AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಒಂದು ಸಣ್ಣ ಅಭ್ಯಾಸ ನಿಮ್ಮನ್ನು ಬಡತನದ ಕೂಪಕ್ಕೆ ನೂಕಬಹುದು… ಎಚ್ಚರ!

ಒಬ್ಬ ವ್ಯಕ್ತಿಯ ಉನ್ನತಿ ಮತ್ತು ಅವನತಿ ಆತನ ಅಭ್ಯಾಸಗಳು, ನಡವಳಿಕೆಯ ಮೇಲೆ ನಿಂತಿರುತ್ತದೆ. ಒಳ್ಳೆಯ ಅಭ್ಯಾಸಗಳು ವ್ಯಕ್ತಿಯನ್ನು ಉತ್ತಮನನ್ನಾಗಿ ಮಾಡುವಂತೆ, ಕೆಟ್ಟ ಅಭ್ಯಾಸಗಳು ಆತನ ಅವನತಿಗೆ ಕಾರಣವಾಗುತ್ತದೆ. ಅದೇ ರೀತಿ ವ್ಯಕ್ತಿಯ ಈ ಒಂದು ಅಭ್ಯಾಸ ಆತನನ್ನು ಬಡತನಕ್ಕೆ ನೂಕುತ್ತದೆ ಎಂದು ಆಚಾರ್ಯ ಚಾಣಕ್ಯರು. ಚಾಣಕ್ಯರು ಹೇಳಿರುವಂತೆ ವ್ಯಕ್ತಿಯ ಯಾವ ಒಂದು ಅಭ್ಯಾಸ ಬಡತನಕ್ಕೆ ಕಾರಣವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಒಂದು ಸಣ್ಣ ಅಭ್ಯಾಸ ನಿಮ್ಮನ್ನು ಬಡತನದ ಕೂಪಕ್ಕೆ ನೂಕಬಹುದು… ಎಚ್ಚರ!
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: May 23, 2026 | 6:48 PM

Share

ಯಶಸ್ಸನ್ನು (Success) ಸಾಧಿಸಬೇಕು, ಜೀವನದಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚಿನವರು ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಈ ರೀತಿ ಎಷ್ಟೇ ದುಡಿದು ಹಣ ಸಂಪಾದಿಸಿದರೂ, ಶ್ರೀಮಂತಿಕೆಯನ್ನು ಗಳಿಸಿದರೂ ಈ ಒಂದು ಅಭ್ಯಾಸವಿದ್ದರೆ ಆ ಹಣ ಎಂದಿಗೂ ನಿಮ್ಮ ಕೈಯಲ್ಲಿ ನಿಲ್ಲಲಾರದು, ಈ ಅಭ್ಯಾಸದ ಕಾರಣದಿಂದ ನೀವು ಜೀವನಪರ್ಯಂತ ಬಡತನದಲ್ಲಿಯೇ ಇರಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹೌದು ಮನುಷ್ಯನ ಈ ಒಂದು ಸಣ್ಣ ಅಭ್ಯಾಸವು ಕ್ರಮೇಣ ಬಡತನಕ್ಕೆ ಕಾರಣವಾಗುತ್ತದೆ. ಅದನ್ನು ಬದಲಾಯಿಸದಿದ್ದರೆ ಜೀವನದಲ್ಲಿ ಪ್ರಗತಿಯನ್ನು ಹೊಂದಲು ಸಾಧ್ಯವೇ ಇಲ್ಲ. ಹಾಗಿದ್ದರೆ ಒಬ್ಬ ವ್ಯಕ್ತಿಯನ್ನು ಬಡತನಕ್ಕೆ ತಳ್ಳುವ ಆ ಅಭ್ಯಾಸ ಯಾವುದು ಎಂಬುದನ್ನು ನೋಡೋಣ ಬನ್ನಿ.

ನಿಮ್ಮ ಈ ಅಭ್ಯಾಸ ಬಡತನಕ್ಕೆ ಕಾರಣವಾಗಬಹುದು:

ಆಚಾರ್ಯ ಚಾಣಕ್ಯರು  ಹೇಳುವಂತೆ, ತನ್ನ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮತ್ತು ದುಂದುವೆಚ್ಚದಲ್ಲಿ ತೊಡಗುವ ವ್ಯಕ್ತಿಯು ಎಂದಿಗೂ ಶ್ರೀಮಂತನಾಗಲು ಸಾಧ್ಯವಿಲ್ಲ. ಆತ ಇದೇ ವರ್ತನೆಯನ್ನು ಮುಂದುವರೆಸಿದರೆ ಕ್ರಮೇಣ ಆತನ ಉಳಿತಾಯ ಖಾಲಿಯಾಗುತ್ತದೆ, ಆತ ಸಾಲದ ಹೊರೆಯನ್ನು ಹೊತ್ತುಕೊಳ್ಳುತ್ತಾನೆ. ಈ ಅಭ್ಯಾಸವು ಬಡತನಕ್ಕೆ ಕಾರಣವಾಗಬಹುದು ಮತ್ತು ಅದು ಅವನ ಭವಿಷ್ಯವನ್ನೇ ಹಾಳುಮಾಡುತ್ತದೆ.

ಒಬ್ಬ ವ್ಯಕ್ತಿ ಎಂದಿಗೂ ಆತನ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಜೊತೆಗೆ ಹಣ ಇದ್ದರೆ ಅದನ್ನು ವ್ಯರ್ಥ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ದುಂದುವೆಚ್ಚವನ್ನು ಮಾಡಬಾರದು. ಈ ಒಂದು ಅಭ್ಯಾಸ ವ್ಯಕ್ತಿಯನ್ನು ಬಡವನನ್ನಾಗಿ ಮಾಡುತ್ತದೆ. ಅಲ್ಲದೆ ಇದು ಒಬ್ಬ ವ್ಯಕ್ತಿಯನ್ನು ಸಾಲದ ಸುಳಿಯಲ್ಲಿ ಸಿಲುಕಿಸುವ ಸಾಧ್ಯತೆಯೂ ಇದೆ. ಹಾಗಾಗಿ ಶ್ರೀಮಂತಿಕೆಯನ್ನು ಗಳಿಸಬೇಕು ಎಂಬ ಬಯಕೆ ಇದ್ದರೆ ದುಂದುವೆಚ್ಚವನ್ನು ಮಾಡಬೇಡಿ, ವ್ಯರ್ಥ ಖರ್ಚುಗಳನ್ನು ಮಾಡಬೇಡಿ, ಪ್ರತಿ ತಿಂಗಳು ಆದಾಯದ ಸ್ವಲ್ಪ ಭಾಗವನ್ನು ಉಳಿತಾಯ ಮಾಡಿ ಮತ್ತು ಉತ್ತಮ ಸ್ಥಳದಲ್ಲಿ ಹೂಡಿಕೆಯನ್ನು ಮಾಡಿ.

ಇದನ್ನೂ ಓದಿ: ಪುರುಷರೇ…. ನಿಮ್ಮ ಹೆಂಡ್ತಿಯ ಸಂಗತಿಯನ್ನು ಯಾರ ಬಳಿಯೂ ಹೇಳಬೇಡಿ

ವ್ಯರ್ಥ ಖರ್ಚು ಏಕೆ ಅಪಾಯಕಾರಿ?

  • ವ್ಯರ್ಥ ಖರ್ಚು ವ್ಯಕ್ತಿಯನ್ನು ಸಾಲ ಮಾಡುವಂತೆ ಮಾಡುತ್ತವೆ. ಈ ಸಾಲವು ಒತ್ತಡ ಮತ್ತು ಉದ್ವೇಗಕ್ಕೆ ಕಾರಣವಾಗುತ್ತದೆ.
  • ಯಾವುದೇ ಉಳಿತಾಯವಿಲ್ಲದಿದ್ದರೆ, ಇದ್ದ ಹಣವನ್ನೆಲ್ಲಾ ಖರ್ಚು ಮಾಡಿದರೆ ಕಷ್ಟದ ಸಮಯದಲ್ಲಿ ನೀವು ಒಂಟಿಯಾಗಿ ಇರಬೇಕಾಗುತ್ತದೆ. ಇದು ನಿಮ್ಮನ್ನು ಬೀದಿಗೆ ತರಬಹುದು.
  • ಹಣಕಾಸಿನ ಅಸ್ಥಿರತೆಯು ಸಂಬಂಧಗಳು ಮತ್ತು ವೃತ್ತಿಜೀವನ ಎರಡರ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ವ್ಯರ್ಥ ಖರ್ಚು ಮಾಡುವುದನ್ನು ಬಿಟ್ಟುಬಿಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