AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮಹಿಳೆಯರು ತಮ್ಮ ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು

ಮಹಿಳೆಯರು ಸಾಮಾನ್ಯವಾಗಿ ತಮ್ಮೆಲ್ಲಾ ವಿಚಾರಗಳನ್ನು ಇತರರ ಬಳಿ ಹೇಳಿ ಬಿಡುತ್ತಾರೆ. ಹೌದು ತಮ್ಮ ಮನಸ್ಸಿನ ಭಾವನೆ, ಮನೆಯ ವಿಷಯಗಳು ಎಲ್ಲವನ್ನೂ ಯಾರ ಬಳಿಯಾದರೂ ಹಂಚಿಕೊಳ್ಳುತ್ತಾರೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲಿ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಹೀಗೆ ಎಲ್ಲಾ ಸೀಕ್ರೆಟ್‌ಗಳನ್ನು ಬೇರೆಯವರ ಬಳಿ ಶೇರ್‌ ಮಾಡಿದಾಗ, ಅವರು ಅದರ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಆದ್ದರಿಂದ ಏನೇ ಆದರೂ ಮಹಿಳೆಯರು ಈ ಕೆಲವು ವಿಚಾರಗಳನ್ನು ಇತರರಿಗೆ ಹೇಳಬಾರದು.

Chanakya Niti: ಮಹಿಳೆಯರು ತಮ್ಮ ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಶೇರ್‌ ಮಾಡಬಾರದು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 10, 2026 | 7:35 PM

Share

ಮುಖ್ಯಾಂಶಗಳು

  • ಮಹಿಳೆಯರು ತಮ್ಮ ಎಲ್ಲಾ ಸೀಕ್ರೆಟ್‌ಗಳನ್ನು  ಯಾರೊಂದಿಗೂ ಹಂಚಿಕೊಳ್ಳಬಾರದು ಎಂದಿದ್ದಾರೆ ಚಾಣಕ್ಯ
  • ವೈಯಕ್ತಿಕ ವಿಷಯಗಳನ್ನು ಇತರರ ಬಳಿ ಶೇರ್‌ ಮಾಡಿದಾಗ, ಅನೇಕರು ಅದರ ಲಾಭ ಪಡೆಯುವ ಸಾಧ್ಯತೆ ಇರುತ್ತದೆ
  • ವೈಯಕ್ತಿ ವಿಷಯಗಳನ್ನು ಇತರರ ಬಳಿ ಹೇಳುವುದರಿಂದ ಕುಟುಂಬದ ನೆಮ್ಮದಿಯೂ ಹಾಳಾಗಬಹುದು

ಸಾಮಾನ್ಯವಾಗಿ ಮಹಿಳೆಯರ (women) ಬಳಿ ಯಾವುದೇ ಗುಟ್ಟುಗಳು ನಿಲ್ಲುವುದಿಲ್ಲ, ಏನೇ ವಿಚಾರಗಳಿದ್ದರೂ ತಮ್ಮಿಷ್ಟದವರ ಬಳಿ ಹೇಳಿಕೊಂಡು ಬರುತ್ತಾರೆ. ಆದರೆ ಹೀಗೆ ಎಲ್ಲಾ ಸಂಗತಿಗಳನ್ನು ಎಲ್ಲರೊಂದಿಗೆ ಹೇಳಿಕೊಳ್ಳುವುದು ದೊಡ್ಡ ತಪ್ಪು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅವರ ಪ್ರಕಾರ ಮುಖ್ಯವಾಗಿ ಈ ಕೆಲವೊಂದು ವೈಯಕ್ತಿಕ ವಿಷಯಗಳನ್ನು ಇತರರ ಬಳಿ ಶೇರ್‌ ಮಾಡಿದಾಗ, ಅನೇಕರು ಅದರ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಹಿಳೆಯರು ಈ ಪರ್ಸನಲ್‌ ವಿಷಯಗಳನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು.

