Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲುವೆಗೆ ಬಿದ್ದ ಬಾಲಕನನ್ನು ಉಳಿಸಲು ಸೀರೆಯನ್ನೇ ಬಿಚ್ಚಿ ಕೊಟ್ಟ ಮಹಾತಾಯಿ

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕ‌ನನ್ನು ರಕ್ಷಿಸಸಲು ಮಹಿಳೆ ಸೀರೆಯನ್ನೇ ಬಿಚ್ಚಿಕೊಟ್ಟ ಘಟನೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಿನ್ನೆ ಸಾಯಂಕಾಲ ನಡೆದಿದೆ. ಆಟವಾಡಲು ಸಹೋದರನೊಂದಿಗೆ ಹೋಗಿದ್ದ ಬಾಲಕ ಅರುಣ ದೊಡಮನಿ (7) ಕೆಬಿಜೆಎನ್ಎಲ್​ ಎಡದಂಡೆ ಕಾಲುವೆಯಲ್ಲಿ ಆಯತಪ್ಪಿ ಬಿದ್ದಿದ್ದ. ಈ ವೇಳೆ ಬಾಲಕನನ್ನು ರಕ್ಷಿಸಲು ಮಹಿಳೆ ಸಕೀನಾ ಬೇಗಂ ಕೂಗಿಕೊಂಡಿದ್ದಾರೆ. ಆಗ ಸ್ಥಳಕ್ಕೆ ಬಂದ ಶಿಕ್ಷಕ ಮಹೇಶ್, ತನಗೆ ಪೂರ್ಣ ಈಜು ಬರಲ್ಲ ಅಂದಿದ್ದಾರೆ. ತಕ್ಷಣ ಸಕೀನಾ ಬೇಗಂ ಹಿಂದೆಮುಂದೆ ಯೋಚಿಸದೆ ಸೀರೆಯನ್ನು ಬಿಚ್ಚಿ, ಸೀರೆಯ […]

ಕಾಲುವೆಗೆ ಬಿದ್ದ ಬಾಲಕನನ್ನು ಉಳಿಸಲು ಸೀರೆಯನ್ನೇ ಬಿಚ್ಚಿ ಕೊಟ್ಟ ಮಹಾತಾಯಿ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Sep 11, 2020 | 10:30 AM

ವಿಜಯಪುರ: ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕ‌ನನ್ನು ರಕ್ಷಿಸಸಲು ಮಹಿಳೆ ಸೀರೆಯನ್ನೇ ಬಿಚ್ಚಿಕೊಟ್ಟ ಘಟನೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿ ನಿನ್ನೆ ಸಾಯಂಕಾಲ ನಡೆದಿದೆ.

ಆಟವಾಡಲು ಸಹೋದರನೊಂದಿಗೆ ಹೋಗಿದ್ದ ಬಾಲಕ ಅರುಣ ದೊಡಮನಿ (7) ಕೆಬಿಜೆಎನ್ಎಲ್​ ಎಡದಂಡೆ ಕಾಲುವೆಯಲ್ಲಿ ಆಯತಪ್ಪಿ ಬಿದ್ದಿದ್ದ. ಈ ವೇಳೆ ಬಾಲಕನನ್ನು ರಕ್ಷಿಸಲು ಮಹಿಳೆ ಸಕೀನಾ ಬೇಗಂ ಕೂಗಿಕೊಂಡಿದ್ದಾರೆ. ಆಗ ಸ್ಥಳಕ್ಕೆ ಬಂದ ಶಿಕ್ಷಕ ಮಹೇಶ್, ತನಗೆ ಪೂರ್ಣ ಈಜು ಬರಲ್ಲ ಅಂದಿದ್ದಾರೆ. ತಕ್ಷಣ ಸಕೀನಾ ಬೇಗಂ ಹಿಂದೆಮುಂದೆ ಯೋಚಿಸದೆ ಸೀರೆಯನ್ನು ಬಿಚ್ಚಿ, ಸೀರೆಯ ಒಂದು ತುದಿಯನ್ನು ಶಿಕ್ಷಕ ಮಹೇಶ್​ಗೆ ಕೊಟ್ಟು ಕಾಲುವೆಗೆ ಇಳಿಸಿದ್ರು.

ಸೀರೆಯ ಮತ್ತೊಂದು ತುದಿಯನ್ನು‌ ತಾನೇ ಹಿಡಿದು ಸಹಾಯ ಮಾಡಿದ್ರು. ಈ ರೀತಿ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು ರಕ್ಷಿಸಲು ಸಕೀನಾ ಬೇಗಂ ಸಹಾಯ ಮಾಡಿದರು. ಮಹಾಭಾರತದಲ್ಲಿ ಕರ್ಣ ತನ್ನ ರಕ್ಷಾ ಕವಚ, ಕುಂಡಲಗಳನ್ನು ಕತ್ತರಿಸಿ ಕೊಟ್ಟಂತೆ. ಸಕೀನಾ ಬೇಗಂ ತನ್ನ ಸೀರೆಯನ್ನೇ ಬಿಚ್ಚಿ ಕೊಟ್ಟು ಬಾಲಕನ ಜೀವ ಉಳಿಸಿದ್ದಾರೆ. ಮಹಿಳೆಯ ಈ ಕಾರ್ಯಕ್ಕೆ ಎಲ್ಲೆಡೆ ಈಗ ಶ್ಲಾಘನೆ ವ್ಯಕ್ತವಾಗಿದೆ.