AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti : ಪುರುಷನ ಬದುಕಿನಲ್ಲಿ ಅದೃಷ್ಟ ತರುವ ವ್ಯಕ್ತಿಗಳು ಇವರೇ ನೋಡಿ

ಬದುಕಿನಲ್ಲಿ ವಿಭಿನ್ನ ಸ್ವಭಾವ ಹಾಗೂ ಗುಣವುಳ್ಳ ವ್ಯಕ್ತಿಗಳು ಪರಿಚಯವಾಗುತ್ತಾರೆ. ಹಾಗಂತ ಎಲ್ಲರೂ ಕೂಡ ಆತ್ಮೀಯರಾಗಲು ಸಾಧ್ಯವಿಲ್ಲ. ಆದರೆ ಪುರುಷರ ಜೀವನದಲ್ಲಿ ಈ ಮೂರು ವ್ಯಕ್ತಿಗಳು ಅದೃಷ್ಟ ತರುತ್ತಾರೆ ಎಂದಿದ್ದಾನೆ ಚಾಣಕ್ಯ. ಈ ಗುಣವಿರುವ ವ್ಯಕ್ತಿಗಳನ್ನು ಎಂದಿಗೂ ದೂರ ಮಾಡಿಕೊಳ್ಳಬೇಡಿ. ಇದರಿಂದ ಜೀವನದ ಖುಷಿಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾನೆ. ಹಾಗಾದ್ರೆ ಅದೃಷ್ಟ ತರುವ ಆ ಮೂವರು ವ್ಯಕ್ತಿಗಳು ಯಾರೆಲ್ಲಾ ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Chanakya Niti : ಪುರುಷನ ಬದುಕಿನಲ್ಲಿ ಅದೃಷ್ಟ ತರುವ  ವ್ಯಕ್ತಿಗಳು ಇವರೇ ನೋಡಿ
Chanakya Niti
ಸಾಯಿನಂದಾ
| Edited By: |

Updated on:Nov 26, 2024 | 6:06 PM

Share

ಜೀವನವೆಂದರೆ ಸುಖ ದುಃಖಗಳ ಮಿಶ್ರಣ. ಬದುಕಿನಲ್ಲಿ ಸದಾ ಖುಷಿಯಾಗಿರಲು ಸಾಧ್ಯವಿಲ್ಲ. ಕೆಲವೊಮ್ಮೆ ಕಹಿ ಘಟನೆಗಳಿಂದ ನೋವಾಗಬಹುದು. ಆದರೆ ಈ ಖುಷಿ, ನೋವನ್ನು ಹಂಚಿಕೊಳ್ಳಲು ಪ್ರತಿಯೊಬ್ಬರ ಒಂದಿಬ್ಬರಾದರೂ ಆತ್ಮೀಯರು ಇದ್ದೆ ಇರುತ್ತಾರೆ. ಒಂದು ವೇಳೆ ಪುರುಷರ ಜೀವನದಲ್ಲಿ ಈ ಗುಣವುಳ್ಳ ಮೂವರು ವ್ಯಕ್ತಿಗಳಿದ್ದು ಬಿಟ್ಟರೆ ಅವರಷ್ಟು ಅದೃಷ್ಟಶಾಲಿಗಳು ಯಾರಿಲ್ಲವಂತೆ. ಈ ವ್ಯಕ್ತಿಗಳು ಜೀವನದ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ನಿಲ್ಲುತ್ತಾರೆ. ಹೀಗಾಗಿ ಅವರನ್ನು ಎಂದಿಗೂ ದೂರ ತಳ್ಳಬಾರದು, ಆದ್ದರಿಂದ ಈ ವ್ಯಕ್ತಿಗಳು ಜೀವನದಲ್ಲಿ ತುಂಬಾನೇ ಮುಖ್ಯ ಎಂದಿದ್ದಾನೆ.

ಸಂಸ್ಕಾರವಂತ ಹೆಂಡತಿ :

ತನ್ನನ್ನು ಕೈಹಿಡಿಯುವ ಹೆಣ್ಣು, ಉತ್ತಮ ಗುಣ ನಡತೆ, ಹೊಂದಾಣಿಕೆ ಸ್ವಭಾವ ಹಾಗೂ ಸಂಸ್ಕಾರವಂತಳಾಗಿರಬೇಕೆಂದು ಗಂಡು ಬಯಸುವುದು ಸಹಜ. ಆದರೆ ಚಾಣಕ್ಯನು ಕೂಡ ತನ್ನ ನೀತಿಯಲ್ಲಿ ಸಂಸ್ಕಾರವಂತ ಹೆಂಡತಿಯೂ ಸಿಕ್ಕರೆ ಅಂತಹ ಪುರುಷನು ಅದೃಷ್ಟವಂತ ಎಂದಿದ್ದಾನೆ. ಈ ಗುಣವುಳ್ಳ ಹೆಂಡತಿ ತನ್ನ ಗಂಡನಿಗೆ ಸದಾ ನೆರಳಾಗಿರುತ್ತಾಳೆ. ಕಷ್ಟ-ಸುಖದಲ್ಲಿ ಗಂಡನ ಜೊತೆಯಾಗಿದ್ದು, ಸದಾ ಧೈರ್ಯವನ್ನು ತುಂಬುತ್ತಾಳೆ. ಯಾವುದೇ ಕಾರಣಕ್ಕೆ ಇಂತಹ ಪತ್ನಿಯನ್ನು ದೂರ ಮಾಡಿಕೊಳ್ಳಬೇಡಿ. ಒಳ್ಳೆಯ ಹೆಂಡತಿ ಗಂಡಿನ ಬದುಕನ್ನು ಸ್ವರ್ಗವಾಗಿಸುತ್ತಾಳೆ. ಅದೇ ಕೆಟ್ಟ ಗುಣವುಳ್ಳ ಪತ್ನಿಯಿಂದ ಬದುಕು ನರಕವಾಗಿಸುತ್ತಾಳೆ ಎಂದು ಚಾಣಕ್ಯ ಎಚ್ಚರಿಸಿದ್ದಾನೆ.

