ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಲ್ಲಿ ಗ್ರಾಹಕರು ಸೇವಾ ಶುಲ್ಕ ನೀಡಬೇಕೆ ಅಥವಾ ಬೇಡವೆ? ಇಲ್ಲಿದೆ ಮಾಹಿತಿ

ರೆಸ್ಟೋರೆಂಟ್​ಗಳಿಗೆ (Restaurant) ನಾವು ಹೋದಾಗ ನಾವು ತಿನ್ನುವ ಆಹಾರದ ಜೊತೆಗೆ ಸೇವಾ ಶುಲ್ಕವನ್ನು ಪಾವತಿಸುತ್ತೇವೆ.  ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳು ಗ್ರಾಹಕರಿಗೆ ನೀಡಿದ ಸೇವೆಯಲ್ಲಿ ಗ್ರಾಹಕರು  ತೃಪ್ತರಾಗಿದ್ದರೆ ಮಾತ್ರ ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು.

ಹೋಟೆಲ್ ಅಥವಾ ರೆಸ್ಟೋರೆಂಟ್​ಗಳಲ್ಲಿ ಗ್ರಾಹಕರು ಸೇವಾ ಶುಲ್ಕ ನೀಡಬೇಕೆ ಅಥವಾ ಬೇಡವೆ? ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
Follow us
| Edited By: ವಿವೇಕ ಬಿರಾದಾರ

Updated on:May 24, 2022 | 4:18 PM

ನವದೆಹಲಿ: ದೊಡ್ಡ ದೊಡ್ಡ ಹೋಟೆಲ್ (Hotel) ಅಥವಾ ರೆಸ್ಟೋರೆಂಟ್​ಗಳಿಗೆ (Restaurant) ನಾವು ಹೋದಾಗ ನಾವು ತಿನ್ನುವ ಆಹಾರದ ಜೊತೆಗೆ ಸೇವಾ ಶುಲ್ಕವನ್ನು ಪಾವತಿಸುತ್ತೇವೆ.  ಅಂದರೆ ಹೋಟೆಲ್ ಅಥವಾ ರೆಸ್ಟೋರೆಂಟ್ ನಮಗೆ ನೀಡಿದ ಸೇವೆಗಳಿಗಾಗಿ ಗ್ರಾಹಕರಿಂದ ಸೇವಾ ಶುಲ್ಕವನ್ನು ಪಡೆಯುತ್ತವೆ. ಕೆಲವೊಮ್ಮೆ, ಗ್ರಾಹಕರು ಸೇವೆಗಳಲ್ಲಿ ಸಂತೋಷವಾಗದಿದ್ದರೂ ಸಹ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳು ಸೇವಾ ಶುಲ್ಕವನ್ನು ಪಾವತಿಸಲು ಒತ್ತಾಯಿಸಲಾಗುತ್ತದೆ. ಆದರೆ ನಾವು ಇಲ್ಲಿ ತಿಳಿಯಬೇಕಾದ ಸಂಗತಿ ಏನೆಂದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳು ಗ್ರಾಹಕರಿಗೆ ನೀಡಿದ ಸೇವೆಯಲ್ಲಿ ಗ್ರಾಹಕರು  ತೃಪ್ತರಾಗಿದ್ದರೆ ಮಾತ್ರ ಗ್ರಾಹಕರು ಸ್ವಯಂಪ್ರೇರಿತವಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು.

ಇದನ್ನು ಓದಿ: ಒಂದು ವರ್ಗವನ್ನು ಹೊರಗಿಟ್ಟು ಪ್ರಧಾನಿ ಮೋದಿ ಭಾರತದ ದೃಷ್ಟಿಕೋನ ನಿರ್ಮಿಸುತ್ತಿರುವುದು ತಪ್ಪು; ರಾಹುಲ್ ಗಾಂಧಿ ವಾಗ್ದಾಳಿ

ಈ ಕುರಿತು ಕೆಲವು ಗೊಂದಲಗಳಿವೆ. ಹೀಗಾಗಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (Ministry of Consumer Affairs) ಸೋಮವಾರ ಹೋಟೆಲ್ ಅಥವಾ ರೆಸ್ಟೋರೆಂಟ್​ಗಳು ತಮ್ಮ ಗ್ರಾಹಕರಿಗೆ ವಿಧಿಸುವ ಸೇವಾ ಶುಲ್ಕದ ವಿಷಯದ ಕುರಿತು   ರೆಸ್ಟೋರೆಂಟ್ ಮಾಲೀಕರ ಸಭೆಯನ್ನು ಕರೆದಿದೆ.  ಗ್ರಾಹಕ ವ್ಯವಹಾರಗಳ ಇಲಾಖೆ ಯು (DoCA) ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ​​ಆಫ್ ಇಂಡಿಯಾದೊಂದಿಗೆ ಜೂನ್ 2, 2022 ರಂದು ಸಭೆ ನಡೆಸಲಿದೆ.  ಸಭೆಯಲ್ಲಿ “ರೆಸ್ಟೋರೆಂಟ್‌ಗಳು ವಿಧಿಸುವ ಸೇವಾ ಶುಲ್ಕಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು” ಸಭೆಯಲ್ಲಿ ಚರ್ಚಿಸಲಾಗುವುದು ಎಂದು  ಇಲಾಖೆ ಹೇಳಿಕೆಯನ್ನು ಹೊರಡಿಸಿದೆ.

