AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಕೊಲೆಗೆ 60 ಲಕ್ಷ ಸುಪಾರಿ: SR ವಿಶ್ವನಾಥ್​ ವಿರುದ್ಧ ವಡೇರಹಳ್ಳಿ ಜಯರಾಮ್ ಆರೋಪ

ಬೆಂಗಳೂರು: ನನ್ನ ಹತ್ಯೆಗೆ 60 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ವಡೇರಹಳ್ಳಿ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೆದುರು ತಮ್ಮ ಜೀವ ಭಯದ ವಿಚಾರ ತಿಳಿಸಿದ ವಡೇರಹಳ್ಳಿ ಜಯರಾಮ್ ಬೆಂಗಳೂರು ಉತ್ತರ ತಾಲೂಕು ವಡೇರಹಳ್ಳಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ. 2009ರ ಡಿಸೆಂಬರ್‌ನಲ್ಲಿ ನಡೆದಿತ್ತು ಅಟ್ಯಾಕ್ 2009ರ ಜೂನ್ 12ರಂದು 1 ಕೋಟಿ ರೂಪಾಯಿ ಹಣಕ್ಕಾಗಿ ಜಯರಾಮ್ ಬಳಿ ನಟೋರಿಸ್ ರೌಡಿಶೀಟರ್ ಬೆತ್ತನಗೆರೆ ಶಂಕರ ಬೇಡಿಕೆ ಇಟ್ಟಿದ್ದನಂತೆ. ಆಗ ಜಯರಾಮ್​ ಹಣ ಕೊಡುವುದಿಲ್ಲ […]

ನನ್ನ ಕೊಲೆಗೆ 60 ಲಕ್ಷ ಸುಪಾರಿ: SR ವಿಶ್ವನಾಥ್​ ವಿರುದ್ಧ ವಡೇರಹಳ್ಳಿ ಜಯರಾಮ್ ಆರೋಪ
KUSHAL V
| Edited By: |

Updated on:Sep 02, 2020 | 12:19 PM

Share

ಬೆಂಗಳೂರು: ನನ್ನ ಹತ್ಯೆಗೆ 60 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದೆ ಎಂದು ಕಾಂಗ್ರೆಸ್‌ ಮುಖಂಡ ವಡೇರಹಳ್ಳಿ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳೆದುರು ತಮ್ಮ ಜೀವ ಭಯದ ವಿಚಾರ ತಿಳಿಸಿದ ವಡೇರಹಳ್ಳಿ ಜಯರಾಮ್ ಬೆಂಗಳೂರು ಉತ್ತರ ತಾಲೂಕು ವಡೇರಹಳ್ಳಿಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ.

2009ರ ಡಿಸೆಂಬರ್‌ನಲ್ಲಿ ನಡೆದಿತ್ತು ಅಟ್ಯಾಕ್ 2009ರ ಜೂನ್ 12ರಂದು 1 ಕೋಟಿ ರೂಪಾಯಿ ಹಣಕ್ಕಾಗಿ ಜಯರಾಮ್ ಬಳಿ ನಟೋರಿಸ್ ರೌಡಿಶೀಟರ್ ಬೆತ್ತನಗೆರೆ ಶಂಕರ ಬೇಡಿಕೆ ಇಟ್ಟಿದ್ದನಂತೆ. ಆಗ ಜಯರಾಮ್​ ಹಣ ಕೊಡುವುದಿಲ್ಲ ಎಂದಿದ್ದಕ್ಕೆ ಸುಪಾರಿ ಪಡೆದು ಮುಖಂಡನ ಹತ್ಯೆಗೆ ಬೆತ್ತನಗೆರೆ ಶಂಕರ ಸ್ಕೆಚ್ ಹಾಕಿದ್ದನಂತೆ.

ಮಾಕಳಿ ನಾಗ ಎಂಬಾತನ ಬಳಿ ಸುಪಾರಿ ಪಡೆದಿದ್ದ ಬೆತ್ತನಗೆರೆ ಮಂಜ, ಬೆತ್ತನಗೆರೆ ಶಂಕರ ಹಾಗೂ ಹುಸ್ಕೂರು ಶಿವ ಆಗ 50 ಲಕ್ಷಕ್ಕೆ ಸುಪಾರಿ ಪಡೆದು ಅಟ್ಯಾಕ್ ಮಾಡಿದ್ದರಂತೆ. ಶೂಟ್​ ಔಟ್​ ನಡೆಸಿ ಜಯರಾಮ್​ನ ಮುಗಿಸಲು ಸಹ ಬಂದಿದ್ದರಂತೆ. ಆದರೆ, ಗನ್ ಫೈರ್ ಆದರೂ ಅದೃಷ್ಟವಶಾತ್​ ವಡೇರಹಳ್ಳಿ ಜಯರಾಮ್ ಎಸ್ಕೇಪ್ ಆಗಿದ್ದರಂತೆ. ಕಳೆದ ಮಾರ್ಚ್ 14ರಂದು ಮತ್ತೆ ಹತ್ಯೆಗೆ ಪ್ಲಾನ್ ಹಾಕಿದ್ದ ರೌಡಿಗಳು ಜಯರಾಮ್ ಮಂಡ್ಯದಲ್ಲಿ ಸಂಬಂಧಿಕರ ಮದುವೆಗೆ ಹೋಗಿದ್ದಾಗ ಹತ್ಯೆ ಮಾಡಲು ಸಂಚು ರೂಪಿಸಿದ್ದರಂತೆ.