ಉತ್ತಮ ಗುಣವುಳ್ಳ ಮಕ್ಕಳು :

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ಬಾರದಂತೆ ಬೆಳೆಸುತ್ತಾರೆ. ಅಷ್ಟೇ ಅಲ್ಲದೆ ಒಳ್ಳೆಯ ಗುಣಗಳೊಂದಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಬೇಕು. ಎಲ್ಲಾ ಸಂದರ್ಭದಲ್ಲಿ ಮಕ್ಕಳು ಜೊತೆಗಿರಬೇಕೆಂದು ಹೆತ್ತವರು ಬಯಸುವುದು ಸಹಜ. ಹೀಗಾಗಿ ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಬೆಳೆಸುವಾಗ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಸದ್ಗುಣವನ್ನು ಹೊಂದಿರುವ ಮಕ್ಕಳು ಪೋಷಕರಿಗೆ ವಯಸ್ಸಾದ ಕಾಲ ಘಟ್ಟದಲ್ಲಿ ಚೆನ್ನಾಗಿ ನೋಡಿಕೊಳ್ಳುವ ತಂದೆ ತಾಯಿಯ ಸೇವೆ ಮಾಡುತ್ತಾರೆ. ಕೆಟ್ಟ ಚಟಗಳನ್ನು ಹೊಂದಿರದ ಮಕ್ಕಳು ಪೋಷಕರನ್ನು ಎಂದಿಗೂ ಕೈ ಬಿಡುವುದಿಲ್ಲ. ಒಂದು ವೇಳೆ ಅಂತಹ ಮಕ್ಕಳಿದ್ದರೆ ನೀವು ಅದೃಷ್ಟವಂತರು ಎನ್ನುತ್ತಾನೆ ಚಾಣಕ್ಯ.

ಒಳ್ಳೆಯ ಸ್ನೇಹಿತರು :

ಈಗಿನ ಕಾಲದಲ್ಲಿ ಒಳ್ಳೆಯ ಗುಣವುಳ್ಳ ಸ್ನೇಹಿತ ಸಿಗುವುದೇ ಕಷ್ಟ. ಅಂತಹ ಗೆಳೆಯರು ಜೊತೆಗಿದ್ದರೆ ಅದುವೇ ದೊಡ್ಡ ಶಕ್ತಿ. ಒಳ್ಳೆಯ ಗುಣವುಳ್ಳ ವ್ಯಕ್ತಿಯ ಜೊತೆಗೆ ಸ್ನೇಹ ಮಾಡಿದ್ದಲ್ಲಿ ನಮಗೂ ಕೂಡ ಒಳ್ಳೆಯದೇ ಆಗುತ್ತದೆ. ಆ ಸ್ನೇಹಿತನು ನಮ್ಮ ಯಶಸ್ಸಿನಲ್ಲಿ ತನ್ನ ಖುಷಿಯನ್ನು ಕಾಣುತ್ತಾನೆ. ಒಬ್ಬ ಉತ್ತಮ ಸ್ನೇಹಿತ ಯಾವತ್ತಿಗೂ ತಪ್ಪು ಹೆಜ್ಜೆ ಇಡಲು ಬಿಡುವುದಿಲ್ಲ. ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲುವ ಸ್ನೇಹಿತರನ್ನು ಎಂದಿಗೂ ಕಳೆದುಕೊಳ್ಳಬೇಡಿ. ಅವರನ್ನು ಕಳೆದುಕೊಂಡರೆ ಜೀವನದಲ್ಲಿ ನಷ್ಟ ಅನುಭವಿಸಿದಂತಾಗುತ್ತದೆ. ಮತ್ತೆ ಆ ಪರಿಶುದ್ಧ ಸ್ನೇಹವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಿತವನ್ನೇ ಬಯಸುವ ಸ್ನೇಹಿತರು ಸಿಕ್ಕರೆ ನಿಜಕ್ಕೂ ನೀವು ಅದೃಷ್ಟವಂತರು ಎಂದು ತಿಳಿಸಿದ್ದಾನೆ ಚಾಣಕ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 pm, Tue, 26 November 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