Chanakya Niti: ಈ ಅಭ್ಯಾಸಗಳು ಪುರುಷರ ಬದುಕನ್ನೇ ಸರ್ವನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ ಚಾಣಕ್ಯ
ಉತ್ತಮ ಅಭ್ಯಾಸಗಳು ನಮ್ಮನ್ನು ಈ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ. ಅದೇ ಕೆಟ್ಟ ಅಭ್ಯಾಸಗಳು ನಮ್ಮ ಖ್ಯಾತಿ, ಗೌರವವನ್ನೇ ಹಾಳು ಮಾಡುತ್ತದೆ. ಅದರಲ್ಲೂ ಪುರುಷರಿಗೆ ಈ ಕೆಲವು ಅಭ್ಯಾಸಗಳಿದ್ದರೆ, ಅದು ಅವರ ಜೀವನವನ್ನೇ ಸರ್ವ ನಾಶ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಪುರುಷರ ಯಾವ ಅಭ್ಯಾಸಗಳು ಅವರ ಜೀವನವನ್ನೇ ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ಯಶಸ್ಸು ಮತ್ತು ಶ್ರೀಮಂತಿಕೆ ಗಳಿಕೆಯ ಬಗ್ಗೆ ಮಾತ್ರವಲ್ಲದೆ ಜೀವನವನ್ನು ಯಾವ ರೀತಿ ನಡೆಸಬೇಕು, ಜೀವನವನ್ನು ಯಾವ ರೀತಿ ಜೀವಿಸಬೇಕು, ಸಮಾಜದಲ್ಲಿ ಗೌರವಯುತವಾಗಿ ಬಾಳಲು ಏನು ಮಾಡಬೇಕು ಎಂಬುದರ ಬಗ್ಗೆಯೂ ಸಾಕಷ್ಟು ಹೇಳಿದ್ದಾರೆ. ಅದೇ ರೀತಿ ಪುರುಷ ಜೀವನಕ್ಕೆ ಸಂಬಂಧಿಸಿದ ಒಂದಷ್ಟು ರಹಸ್ಯಗಳ ಬಗ್ಗೆಯೂ ಹೇಳಿದ್ದು, ಒಬ್ಬ ವ್ಯಕ್ತಿಯ ಯಶಸ್ಸಿಗೆ ಬುದ್ದಿವಂತಿಕೆ ಮಾತ್ರ ಸಾಕಾಗುವುದಿಲ್ಲ, ಶಿಸ್ತಿನ ನಡವಳಿಕೆಯೂ ಅಗತ್ಯ. ಅದರಲ್ಲೂ ಒಂದು ವೇಳೆ ಈ ಕೆಲವು ಅಭ್ಯಾಸ ಪುರುಷನಿಗಿದ್ದರೆ ಮತ್ತು ಆತ ಮಾಡುವ ಕೆಲವೊಂದು ತಪ್ಪುಗಳು ಆತನ ವೃತ್ತಿ ಜೀವನ, ಖ್ಯಾತಿ ಎರಡೂ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಿದ್ದರೆ ಪುರುಷರ ಜೀವನ ಹಾಳು ಮಾಡುವ ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಈ ಅಭ್ಯಾಸಗಳು ಪುರುಷರ ಬದುಕನ್ನೇ ನಾಶ ಮಾಡುತ್ತದೆ:
ಸೋಮಾರಿತನ: ಸೋಮಾರಿತನ ಯಶಸ್ಸಿನ ದೊಡ್ಡ ಶತ್ರು ಎನ್ನುತ್ತಾರೆ ಚಾಣಕ್ಯ. ಸೋಮಾರಿ ವ್ಯಕ್ತಿಗೆ ಯಾವುದೇ ಭವಿಷ್ಯ ಇಲ್ಲ. ಇಂದಿನ ಕೆಲಸವನ್ನು ಇಂದೇ ಮಾಡಿ ಮುಗಿಸದೆ ನಾಳೆಗೆ ಮುಂದೂಡುವವನು ವೃತ್ತಿಪರ ಸ್ಪರ್ಧೆಯಲ್ಲಿ ಯಾವಾಗಲೂ ಹಿಂದುಳಿಯುತ್ತಾನೆ. ಅವನು ಜೀವನದಲ್ಲಿಮುಂದುವರಿಯಲು ಸಾಧ್ಯವಾಗದು, ಆತ ಖಂಡಿತವಾಗಿಯೂ ಪತನಗೊಳ್ಳುತ್ತಾರೆ ಎನ್ನುತ್ತಾರೆ ಚಾಣಕ್ಯ. ಹಾಗಾಗಿ ಸೋಮಾರಿತನವನ್ನು ಇಂದೇ ಬಿಟ್ಟುಬಿಡಿ.
ಅಹಂಕಾರ: ತನ್ನ ಅಧಿಕಾರ, ಸ್ಥಾನಮಾನ ಅಥವಾ ಸಂಪತ್ತಿನ ಬಗ್ಗೆ ಅಹಂಕಾರ ಪಡುವ ವ್ಯಕ್ತಿಯು ಇತರರನ್ನು ಕೀಳಾಗಿ ಕಾಣಲು ಪ್ರಾರಂಭಿಸಿದಾಗ ಅದು ಆತನ ವಿನಾಶದ ಆರಂಭ ಎನ್ನುತ್ತಾರೆ ಚಾಣಕ್ಯ. ಅಹಂಕಾರ ಎಲ್ಲಿ ಬೆಳೆಯುತ್ತದೆಯೋ ಅಲ್ಲಿ ಕಲಿಯುವ ಬಯಕೆ ಸಾಯುತ್ತದೆ. ಹೊಸ ವಿಷಯಗಳನ್ನು ಕಲಿಯುವುದನ್ನು ನಿಲ್ಲಿಸಿದಾಗ, ಆ ವ್ಯಕ್ತಿಯ ಅವನತಿ ಪ್ರಾರಂಭವಾಗುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.
