ರಾಯಚೂರು: ಜೋಳ ಮಾರಾಟದ ಹಣ ಪಡೆಯಲು ಅಧಿಕಾರಿಗಳಿಗೆ ನೀಡಬೇಕು ಲಂಚ, ರೈತರಿಂದ ಗಂಭೀರ ಆರೋಪ

ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿರೊ ಜೋಳದ ಹಣ ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಬೇಕು ಎಂಬ ಆರೋಪ ಕೇಳಿ ಬಂದಿದೆ. ರಾಯಚೂರು ರೈತರು ಕೂಡಲೇ ಹಣ ರಿಲೀಸ್ ಮಾಡಬೇಕು. ಇಲ್ದಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಯಚೂರು: ಜೋಳ ಮಾರಾಟದ ಹಣ ಪಡೆಯಲು ಅಧಿಕಾರಿಗಳಿಗೆ ನೀಡಬೇಕು ಲಂಚ, ರೈತರಿಂದ ಗಂಭೀರ ಆರೋಪ
ರಾಯಚೂರು: ಜೋಳ ಮಾರಾಟದ ಹಣ ಪಡೆಯಲು ಅಧಿಕಾರಿಗಳಿಗೆ ನೀಡಬೇಕು ಲಂಚ
Follow us
| Updated By: ಆಯೇಷಾ ಬಾನು

Updated on:Aug 06, 2024 | 1:06 PM

ರಾಯಚೂರು, ಆಗಸ್ಟ್.06: ರಾಜ್ಯದಲ್ಲಿ ಪೋಸ್ಟಿಂಗ್ ಗಾಗಿ ಲಂಚ ಪಡೆಯುತ್ತಿರೊ ಸರಣಿ ಆರೋಪಗಳು ಕೇಳಿ ಬರ್ತಿವೆ. ಅದರಲ್ಲೂ ಮೊನ್ನೆಯಷ್ಟೇ ಯಾದಗಿರಿ ಪಿಎಸ್​ಐ ಪರಶುರಾಮ್ ಸಾವನ್ನಪ್ಪಿದ ಪ್ರಕರಣ ರಾಜ್ಯ ಸರ್ಕಾರದ ಬುಡವನ್ನೇ ಅಲ್ಲಾಡಿಸುತ್ತಿದೆ. ಈ ಮಧ್ಯೆ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳೊ ರೈತರು ಲಂಚ (Bribe) ಕೊಟ್ರೆ ಮಾತ್ರ ತಾವು ಮಾರಾಟ ಮಾಡಿದ ಬೆಳೆಯ ಹಣ ರಿಲೀಸ್ ಮಾಡಲಾಗುತ್ತೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಇಂಥದೊಂದು ಗಂಭೀರ ಆರೋಪವನ್ನ ರಾಯಚೂರಿನ ರೈತರು ಮಾಡಿದ್ದಾರೆ. ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿರೊ ಜೋಳದ ಹಣ ಕೇಳಿದ್ರೆ, ರೈತರು ರಾಯಚೂರಿನಲ್ಲಿರೊ ರಾಜ್ಯ ಕೃಷಿ ಮಾರಾಟ ಮಂಡಳಿ ಅಧಿಕಾರಿಗಳಿಗೆ ಲಂಚ ಕೊಡಲೇಬೇಕು ಅನ್ನೋ ಗಂಭೀರ ಆರೋಪವನ್ನು ರೈತರು ಮಾಡಿದ್ದಾರೆ. ಹಣ ರಿಲೀಸ್ ಮಾಡಬೇಕಾದರೇ ಪ್ರತಿ ರೈತ ಕ್ವಿಂಟಲ್ ಜೋಳಕ್ಕೆ ಎರಡು ರೂಪಾಯಿ ಲಂಚ ಕೊಡಲೇಬೇಕು. ಇಲ್ದಿದ್ರೆ ಹಣ ಜಮೆ ಮಾಡಲ್ಲ. ನಾವೇ ಬೆಳೆದ ಬೆಳೆಯನ್ನ ಸರ್ಕಾರಕ್ಕೆ ಮಾರಾಟ ಮಾಡಿ ನಮ್ಮ ದುಡ್ಡು ಪಡೀಬೇಕಂದ್ರೆ ಅದಕ್ಕೂ ಲಂಚ ಕೊಡಬೇಕು. ಇದೆಂತ ಕರ್ಮ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌‌.

ಇದನ್ನೂ ಓದಿ: ಲಂಚ್ ವಿರಾಮಕ್ಕೆ ಮೊದಲು ರೌದ್ರಾವತಾರ ತಳೆದಿದ್ದ ಸಿದ್ದರಾಮಯ್ಯ ಊಟದ ನಂತರ ಸಂತನಂತೆ ಮಾತಾಡಿದರು!

ರಾಯಚೂರು ಜಿಲ್ಲೆಯ ವಿವಿಧ ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ಜಿಲ್ಲೆಯ 15,687 ರೈತರು 13,56,762 ಕ್ವಿಂಟಲ್ ಜೋಳ ಮಾರಾಟ ಮಾಡಿದ್ರು‌. ಈ ಮೂಲಕ ಒಟ್ಟು 431 ಕೋಟಿ ಮೊತ್ತದ ಜೋಳ ಮಾರಾಟವಾಗಿತ್ತು..‘ ಈ ಪೈಕಿ ಇನ್ನೂ 3811 ರೈತರಿಗೆ 99 ಕೋಟಿ ಹಣ ಬಾಕಿ ಇದೆ. ಈ ಹಣ ಬಿಡುಗಡೆಗೆ ರೈತರು ಮನವಿ ಮಾಡಿದ್ರೆ, ರಾಯಚೂರಿನಲ್ಲಿರೊ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಕ್ವಿಂಟಲ್ ಜೋಳಕ್ಕೆ 2 ರೂ.ಲಂಚ ಕೊಡಬೇಕು ಅಂತ ಹೇಳಿದ್ದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಯಚೂರಿನ ರೈತರು ರಾಜ್ಯ ಕೃಷಿ ಮಾರಾಟ ಮಂಡಳಿ ಕಚೇರಿಗೆ ತೆರಳಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು‌. ಇದು ಕೆಲಹೊತ್ತು ವಾಗ್ವಾದಕ್ಕೆ ಕಾರಣವಾಗಿತ್ತು.

ಈ ಬಗ್ಗೆ ರಾಯಚೂರಿನ ರಾಜ್ಯ ಕೃಷಿ ಮಾರಾಟ ಮಂಡಳಿ ಅಧಿಕಾರಿ ಜಿಲ್ಲಾ ವ್ಯವಸ್ಥಾಪಕ ಶಿವ ಬಸವರಾಜ್ ಪ್ರತಿಕ್ರಿಯಿಸಿದ್ದು, ರೈತರಿಂದ ಲಂಚ ಕೇಳಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಹಣ ಬಾಕಿ ಇದೆ ಶೀಘ್ರದಲ್ಲೇ ಎಲ್ಲ ಹಣ ರಿಲೀಸ್ ಮಾಡಲಾಗುತ್ತೆ ಅಂದ್ರು. ರೈತರು ಮೂರು ದಿನಗಳ ಕಾಲ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದು, ಕೂಡಲೇ ಹಣ ರಿಲೀಸ್ ಮಾಡಬೇಕು. ಇಲ್ದಿದ್ರೆ ಉಗ್ರ ಹೋರಾಟ ಮಾಡೋದಾಗಿ ರೈತರು ಎಚ್ಚರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Tue, 6 August 24

ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು