AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪ್ರಾರಂಭವಾಯ್ತು ಆರ್ಟ್ ಆ್ಯಂಡ್​ ಫೋಟೋಗ್ರಫಿ ಮ್ಯೂಸಿಯಂ; ಇಂದಿನಿಂದಲೇ ವರ್ಚ್ಯುವಲ್​ ವೀಕ್ಷಣೆ

ಆಧುನಿಕ ಪೂರ್ವ ಕಲಾಕೃತಿಗಳು, ಕೆಲವು ಪ್ರಸಿದ್ಧ ಸಂಸ್ಕೃತಿಗಳನ್ನು ಸಾರುವ ಕಲಾಕೃತಿಗಳು, ಜಾನಪದ ಮತ್ತು ಬುಡಕಟ್ಟು, ಆಧುನಿಕ ಮತ್ತು ಸಮಕಾಲೀನ ಕಲಾಕೃತಿಗಳು, ಛಾಯಾಚಿತ್ರಗಳು, ವಿವಿಧ ಸಂಪ್ರದಾಯದ ಉಡುಪುಗಳು, ಕರಕುಶಲ ವಸ್ತುಗಳು, ವಿನ್ಯಾಸಗಳು ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.

ಬೆಂಗಳೂರಿನಲ್ಲಿ ಪ್ರಾರಂಭವಾಯ್ತು ಆರ್ಟ್ ಆ್ಯಂಡ್​ ಫೋಟೋಗ್ರಫಿ ಮ್ಯೂಸಿಯಂ; ಇಂದಿನಿಂದಲೇ ವರ್ಚ್ಯುವಲ್​ ವೀಕ್ಷಣೆ
ಕಸ್ತೂರ ಬಾ ರಸ್ತೆಯಲ್ಲಿರುವ ಆರ್ಟ್ ಆ್ಯಂಡ್ ಫೋಟೋಗ್ರಫಿ ಮ್ಯೂಸಿಯಂ
Lakshmi Hegde
|

Updated on:Dec 05, 2020 | 3:36 PM

Share

ಬೆಂಗಳೂರು: ದಕ್ಷಿಣ ಭಾರತದ ಮೊದಲ,  ಬೃಹತ್​ ಖಾಸಗಿ ವಸ್ತು ಸಂಗ್ರಹಾಲಯವಾದ ‘ಮ್ಯೂಸಿಯಂ ಆಫ್​ ಆರ್ಟ್ ಆ್ಯಂಡ್​ ಫೋಟೋಗ್ರಫಿ (MAP) ಇಂದು ಡಿಜಿಟಲ್​ ರೂಪದಲ್ಲಿ ಪ್ರಾರಂಭವಾಗಿದ್ದು, 11ರವರೆಗೆ ಅಂದರೆ ಆರು ದಿನಗಳ ಕಾಲ ಸಾಂಸ್ಕೃತಿಕ ಹಬ್ಬ ಆಚರಣೆ ನಡೆಯಲಿದೆ. ಹಾಗೇ ಇದು ದೇಶದ ಡಿಜಿಟಲ್ ಮ್ಯೂಸಿಯಂಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

20,000 ವಿವಿಧ ಕಲಾಕೃತಿಗಳ ಸಂಗ್ರಹ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ಈ ವಿಶೇಷ ಮ್ಯೂಸಿಯಂ 2021ರಲ್ಲಿ ಭೌತಿಕವಾಗಿ ಉದ್ಘಾಟನೆಗೊಳ್ಳಲಿದೆ. ಸದ್ಯ ಕೊವಿಡ್​-19 ಸಾಂಕ್ರಾಮಿಕ ಇರುವುದರಿಂದ ಡಿಜಿಟಲ್​ ಉದ್ಘಾಟನೆ ಮಾಡಲಾಗಿದ್ದು, ವರ್ಚ್ಯುವಲ್​ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.

ಹೊಸ ಮಾದರಿಯಲ್ಲಿ ಕಲೆ ಮತ್ತು ನಮ್ಮ ಪರಂಪರೆಯನ್ನು ಜನರಿಗೆ ಪರಿಚಯಿಸುವ ಉದ್ದೇಶ, ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಈ ಮ್ಯೂಸಿಯಂ ಆಫ್​ ಆರ್ಟ್ ಆ್ಯಂಡ್ ಫೋಟೋಗ್ರಫಿಯಲ್ಲಿ, 10ನೇ ಶತಮಾನದಿಂದ ಆಧುನಿಕ ಯುಗದವರೆಗಿನ ನಮ್ಮ ಸಂಸ್ಕೃತಿ, ಪರಂಪರೆಗೆ ಸಂಬಂಧಪಟ್ಟ ಬರೋಬ್ಬರಿ 20,000 ವಿವಿಧ ಕಲಾಕೃತಿಗಳ ಸಂಗ್ರಹವಿದೆ.