ನೋವುಂಟುಮಾಡುವ ಮಾತುಗಳು: ಕಠಿಣ ಮಾತುಗಳನ್ನಾಗಿಡಿದರೆ ಸಂಬಂಧವೇ ಹಾಳಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಒಬ್ಬ ವ್ಯಕ್ತಿಯ ಕೆಟ್ಟ ಮಾತು ಅಥವಾ ನೋವುಂಟುಮಾಡುವ ಮಾತುಗಳು ಆತನ ಖ್ಯಾತಿಯನ್ನೇ ಹಾಳು ಮಾಡುತ್ತದೆ. ಕಟುವಾಗಿ ಮಾತನಾಡುವ ಪುರುಷರು ಕಚೇರಿಯಲ್ಲಿ ತಮ್ಮ ಸಹೋದ್ಯೋಗಿಗಳ ಗೌರವವನ್ನು ಗಳಿಸುವುದಿಲ್ಲ ಮತ್ತು ಮನೆಯಲ್ಲಿ ಶಾಂತಿಯನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ ಇದು ಸಂಬಂಧವನ್ನು ಸಹ ಹಾಳು ಮಾಡುತ್ತದೆ. ಆದ್ದರಿಂದ ಮಾತಿನ ಮೇಲೆ ಹಿಡಿತವನ್ನು ಹೊಂದಿರಬೇಕು.
ಕೆಟ್ಟವರ ಸ್ನೇಹ: ಕೆಟ್ಟವರ ಸಹವಾಸದಿಂದ ವ್ಯಕ್ತಿತ್ವದ ಮೇಲೆ ಕಳಂಕ ಉಂಟಾಗುತ್ತದೆ ಎನ್ನುತ್ತಾರೆ ಚಾಣಕ್ಯ. ಹೌದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಸ್ನೇಹಿತರಿಂದಲೂ ನಿರ್ಣಯಿಸಬಹುದು. ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಜನರೊಂದಿಗೆ ನೀವು ಸ್ನೇಹ ಬೆಳೆಸಿದರೆ, ಅದು ನಿಮ್ಮ ಕೆಲಸ ಮತ್ತು ಖ್ಯಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಶಸ್ಸನ್ನು ಸಾಧಿಸಲು ಬಯಸುವವರು ಯಾವಾಗಲೂ ಅವರಿಗಿಂತ ಹೆಚ್ಚು ಸಮರ್ಥರು ಮತ್ತು ಉತ್ತಮ ಆಲೋಚನೆಗಳನ್ನು ಹೊಂದಿರುವ ಜನರ ಸಹವಾಸ ಮಾಡಬೇಕು ಎಂದಿದ್ದಾರೆ ಚಾಣಕ್ಯ.
ಇದನ್ನೂ ಓದಿ: ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
ದುಂದು ವೆಚ್ಚ: ಇದು ಬಡತನಕ್ಕೆ ಆಹ್ವಾನ ನೀಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಕೇವಲ ಆಡಂಬರಕ್ಕಾಗಿ ಬದುಕುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಅಲ್ಲದೆ ಸಂಪಾದನೆಯ ಒಂದು ಭಾಗ ಉಳಿತಾಯ ಮಾಡದವರು ಬಡವರಾಗಿಯೇ ಉಳಿಯುತ್ತಾರೆ, ಅವರು ಎಂದಿಗೂ ಶ್ರೀಮಂತಿಕೆ ಗಳಿಸಲು ಸಾಧ್ಯವಿಲ್ಲ. ಹಾಗಾಗಿ ಎಂದಿಗೂ ದುಂದುವೆಚ್ಚ ಮಾಡಬೇಡಿ, ಯೋಚಿಸಿ ಹಣವನ್ನು ಖರ್ಚು ಮಾಡಿ.
ಕೆಟ್ಟ ಚಟ: ಮದ್ಯ, ಧೂಮಪಾನ ಸೇರಿದಂತೆ ಯಾವುದೇ ರೀತಿಯ ವ್ಯಸನವು ವ್ಯಕ್ತಿಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲಗೊಳಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಕೆಟ್ಟ ಚಟಗಳಿಗೆ ದಾಸನಾದ ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ಮರೆತುಬಿಡುತ್ತಾನೆ ಅಂತಹ ವ್ಯಕ್ತಿಯು ತನ್ನ ವ್ಯವಹಾರ ಅಥವಾ ಕೆಲಸದ ಮೇಲೆ ಗಮನಹರಿಸಲು ಸಾಧ್ಯವಾಗುವುದಿಲ್ಲ ಮತ್ತು ಅವನ ಕುಟುಂಬವನ್ನು ಸಹ ತೊಂದರೆಗೆ ಸಿಲುಕಿಸುತ್ತಾನೆ ಎನ್ನುತ್ತಾರೆ ಚಾಣಕ್ಯ.
ನೀವು ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಲು ಬಯಸಿದರೆ, ಚಾಣಕ್ಯರು ಹೇಳಿರುವ ಈ ಆರು ಅಭ್ಯಾಸಗಳನ್ನು ತಕ್ಷಣವೇ ತ್ಯಜಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




