AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Nanak Death Anniversary: ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು ಇಲ್ಲಿವೆ

ಗುರುನಾನಕ್ ಅವರು ಸಿಖ್ ಧರ್ಮದ ಮೊದಲ ಗುರು ಮತ್ತು ಸ್ಥಾಪಕರು. ಅವರು ರಾಜಕೀಯ, ಸಾಮಾಜಿಕ ಮತ್ತು ಆಧ್ಯಾತ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ.

Guru Nanak Death Anniversary: ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು ಇಲ್ಲಿವೆ
TV9 Web
| Updated By: ನಯನಾ ರಾಜೀವ್|

Updated on: Sep 22, 2022 | 10:38 AM

Share

ಗುರುನಾನಕ್ ಅವರು ಸಿಖ್ ಧರ್ಮದ ಮೊದಲ ಗುರು ಮತ್ತು ಸ್ಥಾಪಕರು. ಅವರು ರಾಜಕೀಯ, ಸಾಮಾಜಿಕ ಮತ್ತು ಅಧ್ಯಾತ್ಮಿಕ ನಂಬಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಬೋಧನೆಗಳನ್ನು ಪವಿತ್ರ ಸಿಖ್ ಗ್ರಂಥವಾದ ಗುರು ಗ್ರಂಥ ಸಾಹಿಬ್‌ನಲ್ಲಿ ಕಾಣಬಹುದಾಗಿದೆ. ಇದು ಗುರುಮುಖಿಯಲ್ಲಿ ಬರೆದ ಪದ್ಯಗಳ ಸಂಗ್ರಹವಾಗಿದೆ. ‘ದೇವನೊಬ್ಬ’ ಎಂಬ ಅವರು ಜ್ಞಾನ ಮತ್ತು ಮೋಕ್ಷದ ನಿಜವಾದ ಮೂಲವಾದ ದೇವರ ಧ್ವನಿಯಾಗಿ ಗುರುವನ್ನು ಸೂಚಿಸಿದರು.

ಇಂದು ಗುರುನಾನಕ್ ಪುಣ್ಯ ತಿಥಿಯನ್ನು ಆಚರಿಸಲಾಗುತ್ತಿದೆ. ಗುರುನಾನಕ್ ದೇವ್ ಕೂಡ ದೇವರು ಮಾತ್ರ ಪರಮ ಸತ್ಯ ಮತ್ತು ಅಂತಿಮ ಸತ್ಯ ಎಂದು ಹೇಳುತ್ತಿದ್ದರು. ಅವರು ನಿರ್ಭೀತರಾಗಿದ್ದರು ಮತ್ತು ಅವರ ಜೀವಿತಾವಧಿಯಲ್ಲಿ ಯಾವುದೇ ಶತ್ರುಗಳನ್ನು ಹೊಂದಿರಲಿಲ್ಲ.

ಸಿಖ್ ಧರ್ಮದ ಉಗಮಕ್ಕೆ ಒಟ್ಟು ಹತ್ತು ಸಿಖ್ ಧರ್ಮಗುರುಗಳು ಕಾರಣರಾಗಿದ್ದು ಅವರಲ್ಲಿ ಗುರು ನಾನಕ್ ಪ್ರಥಮರಾಗಿದ್ದಾರೆ. ಬೇಡಿ ಕ್ಷತ್ರಿಯ ಕುಟುಂಬದ ಮೆಹ್ತಾ ಕಲ್ಯಾಣ್ ಶಾ ಬೇಡಿ ಅಥವಾ ಮೆಹ್ತಾ ಕಾಲು ಹಾಗೂ ತೃಪ್ತಿ ದೇವಿ ಎಂಬ ದಂಪತಿಗಳಿಗೆ ಪುತ್ರರಾಗಿ ಕ್ರಿ. ಶ. 1469ರಲ್ಲಿ ಗುರು ನಾನಕ್ ದೇವ್ ಜಿ ಹುಟ್ಟಿದರು.

