AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಪರಿಪೂರ್ಣ ಒಂದು ವರ್ಷ

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರು 2022ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ 2024ರಲ್ಲಿ ಅಂದರೆ ಕಳೆದ ವರ್ಷ ಅವರ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಮಾರ್ಚ್‌ನಲ್ಲಿ ಪ್ರಾರಂಭವಾದ ವಿವಾಹಪೂರ್ವ ಸಂಭ್ರಮಾಚರಣೆಯ ಬಳಿಕ ಅವರಿಬ್ಬರೂ ಜುಲೈ 12ರಂದು ರಾತ್ರಿ ಅಧಿಕೃತವಾಗಿ ವಿವಾಹವಾಗಿದ್ದರು. ಇವರ ಮದುವೆಯನ್ನು ಈ ಶತಮಾನದ ಅತ್ಯಂತ ಅದ್ದೂರಿ ಮದುವೆ ಎಂದೂ ಕೂಡ ಕರೆಯಲಾಗಿತ್ತು. ಇದೀಗ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಪರಿಪೂರ್ಣ ಒಂದು ವರ್ಷವಾಗಿದೆ.

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಪರಿಪೂರ್ಣ ಒಂದು ವರ್ಷ
ಅಂಬಾನಿ ಕುಟುಂಬ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Jul 12, 2025 | 2:23 PM

Share

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ (Anant Ambani- Radhika Merchant) ಅವರ ವಿವಾಹ ದೇಶ ಮಾತ್ರವಲ್ಲ, ಜಗತ್ತೆ ಹುಬ್ಬೇರಿಸಿ ನೋಡಿದಂತಹ ಸಮಾರಂಭವಾಗಿತ್ತು. 2024 ರಲ್ಲಿ ಅವರ ವಿವಾಹ ಕೇವಲ ಒಂದು ಸಾಮಾಜಿಕ ಕಾರ್ಯಕ್ರಮವಲ್ಲದೆ ಒಂದು ರೀತಿಯ ಸಾಂಸ್ಕೃತಿಕ ವಿದ್ಯಮಾನದಂತೆ ನಡೆದಿತ್ತು. ಲಕ್ಷಾಂತರ ಜನ ಮನಮೋಹಕ ಮತ್ತು ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗಿದ್ದರು. ಇದು ಒಂದು ವಿವಾಹ ಮಾತ್ರವಲ್ಲ, ಸಂಪ್ರದಾಯ, ಹಿಂದೂ ಆಚರಣೆಗಳಿಗೆ ನೀಡಿದ ಒಂದು ಗೌರವಾಗಿತ್ತು. ಈಗ ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಪರಿಪೂರ್ಣ ಒಂದು ವರ್ಷವಾಗಿದೆ.

ಹಿಂದೂ ವಿವಾಹದ ಮಹತ್ವ

ನಮ್ಮ ಹಿಂದೂ ಸಂಪ್ರದಾಯದಲ್ಲಿ, ವಿವಾಹ ಎಂಬುದು ಕೇವಲ ಒಂದು ಒಪ್ಪಂದವಲ್ಲ ಅದೊಂದು ಪವಿತ್ರ ಬಂಧನ, ಅದೊಂದು ಬದ್ಧತೆ ಹಾಗಾಗಿ ನಾವು ಅದನ್ನು ಪೂಜಿಸಿ, ಗೌರವಿಸಲಾಗುತ್ತದೆ. ಇವರ ಮದುವೆ ಕೂಡ ಇಬ್ಬರು ವ್ಯಕ್ತಿಗಳು, ಅವರ ಕುಟುಂಬಗಳು ಮತ್ತು ಸಮುದಾಯಗಳ ನಡುವಿನ ದೈವಿಕ ಒಕ್ಕೂಟವನ್ನು ಪ್ರತಿನಿಧಿಸುತ್ತದೆ. ಹಿಂದೂ ವಿವಾಹ ವೈಯಕ್ತಿಕ ಉದ್ದೇಶವನ್ನು ಮೀರಿದಂತಹ, ಧಾರ್ಮಿಕ ಕರ್ತವ್ಯಗಳನ್ನು (ಧರ್ಮ) ಪೂರೈಸುವುದನ್ನು ಒಳಗೊಂಡಿರುತ್ತದೆ. ಆದರೆ ಇಂದಿನ ಆಧುನಿಕ ಪ್ರಯೋಗಗಳಿಂದ ವಿವಾಹಗಳಲ್ಲಿ ಪ್ರಾಚೀನ ಆಚರಣೆಗಳನ್ನು ಪಾಲನೆ ಮಾಡುವುದನ್ನೇ ಮರೆಯುತ್ತಾರೆ. ಆದರೆ ಯುವ ಅಂಬಾನಿ ದಂಪತಿ ಪ್ರತಿಯೊಂದು ಭಾರತೀಯ ಸಂಪ್ರದಾಯ ಮತ್ತು ಪದ್ಧತಿಯನ್ನು ಅನುಸರಿಸಿದರು. ಈ ಪದ್ಧತಿಗಳ ಬಗ್ಗೆ ಅವರಿಗಿದ್ದ ಗೌರವ ಇದಕ್ಕೆಲ್ಲಾ ಸಾಕ್ಷಿಯಾಯಿತು.

