AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttara Kannada: ಮೊಸಳೆಗಳಿಂದ ತಮ್ಮನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ದುಂಬಾಲು ಬೀಳುತ್ತಿರುವ ಜನರು

ಹಾವುಗಳ ಕಾಟ ಕೇಳಿದ್ದೀರಿ, ಇಲಿಗಳ ಕಾಟ ಕೇಳಿದ್ದೀರಿ, ಆದರೆ ಎಂದಾದರು ಮೊಸಳೆಗಳ ಕಾಟದ ಬಗ್ಗೆ ಕೇಳಿದ್ದೀರಾ? ಇಲ್ಲವಾದರೆ ಈ ಸುದ್ದಿ ನೋಡಿ.

Uttara Kannada: ಮೊಸಳೆಗಳಿಂದ ತಮ್ಮನ್ನು ರಕ್ಷಿಸುವಂತೆ ಅರಣ್ಯ ಇಲಾಖೆಗೆ ದುಂಬಾಲು ಬೀಳುತ್ತಿರುವ ಜನರು
ಉತ್ತರ ಕನ್ನಡದ ದಾಂಡೇಲಿ ನಗರದಲ್ಲಿ ಮೊಸಳೆ ಕಾಟ
TV9 Web
| Edited By: |

Updated on:Oct 25, 2022 | 8:45 AM

Share

ಕಾರವಾರ: ಊರಿನಲ್ಲಿ ಹಾವಿನ ಕಾಟ, ಕೀಟಗಳ ಕಾಟ, ಇಲಿಗಳ ಕಾಟ ಎಂದು ಹೇಳುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಜನರು ಮಾತ್ರ ಅಪಾಯಕಾರಿ ಮೊಸಳೆಯ ಕಾಟವನ್ನು ಎದುರಿಸುತ್ತಿದ್ದಾರೆ. ಕಾಳಿ ನದಿ ದಡದಲ್ಲೇ ಇರುವ ದಾಂಡೇಲಿ ನಗರ ಪ್ರಾವಾಸೊಧ್ಯಮಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಪಕ್ಷಿಗಳು, ರಿವರ್ ರ್ಯಾಪ್ಟಿಂಗ್ ದೇಶದಲ್ಲೇ ಪ್ರಸಿದ್ಧ. ಈ ಹಿಂದೆ ಕಾಳಿ ನದಿಯಲ್ಲಿ ಅಲ್ಪವಿದ್ದ ಮೊಸಳೆಗಳ ಸಂತತಿ ಗಣನೀಯವಾಗಿ ಏರಿಕೆ ಕಂಡಿದೆ. ಹೀಗಾಗಿ ಊರಲ್ಲಿ ಮೊಸಳೆಗಳ ಕಾಟ ಮಿತಿಮೀರಿದ್ದು, ಹಾಲಮಡ್ಡಿ ಗ್ರಾಮ, ಹೊಸಕೊಣಪಾ ಗ್ರಾಮ ದಾಂಡೇಲಪ್ಪ ನಗರ, ಹಳಿಯಾಳ ರಸ್ತೆ ಹೀಗೆ ಹಲವು ಭಾಗದ ಕಾಲೋನಿಗಳಲ್ಲಿ ಮೊಸಳೆಗಳು ನದಿ ಬಿಟ್ಟು ಆಹಾರ ಅರಸಿ ಬರುತ್ತಿವೆ. ಹೀಗ ಬಂದ ಮೊಸಳೆಗಳು ಮನೆಗಳಿಗೆ ನುಗ್ಗಿ ಸಾಕುಪ್ರಾಣಿ, ಕೋಳಿ, ಹಸುಗಳನ್ನು ಕೊಂದು ತಿನ್ನುತ್ತಿವೆ. ಮನುಷ್ಯರ ಮೇಲೆ ಸಹ ದಾಳಿ ಮಾಡಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ.

