Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋ ಟಿಕೆಟ್ ದರ ಓನ್​ ಟು ಡಬಲ್ ಏರಿಕೆ ಮಾಡಲಾಗಿದ್ಯಾ? ಭುಗಿಲೆದ್ದ ಆಕ್ರೋಶ

ಹಾಲಿನ ದರ, ವಿದ್ಯುತ್ ದರ, 3. ಪೆಟ್ರೋಲ್‌–ಡೀಸೆಲ್‌ ದರ, 4. ಮುದ್ರಾಂಕ ಶುಲ್ಕ, 5. ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಶುಲ್ಕ.. ಈಗ ಮೆಟ್ರೋ ಸರದಿ.. ಬಸ್ ದರ ಏರಿಕೆ ಬೆನ್ನಲ್ಲೇ ಈಗ ನಮ್ಮ ಮೆಟ್ರೊ ಪ್ರಯಾಣ ದರವೂ ದುಬಾರಿ ಆಗಿದೆ. ಇವತ್ತಿನಿಂದಲೇ ನಮ್ಮ ಮೆಟ್ರೋ ದರವೂ ಜಾರಿಗೆ ಬಂದಿದ್ದು, ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಹಾಗಾದ್ರೆ, ಯಾವ ಸ್ಟೇಜ್​ಗೆ ಎಷ್ಟು ದರ ಏರಿಕೆ ಆಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ನಮ್ಮ ಮೆಟ್ರೋ ಟಿಕೆಟ್ ದರ ಓನ್​ ಟು ಡಬಲ್ ಏರಿಕೆ ಮಾಡಲಾಗಿದ್ಯಾ? ಭುಗಿಲೆದ್ದ ಆಕ್ರೋಶ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
Follow us
ರಮೇಶ್ ಬಿ. ಜವಳಗೇರಾ
| Updated By: ವಿವೇಕ ಬಿರಾದಾರ

Updated on:Feb 09, 2025 | 7:30 PM

ಬೆಂಗಳೂರು, (ಫೆಬ್ರವರಿ 09): ನಿನ್ನೆಯಷ್ಟೇ (ಫೆಬ್ರವರಿ 08) ಮೆಟ್ರೋ ದರ ಏರಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಬರುತ್ತಿದ್ದಂತೆಯೇ ಬಿಎಂಆರ್‌ಸಿಎಲ್ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಇಂದು (ಫೆಬ್ರವರಿ 09) ಬೆಳಗ್ಗೆ 7 ಗಂಟೆಯಿಂದಲೇ ಅನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೊಳಿಸಿದೆ. ಟೋಕನ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 50% ರಷ್ಟು ದರ ಹೆಚ್ಚಳವಾದ್ರೆ, ಸ್ಮಾರ್ಟ್ ಕಾರ್ಡ್ ಮೂಲಕ ಪ್ರಯಾಣ ಮಾಡುವ ಪ್ರಯಾಣಿಕರಿಗೆ 45% ರಷ್ಟು ಹೆಚ್ಚಳವಾಗಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಆದ್ರೆ, ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ.

0 ಯಿಂದ 2 ಕಿಲೋ ಮೀಟರ್​ವರೆಗಿನ ಪ್ರಯಾಣದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಹಿಂದೆ ಇದ್ದ 10ರೂಪಾಯಿಯೇ ಮುಂದುವರಿಯಲಿದೆ. 2 ರಿಂದ 40 ಕಿಲೋ ಮೀಟರ್​ಗೆ ಹಿಂದೆ 15 ರೂಪಾಯಿ ಇದ್ದ ದರ ಇದೀಗ 20 ರೂ. ಆಗಿದೆ. 4ರಿಂದ 6 ಕಿಲೋ ಮೀಟರ್​ಗೆ 25 ಇದ್ದ ದರ 30ಕ್ಕೆ ಏರಿಕೆಯಾಗಿದೆ. 6 ರಿಂದ 8 ಕಿಲೋ ಮೀಟರ್​ಗೆ ಹಿಂದೆ 30 ಇದ್ದದ್ದು, ಇದೀಗ 40ರೂಪಾಯಿ ಆಗಿದೆ. 8 ರಿಂದ 10 ಕಿಲೋ ಮೀಟರ್ ಪ್ರಯಾಣಿಸುವವರಿಗೆ 40 ರೂಪಾಯಿ ಇದ್ದ ಟಿಕೆಟ್ ದರ 50ಕ್ಕೆ ತಲುಪಿದೆ.

10 ರಿಂದ 15 ಕಿಲೋ ಮೀಟರ್​ಗೆ 45 ರೂಪಾಯಿ ಪಾವತಿಸ್ತಿದ್ದವರು ಇದೀಗ 60 ರೂಪಾಯಿ ಪೇ ಮಾಡ್ಬೇಕಿದೆ. 15 ರಿಂದ 20 ಕಿಲೋ ಮೀಟರ್​ಗೆ 50 ರೂಪಾಯಿಗೆ ಸಿಗ್ತಿದ್ದ ಟಿಕೆಟ್ 70 ರೂಪಾಯಿಗೆ ಕೊಂಡುಕೊಳ್ಳಬೇಕಿದೆ. 20 ರಿಂದ 25 ಕಿಲೋ ಮೀಟರ್​ನ ಹೊಸ ದರ 80 ರೂಪಾಯಿ ಆದ್ರೆ, ಹಳೇ ದರ 60 ರೂಪಾಯಿ ಇತ್ತು. 25 ರಿಂದ 30 ಕಿಲೋ ಮೀಟರ್​ ಪ್ರಯಾಣಕ್ಕೆ 60ರೂಪಾಯಿ ಇದ್ದದ್ದು ಇದೀಗ 90 ರೂಪಾಯಿಗೆ ಏರಿಕೆಯಾಗಿದೆ.

