಇದ್ದಾರೆ.

ರೈತ ಮಕ್ಕಳ ನಗರ ವಲಸೆ ತಡೆಗೂ ಕ್ರಮ

ಕೃಷಿಯನ್ನು ಲಾಭದಾಯಕವಾಗಿಸುವುದು ಮತ್ತು ರೈತರನ್ನು ಎಲ್ಲಾ ವಿಚಾರಗಳಲ್ಲಿಯೂ ಸ್ವಾವಲಂಬಿಗಳನ್ನಾಗಿ ಮಾಡುವುದು ತಂಡದ ಹಾಗೂ ಅವರ ಶಾಲೆಯ ಉದ್ದೇಶವಾಗಿದೆ. ಯುವಕರು ಉದ್ಯೋಗ ಅರಸಿ ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಮತ್ತು ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಲ್ಲಿಯೂ ಈ ತಂಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ.

ತಜ್ಞರು, ರೈತರ ಕೊಂಡಿಯಾಗಿ ಕೆಲಸ ಮಾಡಲಿದೆ ರೈತ ಶಾಲೆ

ಈ ತಂಡವು ಈಗಾಗಲೇ 200ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಅರಿತುಕೊಂಡಿದೆ. ಅವರನ್ನು ಪ್ರೋತ್ಸಾಹಿಸಲು, ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರ ನಡುವೆ ಕೊಂಡಿಯಾಗಿ ತಂಡ ಕೆಲಸ ಮಾಡಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ರೈತರಿಗೆ ಶಿಕ್ಷಣ ನೀಡುವುದರ ಜತೆಗೆ, ತರಬೇತಿ ಶಿಬಿರಗಳು, ಕ್ಷೇತ್ರ ಭೇಟಿಗಳು ಮತ್ತು ತಜ್ಞರಿಂದ ‘ರೈತರ ಶಾಲೆ’ಯಲ್ಲಿ ವಿಚಾರ ಮಂಡನೆ ಕಾರ್ಯಕ್ರಮಗಳನ್ನು ಆಯೋಜಿಸಲು ತಂಡವು ನಿರ್ಧರಿಸಿದೆ.

‘ಕೆಂಪೇಗೌಡ ಒಕ್ಕಲಿಗರ ಕಲ್ಯಾಣ ಗ್ರೂಪ್’ ರಚಿಸಿದ ಬಳಿಕ ಶಿಕ್ಷಕರು ಶಾಲೆಗೆ ಇತ್ತೀಚೆಗೆ ರೈತ ಶಾಲೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ.

ರೈತರ ಯಶೋಗಾಥೆ ತೆರೆದಿಡಲಿದೆ ರೈತ ಶಾಲೆ

ಶಾಲೆಯು ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ರೈತರ ಯಶೋಗಾಥೆಗಳನ್ನು ಸ್ಥಳೀಯ ರೈತರ ಬಳಿ ಹಂಚಿಕೊಳ್ಳಲಿದೆ. ಆಲಕೆರೆಯಲ್ಲಿ ಮುಂದಿನ ಎರಡು ತಿಂಗಳಲ್ಲಿ ಸೆಮಿನಾರ್ ಹಾಲ್ ಮತ್ತು ಕೆಲವು ತರಗತಿ ಕೊಠಡಿಗಳು ಸಿದ್ಧಗೊಳ್ಳಲಿವೆ. ರಾಜ್ಯಾದ್ಯಂತ ಇಂತಹ ಹಲವು ಶಾಲೆಗಳನ್ನು ತೆರೆಯುವ ಯೋಜನೆಯನ್ನು ತಂಡ ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.

ಕೃಷಿ ಆಸಕ್ತಿಯುಳ್ಳ ಟೆಕ್ಕಿಗಳು, ಯುವಕರಿಗೂ ಮಾರ್ಗದರ್ಶನ

ರೈತರಿಗೆ ಕೃಷಿ ಮಾರ್ಗದರ್ಶನಕ್ಕಾಗಿ ಶಾಲೆಗೆ ಬರಲು ಮುಕ್ತ ಅವಕಾಶವಿದೆ. ನಾವು ಕೃಷಿಯಲ್ಲಿ ಉತ್ಸುಕರಾಗಿರುವ ಟೆಕ್ಕಿಗಳು ಸೇರಿದಂತೆ ಯುವಕರಿಗೂ ಮಾರ್ಗದರ್ಶನ ನೀಡುತ್ತೇವೆ ಎಂದು ತಂಡದ ರೂವಾರಿ ಉಪನ್ಯಾಸಕ ಸತ್ಯಮೂರ್ತಿ ತಿಳಿಸಿದ್ದಾರೆ. ಈಗಾಗಲೇ ಸುಮಾರು 500ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಬಿತ್ತನೆ ಬೀಜಗಳ ವಿತರಣೆ ಮಾಡಿದ್ದೇವೆ ಎಂದು ತಂಡದ ಮತ್ತೊಬ್ಬ ಸದಸ್ಯ, ಉಪನ್ಯಾಸಕ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಈ ಹತ್ತು ಗ್ರಾಮಗಳಿಗಿಲ್ಲ ಬಸ್ ಸಂಪರ್ಕ! ದಟ್ಟ ಕಾಡಿನಲ್ಲಿ ಪ್ರಾಣ ಭಯದಲ್ಲೇ ಶಾಲೆಗೆ ತೆರಳುವ ಮಕ್ಕಳು

ರೈತರು ಉದ್ಯೋಗ ಅರಸಿ ಸಮೀಪದ ಪಟ್ಟಣಗಳು ​​ಮತ್ತು ನಗರಗಳಿಗೆ ವಲಸೆ ಹೋಗಿರುವುದರಿಂದ ಆಲಕೆರೆ ಮತ್ತು ಕೀಲಾರ ಗ್ರಾಮಗಳಲ್ಲಿ ಅನೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಗ್ರಾಮವಾಸಿಗಳು ಮರಳಿ ಬಂದು ಕೃಷಿಯನ್ನು ಪುನರಾರಂಭಿಸಬೇಕೆಂದು ನಾವು ಬಯಸುತ್ತೇವೆ ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್
ಯೋಗೇಶ್ವರ್ ಅವರನ್ನು ಕಡೆಗಣಿಸುವ ಉದ್ದೇಶ ಖಂಡಿತ ನಮಗಿರಲಿಲ್ಲ: ನಿಖಿಲ್