AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈನ್ ರಿಪೇರಿ ವೇಳೆ ಪವರ್ On ಮಾಡಿಸಿದ ಅಧಿಕಾರಿಗಳು, ಪವರ್​ಮನ್​ಗೆ shock​

ಮೈಸೂರು: ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪವರ್​ಮನ್​ಗೆ ಗಾಯವಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ರಾಂಪುರದಲ್ಲಿ ಬೆಳಕಿಗೆ ಬಂದಿದೆ. ರಾಂಪುರ ನಾಲೆ ಬಳಿ 11ಕೆ.ವಿ ಪವರ್ ಲೈನ್ ದುರಸ್ತಿ ಮಾಡುವ ವೇಳೆ ಅಧಿಕಾರಿಗಳು ಪವರ್ ಆನ್ ಮಾಡಿಸಿದ್ದಾರಂತೆ. ಇದರಿಂದ ಪವರ್​ಮನ್​ (ಲೈನ್​ಮನ್) ಕೆ.ಎಸ್. ಮಂಜುಗೆ ಕರೆಂಟ್​ ತಾಗಿ ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಮತ್ತು ದವಡೆ ಹಾಗೂ ಹಲ್ಲುಗಳ ಮುರಿದಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಂಜುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು […]

ಲೈನ್ ರಿಪೇರಿ ವೇಳೆ ಪವರ್ On ಮಾಡಿಸಿದ ಅಧಿಕಾರಿಗಳು, ಪವರ್​ಮನ್​ಗೆ shock​
KUSHAL V
| Edited By: |

Updated on: Aug 18, 2020 | 12:06 PM

Share

ಮೈಸೂರು: ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪವರ್​ಮನ್​ಗೆ ಗಾಯವಾಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು ರಾಂಪುರದಲ್ಲಿ ಬೆಳಕಿಗೆ ಬಂದಿದೆ.

ರಾಂಪುರ ನಾಲೆ ಬಳಿ 11ಕೆ.ವಿ ಪವರ್ ಲೈನ್ ದುರಸ್ತಿ ಮಾಡುವ ವೇಳೆ ಅಧಿಕಾರಿಗಳು ಪವರ್ ಆನ್ ಮಾಡಿಸಿದ್ದಾರಂತೆ. ಇದರಿಂದ ಪವರ್​ಮನ್​ (ಲೈನ್​ಮನ್) ಕೆ.ಎಸ್. ಮಂಜುಗೆ ಕರೆಂಟ್​ ತಾಗಿ ಕೆಳಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟು ಮತ್ತು ದವಡೆ ಹಾಗೂ ಹಲ್ಲುಗಳ ಮುರಿದಿವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಂಜುಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು KPTCL ಅಧಿಕಾರಿಗಳ ವಿರುದ್ಧ ಪವರ್​ಮನ್​ ಮಂಜು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ. ದೂರಿನಲ್ಲಿ ನಂಜನಗೂಡು ತಾಲೂಕು ಹುಲ್ಲಹಳ್ಳಿ ಉಪ ಶಾಖೆಯ ಜ್ಯೂನಿಯರ್ ಇಂಜಿನಿಯರ್ ಸಂತೋಷ್ ಕುಮಾರ್ ಹಾಗೂ ಪವರ್ ಸ್ಟೇಷನ್ ಇನ್​ಜಾರ್ಜ್ ಪುಟ್ಟರಾಜು ಹೆಸರು ಉಲ್ಲೇಖಿಸಲಾಗಿದೆಯಂತೆ.