AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಥಾಸ್ಥಿತಿ ಕಾಯ್ದುಕೊಂಡ EPFO ಭವಿಷ್ಯ ನಿಧಿ ಬಡ್ಡಿ ದರ: ಆತಂಕದ ನಡುವೆ ಸಮಾಧಾನಕರ!

EPFO: ಕೊವಿಡ್​-19 ಸಾಂಕ್ರಾಮಿಕ ಮಹಾಮಾರಿಯ ಕಾಟದ ನಡುವೆಯೂ 2020 ಏಪ್ರಿಲ್-ಡಿಸೆಂಬರ್​ ನಡುವಣ ಮೂರು ತ್ರೈಮಾಸಿಕಗಳಲ್ಲಿಯೂ ಸುಮಾರು 50 ಲಕ್ಷ ಮಂದಿ ಹೊಸ ಚಂದಾದಾರರಾಗಿ ಸೇರ್ಪಡೆಯಾಗಿದ್ದಾರೆ.

ಯಥಾಸ್ಥಿತಿ ಕಾಯ್ದುಕೊಂಡ EPFO ಭವಿಷ್ಯ ನಿಧಿ ಬಡ್ಡಿ ದರ: ಆತಂಕದ ನಡುವೆ ಸಮಾಧಾನಕರ!
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​
| Updated By: Srinivas Mata|

Updated on: Mar 16, 2021 | 11:33 AM

Share

ಸುಮಾರು ಐದು ಕೋಟಿ ಸದಸ್ಯರನ್ನು ಹೊಂದಿರುವ ನೌಕರರ ಭವಿಷ್ಯ ನಿಧಿ ಸಂಘಟನೆಯು (EPFO) ದೇಶದ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿನ ನೌಕರರ ಭವಿಷ್ಯ ಭದ್ರವಾಗಿರಲಿ ಎಂಬ ಸದಾಶಯದೊಂದಿಗೆ ಸಾಮಾಜಿಕ ಭದ್ರತಾ ನಿಧಿಯನ್ನು ಕಾಪಾಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ನೌಕರರ ಭವಿಷ್ಯ ನಿಧಿ ಯೋಜನೆಗಳಲ್ಲಿ (Employee’s Provident Funds (EPF) Scheme) ಹೂಡಿಕೆ ಪಾಲು ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್​ ಕುಮಾರ್ ಗಂಗ್ವಾರ್ ಅವರು ನಿನ್ನೆ (ಮಾರ್ಚ್ 15, 2021) ಲೋಕಸಭೆಯಲ್ಲಿ ತಿಳಿಸಿದ್ದಾರೆ.

EPFO ಹೂಡಿಕೆಗಳು 2019ನೇ ಆರ್ಥಿಕ ವರ್ಷದಲ್ಲಿ 1,41,346.85 ಕೋಟಿ (1.41 ಲಕ್ಷ ಕೋಟಿ) ರೂಪಾಯಿಯಷ್ಟಿತ್ತು. ಅದು 2020ನೇ ಆರ್ಥಿಕ ವರ್ಷದಲ್ಲಿ 1,68,661 ಕೋಟಿ (1.68 ಲಕ್ಷ ಕೋಟಿ) ರೂಪಾಯಿಯಷ್ಟಾಗಿತ್ತು. ಅದಕ್ಕೂ ಮೊದಲು 2018ನೇ ಆರ್ಥಿಕ ವರ್ಷದಲ್ಲಿ 1,26,661 ಕೋಟಿ (1.26 ಲಕ್ಷ ಕೋಟಿ) ರೂಪಾಯಿಯಷ್ಟಾಗಿತ್ತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ EPFO ಭವಿಷ್ಯ ನಿಧಿ ಮೇಲಿನ ಬಡ್ಡಿ ದರವನ್ನು ಶೇ. 8.5 ರ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ. 2014ನೇ ಆರ್ಥಿಕ ವರ್ಷದಿಂದಲೂ ಶೇ. 8.5 ರ ಆದಾಯಕ್ಕಿಂತ ಕಮ್ಮಿ ಇಲ್ಲದಂತೆ ಸತತವಾಗಿ ವಾಪಸಾತಿಗಳಿವೆ. ಸಾಮಾಜಿಕ ಭದ್ರತೆಯ ಸದುದ್ದೇಶದೊಂದಿಗೆ ಮತ್ತು ಮೂಲ ಧನವನ್ನು ಪೋಷಿಸಿಕೊಂಡು ಬರುವ ಬದ್ಧತೆಯೊಂದಿಗೆ EPFO ಕೆಲಸ ನಿರ್ವಹಿಸುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ.

ತನ್ನ ಸದಸ್ಯರಿಗೆ ಉತ್ತಮ ವಾಪಸಾತಿಗಳನ್ನು ನೀಡಬೇಕೆಂದು ಕ್ಷಣಕ್ಷಣಕ್ಕೂ ಏರಿಳಿತ ಕಾಣುವ ಷೇರು ಮಾರುಕಟ್ಟೆಯಲ್ಲಿಯೂ 2015-16ನೇ ಸಾಲಿನಿಂದ EPFO ದಕ್ಷವಾಗಿ ಹಣ ಹೂಡತೊಡಗಿದೆ. ಅದರಿಂದ ಲಾಭವೇ ಹೆಚ್ಚಾಗಿದೆ. ಇದರಿಂದ ಮೂಲಧನದ ಶೇ. 5ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡತೊಡಗಿದ EPFO ಇದೀಗ ಶೇ. 15ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡುತ್ತಿದೆ.

ಹಾಗೆಯೇ, 2020 ಡಿಸೆಂಬರ್​ನಲ್ಲಿ ಶೇ. 24ರಷ್ಟು ಮಂದಿ ಹೊಸದಾಗಿ EPFOಗೆ ಚಂದಾದಾರರಾಗಿದ್ದಾರೆ. ಕೊವಿಡ್​-19 ಸಾಂಕ್ರಾಮಿಕ ಮಹಾಮಾರಿಯ ಕಾಟದ ನಡುವೆಯೂ 2020 ಏಪ್ರಿಲ್-ಡಿಸೆಂಬರ್​ ನಡುವಣ ಮೂರು ತ್ರೈಮಾಸಿಕಗಳಲ್ಲಿಯೂ ಸುಮಾರು 50 ಲಕ್ಷ ಮಂದಿ ಹೊಸ ಚಂದಾದಾರರಾಗಿ ಸೇರ್ಪಡೆಯಾಗಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಭವಿಷ್ಯ ನಿಧಿ ಮೇಲಿನ ಬಡ್ಡಿ ದರ ಹೆಚ್ಚಿಸದೇ ಇದ್ದರೂ ಶೇ. 8.5 ದರವನ್ನು ಕಾಪಾಡಿಕೊಂಡು ಬಂದಿರುವುದು ಕೊರೊನಾ ಸಾಂಕ್ರಾಮಿಕ ಕಾಲದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿರುವುದು ಸದಸ್ಯರ ಭವಿಷ್ಯದ ದೃಷ್ಟಿಯಿಂದ ತೃಪ್ತಿಕರ ಸಂಗತಿಯಾಗಿದೆ.

ಮೂಲ: https://www.money9.com/ 

ಇದನ್ನೂ ಓದಿ: ಇಪಿಎಫ್ ಬಡ್ಡಿದರ ಶೇ 8.5 ನಿಗದಿ: 5 ಕೋಟಿ ಕಾರ್ಮಿಕರಿಗೆ ಖುಷಿಕೊಟ್ಟ ನಿರ್ಧಾರ

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು