ಯಾದಗಿರಿ ಲೋಕೋಪಯೋಗಿ ಕಚೇರಿ ಪೀಠೋಪಕರಣಗಳು ಜಪ್ತಿ: ಕೋರ್ಟ್​ ಆದೇಶ

ಗುತ್ತಿಗೆದಾರನಿಗೆ ಬಾಕಿ ಹಣ ನೀಡದೆ ಸತಾಯಿಸುತ್ತಿದ್ದ ಲೋಕಪಯೋಗಿ ಇಲಾಖೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಮಂಗಳರಾತಿ ಮಾಡಿದೆ. ಗುತ್ತಿಗೆದಾರನ ಬಾಕಿ 1.2 ಕೋಟಿ ರೂ. ಹಣ ನೀಡದ ಯಾದಗಿರಿ ಲೋಕೋಪಯೋಗಿ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಯಾದಗಿರಿ ಲೋಕೋಪಯೋಗಿ ಕಚೇರಿ ಪೀಠೋಪಕರಣಗಳು ಜಪ್ತಿ: ಕೋರ್ಟ್​ ಆದೇಶ
ಯಾದಗಿರಿ ಲೋಕೋಪಯೋಗಿ ಇಲಾಖೆಯ ಕಚೇರಿ
Follow us
| Updated By: ವಿವೇಕ ಬಿರಾದಾರ

Updated on: Sep 24, 2024 | 9:58 AM

ಯದಾದಗಿರಿ, ಸೆಪ್ಟೆಂಬರ್​ 24: ನ್ಯಾಯಾಲಯದ (Court) ಆದೇಶದ ಮೇರೆಗೆ ಯಾದಗಿರಿ ಲೋಕೋಪಯೋಗಿ (PWD) ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ 2017ರಲ್ಲಿ ಯಾದಗಿರಿ (Yadgiri) ನಗರದ ಅಂಬೇಡ್ಕರ್ ವೃತ್ತದಿಂದ ಹತ್ತಿಕುಣಿ ಕ್ರಾಸ್ ವರೆಗೆ ರಸ್ತೆ ಕಾಮಗಾರಿ ಕೈಗೊಂಡಿದ್ದರು. ಈ ಕಾಮಗಾರಿಯ ಬಾಕಿ 27 ಲಕ್ಷ ರೂ. ಹಣವನ್ನು 2018 ರಲ್ಲಿ ಗುತ್ತಿಗೆದಾರನಿಗೆ ಲೋಕೋಪಯೋಗಿ ಇಲಾಖೆ ನೀಡಬೇಕಿತ್ತು. ಆದರೆ, ಲೋಕೋಪಯೋಗಿ ಇಲಾಖೆ ನೀಡದೆ ಸತಾಯಿಸಿದೆ.

ಇದರಿಂದ ಬೇಸತ್ತ ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ರಿಟ್​ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಶೇ.12 ರಷ್ಟು ಬಡ್ಡಿಯೊಂದಿಗೆ ಬಾಕಿ ಹಣವನ್ನು ನೀಡುವಂತೆ ಆದೇಶಿಸಿತು. ಒಟ್ಟು ಲೋಕೋಪಯೋಗಿ ಇಲಾಖೆ 1.2 ಕೋಟಿ ರೂ. ಗುತ್ತಿಗೆದಾರನಿಗೆ ನೀಡಬೇಕಾಯ್ತು. ಆದರೆ, ಪಿಡಬ್ಲೂಡಿ ಅಧಿಕಾರಿಗಳು ಮಾತ್ರ ಕೋರ್ಟ್​ ಆದೇಶಕ್ಕೆ ಮಣಿಯದೆ ಗುತ್ತಿಗೆದಾರನಿಗೆ ಹಣ ನೀಡಲಿಲ್ಲ.

ನಂತರ ಗುತ್ತಿಗೆದಾರ ಎಸ್.ಎಸ್.ಪೊಲೀಸ್ ಪಾಟೀಲ್ ಜಿಲ್ಲಾ ಸೇಷನ್ ಕೋರ್ಟ್​ನಲ್ಲಿ ಎಕ್ಸಿಕ್ಯೂಷನ್ ಪೇಟೇಷನ್ ದಾಖಲಿಸಿದರು. 2024ರ ಜೂನ್​ 24ರಿಂದ ಮೂರು ತಿಂಗಳ ಒಳಗಾಗಿ ಬಾಕಿ ಹಣ ನೀಡುವಂತೆ ನ್ಯಾಯಾಲಯ ಗಡುವು ನೀಡಿತು. ಒಂದು ವೇಳೆ ನೀಡದಿದ್ದರೆ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ನೀಡಿತು.

ಇದನ್ನೂ ಓದಿ: ತ್ಯಾಗ, ಬಲಿದಾನದ ಪ್ರತೀಕ ಕಲ್ಯಾಣ ಕರ್ನಾಟಕ ಉತ್ಸವ

ಈ ಆದೇಶದ ಬಗ್ಗೆ ನ್ಯಾಯಾಲಯದ ವಿಶೇಷ ಬೇಲಿಫ್ ಅವರು ಒಂದು ತಿಂಗಳ ಮುಂಚೆ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು. ಆದರೆ, ಅಧಿಕಾರಿಗಳು, ತಮ್ಮ ಮೊಂಡುತನ ಮುಂದುವರೆಸಿದರು. ಈ ನಡುವೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನವಿ ಮೇರೆಗೆ ಹಣ ಪಾವತಿಸಲು ಒಂದು ವಾರ ಮತ್ತೆ ಸಮಯ ನೀಡಲಾಯಿತು. ಆದರೆ, ಅಧಿಕಾರಿಗಳು ಮಾತ್ರ ಮತ್ತೆ ಉಡಾಫೆ ಮಾತುಗಳನ್ನಾಡಿ, ಹಣ ನೀಡದೆ ಸತಾಯಿಸಿದರು.

ಇದೀಗ, ನ್ಯಾಯಾಲಯ ನೀಡಿದ ಗಡುವು ಮುಕ್ತಾಯಗೊಂಡಿದ್ದು, ಯಾದಗಿರಿ ಲೋಕೋಪಯೋಗಿ ಇಲಾಖೆ ಕಚೇರಿಯ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಜಿಲ್ಲಾ ಕೋರ್ಟ್​ನ ವಿಶೇಷ ಬೇಲಿಫ್ ಜಪ್ತಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಕಾಡಿಂದ ಹೊರಬಂದು ಎಂಜಾಯ್ ಮಾಡಿದ ಕರಡಿಗಳ ವಿಡಿಯೋ ವೈರಲ್
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!
ಮಹಿಷ ದಸರಾ ಆಚರಿಸಲು ಮುಂದಾಗಿರೋರಿಗೆ ಪ್ರತಾಪ್ ಸಿಂಹ ಓಪನ್ ಚಾಲೆಂಜ್!