AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ಗಂಟೆ ಕೆಲಸವನ್ನು 4 ಗಂಟೆಯಲ್ಲಿ ಮುಗಿಸಬಹುದು, ಕೆಲಸದ ಕಡೆ ಗಮನ ಹೆಚ್ಚಿಸಲು ಇದು ಸಹಕಾರಿ

8 ಗಂಟೆ ಕೆಲಸವನ್ನು 4 ಗಂಟೆಯೊಳಗೆ ಮುಗಿಸುವುದು ಹೇಗೆ? ಇದಕ್ಕೆ ಮನಸ್ಸು ಹಾಗೂ ದೇಹ ಒಪ್ಪಬೇಕಲ್ಲ. ಇದು ಖಂಡಿತ ಸಾಧ್ಯ. ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ ತಿಂಡಿಯ ಬದಲು ಇದನ್ನು ತಿನ್ನಬೇಕು. ಇದು ದೇಹಕ್ಕೂ ಹಾಗೂ ಮನಸ್ಸಿಗೂ ಒಳ್ಳೆಯ ಶಕ್ತಿಯನ್ನು ನೀಡುತ್ತದೆ. ಹಾಗಾದರೆ ಪ್ರತಿದಿನ ಬೆಳಗ್ಗೆ ಯಾವುದನ್ನು ತಿಂಡಿಯಾಗಿ ತಿನ್ನಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

8 ಗಂಟೆ ಕೆಲಸವನ್ನು 4 ಗಂಟೆಯಲ್ಲಿ ಮುಗಿಸಬಹುದು, ಕೆಲಸದ ಕಡೆ ಗಮನ ಹೆಚ್ಚಿಸಲು ಇದು ಸಹಕಾರಿ
ಸಾಂದರ್ಭಿಕ ಚಿತ್ರ Image Credit source: Getty Images
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 29, 2025 | 6:00 PM

ವೃತ್ತಿ ಬದುಕನ್ನು ಸರಿದೂಗಿಸುವುದು ತುಂಬಾ ಕಷ್ಟ, ಕೆಲಸಕ್ಕೆ ಹೋಗುವವರಿಗೆ ತಮ್ಮ ಆರೋಗ್ಯದ (Healthy snacks) ಬಗ್ಗೆ ಕಾಳಜಿ ವಹಿಸುವುದು ದೊಡ್ಡ ತಲೆನೋವು, ಕಚೇರಿಯಲ್ಲಿ (workplace) ಬಾಸ್​​ ಕಾಟ, ಅಲ್ಲಿ ಕೆಲಸದ ಒತ್ತಡ, ಮತ್ತೊಂದು ಕಡೆ ಕೆಲಸವನ್ನು ತಕ್ಷಣ ಮುಗಿಸುವ ಹಂಬಲ, ಆದರೆ ಈ ಯಾವುದಕ್ಕೂ ದೇಹ ಮತ್ತು ಮನಸ್ಸು ಕೇಳುವುದಿಲ್ಲ, ಏಕೆಂದರೆ ದೇಹದಲ್ಲಿ ಸುಸ್ತು, ಮನಸ್ಸಿನಲ್ಲಿ ಬೇರೆ ಆಲೋಚನೆ, ದೇಹಕ್ಕೆ ಹಾಗೂ ಮನಸ್ಸಿಗೆ ಒತ್ತಡ ಹೆಚ್ಚಾದಾಗ ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ. ಆಗ ಕೆಲಸ ಕೂಡ ಆಗುವುದಿಲ್ಲ. ಇದಕ್ಕೆ ಕಾರಣ ಆಹಾರ ಪದ್ದತಿ. ದಿನವಿಡೀ ಕಂಪ್ಯೂಟರ್ ಪರದೆಗಳ ಮುಂದೆ ಕಳೆಯುವ ಜನರಿಗೆ, ಮಾನಸಿಕ ಆಯಾಸ ಮತ್ತು ಏಕಾಗ್ರತೆ ಕಡಿಮೆಯಾಗಬಹುದು. ಇದಕ್ಕಾಗಿ ಸರಿಯಾದ ಸಮಯಕ್ಕೆ ಬೆಳಿಗ್ಗೆ ತಿಂಡಿ ತಿನ್ನುವುದು ಉತ್ತಮ ಪರಿಹಾರ, ಇದರಿಂದ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಜತೆಗೆ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಇನ್ನು ಯಾವ ರೀತಿಯ ತಿಂಡಿಗಳನ್ನು ತಿನ್ನಬೇಕು, ಅದು ಕೂಡ ಮುಖ್ಯವಾಗಿರುತ್ತದೆ. ದೇಹ ಹಾಗೂ ಮನಸ್ಸು ಚಟುವಟಿಕೆಯಿಂದ ಇರಬೇಕಾದರೆ ಇವುಗಳನ್ನು ಬೆಳಿಗ್ಗೆ ತಿನ್ನಬೇಕು.

