AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು ತಲುಪಿದ ಶ್ರೀಶೈಲ ಪಾದಯಾತ್ರೆ: ಭಜನೆ, ಪೂಜೆಗೆ ಸ್ಥಳೀಯರ ಸಹಯೋಗ

ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಮಳಸಾವಳಗಿ ಗ್ರಾಮಕ್ಕೂ ಶ್ರೀಶೈಲಕ್ಕೂ 550 ಕಿಮೀ ದೂರವಿದೆ. ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನವಾಗಿ ರಥವೊಂದನ್ನು ನಿರ್ಮಿಸಲಾಗಿದೆ.

ರಾಯಚೂರು ತಲುಪಿದ ಶ್ರೀಶೈಲ ಪಾದಯಾತ್ರೆ: ಭಜನೆ, ಪೂಜೆಗೆ ಸ್ಥಳೀಯರ ಸಹಯೋಗ
ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿರುವ ಯುವಕರು
TV9 Web
| Edited By: |

Updated on: Mar 20, 2022 | 11:39 AM

Share

ರಾಯಚೂರು: ವಿಜಯಪುರ ಜಿಲ್ಲೆ ಮುಳಸಾವಳಗಿಯಿಂದ ಆಂಧ್ರ ಪ್ರದೇಶದ ಶ್ರೀಶೈಲಕ್ಕೆ ಹೊರಟಿರುವ ಪಾದಯಾತ್ರೆ ಭಾನುವಾರ ರಾಯಚೂರು ಜಿಲ್ಲೆ ಪ್ರವೇಶಿಸಿದೆ. ಪಾದಯಾತ್ರೆಯ ಜೊತೆಗೆ ರಥವನ್ನೂ ಭಕ್ತರು ಎಳೆದು ತಂದಿದ್ದಾರೆ. ಈ ಥರಕ್ಕೆ ಶ್ರೀಶೈಲದ ಪಾತಾಳಗಂಗೆಯ ನೀರಿನಿಂದ ಅಭಿಷೇಕ ಮಾಡಿ, ವಾಪ್ ಮುಳವಾಳಗಿ ಗ್ರಾಮಕ್ಕೆ ಎಳೆದು ತರುತ್ತಾರೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲ್ಲೂಕಿನ ಮಳಸಾವಳಗಿ ಗ್ರಾಮಕ್ಕೂ ಶ್ರೀಶೈಲಕ್ಕೂ 550 ಕಿಮೀ ದೂರವಿದೆ. ಗ್ರಾಮದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ನೂತನವಾಗಿ ರಥವೊಂದನ್ನು ನಿರ್ಮಿಸಲಾಗಿದೆ. ಇದೇ ರಥವನ್ನು ಭಕ್ತರು ತಮ್ಮ ಪಾದಯಾತ್ರೆಯೊಂದಇಗೆ ಕೊಂಡೊಯ್ಯುತ್ತಿದ್ದಾರೆ.

ಶ್ರೀಶೈಲದಲ್ಲಿ ಜಗದ್ಗುರುಗಳ ಆಶಿರ್ವಾದ ಪಡೆದ ನಂತರ ರಥವನ್ನು ಮುಳಸಾವಳಗಿ ಗ್ರಾಮಕ್ಕೆ ವಾಪಸ್ ಎಳೆದು ತರುತ್ತಾರೆ. ನಂತರ ಏಪ್ರಿಲ್ 21ರ ಧವನದ ಹುಣ್ಣಿಮೆಯಂದು ನಡೆಯಲಿರುವ ಮಲ್ಲಿಕಾರ್ಜುನಸ್ವಾಮಿ ರಥೋತ್ಸವದಲ್ಲಿ ಇದೇ ರಥವನ್ನು ಬಳಸಲಾಗುತ್ತದೆ. ಪಾದಯಾತ್ರೆಯು ಇದೇ ಮಾರ್ಚ್ 28ಕ್ಕೆ ಶ್ರೀಶೈಲ ತಲುಪುವ ಸಾಧ್ಯತೆಯಿದೆ. ಪಾದಯಾತ್ರೆಯು ಮಾರ್ಚ್ 15ರಂದು ಆರಂಭವಾಗಿತ್ತು. ಮಾರ್ಗ ಮಧ್ಯದ ವಿವಿಧ ಗ್ರಾಮಸ್ಥರಿಂದ ಭಕ್ತರಿಗೆ ಊಟ ಮತ್ತು ತಂಗಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಊರುಗಳಲ್ಲಿಯೂ ಊರಿನ ಗಡಿ ದಾಟುವವರೆಗೂ ಗ್ರಾಮಸ್ಥರು ಪಾದಯಾತ್ರೆಗೆ ಬಂದಿರುವ ಭಕ್ತರೊಂದಿಗೆ ಗ್ರಾಮಸ್ಥರು ಹೆಜ್ಜೆ ಹಾಕುತ್ತಾರೆ.

ಪಾದಯಾತ್ರೆಗೆ ಹೊರಟಿರುವ ಭಕ್ತರ ತಂಡದೊಂದಿಗೆ 80ಕ್ಕೂ ಹೆಚ್ಚು ಭಕ್ತರು ಇದ್ದಾರೆ. ಅವರಿಗೆ ನಿತ್ಯದ ಊಟೋಪಚಾರ ನಿರ್ವಹಿಸಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಶ್ರೈಶೈಲ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಭ ದೇವಿಯ ದರ್ಶನದ ನಂತರ ಮರಳಿ ಬರಲು ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ವಾಹನಗಳಲ್ಲಿ ಸಾಕಷ್ಟು ದಿನಿಸು ಕೊಂಡೊಯ್ಯಲಾಗಿದೆ. ಪಾದಯಾತ್ರೆ ಸಾಗುವ ಹಾದಿಯಲ್ಲಿ ಸಿಗುವ ಗ್ರಾಮಸ್ಥರು ಸಹ ಭಕ್ತರೊಂದಿಗೆ ಭಜನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವೆಡೆ ಪ್ರಸಾದಕ್ಕೂ ವ್ಯವಸ್ಥೆ ಮಾಡುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಬಂದಿರುವ ಭಕ್ತರು ಮಲ್ಲಿಕಾರ್ಜುನ ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಹೊರುತ್ತಿದ್ದಾರೆ. ಇದರ ಜೊತೆಗೆ ಭಜನೆ, ಕಂಬಿಹಾಡುಗಳು, ಮಂಗಳಾರತಿ ಸೇರಿದಂತೆ ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತಿದೆ. ಮಹಿಳಾ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್​ನಲ್ಲಿ ಯಾತ್ರೆ ಹೋಗುತ್ತಿದ್ದ ಯುವಕರಿಂದ ಈ ಬಾರಿ ಪುನೀತ್ ಸಮಾಧಿಗೆ ಯಾತ್ರೆ

ಇದನ್ನೂ ಓದಿ: 3 ವರ್ಷ ಸಹನೆ ತೋರಿದ್ರೆ 30 ವರ್ಷ ಸಮಸ್ಯೆ ಇರಲ್ಲ; ತಾಳೆ ಬೆಳೆ ಬೆಳೆದು ಬಂಪರ್ ಆದಾಯ ಗಳಿಸಿದ ರೈತ ಇತರರಿಗೆ ಮಾದರಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್