AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಡ್ಡಿ ಸುಡುವ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ತಿರುಗೇಟು; ಸಿದ್ದರಾಮಯ್ಯ, ನಲಪಾಡ್​ಗೆ ಚಡ್ಡಿ ಪೋಸ್ಟ್ ಮಾಡಿದ ಕಾರ್ಯಕರ್ತರು

ಚಡ್ಡಿ ಸುಟ್ಟು ಹಾಕುತ್ತೇವೆಂದು ಸಿದ್ದರಾಮಯ್ಯ ಹೇಳಿಕೆ ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಆರ್​ಎಸ್​ಎಸ್​ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ.

ಚಡ್ಡಿ ಸುಡುವ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ತಿರುಗೇಟು; ಸಿದ್ದರಾಮಯ್ಯ, ನಲಪಾಡ್​ಗೆ ಚಡ್ಡಿ ಪೋಸ್ಟ್ ಮಾಡಿದ ಕಾರ್ಯಕರ್ತರು
ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ, ನಲಪಾಡ್ಗೆ ಚಡ್ಡಿ ಪೋಸ್ಟ್ ಮಾಡಿದ್ದಾರೆ
TV9 Web
| Updated By: sandhya thejappa|

Updated on:Jun 07, 2022 | 2:56 PM

Share

ಮೈಸೂರು: ಆರ್​ಎಸ್​ಎಸ್​ (RSS) ಚಡ್ಡಿ ಸುಡುವ ಕಾಂಗ್ರೆಸ್ ಅಭಿಯಾನದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಬಿಜೆಪಿ ನಾಯಕರು ಈಗಾಗಲೇ ಗರಂ ಆಗಿದ್ದಾರೆ. ಈ ನಡುವೆ ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಮತ್ತು ನಲಪಾಡ್​ಗೆ ಬಿಜೆಪಿ ಕಾರ್ಯಕರ್ತರು ಚಡ್ಡಿ ಕಳುಹಿಸಿದ್ದಾರೆ. ಮೈಸೂರು ಕೇಂದ್ರ ಅಂಚೆ ಕಚೇರಿಯಿಂದ ಇಬ್ಬರಿಗೂ ಕಾರ್ಯಕರ್ತರು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಚಡ್ಡಿ ಪೋಸ್ಟ್ ಮಾಡಿದ್ದಾರೆ. ನಿನ್ನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಆರ್​ಎಸ್​​ಎಸ್​ ಕಾರ್ಯಕರ್ತರು ಕೂಡಾ ಮನೆ ಮನೆಗೆ ತೆರಳಿ ಚಡ್ಡಿ ಸಂಗ್ರಹಿಸಿ, ಸಿದ್ದರಾಮಯ್ಯಗೆ ಪಾರ್ಸಲ್ ಮಾಡಿದ್ದರು.

ಚಡ್ಡಿ ಸುಟ್ಟು ಹಾಕುತ್ತೇವೆಂದು ಸಿದ್ದರಾಮಯ್ಯ ಹೇಳಿಕೆ ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಆರ್​ಎಸ್​ಎಸ್​ನ ಖಾಕಿ ಚಡ್ಡಿಯನ್ನ ಕಾರ್ಯಕರ್ತರು ಪಾರ್ಸಲ್ ಮಾಡಿದ್ದಾರೆ. ಜೀವನ ಪೂರ್ತಿ ಕಾಲ ಕಳೆದರು ನಮ್ಮ ಚಡ್ಡಿ ಸುಟ್ಟು ಹಾಕಲು ಆಗಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ವಿ.ಸೋಮಣ್ಣ ಹೇಳಿದ್ದೇನು? ಆರ್​ಎಸ್​ಎಸ್​ ಈ ದೇಶಕ್ಕೆ ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿದೆ ಎಂದು ಮೈಸೂರಿನಲ್ಲಿ ಮಾತನಾಡಿದ ವಸತಿ ಇಲಾಖೆ ಸಚಿವ ವಿ.ಸೋಮಣ್ಣ, ಕೆಲವು ಸೂಕ್ಷ್ಮ ವಿಚಾರ ಮಾತನಾಡದಂತೆ ಆದೇಶ ಬಂದಿದೆ. ಹೀಗಾಗಿ ಸೂಕ್ಷ್ಮ ವಿಚಾರಗಳ ಬಗ್ಗೆ ನಾನು ಮಾತಾಡುವುದಿಲ್ಲ. ದೇಶದ ಪ್ರತಿ ಕಣಕಣದಲ್ಲೂ ಆರ್​ಎಸ್​ಎಸ್​ನ ಕೊಡುಗೆ ಇದೆ. ಕೆಲವರ ನಂಬಿಕೆಗಳಿಗೆ ಅಪಮಾನ ಮಾಡುವುದು ಸರಿಯಲ್ಲ. ಹಾದಿ ಬೀದಿ ಜಗಳ ಆಗಬಾರದು, ಸುಖಾಂತ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ
Image
Health : ಅಸ್ತಮಾ, ಉಸಿರಾಟ, ದಂತಸಮಸ್ಯೆಗಳಿಗೆ ಸಿದ್ಧೌಷಧಿ ಈ ಲವಂಗದೆಣ್ಣೆ
Image
Karnataka vs Uttar Pradesh: ಕರ್ನಾಟಕ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ
Image
Realme GT Neo 3T: ಮಾರುಕಟ್ಟೆಗೆ ಬಂದೇ ಬಿಡ್ತು ರಿಯಲ್‌ ಮಿ GT ನಿಯೋ 3T: ಬೆಲೆ ಎಷ್ಟು ಗೊತ್ತೇ?
Image
ಚಿರಂಜೀವಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಧ್ರುವ ಸರ್ಜಾ; ಇಲ್ಲಿದೆ ವಿಡಿಯೋ

ಜನರಿಂದ ಸಂಗ್ರಹಿಸಿದ ಚಡ್ಡಿಗಳನ್ನು ಸಿದ್ದರಾಮಯ್ಯ ಮನೆಗೆ ತಲುಪಿಸುವ ಆಂದೋಲನವನ್ನು ಬಿಜೆಪಿ ಹಮ್ಮಿಕೊಂಡಿದೆ. ಬಿಜೆಪಿ ಎಸ್​ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಮನೆಗೆ ತೆರಳುತ್ತಾರೆ.

ಕೆಪಿಸಿಸಿ ಕಚೇರಿಗೆ ಹಳೇ ಚಡ್ಡಿಗಳ ಪೋಸ್ಟ್​: ಚಿಕ್ಕಮಗಳೂರು ಬಿಜೆಪಿ ಘಟಕದಿಂದ ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಹೆಸರಿನಲ್ಲಿ ಹಳೇ ಚಡ್ಡಿಗಳ ಪೋಸ್ಟ್​ ಮಾಡಲಾಗಿದೆ. ಆಜಾದ್ ಪಾರ್ಕ್​​ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಸಿದ್ದರಾಮಯ್ಯ, ಡಿಕೆ. ಶಿವಕುಮಾರ್, ನಲಪಾಡ್​ ವಿರುದ್ಧ ಘೋಷಣೆ ಕೂಗಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Tue, 7 June 22