ಬೆಳಿಗ್ಗೆ ತಿನ್ನಬೇಕಾದ ಆರೋಗ್ಯ ಆಹಾರಗಳು:

  • ಬಾದಾಮಿ ಮತ್ತು ವಾಲ್ನಟ್ ನಂತಹ ಬೀಜಗಳು ಆರೋಗ್ಯಕರ ಆಹಾರಗಳು, ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ನ ಅತ್ಯುತ್ತಮ ಮೂಲಗಳು ಇದರಲ್ಲಿ ಇದೆ. ಮೆದುಳಿನ ಆರೋಗ್ಯ ಹಾಗೂ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಒಂದು ಸಣ್ಣ ಪಾತ್ರೆಯಲ್ಲಿ 10-12 ಬಾದಾಮಿ ಅಥವಾ ವಾಲ್ನಟ್​​​ಗಳನ್ನು ಆಫೀಸ್​​​​ಗೆ ತೆಗೆದುಕೊಂಡು ಹೋಗಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಹಾಗೂ ಮಧ್ಯಾಹ್ನದ ನಂತರ ದೇಹದಲ್ಲಿ ಉಂಟಾಗುವ ಸುಸ್ತನ್ನು ಕಡಿಮೆ ಮಾಡುತ್ತದೆ.
  • ಗ್ರೀಕ್ ಮೊಸರು ಕೂಡ ದೇಹಕ್ಕೆ ಹಾಗೂ ಮನಸ್ಸಿಗೆ ಶಕ್ತಿಯನ್ನು ನೀಡುತ್ತದೆ. ಇದು ಪ್ರೋಟೀನ್ ಮತ್ತು ಪ್ರೋಬಯಾಟಿಕ್‌ಗಳಿಂದ ತುಂಬಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಜತೆಗೆ ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ. ಇದರ ಜತೆಗೆ ಈ ಹಣ್ಣುಗಳನ್ನು ತಿನ್ನಿ, ಸ್ಟ್ರಾಬೆರಿ ಅಥವಾ ಬೆರಿಹಣ್ಣುಗಳಂತಹ ತಾಜಾ ಹಣ್ಣುಗಳನ್ನು ಒಂದು ಸಣ್ಣ ಕಪ್ ಗ್ರೀಕ್ ಮೊಸರಿನೊಂದಿಗೆ ಮಿಶ್ರಣ ಮಾಡಿ ತಿನ್ನಿ. ಮೆದುಳಿನ ಕೋಶಗಳನ್ನು ರಕ್ಷಿಸುತ್ತವೆ ಮತ್ತು ದೃಷ್ಟಿಯನ್ನು ಸುಧಾರಿಸುತ್ತವೆ.
  • ಕ್ಯಾರೆಟ್, ಸೌತೆಕಾಯಿ ಮತ್ತು ಬೆಲ್ ಪೆಪರ್ ಸ್ಟಿಕ್‌ಗಳೊಂದಿಗೆ ಹಮ್ಮಸ್ ಸೇರಿಸಿಕೊಂಡು ತಿನ್ನಬಹುದು. ಇದು ಆರೋಗ್ಯಕರ ಮತ್ತು ರುಚಿಕರವಾದ ತಿಂಡಿ. ಹಮ್ಮಸ್‌ನಲ್ಲಿರುವ ಕಡಲೆಕಾಳು ಪ್ರೋಟೀನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ, ಇದು ಶಕ್ತಿಯ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ತರಕಾರಿಗಳು ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತವೆ. ಹಾಗೂ ಮೆದುಳನ್ನು ಸಕ್ರಿಯವಾಗಿರಿಸುತ್ತವೆ. ಆಫೀಸ್​​​ನಲ್ಲಿ ಸಮಯ ಇರುವಾಗ ಇದನ್ನು ಸೇವನೆ ಮಾಡಬಹುದು.
  • ಆವಕಾಡೊ ಟೋಸ್ಟ್ ಒಂದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ಬ್ರೆಡ್‌ ಜತೆಗೂ ತಿನ್ನಬಹುದು. ಇದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ. ಅವಕಾಡೊದಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.