ಇದನ್ನೂ ಓದಿ

ರೆಸ್ಟೋರೆಂಟ್‌ಗಳು ಗ್ರಾಹಕರಿಂದ ಸೇವಾ ಶುಲ್ಕವನ್ನು ಸಂಗ್ರಹಿಸುವ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹಾಗೇ ಗ್ರಾಹಕರು ನೋಂದಾಯಿಸಿದ ಕುಂದುಕೊರತೆಗಳ ಹಿನ್ನೆಲೆಯಲ್ಲಿ ಇದು ಚರ್ಚೆಗೆ ಬಂದಿದೆ.  ಸರ್ಕಾರವು ಏಪ್ರಿಲ್ 2017 ರಲ್ಲಿ ಹೊರಡಿಸಲಾದ ಮಾರ್ಗಸೂಚಿಗಳ ಪ್ರಕಾರ ರೆಸ್ಟೋರೆಂಟ್‌ಗಳಲ್ಲಿ ‘ಸೇವಾ ಶುಲ್ಕ’ ಪಾವತಿಯು ಸ್ವಯಂಪ್ರೇರಿತ ಮತ್ತು ಗ್ರಾಹಕರ ವಿವೇಚನೆಗೆ ಅನುಗುಣವಾಗಿರುತ್ತದೆ ಎಂದು ಹೇಳಿದೆ.

ಇದನ್ನು ಓದಿ: ವಿಧಾನ ಪರಿಷತ್ ಚುನಾವಣೆ: ರಾಜ್ಯದಲ್ಲಿ ಪರಿಷತ್ ಫೈಟ್ ಜನರಿಗೇನು ಲಾಭ? ವೀಕ್ಷಿಸಿ ಲೈವ್​

ಸೇವಾ ಶುಲ್ಕಗಳ ಕುರಿತು ಸರ್ಕಾರದ ಮಾರ್ಗಸೂಚಿಗಳು ಏನು ಹೇಳುತ್ತವೆ?

