Chanakya Niti: ಚಾಣಕ್ಯರ ಪ್ರಕಾರ ಶ್ರೀಮಂತರಾಗುವ ಮುನ್ನ ಜನರಲ್ಲಿ ಈ ಬದಲಾವಣೆಗಳು ಕಾಣಿಸುತ್ತವಂತೆ
ಕಠಿಣ ಪರಿಶ್ರಮದಿಂದ ಶ್ರೀಮಂತಿಕೆ, ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ವ್ಯಕ್ತಿಯ ಜೀವನದಲ್ಲಿ ಈ ಕೆಲವು ಬದಲಾವಣೆಗಳು ಕಂಡು ಬಂದರೆ ಆತ ಶ್ರೀಮಂತಿಕೆಯನ್ನು ಗಳಿಸಲು ಸಾಧ್ಯ ಜೊತೆಗೆ ಶ್ರೀಮಂತಿಕೆ ಗಳಿಸುವ ಮುನ್ನು ಈ ಕೆಲವು ಲಕ್ಷಣಗಳು ಗೋಚರಿಸುತ್ತವೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಹಾಗಿದ್ರೆ ಶ್ರೀಮಂತಿಕೆಯನ್ನು ಗಳಿಸುವ ಮುನ್ನ ವ್ಯಕ್ತಿಯ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೋಡೋಣ ಬನ್ನಿ.

ಇದ್ದಕ್ಕಿದ್ದಂತೆ ಯಶಸ್ಸು, ಶ್ರೀಮಂತಿಕೆ (Richness) ಗಳಿಸಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಹಾಗೂ ಕೆಲವೊಂದು ಉತ್ತಮ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾತ್ರ ಶ್ರೀಮಂತಿಕೆ ಗಳಿಸಲು ಸಾಧ್ಯ. ಹೀಗೆ ಒಬ್ಬ ವ್ಯಕ್ತಿ ಶ್ರೀಮಂತಿಕೆಯನ್ನು ಗಳಿಸುವ ಮುನ್ನ ಆತನ ನಡವಳಿಕೆ, ಆಲೋಚನಾ ವಿಧಾನಗಳಲ್ಲಿ ಒಂದಷ್ಟು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆಯಂತೆ. ಈ ಸಕಾರಾತ್ಮಕ ಬದಲಾವಣೆಗಳು ಕಂಡುಬಂದರೆ ಮಾತ್ರ ಒಬ್ಬ ವ್ಯಕ್ತಿ ಶ್ರೀಮಂತನಾಗಲು ಸಾಧ್ಯ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ದರೆ ಶ್ರೀಮಂತಿಕೆಯನ್ನು ಗಳಿಸುವ ವ್ಯಕ್ತಿಯಲ್ಲಿ ಯಾವೆಲ್ಲಾ ಬದಲಾವಣೆಗಳು ಗೋಚರಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.
ಶ್ರೀಮಂತರಾಗುವ ಮುನ್ನ ಈ ಬದಲಾವಣೆಗಳು ಕಾಣಿಸುತ್ತವೆ:
ಸಮಯದ ಸದುಪಯೋಗ: ಸಮಯವನ್ನು ಗೌರವಿಸುವವರಿಗೆ ಯಶಸ್ಸು ಲಭಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಶ್ರೀಮಂತರಾಗುವ ಜನರು ಅನಗತ್ಯ ಕೆಲಸಗಳು, ಕೆಟ್ಟ ಅಭ್ಯಾಸಗಳು ಮತ್ತು ಸಮಯ ವ್ಯರ್ಥ ಮಾಡುವ ಜನರಿಂದ ದೂರವಿರುತ್ತಾರೆ. ಅವರು ಪ್ರತಿ ದಿನ ಮತ್ತು ಪ್ರತಿ ನಿಮಿಷವನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು ಎಂಬುದರ ಮೇಲೆ ಕೇಂದ್ರೀಕರಿಸುತ್ತಾರೆ. ಅವರು ವಿಳಂಬ ಮಾಡದೆ, ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸುತ್ತ ಗಮನಹರಿಸುತ್ತಾರೆ.