  • ಬೇಯಿಸಿದ ಮೊಟ್ಟೆ ತುಂಬಾ ಪ್ರೋಟಿನ್​​ ನೀಡುತ್ತದೆ. ಇದು ದೀರ್ಘಕಾಲೀನ ಶಕ್ತಿಯನ್ನು ಒದಗಿಸುತ್ತದೆ. ಒಂದು ಅಥವಾ ಎರಡು ಮೊಟ್ಟೆಗಳನ್ನು ಬೇಯಿಸಿ, ಸ್ವಲ್ಪ ಕರಿಮೆಣಸು ಅಥವಾ ಚಾಟ್ ಮಸಾಲಾ ಕೂಡ ಹಾಕಿ. ಮೊಟ್ಟೆಯಲ್ಲಿರುವ ಪ್ರೋಟೀನ್ ಕೋಲೀನ್ ಮೆದುಳಿನ ಕೋಶ ಸಂವಹನವನ್ನು ಸುಧಾರಿಸುತ್ತದೆ
  • ಬಾಳೆಹಣ್ಣು ಮತ್ತು ಸ್ವಲ್ಪ ಗ್ರೀಕ್ ಮೊಸರು ಅಥವಾ ಬಾದಾಮಿ ಹಾಲನ್ನು ಸೇರಿಸಿ ರಿಫ್ರೆಶ್ ಸ್ಮೂಥಿ ಮಾಡಿ.ಬೆರ್ರಿ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ, ಆದರೆ ಬಾಳೆಹಣ್ಣುಗಳು ನೈಸರ್ಗಿಕ ಸಕ್ಕರೆ ಮತ್ತು ಪೊಟ್ಯಾಸಿಯಮ್ ಅನ್ನು ಒದಗಿಸುತ್ತವೆ, ಇದು ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ಅಮ್ಮನ ಜತೆ ಸ್ಕೂಟಿಯಲ್ಲಿ ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಹರಿದ ಟಿಪ್ಪರ್
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ನನ್ನದೇನೂ ಉನ್ನತ ಹುದ್ದೆಯಲ್ಲ, ವೈಯಕ್ತಿಕವಾಗಿ ಯಾವ ಲಾಭವೂ ಇಲ್ಲ: ರಾಯರೆಡ್ಡಿ
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಚಲಿಸುತ್ತಿರುವಾಗಲೇ ಕಳಚಿದ ಸರ್ಕಾರಿ ಬಸ್​​ ಚಕ್ರ: ಮುಂದೇನಾಯ್ತು?
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ಪತ್ನಿ ವಿಚ್ಛೇದನ ಕೊಟ್ಟಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ರಾಜಣ್ಣ ಹೇಳಿದ್ದೊಂದು, ಮಾಧ್ಯಮಗಳು ಅರ್ಥಮಾಡಿಕೊಂಡಿದ್ದು ಮತ್ತೊಂದು: ಸಿಎಂ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಸಚಿವರಾದ ಮಹದೇವಪ್ಪ ಮತ್ತು ಶಿವರಾಜ್ ತಂಗಡಿಗಿಯಿಂದಲೂ ಮಾಲಾರ್ಪಣೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಬದಲಾಗಲಿದೆ ಕರ್ನಾಟಕ ಪೊಲೀಸ್ ಟೋಪಿ! ನೆರೆರಾಜ್ಯಗಳ ಪೊಲೀಸ್ ಕ್ಯಾಪ್ ಪರಿಶೀಲನೆ
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಕೆಂಪೇಗೌಡ ಜಯಂತಿಯಂದು ಇಲ್ಲಿನ ಪ್ರತಿಮೆಗೆ ಮಾಲಾರ್ಪಣೆ: ಶಿವಕುಮಾರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ರಾಜಣ್ಣಗೆ ಸುಳಿವು ಇರಬಹುದು: ಪರಮೇಶ್ವರ್
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ
ವಿಐಪಿಗಳೆಂದು ಹೇಳಿಕೊಂಡು ಯಾರ‍್ಯಾರೋ ದೇವಿಯ ದರ್ಶನಕ್ಕೆ ನುಗ್ಗುತ್ತಿದ್ದಾರೆ