  1. ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಿಗೆ ಕೇಂದ್ರ ಸರಕಾರ ಕೆಲವೊಂದು ಮಾರ್ಗಸೂಚಿಗಳನ್ನು ನೀಡಿದೆ. ರೆಸ್ಟೊರೆಂಟ್‌ಗೆ ಗ್ರಾಹಕರು ಪ್ರವೇಶಿಸುವುದನ್ನು ನಿರ್ಭಂದಿಸುವಂತಿಲ್ಲ. ಗ್ರಾಹಕರು ಸ್ವಯಂ ಪ್ರೇರಿತವಾಗಿ ಸೇವಾ ಶುಲ್ಕವನ್ನು ಪಾವತಿಸಬೇಕು. ಗ್ರಾಹಕರಿಗೆ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್​ಗಳು ಸೇವಾ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸುವಂತಿಲ್ಲ. ಹಾಗೇನಾದರೂ ಒತ್ತಾಯಿಸಿದರೆ  ಗ್ರಾಹಕ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು.
  2. ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳಲ್ಲಿ ನೀಡುವ ಬಿಲ್​ನಲ್ಲಿ “ಸೇವಾ ಶುಲ್ಕವು ಸ್ವಯಂಪ್ರೇರಿತವಾಗಿದೆ ” ಎಂದು ಸ್ಪಷ್ಟವಾಗಿ ನಮೂದಿಸಬೇಕು. ಅಥವಾ  ಗ್ರಾಹಕರು ಪಾವತಿ ಮಾಡುವ ಬಿಲ್‌ನ ಸೇವಾ ಶುಲ್ಕದ ಕಾಲಮ್ ಅನ್ನು ಖಾಲಿ ಬಿಡಬಹುದು” ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
  3. ಗ್ರಾಹಕರು ಆರ್ಡರ್ ಮಾಡಿದ ಆಹಾರ ಮತ್ತು ಪಾನೀಯಗಳನ್ನು ಒದಗಿಸುವಲ್ಲಿ ಸೇವೆಯ ಅಂಶವು ಒಳಗೊಂಡಿರುತ್ತದೆ ಮತ್ತು ಅದ್ದರಿಂದ ಉತ್ಪನ್ನದ ಬೆಲೆಯು ಸರಕು ಮತ್ತು ಸೇವಾ ಘಟಕಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
  4. ತೆರಿಗೆಗಳೊಂದಿಗೆ ಮೆನು ಕಾರ್ಡ್‌ನಲ್ಲಿ ಪ್ರದರ್ಶಿಸಲಾದ ಬೆಲೆಗಳನ್ನು ಮಾತ್ರ ಗ್ರಾಹಕರು ನೀಡಬಹುದು. ಇದನ್ನು ಹೊರತುಪಡಿಸಿ ಗ್ರಾಹಕರಿಗೆ  ಬೇರೆ ಯಾವುದಕ್ಕೂ ಶುಲ್ಕ ವಿಧಿಸುವುದು , ಕಾಯಿದೆಯಡಿಯಲ್ಲಿ ವಿವರಿಸಿದಂತೆ ಅನ್ಯಾಯದ ವ್ಯಾಪಾರದ ಅಭ್ಯಾಸಕ್ಕೆ ಸಮಾನವಾಗಿರುತ್ತದೆ.
  5. ಅನ್ಯಾಯದ/ನಿರ್ಬಂಧಿತ ವ್ಯಾಪಾರದ ಸಮಯದಲ್ಲಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಗ್ರಾಹಕರು ಪ್ರಶ್ನಿಸಲು  ಮತ್ತು ತಿದ್ದುಪಡಿ ಮಾಡಲು  ತಮ್ಮ ಹಕ್ಕುಗಳನ್ನು ಚಲಾಯಿಸಲು ಅರ್ಹರಾಗಿರುತ್ತಾರೆ. ಗ್ರಾಹಕರಿಗೆ ಅನ್ಯಾಯವಾದಾಗ ಗ್ರಾಹಕರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ/ಫೋರಮ್ ಅನ್ನು ಸಂಪರ್ಕಿಸಬಹುದು.
  6. ಗ್ರಾಹಕರು ಮೆನು ಕಾರ್ಡ್‌ನಲ್ಲಿ ನಮೂದಿಸಲಾದ ಬೆಲೆಗಳನ್ನು ಹೊರತುಪಡಿಸಿ ಬೇರೆ ಯಾವುದಕ್ಕೂ ಶುಲ್ಕ  ನೀಡಲು ಒಪ್ಪದಿದ್ದಾಗ, ಬಲವಂತವಾಗಿ ಹಣ ಪಡೆದರೇ  ಗ್ರಾಹಕ ಸಂರಕ್ಷಣಾ ಕಾಯಿದೆ, 1986 ಅಪರಾಧವಾಗುತ್ತದೆ.
  7. ಗ್ರಾಹಕರು  ಮತ್ತು ಹೋಟೆಲ್ ಮ್ಯಾನೇಜ್‌ಮೆಂಟ್ ನಡುವೆ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಮೂಲಭೂತ ಕನಿಷ್ಠ ಸೇವೆಯನ್ನು ಮೀರಿ ಹಣ ಸ್ವೀಕರಿಸಿದ ಆತಿಥ್ಯಕ್ಕೆ ಯಾವುದೇ ಸಲಹೆ ಅಥವಾ ಗ್ರಾಚ್ಯುಟಿಯನ್ನು ಪಾವತಿಸಿದರೆ, “ಇದು ಗ್ರಾಹಕರು ಮತ್ತು ಹೋಟೆಲ್ ಅಥವಾ ರೆಸ್ಟೋರೆಂಟ್‌ನ ಸಿಬ್ಬಂದಿಗಳ ನಡುವಿನ ಪ್ರತ್ಯೇಕ ವ್ಯವಹಾರವಾಗಿದೆ ಎಂದು ಹೇಳಿದೆ.
  8. ಗ್ರಾಹಕರು ತಮ್ಮ ಊಟವನ್ನು ಪೂರ್ಣಗೊಳಿಸಿದ ನಂತರವೇ ಸೇವೆಯ ಗುಣಮಟ್ಟವನ್ನು ನಿರ್ಣಯಿಸಿ ಹಣ ನೀಡುತ್ತಾರೆ. ಗ್ರಾಹಕರು ಸೇವಗೆ ಎಷ್ಟು  ಹಣ ಪಾವತಿಸಬೇಕು ಎಂದು ಗ್ರಾಹಕರು ನಿರ್ಧರಿಸುತ್ತಾರೆ.

Published On - 4:17 pm, Tue, 24 May 22

ತಾಜಾ ಸುದ್ದಿ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ
ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ:ಎರಡು ಪಕ್ಷಗಳ ಕೆಲ ಮುಖಂಡರು ಕಾಂಗ್ರೆಸ್​ಗೆ