AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಈ ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ವಿಷಯದ ಬಗ್ಗೆ ಭಯ ಇದ್ದೇ ಇರುತ್ತದೆ. ಅದರಲ್ಲಿ ಈ ಕೆಲವು ವಿಷಯಗಳಿಗೆ ಭಯಪಟ್ಟರೆ ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಯಶಸ್ಸಿಗೆ ಅಡ್ಡಿಯಾಗುವ ಆ ಭಯ ಯಾವುದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಭಯವನ್ನು ತೆಗೆದುಹಾಕಿದರೆ ಮಾತ್ರ ಜೀವನದಲ್ಲಿ ಜಯಿಸಲು ಸಾಧ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Jan 21, 2026 | 7:24 PM

Share

ಯಶಸ್ಸನ್ನು (success) ಸಾಧಿಸಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದರೆ ಕೆಲವೊಂದು ತಪ್ಪುಗಳಿಂದ ಅನೇಕರಿಗೆ ತಾವು ಅಂದುಕೊಂಡ ಮಟ್ಟಿಗೆ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಜೊತೆಗೆ ತಾವು ಅಂದುಕೊಂಡ ಕೆಲಸವನ್ನು ಸಹ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ನಮ್ಮಲ್ಲಿರುವ ಭಯವು ಸಹ ಒಂದು ಮುಖ್ಯ ಕಾರಣ. ಯಶಸ್ಸನ್ನು ಸಾಧಿಸಲು ಬಯಸುವವರು ಆ ಭಯವನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಯಶಸ್ಸಿಗೆ ತೊಡಕಾಗುವ ಆ ಭಯ ಯಾವುವು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಯಶಸ್ಸು ಬಯಸುವವರು ಈ ನಾಲ್ಕು ವಿಷಯಗಳಿಗೆ ಹೆದರಬಾರದು:

ಸತ್ಯ ಹೇಳಲು ಭಯಪಡಬಾರದು: ಜನರು ತಮ್ಮ ತಪ್ಪುಗಳನ್ನು ಮರೆಮಾಡಲು ಸುಳ್ಳು ಹೇಳುತ್ತಾರೆ ಅಲ್ಲದೆ ತಪ್ಪುಗಳು ನಡೆದಾಗ ಅದರ ಬಗ್ಗೆ ಸತ್ಯ ಹೇಳಲು ಭಯಪಡುತ್ತಾರೆ. ಆದರೆ ಸತ್ಯ ಹೇಳಲು ಯಾವುದೇ ರೀತಿಯಲ್ಲೂ ಭಯಪಡಬಾರದು ಎನ್ನುತ್ತಾರೆ ಚಾಣಕ್ಯ. ಸತ್ಯ ಹೇಳುವುದು ಒಬ್ಬ ವ್ಯಕ್ತಿಯ ದೊಡ್ಡ ಶಕ್ತಿ. ಸತ್ಯ ಹೇಳುವುದರಿಂದ, ಒಬ್ಬ ವ್ಯಕ್ತಿಯು ಎಲ್ಲರ ವಿಶ್ವಾಸವನ್ನು ಗಳಿಸುತ್ತಾನೆ, ಸಮಾಜದಲ್ಲಿ ಉತ್ತಮ ಇಮೇಜ್ ಅನ್ನು ಸೃಷ್ಟಿಸುತ್ತಾನೆ ಮತ್ತು ಪ್ರಗತಿ ಸಾಧಿಸುತ್ತಾನೆ. ಹಾಗಾಗಿ ಸತ್ಯ ಹೇಳಲು ಹಿಂಜರಿಕೆ ಬೇಡ.

ಕಠಿಣ ಪರಿಶ್ರಮ ಪಡಲು ಭಯಬೇಡ: ಅನೇಕ ಜನರು ಕಠಿಣ ಪರಿಶ್ರಮ ಬೇಡ  ಸುಲಭವಾಗಿ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ. ಕಠಿಣ ಪರಿಶ್ರಮವಿಲ್ಲದೆ, ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸಲಾಗುವುದಿಲ್ಲ. ಕಠಿಣ ಪರಿಶ್ರಮಕ್ಕೆ ಭಯಪಡಬಾರದು. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಕಷ್ಟಪಟ್ಟು ಕೆಲಸ ಮಾಡಿ. ಕಠಿಣ ಪರಿಶ್ರಮವು ವ್ಯಕ್ತಿಯನ್ನು ಬಲಪಡಿಸುತ್ತದೆ ಮತ್ತು ಆತನನ್ನು ಯಶಸ್ವಿಗೊಳಿಸುತ್ತದೆ.

ಇದನ್ನೂ ಓದಿ: ಮಾನಸಿಕವಾಗಿ ಬಲಿಷ್ಠರಾಗಲು ಚಾಣಕ್ಯರು ಹೇಳಿರುವ ತತ್ವಗಳನ್ನು ಪಾಲಿಸಿ

ಬದಲಾವಣೆಗಳಿಗೆ ಹೆದರಬಾರದು: ಒಬ್ಬ ವ್ಯಕ್ತಿಯು ಜೀವನದಲ್ಲಿ ಬದಲಾವಣೆಯನ್ನು ಸ್ವೀಕರಿಸಬೇಕು. ಬದಲಾವಣೆಗೆ ಹೆದರುವವರು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಬದಲಾವಣೆಗಳನ್ನು ಸ್ವೀಕರಿಸಿ. ಬದಲಾವಣೆಯೊಂದಿಗೆ ಹೊಸ ಜೀವನವನ್ನು ನಡೆಸಬೇಕು, ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎನ್ನುತ್ತಾರೆ ಚಾಣಕ್ಯ.

ಹೋರಾಟಗಳಿಗೆ ಭಯ ಬೇಡ: ಜೀವನವೇ ಒಂದು ಹೋರಾಟ ಇದ್ದಂತೆ. ಜೀವನದಲ್ಲಿ ಬರುವಂತಹ ಹೋರಾಟಗಳು ವ್ಯಕ್ತಿಯನ್ನು ಬಲಿಷ್ಠನನ್ನಾಗಿ ಮಾಡುತ್ತದೆ, ಆ ಹೋರಾಟಗಳು ತಾಳ್ಮೆ ಮತ್ತು ಜೀವ ಪಾಠವನ್ನು ಕಲಿಸಿಕೊಡುತ್ತದೆ.  ಜೀವನದಲ್ಲಿನ ಹೋರಾಟಗಳು ನಮಗೆ ಮುಂದುವರಿಯುವುದು ಹೇಗೆ ಎಂಬುದನ್ನು ಕಲಿಸುತ್ತವೆ ಎಂದಿದ್ದಾರೆ ಚಾಣಕ್ಯ. ಅದೇ ಜೀವನದಲ್ಲಿ ಎದುರಾಗುವ  ಹೋರಾಟಗಳಿಗೆ ಹೆದರುವವರು ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