Anant Ambani Wedding (1)

ಭಾರತದ ಜಾಗತಿಕ ಇಮೇಜ್ ವೃದ್ಧಿ

ಭಾರತವು ವಿಶ್ವ ವೇದಿಕೆಯಲ್ಲಿ ಹಣಕಾಸು, ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಸಮಾರಂಭ ನಡೆದಿದ್ದು ನಮ್ಮ ಭಾರತದ ಇಮೇಜ್ ಅನ್ನು ಮತ್ತಷ್ಟು ಹೆಚ್ಚಿಸಿತು. ಗೌರವಾನ್ವಿತ ವ್ಯಕ್ತಿಗಳ ಉಪಸ್ಥಿತಿಯು ಭಾರತದ ಆರ್ಥಿಕ, ರಾಜಕೀಯ, ಬೌದ್ಧಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿನ ಸಾಮರ್ಥ್ಯಗಳನ್ನು ಎತ್ತಿ ತೋರಿಸಿದೆ, ಮಾತ್ರವಲ್ಲ ಈ ಮದುವೆಯನ್ನು ನೇರವಾಗಿ ಕಣ್ಣತುಂಬಿಕೊಳ್ಳಲು ಹಲವಾರು ಅಂತಾರಾಷ್ಟ್ರೀಯ ದಿಗ್ಗಜರು ಕೂಡ ಹಾಜರಿದ್ದರು. ದ್ವಾರಕೆಯ ಸ್ವಾಮಿ ಸದಾನಂದ ಸರಸ್ವತಿ, ಶಂಕರಾಚಾರ್ಯ, ಜೋಶಿಮಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಶಂಕರಾಚಾರ್ಯ, ಇಸ್ಕಾನ್ ನ ಗೌರಂಗ್ ದಾಸ್ ಪ್ರಭು, ಸನ್ಯಾಸಿ ಗೌರ್ ಗೋಪಾಲ್ ದಾಸ್ ಹೀಗೆ ಸಾವಿರಾರು ಸ್ವಾಮೀಜಿಗಳು, ಭಾರತದ ಹಲವಾರು ರಾಜಕಾರಣಿಗಳು ಮತ್ತು ಮಂತ್ರಿಗಳ ಜೊತೆಗೆ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

Anant Ambani Wedding (2)

ಮಾನವೀಯತೆ ಮತ್ತು ಸಂಪ್ರದಾಯ

ಅಂಬಾನಿ ಕುಟುಂಬ ತಮ್ಮ ಮನೆಯ ಸಮಾರಂಭವಾದರೂ ಕೂಡ ಮಾನವೀಯತೆ ಮೆರೆದು ಜನರ ಸೇವೆ ಮಾಡಿರುವುದು ಶ್ಲಾಘನೀಯ. ಮಾನವನ ಸೇವೆಯೇ ಮಾಧವನ ಸೇವೆ ಎಂಬುದನ್ನು ಅಕ್ಷರಶಃ ಪಾಲಿಸಿದ್ದಾರೆ. ಮದುವೆಯ ಸಮಯದಲ್ಲಿ ನವಿ ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‌ನಲ್ಲಿ 50 ಬಡ ದಂಪತಿಗಳಿಗೆ ಸಾಮೂಹಿಕ ವಿವಾಹ ದೊಂದಿಗೆ ವಿವಾಹ ಆಚರಣೆಯನ್ನು ಪ್ರಾರಂಭಿಸಿದ್ದರು. ಮಾತ್ರವಲ್ಲ ಎಲ್ಲಾ ಅಂಬಾನಿ ಕುಟುಂಬ ಸದಸ್ಯರು ನವವಿವಾಹಿತರಿಗೆ ಉಡುಗೊರೆಗಳನ್ನು ನೀಡಿದ್ದರು. ಇದಲ್ಲದೆ, ಪ್ರತಿದಿನ 1,000 ಕ್ಕೂ ಹೆಚ್ಚು ಜನರಿಗೆ ಭೋಜನವನ್ನು ನೀಡುವ ಭಂಡಾರವನ್ನು ಆಯೋಜಿಸಿದ್ದರು.