ಮಹಿಳೆಯರು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು:

ಕೌಟುಂಬಿಕ ವಿವಾದಗಳು ಮತ್ತು ವೈಯಕ್ತಿಕ ವಿಷಯಗಳು:  ಮನೆಯಲ್ಲಿ ಸಣ್ಣಪುಟ್ಟ ವಾದ, ಜಗಳಗಳು ನಡೆಯುವುದು ಸಾಮಾನ್ಯ. ಈ ಸಣ್ಣಪುಟ್ಟ ಸಂಗತಿಗಳನ್ನು ಮಹಿಳೆಯಾದವಳು ಮೂರನೇ ವ್ಯಕ್ತಿಗಳೊಂದಿಗೆ ಶೇರ್‌ ಮಾಡುವುದು ಸರಿಯಲ್ಲ. ಚಾಣಕ್ಯನ ಪ್ರಕಾರ, ನೀವು ಈ ವಿಷಯಗಳನ್ನು ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಹಂಚಿಕೊಂಡಾಗ, ಅವರು  ಅಯ್ಯೋ ಎಂದು ಮರುಕ ವ್ಯಕ್ತಪಡಿಸಬಹುದು, ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಹಂಗಿಸುವ ಸಾಧ್ಯತೆ ಇರುತ್ತವೆ. ಕೆಲವರು ಈ ಜಗಳದ ಲಾಭ ಪಡೆದು ನಿಮ್ಮ ಕುಟುಂಬದ ನೆಮ್ಮದಿಯನ್ನೇ ನಾಶ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವ ಮಹಿಳೆಯೂ ತಮ್ಮ ಮನೆಯಲ್ಲಿ ನಡೆಯುವ ಮನಸ್ತಾಪಗಳನ್ನು ಯಾರಿಗೂ ಹೇಳಬಾರದು.

ಭವಿಷ್ಯದ ಯೋಜನೆಗಳು: ಮುಖ್ಯವಾಗಿ ಮಹಿಳೆಯರು  ಹೊಸ ಉದ್ಯೋಗವನ್ನು ಪ್ರಾರಂಭಿಸುವುದು, ಹೊಸ ಮನೆ ಅಥವಾ ಕಾರು ಖರೀದಿಸುವುದು ಅಥವಾ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಯೋಜನೆಗಳ ಬಗ್ಗೆ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಾರದು. ಚಾಣಕ್ಯನ ಪ್ರಕಾರ, ಈ  ರಹಸ್ಯ ಯೋಜನೆಗಳನ್ನು ಇತರರಿಗೆ ಮುಂಚಿತವಾಗಿ ಹೇಳುವುದರಿಂದ ಅವರು ಆ ಯೋಜನೆಗೆ ಅಡ್ಡಿಪಡಿಸುವ ಸಾಧ್ಯತೆ ಇರುತ್ತದೆ.

ಗಂಡನ ದೌರ್ಬಲ್ಯಗಳ ಬಗ್ಗೆ ಹೇಳಬಾರದು: ಗಂಡ ಹೆಂಡತಿಯ ನಡುವಿನ ಸಂಬಂಧವು ಸಂಪೂರ್ಣವಾಗಿ ಪ್ರೀತಿ ಮತ್ತು ವಿಶ್ವಾಸವನ್ನು ಆಧರಿಸಿದೆ. ಆದ್ದರಿಂದ ಹೆಂಡತಿ ತನ್ನ ಗಂಡನ ವಿಷಯಗಳನ್ನು ಇತರರಿಗೆ ಹೇಳಬಾರದು. ಚಾಣಕ್ಯರು ಹೇಳುವಂತೆ ಜಗತ್ತಿನಲ್ಲಿ ಯಾರೂ ಸಂಪೂರ್ಣವಾಗಿ ಪರಿಪೂರ್ಣರಲ್ಲ,  ಪ್ರತಿಯೊಬ್ಬರಲ್ಲೂ  ನ್ಯೂನತೆಗಳಿರುತ್ತವೆ. ಹಾಗಾಗಿ  ಮಹಿಳೆ ತನ್ನ ಗಂಡನ ಅಭ್ಯಾಸಗಳು, ಅನಾರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ  ಸ್ನೇಹಿತರು ಅಥವಾ ಸಂಬಂಧಿಕರಿಗೆ ಹೇಳುವುದನ್ನು ಹೇಳಬಾರದು. ಇದನ್ನೆಲ್ಲಾ ಹೇಳಿದರೆ ಸಮಾಜದಲ್ಲಿ ಗಂಡನ ಗೌರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಮಹಿಳೆಯರು ವಯಸ್ಸು, ಪುರುಷರು ಸಂಬಳದ ಬಗ್ಗೆ ನಿಖರವಾಗಿ ಹೇಳೋದಿಲ್ಲ ಏಕೆ ಗೊತ್ತಾ?

