ರನ್ಯಾ ರಾವ್ ಗೋಲ್ಡ್ ಸ್ಮಂಗ್ಲಿಂಗ್ ಕೇಸ್: 2ನೇ ಆರೋಪಿ ತರುಣ್ಗೆ ಬಿಗ್ ಶಾಕ್!
ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದ ಎರಡನೇ ಆರೋಪಿ ತರುಣ್ ರಾಜು ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ರನ್ಯಾ ಮತ್ತು ತರುಣ್ ಇಬ್ಬರೂ ದುಬೈಗೆ ಹೋಗಿ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ರನ್ಯಾ ಪತಿ ಜತಿನ್ ಮನೆ ಮೇಲೆ ಇಡಿ ದಾಳಿ ಮಾಡಲಾಗಿತ್ತು.

ಬೆಂಗಳೂರು, ಮಾರ್ಚ್ 19: ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ತಗ್ಲಾಕ್ಕೊಂಡಿದ್ದು, ಈ ಬಿಸ್ಕೆಟ್ ಬ್ಯೂಟಿ ಸದ್ಯ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇನ್ನು ಇದೇ ಪ್ರಕರಣ ಎರಡನೇ ಆರೋಪಿಯಾಗಿರುವ ತರುಣ್ ರಾಜು (Tarun raju) ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಬುಧವಾರ ವಜಾಗೊಳಿಸಿದೆ. ವಿಶ್ವನಾಥ್ ಸಿ ಗೌಡರ್ರಿಂದ ತರುಣ್ ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಲಾಗಿದೆ.
ಇನ್ನು ಗೋಲ್ಡ್ ಸ್ಮಗ್ಲಿಂಗ್ನ 2ನೇ ಆರೋಪಿ ತರುಣ್ ರಾಜುಗೆ ಇತ್ತೀಚೆಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಡಿಆರ್ಐ ಕಸ್ಟಡಿ ಅವಧಿ ಮುಗಿದಿದ್ದರಿಂದ ಇತ್ತೀಚೆಗೆ ಜಡ್ಜ್ ಮನೆಗೆ ಹಾಜರುಪಡಿಸಿಲಾಗಿತ್ತು. ಡಿಆರ್ಐ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದ್ದರಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಆದೇಶಿಸಲಾಗಿತ್ತು. ಇದೇ ವೇಳೆ ತರುಣ್ ರಾಜು ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ DRIಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಅದರಂತೆ DRI ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲಿದ್ದರು.
ಇದನ್ನೂ ಓದಿ: ‘ರನ್ಯಾ ಮನಸ್ಥಿತಿ ನೋಡಿದರೆ ಜೈಲಿನಲ್ಲಿ ಇರುವುದು ಸೂಕ್ತ’: ಡಿಆರ್ಐ ಪರ ವಕೀಲರ ವಾದ
ಅಮೇರಿಕಾದಲ್ಲಿ ಹುಟ್ಟಿ ಬೆಳೆದು ಭಾರತಕ್ಕೆ ಬಂದಿದ್ದ ತರುಣ್ ರಾಜು, ಸಾವಿರಾರು ಕೋಟಿಗೆ ಬಾಳುವ ಫ್ಯಾಮಿಲಿಯವನು. ಕಾಲೇಜು ಸಮಯದಿಂದ ರನ್ಯಾ ಜತೆಗೆ ಗೆಳೆತನವೂ ಇತ್ತು. ಆದರೆ 2017 ನಂತರ ರನ್ಯಾಗೆ ಅಷ್ಟೇನೂ ಸಿನಿಮಾಗಳು ಸಿಗಲಿಲ್ಲ. ಹೀಗಾಗಿ ಬಿಜಿನೆಸ್ ಪ್ಲ್ಯಾನ್ ಮಾಡಿ ದುಬೈಗೆ ಇಬ್ಬರೂ ಓಡಾಡುತ್ತಿದ್ದರು. 2023ರ ನಂತರ ಗೋಲ್ಡ್ ಸ್ಮಗ್ಲಿಂಗ್ ಶುರು ಮಾಡಿರುವ ಬಗ್ಗೆ ಮಾಹಿಗಳು ಬಹಿರಂಗವಾಗಿವೆ.
ರನ್ಯಾ ಪತಿ ಜತಿನ್ ಮನೆ ಮೇಲೆ ಇಡಿ ದಾಳಿ
ಇನ್ನು ಇತ್ತೀಚೆಗೆ ರನ್ಯಾ ಪತಿ ಜತಿನ್ಗೆ ಸಂಬಂಧಿಸಿದ ಮನೆ ಮೇಲೆ ಇಡಿ ಅದಿಕಾರಿಗಳು ದಾಳಿ ಮಾಡಿದ್ದರು. ಮೂರು ಗಂಟೆಗಳ ಕಾಲ ವಿಚಾರಣೆ ಮಾಡಿದ್ದರು. ಯಾಕಂದರೆ, ರನ್ಯಾ ದುಬೈ ಟಿಕೆಟ್ ಬುಕ್ಕಿಂಗ್ ಮಾಡಲು ಪತಿ ಜತಿನ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದರು. ಮಾರ್ಚ್ 1ರಂದು Emirates ವೆಬ್ಸೈಟ್ನಲ್ಲಿ ರನ್ಯಾ ಟಿಕೆಟ್ ಬುಕ್ ಮಾಡಿದ್ದು, ನಿಮ್ಮ ಬಳಿ ಓಟಿಪಿ ಕೇಳಿಲ್ವಾ ಅಂತಾ ಪ್ರಶ್ನಿಸಲಾಗಿತ್ತು.
ಇದನ್ನೂ ಓದಿ: ಚಿನ್ನ ಕಳ್ಳ ಸಾಗಣೆ ಕೇಸ್: ರನ್ಯಾ ರಾವ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದ ಪ್ರಭಾವಿ ವ್ಯಕ್ತಿಗಳು
ಸದ್ಯ ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಆರೋಪಿಗಳಿಗೆ ನಡುಕು ಶುರುವಾಗಿದೆ. ಹವಾಲ ಹಣ ವರ್ಗಾವಣೆ, ಅಕ್ರಮ ಹಣ ವರ್ಗಾವಣೆ, ಚಿನ್ನ ಮತ್ತು 12 ಕೋಟಿ ರೂ ವಹಿವಾಟು ನಡೆದಿರೋದ್ರಿಂದ ಇಡಿ ಎಂಟ್ರಿ ಕೊಟ್ಟಿದೆ. ಜ್ಯುವೆಲ್ಲರಿ ಶಾಪ್ಗಳ ಮೂಲ, ಹಣ ಎಲ್ಲಿಂದ ಬಂತು, ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿರುವ ಇಡಿ, ಈಗಾಗಲೇ ತನಿಖೆಗಿಳಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.