Anant Ambani Wedding (3)

ವಿವಿಧ ರೀತಿಯ ವಿವಾಹ ಆಚರಣೆಗಳು ಹಲವಾರು ದಿನಗಳ ವರೆಗೆ ನಡೆದವು, ಸಣ್ಣ ಆಚರಣೆಗಳಾದರೂ ಕೂಡ ಅದಕ್ಕಿರುವ ಆಳವಾದ ಮಹತ್ವ ಅರಿತು ಆ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಜೊತೆಗೆ ಬಂದ ಅತಿಧಿಗಳನ್ನು ಮನರಂಜಿಸಲು ಸಂಗೀತ ಸಮಾರಂಭ ನಡೆಸಿದರು. ಮದುವೆಗೆ ಯಾವುದೇ ಅಡೆತಡೆ ಬರದಂತೆ ತಡೆಯಲು ಗ್ರಹ ಶಾಂತಿ ನಡೆಸಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಅಂಬಾನಿ ಮನೆಯ ಎಲ್ಲಾ ಸಿಬ್ಬಂದಿಗೆ ಒಂದು ಸಮಾರಂಭವನ್ನು ಆಯೋಜಿಸಿ ಉಡುಗೊರೆಗಳನ್ನು ನೀಡಿದ್ದರು.

ಇದನ್ನೂ ಓದಿ: Radhika Merchant: ಭಾವಿ ಸೊಸೆಗೆ ಅಂಬಾನಿ ಕುಟುಂಬ ನೀಡಿರುವ ವಿಶೇಷ ಗಿಫ್ಟ್​​​ ಏನು ಗೊತ್ತಾ?

ಬನಾರಸ್‌ ನ ಮಹತ್ವ ತಿಳಿಸಲು ಒಂದು ದಿನ ಬಟ್ಟೆ, ಊಟ ಎಲ್ಲವೂ ಅಲ್ಲಿನ ರೀತಿಯಲ್ಲಿ ಸಿದ್ಧಪಡಿಸಲಾಗಿತ್ತು. ಮಾತ್ರವಲ್ಲ ಮದುವೆ ಸಮಾರಂಭದಲ್ಲಿ ಭಾರತೀಯ ಡ್ರೆಸ್ ಕೋಡ್ ಮರೆಯಲಿಲ್ಲ. ಹಾಗಾಗಿ ಎಲ್ಲಾ ಗಣ್ಯರು ಮತ್ತು ಅತಿಥಿಗಳು ಇದನ್ನು ಅನುಸರಿಸಿದರು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಅದ್ಭುತ ಪ್ರದರ್ಶನ ನೀಡಿದರು. ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿಯವರ ವಿವಾಹವು ಕೇವಲ ಒಂದು ಹೆಣ್ಣು, ಗಂಡು ಒಂದಾಗುವ ಆಚರಣೆಯಾಗಿರಲಿಲ್ಲ, ಬದಲಾಗಿ ಸಂಪ್ರದಾಯ, ಜಾಗತಿಕ ಸಂಪರ್ಕ ಮತ್ತು ಆಳವಾದ ಆಧ್ಯಾತ್ಮಿಕತೆಯ ಎಳೆಗಳಿಂದ ಹೆಣೆಯಲ್ಪಟ್ಟ ಒಂದು ಭವ್ಯವಾದ ಕಾರ್ಯಕ್ರಮವಾಗಿತ್ತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Sat, 12 July 25

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