AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದ್ದೀಯಾ? ಹೀಗೆ ಮಾಡಿ

ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದರೆ ರೋಗ ಕೂಡ ನಿಮ್ಮ ಸೇರಸಿಕೊಳ್ಳುತ್ತಿದೆ ಎಂದರ್ಥ, ಅದಕ್ಕಾಗಿ ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರಬಾರದು ಎಂದರೆ ಮಾಸ್ಟರ್‌ಶೆಫ್ ಪಂಕಜ್ ಭಡೋರಿಯಾ ಅವರ ಈ ಸಲಹೆಯನ್ನು ಪಾಲಿಸಲೇಬೇಕು. ಇವರು ಹೇಳಿರುವ ಸಲಹೆಗಳೇನು ಎಂಬದು ಇಲ್ಲಿದೆ.

ಬಾಟಲಿ, ಫ್ಲಾಸ್ಕ್​​​​ನಿಂದ ಕೆಟ್ಟ ವಾಸನೆ ಬರುತ್ತಿದ್ದೀಯಾ? ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Jun 23, 2025 | 4:40 PM

Share

ಸೆಲೆಬ್ರಿಟಿ ಮಾಸ್ಟರ್‌ಶೆಫ್ ಪಂಕಜ್ ಭಡೋರಿಯಾ, (Pankaj Bhadoria) ಇವರು ಆಗ್ಗಾಗೆ ಕೆಲವೊಂದು ಆಹಾರಕ್ಕೆ ಸಂಬಂಧಿಸಿದ ಟಿಪ್ಸ್​​​ಗಳನ್ನು ನೀಡುತ್ತಾರೆ. ಆರೋಗ್ಯ ಹಾಗೂ ದೇಹಕ್ಕೆ ಹೊಂದಿಕೊಳ್ಳುವ ಆಹಾರಗಳ ಸಲಹೆಗಳನ್ನು ನೀಡುತ್ತಿರುತ್ತಾರೆ. ಪಂಕಜ್ ಭಡೋರಿಯಾ ಬಹಳ ಪ್ರಸಿದ್ಧ ಮಾಸ್ಟರ್‌ಶೆಫ್, ಇವರು ಈಗಾಗಲೇ, ಸ್ಟಾರ್ ಪ್ಲಸ್‌ನ ಮಾಸ್ಟರ್‌ಶೆಫ್ ಕಾರ್ಯಕ್ರಮದಲ್ಲೂ ಕೂಡ ತಮ್ಮ ಕಲೆಯನ್ನು ತೋರಿಸಿದ್ದಾರೆ ಹಾಗೂ ಒಬ್ಬ ಮಾರ್ಗದರ್ಶಕರಾಗಿ ಭಾಗಹಿಸುತ್ತಿದ್ದಾರೆ. ಇದರಲ್ಲಿ ಅವರು ಕೆಲವೊಂದು ಆಹಾರಗಳ ಬಗ್ಗೆ ಎಚ್ಚರ ಇರುವಂತೆ, ಉತ್ತಮವಾದ ಆಹಾರ ಪದ್ಧತಿಗಳು ಯಾವುದು? ಹೀಗೆಲ್ಲ ಕೆಲವೊಂದು ಸಲಹೆಯನ್ನು ನೀಡುತ್ತಾರೆ. ಇದೀಗ ಬಾಟಲಿಗಳಿಂದ ಬರುವ ವಾಸನೆಯನ್ನು (Bottle Bad Odor) ಹೇಗೆ ತೆಗೆದು ಹಾಕುವುದು, ವಾಸನೆ ಬರದಂತೆ ಮಾಡುವುದು ಹೇಗೆ ಎಂಬ ಬಗ್ಗೆ ಹೇಳಿದ್ದಾರೆ. ನೀರು ಮಾತ್ರವಲ್ಲದೆ ಹಲವು ಬಾರಿ ಲಸ್ಸಿ, ಮಜ್ಜಿಗೆ ಅಥವಾ ಜ್ಯೂಸ್ ಇತ್ಯಾದಿಗಳನ್ನು ಫ್ಲಾಸ್ಕ್‌ಗಳು ಮತ್ತು ಬಾಟಲಿಗಳಲ್ಲಿ ಇಡಲಾಗುತ್ತದೆ, ಇದರಿಂದಾಗಿ ಈ ಬಾಟಲಿಗಳು ವಾಸನೆ ಬರಲು ಪ್ರಾರಂಭಿಸುತ್ತವೆ. ಇದಕ್ಕಿಂತಲ್ಲೂ ಡಿಟಾಕ್ಸ್ ನೀರು, ಚಹಾ ಅಥವಾ ಕಾಫಿಯ ವಾಸನೆಯು ಬಾಟಲಿಗಳಿಂದ ಬೇಗನೆ ಹೋಗುವುದಿಲ್ಲ. ಅಂತಹ ಸಮಯದಲ್ಲಿ ಪಂಕಜ್ ಹೇಳಿದ ಟ್ರಿಕ್ ಉಪಯೋಗಿಸಬೇಕು.