ದಾಂಡೇಲಿ ನಗರದ ತ್ಯಾಜ್ಯ ಹಾಗೂ ಮಳೆ ನೀರು ಹೊಗಲು ನಾಲೆಗಳನ್ನು ಕಾಳಿ ನದಿಗೆ ಬಿಡಲಾಗಿದೆ. ಇದರ ಮೂಲಕ ಮೊಸಳೆಗಳು ಗ್ರಾಮ ಮತ್ತು ನಗರ ಭಾಗಕ್ಕೆ ಬರುತ್ತಿವೆ. ಹೀಗಾಗಿ ಪ್ರತಿ ದಿನ ಮೊಸಳೆಯ ಕಾಟಕ್ಕೆ ಬೇಸತ್ತ ಜನ ಮೊಸಳೆಗಳು ನಗರ ಭಾಗಕ್ಕೆ ಬಾರದಂತೆ ತಪ್ಪಿಸಲು ನದಿ ಪ್ರದೇಶದ ನಾಲೆಗಳಿಗೆ ತಂತಿಯ ಜರಡಿಯನ್ನು ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

ದಾಂಡೇಲಿಯಲ್ಲಿ ಮೊಸಳೆಗಳ ಸಂತತಿ ಹೆಚ್ಚಾಗುತಿದ್ದಂತೆ ಹಾಲಮಡ್ಡಿ ಗ್ರಾಮದ ಭಾಗದಲ್ಲಿ ಪ್ರವಾಸೋಧ್ಯಮ ಇಲಾಖೆ ಮೊಸಳೆ ಪಾರ್ಕ ಅನ್ನು ನಿರ್ಮಿಸಿದೆ. ಆದರೆ ಈ ಭಾಗದಲ್ಲಿ ಎತೇಚ್ಚವಾಗಿ ವೃದ್ಧಿಯಾಗುತ್ತಿರಿವ ಮೊಸಳೆಗಳಿಗೆ ಆಹಾರದ ಕೊರತೆ ಎದುರಾಗಿದೆ‌. ಹೀಗಾಗಿ ಆಹಾರ ಅರಸಿ ಮೊಸಳೆಗಳು ಎಲ್ಲೆಂದರಲ್ಲಿ ಹೊಗುತಿದ್ದು, ಇದೇ ವರ್ಷ ಎರಡು ಜನರನ್ನು ಮೊಸಳೆ ಭಕ್ಷಿಸಿದರೆ ಓರ್ವ ಮೊಸಳೆ ದಾಳಿಯಿಂದ ಗಾಯಗೊಂಡಿದ್ದಾನೆ. ಇದಲ್ಲದೇ ಮೂರು ಜಾನುವಾರ ಸಹ ಈ ಬಾರಿ ಮೊಸಳೆಗೆ ಬಲಿಯಾಗಿದೆ. ಹೀಗಾಗಿ ನಗರ ಹಾಗೂ ಹಳ್ಳಿ ಭಾಗಕ್ಕೆ ಲಗ್ಗೆ ಇಡುವ ಮೊಸಳೆಗಳನ್ನ ಅರಣ್ಯ ಇಲಾಖೆ ನಿಯಂತ್ರಿಸಬೇಕು. ನದಿ ಬಿಟ್ಟು ಜನ ವಸತಿ ಭಾಗಕ್ಕೆ ಬರುವ ಮೊಸಳೆಗಳನ್ನು ಹಿಡಿದು ಬೇರೆಡೆ ಬಿಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ದಾಂಡೇಲಿಯಲ್ಲಿ ಮೊಸಳೆಗಳ ಹಾವಳಿ ಮಿತಿಮೀರಿದ್ದು, ಸಾವುಗಳು ಸಂಭವಿಸಿದರೂ ಅರಣ್ಯ ಇಲಾಖೆ ಮಾತ್ರ ಮೌನ ವಹಿಸಿದೆ. ಆದಷ್ಟು ಬೇಗ ಮೊಸಳೆ ನಿಯಂತ್ರಣದ ಕ್ರಮ ಕೈಗೊಳ್ಳುತ್ತಾ ಇಲಾಖೆ ಎಂಬುದು ಕಾದು ನೋಡಬೇಕಿದೆ.

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 am, Tue, 25 October 22

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