AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಕಾಟದ ಮಧ್ಯೆ.. ಹಸಿವಿನ ಬಾಧೆ -ಚಾರ್ಮಾಡಿ ಘಾಟ್​ನಲ್ಲಿ​ ಕೋತಿಗಳ ಮೂಕವೇದನೆ

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆರಾಯನ ಆರ್ಭಟದಿಂದ ಎದುರಾಗಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಕಷ್ಟದಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ಜಿಲ್ಲೆಯ ಮೂಕಜೀವಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಅಂಥದ್ದೇ ಒಂದು ದೃಶ್ಯ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ಕಂಡುಬಂದಿದೆ. ಭಾರಿ ಮಳೆ ಮತ್ತು ಚಳಿಗೆ ಕಂಗೆಟ್ಟ ಮಂಗಗಳು ಆಹಾರಕ್ಕಾಗಿ ಪರದಾಡುತ್ತಿರುವ ದೃಶ್ಯ ಚಾರ್ಮಾಡಿ ಘಾಟ್​ನಲ್ಲಿ ಕಂಡುಬಂದಿದೆ. ಈ ಹಿಂದೆ ಚಾರ್ಮಾಡಿ ಘಾಟ್​ನ ಸೊಬಗನ್ನು ಸವಿಯಲು ಬರುತ್ತಿದ್ದ ಪ್ರವಾಸಿಗರು ನೀಡುತ್ತಿದ್ದ ಆಹಾರ ಮತ್ತು […]

ಮಳೆ ಕಾಟದ ಮಧ್ಯೆ.. ಹಸಿವಿನ ಬಾಧೆ -ಚಾರ್ಮಾಡಿ ಘಾಟ್​ನಲ್ಲಿ​ ಕೋತಿಗಳ ಮೂಕವೇದನೆ
KUSHAL V
| Updated By: ಸಾಧು ಶ್ರೀನಾಥ್​|

Updated on: Sep 22, 2020 | 5:04 PM

Share

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆರಾಯನ ಆರ್ಭಟದಿಂದ ಎದುರಾಗಿರುವ ಸಂಕಷ್ಟಗಳು ಅಷ್ಟಿಷ್ಟಲ್ಲ. ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಕಷ್ಟದಿಂದ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ಜಿಲ್ಲೆಯ ಮೂಕಜೀವಿಗಳು ಸಹ ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಅಂಥದ್ದೇ ಒಂದು ದೃಶ್ಯ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ಕಂಡುಬಂದಿದೆ.

ಭಾರಿ ಮಳೆ ಮತ್ತು ಚಳಿಗೆ ಕಂಗೆಟ್ಟ ಮಂಗಗಳು ಆಹಾರಕ್ಕಾಗಿ ಪರದಾಡುತ್ತಿರುವ ದೃಶ್ಯ ಚಾರ್ಮಾಡಿ ಘಾಟ್​ನಲ್ಲಿ ಕಂಡುಬಂದಿದೆ. ಈ ಹಿಂದೆ ಚಾರ್ಮಾಡಿ ಘಾಟ್​ನ ಸೊಬಗನ್ನು ಸವಿಯಲು ಬರುತ್ತಿದ್ದ ಪ್ರವಾಸಿಗರು ನೀಡುತ್ತಿದ್ದ ಆಹಾರ ಮತ್ತು ಹಣ್ಣುಗಳ ಮೇಲೆ ಕೋತಿಗಳು ಅವಲಂಬಿತವಾಗಿದ್ದವು.

ಆದರೆ, ಕಳೆದ ಕೆಲವು ದಿನಗಳಿಂದ ದಟ್ಟ ಮಂಜು ಹಾಗೂ ಸತತ ಮಳೆಯಿಂದ ವಾಹನಗಳನ್ನು ನಿಲ್ಲಿಸಲು ಸವಾರರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಭಾರಿ ಮಳೆಯಿಂದ ಕಾಡಿಗೂ ಹೋಗಲಾರದೇ ಇತ್ತ ಪ್ರವಾಸಿಗರಿಂದ ಆಹಾರವೂ ಸಿಗದೇ ಕೋತಿಗಳು ಕಂಗಾಲಾಗಿವೆ.