ಅಮ್ಮಾಜಮ್ಮ ತೀರಿಹೋದ್ರೆ ನಮ್ಮ ಗತಿ ಏನು? -ಕುಸಿದುಬಿದ್ದ ಅಭ್ಯರ್ಥಿ ಬಗ್ಗೆ HDD ಕಳವಳ
ತುಮಕೂರು: ಜಿಲ್ಲೆಯ ಶಿರಾದಲ್ಲಿ JDS ಚುನಾವಣಾ ಸಮಾವೇಶದ ವೇಳೆ ಪಕ್ಷದ ಅಭ್ಯರ್ಥಿ ತಲೆಸುತ್ತಿ ಕುಸಿದುಬಿದ್ದಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದರು. ಅಮ್ಮಾಜಮ್ಮ ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿದ್ದರು. ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದ ಅಮ್ಮಾಜಮ್ಮರನ್ನು ತಕ್ಷಣ ಅವರ ಮಗ ಸತ್ಯನಾರಾಯಣ ಆಸ್ಪತ್ರೆಗೆ ಕರೆದೊಯ್ದರು. ಇತ್ತ, ವೇದಿಕೆಯ ಮೇಲೆ ಅಮ್ಮಾಜಮ್ಮ ಕುಸಿದುಬಿದ್ದಂತೆ ಜೆಡಿಎಸ್ ವರಿಷ್ಠ H.D.ದೇವೇಗೌಡ ಅಮ್ಮಾಜಮ್ಮ ತೀರಿಹೋದರೆ ನಮ್ಮ ಗತಿಯೇನು? ಎಂದು ಕಳವಳ ವ್ಯಕ್ತಪಡಿಸಿದರು. ಅಮ್ಮಾಜಮ್ಮರ ಸ್ಥಿತಿ ನೋಡಿ ಮೈಕ್ ತೆಗೆದುಕೊಂಡು ದೇವೇಗೌಡರು ತಮ್ಮ ಕಳವಳ […]

ತುಮಕೂರು: ಜಿಲ್ಲೆಯ ಶಿರಾದಲ್ಲಿ JDS ಚುನಾವಣಾ ಸಮಾವೇಶದ ವೇಳೆ ಪಕ್ಷದ ಅಭ್ಯರ್ಥಿ ತಲೆಸುತ್ತಿ ಕುಸಿದುಬಿದ್ದಿದ್ದಾರೆ. ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದರು.
ಅಮ್ಮಾಜಮ್ಮ ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿದ್ದರು. ಸುಸ್ತಾಗಿ ತಲೆಸುತ್ತಿ ಕುಸಿದುಬಿದ್ದ ಅಮ್ಮಾಜಮ್ಮರನ್ನು ತಕ್ಷಣ ಅವರ ಮಗ ಸತ್ಯನಾರಾಯಣ ಆಸ್ಪತ್ರೆಗೆ ಕರೆದೊಯ್ದರು.
ಇತ್ತ, ವೇದಿಕೆಯ ಮೇಲೆ ಅಮ್ಮಾಜಮ್ಮ ಕುಸಿದುಬಿದ್ದಂತೆ ಜೆಡಿಎಸ್ ವರಿಷ್ಠ H.D.ದೇವೇಗೌಡ ಅಮ್ಮಾಜಮ್ಮ ತೀರಿಹೋದರೆ ನಮ್ಮ ಗತಿಯೇನು? ಎಂದು ಕಳವಳ ವ್ಯಕ್ತಪಡಿಸಿದರು. ಅಮ್ಮಾಜಮ್ಮರ ಸ್ಥಿತಿ ನೋಡಿ ಮೈಕ್ ತೆಗೆದುಕೊಂಡು ದೇವೇಗೌಡರು ತಮ್ಮ ಕಳವಳ ವ್ಯಕ್ತಪಡಿಸಿದರು.
ಕೆಲ ಹೊತ್ತಿನ ಬಳಿಕ ಆಸ್ಪತ್ರೆಯಿಂದ ಚೇತರಿಸಿಕೊಂಡು ವಾಪಸ್ ಆಗಿ ವೇದಿಕೆ ಹತ್ತಿದ ಅಮ್ಮಾಜಮ್ಮ ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೀನಿ ಎಂದು ಹೇಳಿದರು. ಜೊತೆಗೆ, ಅಮ್ಮಾಜಮ್ಮರ ಆರೋಗ್ಯ ಸುಧಾರಿಸಿದೆ, ಆತಂಕ ಬೇಡ. ಅವರ ಆರೋಗ್ಯ ಸರಿಯಿಲ್ಲ ಅಂತಾ ಹೇಳಿದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಅದನ್ನೇ ಅಪಪ್ರಚಾರ ಮಾಡ್ತಾರೆ ಎಂದು ಸಮಾವೇಶದ ವೇಳೆ ಹೆಚ್.ಡಿ.ರೇವಣ್ಣ ಹೇಳಿದರು.


Published On - 4:21 pm, Sun, 1 November 20