ಮನಸ್ಥಿತಿಯಲ್ಲಿ ಸಂಪೂರ್ಣ ಬದಲಾವಣೆ: ಒಬ್ಬ ವ್ಯಕ್ತಿಯು ಸಂಪತ್ತನ್ನು ಗಳಿಸುವತ್ತ ಹೆಜ್ಜೆ ಹಾಕಿದಾಗ, ಆತನ ಮನಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ. ಆತ ಅನಗತ್ಯ ಸಂಘರ್ಷಗಳಿಗೆ ಆದ್ಯತೆ ನೀಡುವುದಿಲ್ಲ. ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸುವತ್ತ ಗಮನ ಕೇಂದ್ರೀಕರಿಸುತ್ತಾನೆ. ಮುಖ್ಯವಾಗಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೆದರುವುದಿಲ್ಲ, ಆತ್ಮವಿಶ್ವಾಸದಿಂದ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುತ್ತಾನೆ. ಮನಸ್ಥಿತಿಯ ಬದಲಾವಣೆ ಖಂಡಿತವಾಗಿಯೂ ಯಶಸ್ಸನ್ನು ತಂದುಕೊಡುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ.
ನಿರಂತರ ಕಲಿಕೆ: ಜೀವನದಲ್ಲಿ ಯಶಸ್ವಿಯಾಗಲು ಬಯಸುವವರು ಮೊದಲು ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾರೆ. ಶ್ರೀಮಂತರಾಗುವ ಮೊದಲು, ಅವರು ತಮ್ಮ ಜ್ಞಾನ, ಕೌಶಲ್ಯ ಮತ್ತು ಅನುಭವವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ. ಅವರು ಹೊಸ ವಿಷಯಗಳನ್ನು ಕಲಿಯಲು ಎಂದಿಗೂ ಹಿಂಜರಿಯುವುದಿಲ್ಲ. ತಮ್ಮ ತಪ್ಪುಗಳಿಂದಲೂ ಪಾಠ ಕಲಿಯುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ಇದನ್ನೂ ಓದಿ: ಈ ತಪ್ಪುಗಳಿಂದ ನೀವು ನಗೆಪಾಟಲಿಗೆ ಈಡಾಗುತ್ತೀರಿ ಎಚ್ಚರ!
ಸಜ್ಜನರ ಸಹವಾಸ: ನಾವು ಯಾವ ರೀತಿಯ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತೇವೆಯೋ ಅದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಚಾಣಕ್ಯರು ಹೇಳುತ್ತಾರೆ. ಶ್ರೀಮಂತರಾಗುವ ಮೊದಲು, ಜನರು ತಮ್ಮನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ತಮಗೆ ಪ್ರೇರಣೆ ನೀಡುವ ಜನರೊಂದಿಗೆ ಸ್ನೇಹವನ್ನು ಹುಡುಕುತ್ತಾರೆ. ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರು, ಸೋಮಾರಿಗಳಿಂದ ದೂರವಿರುತ್ತಾರೆ.
ಉಳಿತಾಯ ಮತ್ತು ಖರ್ಚು ನಿಯಂತ್ರಣ: ಶ್ರೀಮಂತರಾಗಲಿರುವ ಜನರು ಆಡಂಬರದ ವಸ್ತುಗಳಿಗೆ ಖರ್ಚು ಮಾಡುವುದನ್ನು, ದುಡ್ಡು ಪೋಲು ಮಾಡುವುದನ್ನು ನಿಲ್ಲಿಸುತ್ತಾರೆ. ಹಣವನ್ನು ವ್ಯರ್ಥ ಮಾಡದೆ ಉಳಿಸುವುದು ಮತ್ತು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳುವವರು ಮಾತ್ರ ಶ್ರೀಮಂತರಾಗಲು ಸಾಧ್ಯ ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