ನೀರಿನ ಬಾಟಲಿಯಿಂದ ಕೆಟ್ಟ ವಾಸನೆ ದೂರ ಮಾಡುವುದು ಹೇಗೆ?

ನೀರಿನ ಬಾಟಲ್ ಅಥವಾ ಫ್ಲಾಸ್ಕ್ ನಿಂದ ವಾಸನೆಯನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಬಳಸಬಹುದು. ಒಂದು ಚಮಚ ಬಿಳಿ ವಿನೆಗರ್ ಮತ್ತು ಒಂದು ಚಮಚ ಅಡುಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಬಾಟಲಿಗೆ ಹಾಕಿ, ನಂತರ ಚೆನ್ನಾಗಿ ಶೇಕ್ ಮಾಡಿ. ಹೀಗೆ ಮಾಡಿ ನಂತರ ಬಾಟಲಿಯನ್ನು ನೀರಿನಿಂದ ತೊಳೆಯಿರಿ. ಬಾಟಲಿಯ ವಾಸನೆ ಸಂಪೂರ್ಣವಾಗಿ ಹೋಗುತ್ತದೆ.

ಇದನ್ನೂ ಓದಿ
Image
ಟ್ರೆಂಡ್ ಆಗುತ್ತಿದೆ ಹಾಟ್‌ವೈಫಿಂಗ್, ಇದು ದೈಹಿಕ ಸಂಪರ್ಕದ ಹೊಸ ಪ್ರವೃತ್ತಿ
Image
ಸಂಗಾತಿಗೆ ತುಂಬಾ ನಿಷ್ಠವಾಗಿರುವ ಜೀವಿಗಳಿವು
Image
ಪರ್ಸ್‌ನಲ್ಲಿ ಹೆಂಡ್ತಿ ಫೋಟೋ ಇಟ್ಕೊಂಡ್ರೆ ಏನಾಗುತ್ತೆ ಗೊತ್ತಾ?
Image
ಗಂಡ ತನ್ನ ಹೆಂಡ್ತಿಯ ದೌರ್ಜನ್ಯದ ವಿರುದ್ಧ ಹೇಗೆ ಕಾನೂನಿನ ಸಹಾಯ ಪಡೆಯಬಹುದು?

ಇದನ್ನೂ ಓದಿ: ವಾರದ ಯಾವ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಗೊತ್ತಾ?

ಇಲ್ಲಿದೆ ನೋಡಿ ವಿಡಿಯೋ:

ಈ ತಂತ್ರ ಪ್ರಯತ್ನಿಸಿ:

  • ಅಡಿಗೆ ಸೋಡಾ ಮತ್ತು ವಿನೆಗರ್ ಜೊತೆಗೆ, ನಿಂಬೆ ರಸವು ಬಾಟಲಿಗಳಿಂದ ವಾಸನೆಯನ್ನು ತೆಗೆದು ಹಾಕುತ್ತದೆ. ಬಾಟಲಿಯಲ್ಲಿ ನಿಂಬೆ ರಸವನ್ನು ಸಿಂಪಡಿಸಿ ಮತ್ತು ಅದಕ್ಕೆ ಸ್ವಲ್ಪ ನೀರು ಸೇರಿಸಿ, ಬಾಟಲಿಯನ್ನು ಮುಚ್ಚಿ ಜೋರಾಗಿ ಶೇಕ್ ಮಾಡಿದ ನಂತರ ತೊಳೆಯಿರಿ. ನಿಂಬೆ ಹೋಳುಗಳು ಅಥವಾ ಕಿತ್ತಳೆ ಸಿಪ್ಪೆಗಳನ್ನು ಕೂಡ ಇದಕ್ಕೆ ಬಳಸಬಹುದು.
  • ಟೀ ಬ್ಯಾಗ್‌ಗಳು ಸಹ ತುಂಬಾ ಉಪಯುಕ್ತ ನೀರಿನ ಬಾಟಲ್ ಅಥವಾ ಫ್ಲಾಸ್ಕ್‌ನಲ್ಲಿ ನೀರು ಮತ್ತು ಟೀ ಬ್ಯಾಗ್ ಅನ್ನು ಹಾಕಿ, ರಾತ್ರಿಯಿಡೀ ನೆನೆಯಲು ಬಿಡಿ. ಮರುದಿನ ಬೆಳಿಗ್ಗೆ ಈ ನೀರನ್ನು ಎಸೆಯಿರಿ. ಬಾಟಲಿಯ ವಾಸನೆ ಹೋಗಿ ಎಂದು ನೋಡಿ.
  • ಪ್ರತಿ ಕೆಲವು ದಿನಗಳಿಗೊಮ್ಮೆ ನಿಮ್ಮ ಬಾಟಲಿಗಳನ್ನು ಸೋಪು ಮತ್ತು ನೀರಿನಿಂದ ಚೆನ್ನಾಗಿ ಸ್ವಚ್ಛ ಮಾಡಿ. ಆಗಾ ವಾಸನೆ ಬರುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