ಮೆಹ್ತಾ ಕಾಲು ಗ್ರಾಮದ ಬೆಳೆಯ ಲೆಕ್ಕಾಧಿಕಾರಿಯಾಗಿದ್ದರೆ ತಾಯಿ ಗೃಹಿಣಿಯಾಗಿದ್ದರು. ಬೇಬೇ ನಾನಕಿ ಎಂಬ ಪುತ್ರಿಯೂ ಇವರಿಗಿದ್ದು ಎಲ್ಲರೂ ಇಂದಿನ ಪಾಕಿಸ್ತಾನದಲ್ಲಿರುವ ಲಾಹೋರ್‌ನ ಬಳಿಯ ರಾಯ್ ಭೋಯ್ ದಿ ತಲ್ವಾಂದಿ ಎಂಬ ಗ್ರಾಮದಲ್ಲಿದ್ದರು.

ಈ ಗ್ರಾಮಕ್ಕೆ ನಾನಾಕನ್ ಸಾಹೇಬ್ ಎಂಬ ಹೆಸರಿದೆ. ಬಾಲಕನಾಗಿದ್ದಿಂದಿನಿಂದಲೂ ಆಧ್ಯಾತ್ಮಿಕ, ಶುದ್ಧತೆ, ಪಾವಿತ್ರ್ಯತೆ, ಸತ್ಯ, ಒಳ್ಳೆಯತನ ಮತ್ತು ಭಕ್ತಿಗೆ ಹೆಚ್ಚು ಆಕರ್ಷಿತರಾಗಿದ್ದರು. ತಂದೆ ಮಾರುಕಟ್ಟೆಯಿಂದ ಮನೆಗೆ ಅಗತ್ಯವಾದ ಸಾಮಾಗ್ರಿಯನ್ನು ತರಲು ಹಣ ನೀಡಿದರೆ ಬಾಲಕ ನಾನಕ್ ಈ ಹಣವನ್ನೆಲ್ಲಾ ಬಡಬಗ್ಗರಿಗೆ ಹಂಚಿ ಬರಿಗೈಯಲ್ಲಿ ಹಿಂದಿರುಗುತ್ತಿದ್ದರು. ಕ್ಷತ್ರಿಯ ಕುಟುಂಬ ಎಂದರೆ ಧೈರ್ಯ, ಸಾಹಸಗಳಿಗೆ ಮೀಸಲಾದ ಕುಟುಂಬ ಎಂದು ಅಂದಿನ ಕಾಲದಲ್ಲಿ ಪ್ರಚಲಿತವಾಗಿತ್ತು.

-ಗುರುನಾನಕ್ ಅವರು ಬಿಕ್ರಮಿ ಕ್ಯಾಲೆಂಡರ್ ಪ್ರಕಾರ 1469 ರಲ್ಲಿ ಕಾರ್ತಿಕ ಮಾಸದಲ್ಲಿ ಜನಿಸಿದರು.

-ಅವರು ರಾಯ್ ಭೋಯ್ ಕಿ ತಲ್ವಾಂಡಿ ಎಂಬ ಹಳ್ಳಿಯಲ್ಲಿ ಜನಿಸಿದರು, ಇದನ್ನು ಈಗ ನಾನಕಾ ಸಾಹಿಬ್ ಎಂದು ಕರೆಯಲಾಗುತ್ತದೆ, ಲಾಹೋರ್ ಬಳಿ ಇದೆ.

-ಗುರುನಾನಕ್ ಜಯಂತಿಯು ಸಿಖ್ಖರಿಗೆ ಪ್ರಮುಖ ದಿನಗಳಲ್ಲಿ ಒಂದಾಗಿದೆ ಮತ್ತು ಇದನ್ನು ಪ್ರಕಾಶ್ ಉತ್ಸವ ಎಂದು ಆಚರಿಸಲಾಗುತ್ತದೆ.

-ಗುರುನಾನಕ್ ಅವರು ಹಿಂದೂ ಅಥವಾ ಮುಸ್ಲಿಂ ಅಲ್ಲ ಎಂದು ನಂಬಿದ್ದರೂ, ಅವರು ಹಿಂದೂ ಪೋಷಕರಿಗೆ ಜನಿಸಿದರು.