ಆದರೆ, ತಮ್ಮ ಗನ್​ಮ್ಯಾನ್ ಸಮಯ ಪ್ರಜ್ಞೆಯಿಂದ ಜಯರಾಮ್ ಅಲ್ಲೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದರಂತೆ. ಜಯರಾಮ್​ ಅದೃಷ್ಟಕ್ಕೆ ಮಂಡ್ಯದಲ್ಲಿ ಪೊಲೀಸರ ಕೈಗಿ ಸಿಕ್ಕಿಬಿದ್ದು ಪ್ಲಾನ್ ಬಗ್ಗೆ ಬಾಯ್ಬಿಟ್ಟಿದ್ದ ಗ್ಯಾಂಗ್ ಡಕಾಯತಿ ಕೇಸ್ ಮೇಲೆ ಜೈಲಿಗೆ ಹೋಗಿದ್ದರಂತೆ.

‘ರೌಡಿಗಳಿಗೆ ಶಾಸಕ ವಿಶ್ವನಾಥ್ ಬೆನ್ನುಲುಬಾಗಿದ್ದಾರೆ’ ಆದರೆ, ಈಗ ರೌಡಿಗಳಿಗೆ ಬೆನ್ನುಲುಬಾಗಿ ಯಲಹಂಕ ವಿಧಾನಸಭಾ ಕ್ಷೇತ್ರದ BJP ಶಾಸಕ ವಿಶ್ವನಾಥ್ ಇದ್ದಾರೆ ಎನ್ನುವ ಗಂಭೀರ ಆರೋಪವನ್ನು ಜಯರಾಮ್​ ಮಾಡಿದ್ದಾರೆ. ಇದಕ್ಕೆ ಕಾರಣ ಜಯರಾಮ್ ವಿಶ್ವನಾಥ್‌ಗೆ ಪ್ರಬಲ ಎದುರಾಳಿ. ಗ್ರಾಮ ಪಂಚಾಯತಿ ಹಂತದಿಂದಲೂ ಜಯರಾಮ್‌ನ ತುಳಿಯಲು ವಿಶ್ವನಾಥ್‌ ಯತ್ನಿಸಿದ್ದಾರೆ ಅಂತಾ ಜಯರಾಮ್​ ಆರೋಪಿಸಿದ್ದಾರೆ.

ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿ ಆಗಿರುವ ಜಯರಾಮ್, ವಿಶ್ವನಾಥ್​ಗೆ ಕಂಟಕವಾಗಬಹುದು ಎಂದು ಶಾಸಕರು, ರೌಡಿಗಳ ಜೊತೆ ನಿಕಟ ಸಂಪರ್ಕ ಬೆಳೆಸಿದ್ದಾರೆ ಅಂತಾ ಜಯರಾಮ್​ ಆರೋಪಿಸಿದ್ದಾರೆ. ನನ್ನನ್ನ ಹೊಡೆಸೋಕೆ 60 ಲಕ್ಷ ಚಂದ ವಸೂಲಿ ಮಾಡಿದ್ದಾರೆ. ಅದನ್ನ ಬೆತ್ತನಗೆರೆ ಮಂಜನಿಗೆ ಕೊಟ್ಟಿದ್ದಾರೆ. ಅದರಲ್ಲಿ ಕೊಲೆ ಮಾಡಲಿರುವ ಹುಡುಗರಿಗೆ 30 ಲಕ್ಷ ಕೊಡಲಾಗಿದೆ ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ವಿಚಾರ ಪೊಲೀಸರಿಗೂ ತಿಳಿದಿದೆ. ಹೀಗಾಗಿ, ಅವರು ನನ್ನನ್ನ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಅವರ ಮೇಲೆ ರಾಜಕೀಯ ಒತ್ತಡವಿದೆ. ಹಾಗಾಗಿ, ನನಗೆ ಏನ್ ಮಾಡ್ತಾರೆ ಅನ್ನೋ ಭಯ ಶುರುವಾಗಿದೆ. ಕೆಲ ಅಧಿಕಾರಿಗಳು ನಮ್ಮ ಲಿಮಿಟ್‌ನಲ್ಲಿ ಹೊಡೆಯಬೇಡಿ. ಬೇರೆ ಕಡೆ ಕರೆದುಕೊಂಡು ಹೋಗಿ ಹೊಡೆಯಿರಿ ಎಂದಿದ್ದಾರಂತೆ. ಹೀಗೆ, ಪರೋಕ್ಷವಾಗಿ ಮಾದನಾಯಕನಹಳ್ಳಿ ಪೊಲೀಸರ ವಿರುದ್ಧ ಜಯರಾಮ್‌ ಆರೋಪ ಮಾಡಿದ್ದಾರೆ. ಜೊತೆಗೆ, ತನಗೆ ಇರುವ ಜೀವ ಭಯದ ಕುರಿತು ಮಾಧ್ಯಮಗಳ ಎದುರು ಜಯರಾಮ್ ಕಣ್ಣೀರಿಟ್ಟಿದ್ದಾರೆ.

Published On - 6:12 pm, Tue, 1 September 20

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್