ಉಳಿತಾಯದ ಬಗ್ಗೆ ಯಾರಿಗೂ ಹೇಳಬಾರದು:  ಮಹಿಳೆಯರು ತಮ್ಮ ಮನೆಯನ್ನು ನಿರ್ವಹಿಸುವಾಗ ಸಣ್ಣ ಪ್ರಮಾಣದ ಹಣವನ್ನು ಉಳಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಚಾಣಕ್ಯನ ಪ್ರಕಾರ, ಇದು ತುಂಬಾ ಒಳ್ಳೆಯ ಅಭ್ಯಾಸ. ಆದರೆ ಎಷ್ಟು ಹಣವನ್ನು ಉಳಿಸಿದ್ದೀರಿ ಎಂದು ಹೇಳುವುದು ಸರಿಯಲ್ಲ. ನಮ್ಮ ಬಳಿ ಇಷ್ಟು ಚಿನ್ನ, ಬೆಳ್ಳಿಯಿದೆ, ಹಣ ಇಷ್ಟು ಸೇವ್‌ ಮಾಡಿದ್ದೇನೆ ಎಂದು ಮೂರನೇ ವ್ಯಕ್ತಿಯ ಬಳಿ ಹೇಳಿಕೊಂಡಾಗ ಅವರ ಆ ಬಗ್ಗೆ ಅಸೂಯೆಪಡುತ್ತಾರೆ ಮತ್ತು ನಿಮ್ಮ ಬಳಿ ಅನಗತ್ಯ ಸಾಲ ಕೇಳಲು ಬರುತ್ತಾರೆ. ಮತ್ತೊಂದೆಡೆ, ನೀವು ನಿಮ್ಮ ಬಡತನದ ಬಗ್ಗೆ ದುಃಖಿಸುತ್ತಾ ಇತರರ ಬಳಿ ಹೇಳಿದರೆ ಅವರು ದುರ್ಬಲರೆಂದು ಪರಿಗಣಿಸುತ್ತಾರೆ ಮತ್ತು ನಿಮ್ಮನ್ನು ಗೌರವಿಸುವುದನ್ನು ನಿಲ್ಲಿಸುತ್ತಾರೆ.

ಯಾವುದೇ ಅವಮಾನ ಅಥವಾ ನೋವು: ಆಚಾರ್ಯ ಚಾಣಕ್ಯರ ಪ್ರಕಾರ,  ಮಹಿಳೆಯರು ತಾವು ಎದುರಿಸಿದ ಅವಮಾನ, ನೋವುಗಳನ್ನು ಇತರರ ಬಳಿ ಹಂಚಿಕೊಂಡಾಗ, ಈ ದುಃಖವನ್ನು ನೋಡಿ ಅನೇಕರು ಸಂತೋಷಪಡುತ್ತಾರೆ. ಮತ್ತು ಈ ಅಸಹಾಯಕತೆಯ ಲಾಭವನ್ನು ಪಡೆಯುವ ಸಾಧ್ಯತೆಯೂ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಮಕ್ಕಳ ಪಿಕ್ಕಿ ಈಟಿಂಗ್ ಕಡಿಮೆ ಮಾಡೋದು ಹೇಗೆ?
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಜೆಡಿಎಸ್ ಪಾದಯಾತ್ರೆ ಬಗ್ಗೆ ಪಿಸು ಮಾತು ವೈರಲ್: ಸ್ಪಷ್ಟನೆ ನೀಡಿದ ವಿಜಯೇಂದ್ರ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