-ಗುರುನಾನಕ್ ತಮ್ಮ ಏಳನೇ ವಯಸ್ಸಿನಲ್ಲಿ ಶಾಲೆಯನ್ನು ಪ್ರಾರಂಭಿಸಿದರು.

-ಗುರುನಾನಕ್ ಅವರು ಮೆಕ್ಕಾ, ಟಿಬೆಟ್, ಕಾಶ್ಮೀರ, ಬಂಗಾಳ, ಮಣಿಪುರ, ರೋಮ್ ಸೇರಿದಂತೆ ಪ್ರಪಂಚದಾದ್ಯಂತ ತಮ್ಮ ಮುಸ್ಲಿಂ ಸಹಚರ (ಮತ್ತು ಸ್ನೇಹಿತ) ಭಾಯಿ ಮರ್ದಾನಾ ಅವರೊಂದಿಗೆ ಪವಿತ್ರ ಸಂದೇಶವನ್ನು ಹರಡಲು ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರು.

-ನಂತರ, ಭಾಯಿ ಲೆಹ್ನಾ ಅವರನ್ನು ಗುರುನಾನಕ್ ಅವರ ಉತ್ತರಾಧಿಕಾರಿಯಾಗಿ ನೇಮಿಸಿದರು ಮತ್ತು ಗುರು ಅಂಗದ್ ಎಂದು ಮರುನಾಮಕರಣ ಮಾಡಿದರು.

-ಗುರು ನಾನಕ್ ದೇವ್ ಅವರು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಬಟಾಲಾ ಪ್ರದೇಶದ ಮೂಲ್ ಚಂದ್ ಅವರ ಮಗಳು ಸುಲಾಖನಿ ಅವರನ್ನು ವಿವಾಹವಾದರು.

-ಅವರು ತಮ್ಮ ಮದುವೆಯ ಸಮಯದಲ್ಲಿ ಏಳು ಸುತ್ತಿನ ಬದಲು ಪವಿತ್ರ ಬೆಂಕಿಯ ಸುತ್ತಲೂ ನಾಲ್ಕು ಸುತ್ತು ಸುತ್ತಿದರು.

-ಅವರ ಮಗ ಶ್ರೀ ಚಂದ್ ಉದಾಸಿ ಧರ್ಮದ ಸಂಸ್ಥಾಪಕ.

-ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರು ಸೆಪ್ಟೆಂಬರ್ 22, 1539 ರಂದು 70 ನೇ ವಯಸ್ಸಿನಲ್ಲಿ ಕರ್ತಾರ್‌ಪುರದಲ್ಲಿ ನಿಧನರಾದರು.

ಗುರುನಾನಕ್​ ಜಿ ಅವರ ಪ್ರಮುಖ ಸಿದ್ಧಾಂತಗಳು -ದೇವರು ಪ್ರಪಂಚದ ಎಲ್ಲೆಡೆ ಇದ್ದಾನೆ ಎಂದು ಗುರುನಾನಕ್ ದೇವ ವಿವರಿಸುತ್ತಾರೆ. ಪ್ರತಿಯೊಂದು ಜೀವಿಯ ಒಳಗೆ ಅವನು ನೆಲೆಸಿದ್ದಾನೆ.

-ಬಾಬಾ ನಾನಕ್ ಅವರ ಪ್ರಕಾರ, ದೇವರ ಭಕ್ತಿಯಲ್ಲಿ ಮುಳುಗಿರುವವನು ಯಾವುದೇ ರೀತಿಯ ಭಯವನ್ನು ಅನುಭವಿಸುವುದಿಲ್ಲ.

-ಜೀವನದಲ್ಲಿ, ಒಬ್ಬ ವ್ಯಕ್ತಿಯು ಯಾವಾಗಲೂ ತನ್ನ ಇಡೀ ಜೀವನವನ್ನು ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ಕಳೆಯಬೇಕು. ಹೀಗೆ ಮಾಡುವುದರಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!