ಆಧುನಿಕ ಪೂರ್ವ ಕಲಾಕೃತಿಗಳು, ಕೆಲವು ಪ್ರಸಿದ್ಧ ಸಂಸ್ಕೃತಿಗಳನ್ನು ಸಾರುವ ಕಲಾಕೃತಿಗಳು, ಜಾನಪದ ಮತ್ತು ಬುಡಕಟ್ಟು, ಆಧುನಿಕ ಮತ್ತು ಸಮಕಾಲೀನ ಕಲಾಕೃತಿಗಳು, ಛಾಯಾಚಿತ್ರಗಳು, ವಿವಿಧ ಸಂಪ್ರದಾಯದ ಉಡುಪುಗಳು, ಕರಕುಶಲ ವಸ್ತುಗಳು, ವಿನ್ಯಾಸಗಳು ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿದೆ.

ಎಲ್ಲ ಹಂತದ ಜನರನ್ನೂ ತಲುಪುವ ಉದ್ದೇಶ.. ಹಾಗೇ ವಸ್ತುಪ್ರದರ್ಶನದೊಟ್ಟಿಗೆಗೆ ಅವುಗಳ ಕಲಾ ಪ್ರಾಕಾರಗಳು, ಕಲಾ ಶೈಲಿ,  ಕಾಲ, ಕಲಾ ವರ್ಗೀಕರಣದ ಮಾಹಿತಿಗಳ ಬಗ್ಗೆ ಅರಿವು ಮೂಡಿಸುವ ಘನ ಉದ್ದೇಶವನ್ನು ಇಟ್ಟುಕೊಂಡಿದೆ.

ಎಲ್ಲ ಹಂತದ ಜನರನ್ನೂ ತಲುಪುವುದು ನಮ್ಮ ಮುಖ್ಯ ಉದ್ದೇಶ. ಪ್ರತಿಯೊಂದು ಸಂಗ್ರಹದ ಬಗ್ಗೆಯೂ ಅರಿವು ಮೂಡಿಸಲು ಕಾರ್ಯಕ್ರಮ ನಡೆಸಲಾಗುವುದು ಎಂದು MAP ನಿರ್ದೇಶಕಿ ಕಾಮಿನಿ ಸಾಹ್ನಿ ತಿಳಿಸಿದ್ದಾರೆ.

ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್​ ಫೋಟೋಗ್ರಫಿಯ ಸಂಸ್ಥಾಪಕ ಟ್ರಸ್ಟಿ ಆಗಿರುವ ಅಭಿಷೇಕ್ ಪೋದ್ದಾರ್, ನಾವು ಈ ವಸ್ತುಸಂಗ್ರಹಾಲಯವನ್ನು ಡಿಜಿಟಲೀಕರಣಗೊಳಿಸಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ಈಗ ಅದರಿಂದ ಅನುಕೂಲವೇ ಆಗುತ್ತಿದೆ. ಈಗ ಜನರಿಗೆ ಪ್ರವೇಶಕ್ಕೆ ಅನುಮತಿಕೊಟ್ಟಿದ್ದರೆ, ದಿನಕ್ಕೆ 200 ಜನರಿಗೆ ಅವಕಾಶ ಇರುತ್ತಿತ್ತು. ಆದರೆ ವರ್ಚ್ಯುವಲ್ ಆಗಿ ಪ್ರಾರಂಭ ಮಾಡಿದ್ದರಿಂದ ಪ್ರತಿದಿನ ಸಾವಿರಾರು ಮಂದಿ ಮ್ಯೂಸಿಯಂ ವೀಕ್ಷಿಸಬಹುದು ಎಂದಿದ್ದಾರೆ.

ಹೇಗಿದೆ ಮ್ಯೂಸಿಯಂ? ಬೆಂಗಳೂರಿನ ಕಸ್ತೂರ್​ ಬಾ ರಸ್ತೆಯಲ್ಲಿ ಐದು ಅಂತಸ್ತಿನ ಕಟ್ಟಡದಲ್ಲಿ ಮ್ಯೂಸಿಯಂ ಇದೆ. ಇದನ್ನು ವಿನ್ಯಾಸಗೊಳಿಸಿದವರು ಬೆಂಗಳೂರು ಮೂಲದ ವಾಸ್ತುಶಿಲ್ಪಿ ಸೌಮಿತ್ರೋ ಘೋಷ್. ಆರ್ಟ್​ ಗ್ಯಾಲರಿಗಳು, ಅಡಿಟೋರಿಯಂ ಮತ್ತು ಕಲಾ ಸಂಶೋಧನಾ ಲೈಬ್ರರಿಗಳು, ಶೈಕ್ಷಣಿಕ ಕೇಂದ್ರ, ವಿಶೇಷ ಸಂಶೋಧನಾ ಕೇಂದ್ರ, ಕೆಫೆಗಳನ್ನೊಳಗೊಂಡಿದೆ.

Published On - 3:28 pm, Sat, 5 December 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