ಎಲ್ಲಿಂದ ಎಲ್ಲಿಗೆ ಎಷ್ಟು ರೂಪಾಯಿ?

  • ವೈಟ್ ಫೀಲ್ಡ್ To ಚಲ್ಲಘಟ್ಟ- 60ರೂ. ರಿಂದ 90ರೂ.ಗೆ ಏರಿಕೆ
  • ಮಾದಾವರ To ರೇಷ್ಮೆ ಸಂಸ್ಥೆ- 60ರಿಂದ 90 ಕ್ಕೆ ಏರಿಕೆ
  • ಸ್ಮಾರ್ಟ್​​ ಕಾರ್ಡ್ ಮಿನಿಮಮ್ ಬ್ಯಾಲೆನ್ಸ್ 50 ರಿಂದ 90ಕ್ಕೆ ಏರಿಕೆ
  • ಸ್ಮಾರ್ಟ್ ಕಾರ್ಡ್​​ಗಳಿಗೆ ಶೇ.5ರಷ್ಟು ರಿಯಾಯಿತಿ ಮುಂದುವರಿಕೆ
  • ಒಂದು ದಿನದ ಮೆಟ್ರೋ ಟ್ರೈನ್ ಕಾರ್ಡ್ 200 ರಿಂದ 300ಕ್ಕೆ ಏರಿಕೆ
  • 3 ದಿನಗಳ ಮೆಟ್ರೋ ಟ್ರೈನ್ ಕಾರ್ಡ್ ಗೆ 400ರಿಂದ 600 ಕ್ಕೆ ಏರಿಕೆ
  • 5 ದಿನಗಳ ಮೆಟ್ರೋ ಟ್ರೈನ್ ಕಾರ್ಡ್ ಗೆ 600 ರಿಂದ 800ಕ್ಕೆ ಏರಿಕೆ

ದರ ಓನ್ ಟು ಡಬಲ್ ಏರಿಕೆ

ಮೆಟ್ರೋ ಟಿಕೆಟ್ ದರ ಒಂದಕ್ಕೆ ಎರಡರಷ್ಟು ಏರಿಕೆಯಾಗಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ. ನಾನು ಪ್ರತಿದಿನ ಮೂರ್ನಾಲ್ಕು ಬಾರಿ ಮೆಟ್ರೋದಲ್ಲಿ ಪ್ರಯಾಣಿಸುತ್ತೇನೆ. ದರ ಏರಿಕೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.

ಬೆನ್ನಿಗಾನಹಳ್ಳಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ನಿಲ್ದಾಣ ( ವಿಧಾನಸೌಧಕ್ಕೆ ) ಕಳೆದ ಭಾನುವಾರ 26.6 ರುಪಾಯಿ ಇತ್ತು. ಈ ವಾರ ಬರೋಬ್ಬರಿ 60 ರುಪಾಯಿ ಆಗಿದೆ ಎಂದು ದಾಖಲೆ ಸಮೇತ ಪ್ರಯಾಣಿಕ ಅರ್ಜುನ್ ಎನ್ನುವರು ಮೆಟ್ರೋ ವಿರುದ್ಧ ಆಕ್ರೋಶ ಹೊರಹಾಕಿದರು.

ಓನ್ ಟು ಡಬಲ್ ದರ ಹೆಚ್ಚಳ ಮಾಡಿದ್ದಾರೆ. ನಾನು ಪ್ರತಿವಾರ ಬೆನ್ನಿಗಾನಹಳ್ಳಿಯಿಂದ ಕಬ್ಬನ್ ಪಾರ್ಕ್ ಗೆ ಬರುತ್ತೇನೆ. ಕಳೆದ ಭಾನುವಾರ ಆನ್ಲೈನ್ ಮೂಲಕ ಟಿಕೆಟ್ ತಗೊಂಡಿದ್ದೆ 26 ರುಪಾಯಿ ಇತ್ತು. ಈ ವಾರ 60 ರುಪಾಯಿ ತಗೊಂಡ್ರು .ಇದು ಸರಿಯಲ್ಲ. ಇಷ್ಟೊಂದು ಏರಿಕೆ ಮಾಡಿದ್ರೆ ಕಷ್ಟ ಆಗುತ್ತದೆ ಎಂದು ಕಿಡಿಕಾರಿದರು.

Published On - 1:48 pm, Sun, 9 February 25

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಟಿವಿ9 ಎಕ್ಸ್​ಪೋನಲ್ಲಿ ರಾಶಿಕಾ ಶೆಟ್ಟಿ ಸುತ್ತಾಟ, ನಟಿಗೆ ಇಷ್ಟವಾಗಿದ್ದೇನು?
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್