AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಹಠಮಾರಿ ಕಲೆಯನ್ನು ಸುಲಭವಾಗಿ ತೆಗೆದುಹಾಕಲು ಇಲ್ಲಿವೆ ಮನೆಮದ್ದು

ವಿಶೇಷವಾಗಿ ಶರ್ಟ್‌ ಕಾಲರ್‌ನಲ್ಲಿ ಬೆವರಿನ ಕಲೆಗಳಿ ಹಾಗೆಯೇ ಉಳಿದುಬಿಡುತ್ತವೆ. ಶರ್ಟ್ ಮೇಲಿನ ಸರಳ ಕಲೆಗಳನ್ನು ಸ್ವಚ್ಛಗೊಳಿಸಲು ಸುಲಭವಾಗಿದ್ದರೂ, ಕಾಲರ್ ಮೇಲಿನ ಈ ಹಠಮಾರಿ ಕಲೆಗಳನ್ನು ತೆಗೆದುಹಾಕಲು ತುಂಬಾ ಕಷ್ಟಕರ. ಹೀಗಿರುವಾಗ ಈ ಕೆಲವೊಂದು ಸರಳ ಮನೆಮದ್ದುಗಳ ಸಹಾಯದಿಂದ ಶರ್ಟ್‌ ಕಾಲರ್‌ ಮೇಲೆ ಅಂಟಿರುವ ಹಠಮಾರಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಹಠಮಾರಿ ಕಲೆಯನ್ನು ಸುಲಭವಾಗಿ ತೆಗೆದುಹಾಕಲು ಇಲ್ಲಿವೆ ಮನೆಮದ್ದು
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: May 19, 2026 | 7:48 PM

Share

ಬಟ್ಟೆಗಳ ಮೇಲೆ ಅಂಟಿರುವ ಕಲೆಗಳನ್ನು (stains) ತೆಗೆದುಹಾಕುವುದು ಸುಲಭ.  ಆದರೆ ಶರ್ಟ್‌ ಕಾಲರ್‌ ಮೇಲೆ ಅಂಟಿರುವ ಹಠಮಾರಿ ಕಲೆಗಳನ್ನು ತೆಗೆದುಹಾಕುವುದು ಅಷ್ಟು ಸುಲಭವಲ್ಲ. ಕಾಲರ್ ನಿರಂತರವಾಗಿ ಕುತ್ತಿಗೆಯೊಂದಿಗೆ ಸಂಪರ್ಕದಲ್ಲಿರುವುದರಿಂದ ಬೆವರು, ಚರ್ಮದ ಎಣ್ಣೆ, ಧೂಳು ಮತ್ತು ಕೊಳೆ ಶರ್ಟ್‌ ಕಾಲರ್‌ಗೂ ಅಂಟಿಕೊಳ್ಳುತ್ತದೆ.  ಈ ಕಲೆಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ. ಇನ್ನೂ ಕಲೆಯನ್ನು ತೆಗೆಯುವ ಸಲುವಾಗಿ ಕಾಲರ್‌ ಅನ್ನು ತಿಕ್ಕಿ ತಿಕ್ಕಿ ಉಜ್ಜಿದರೆ ಕಾಲರ್‌ ಸವೆದು ಹೋಗುತ್ತದೆ. ಈ ಕಾರಣದಿಂದ ಬಟ್ಟೆಯೂ ಹಳೆಯದರಂತೆ ಕಾಣುತ್ತದೆ. ಹೀಗಿರುವಾಗ ಈ ಕೆಲವು ಮನೆಮದ್ದುಗಳ ಸಹಾಯದಿಂದ ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಶರ್ಟ್‌ ಕಾಲರ್‌ನಲ್ಲಿ ಅಂಟಿರುವ ಕಲೆಗಳನ್ನು ತೆಗೆದುಹಾಕಲು ಸಹಕಾರಿ ಈ ಮನೆಮದ್ದು:

ಅಡಿಗೆ ಸೋಡಾ ಮತ್ತು ನಿಂಬೆ: ಕಾಲರ್ ಮೇಲಿನ ಕಲೆಗಳನ್ನು ತೆಗೆದುಹಾಕುವಲ್ಲಿ ಅಡಿಗೆ ಸೋಡಾ ಮತ್ತು ನಿಂಬೆ ದ್ರಾವಣವು ತುಂಬಾ ಪರಿಣಾಮಕಾರಿಯಾಗಿದೆ. ಇದಕ್ಕಾಗಿ 2 ಚಮಚ ಅಡಿಗೆ ಸೋಡಾವನ್ನು ಸ್ವಲ್ಪ ನಿಂಬೆ ರಸದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ.  ಈ ಪೇಸ್ಟ್ ಅನ್ನು ಕಾಲರ್ ನ ಕಲೆ ಇರುವ ಜಾಗಕ್ಕೆ ಹಚ್ಚಿ ಹಳೆಯ ಟೂತ್ ಬ್ರಷ್ ಸಹಾಯದಿಂದ ನಿಧಾನವಾಗಿ ಸ್ಕ್ರಬ್ ಮಾಡಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕಾಲರ್‌ನಿಂದ ಹಠಮಾರಿ ಕಲೆಗಳನ್ನು ತೆಗೆದುಹಾಕುತ್ತವೆ.

ಬಿಳಿ ವಿನೆಗರ್ ಮತ್ತು ಡಿಟೆರ್ಜಂಟ್: ಕಾಲರ್‌ನಲ್ಲಿ ಅಂಟಿರುವ ಹಳೆಯ, ಕಪ್ಪು, ಹಳದಿ ಮತ್ತು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಇನ್ನೊಂದು ಸುಲಭ ಮಾರ್ಗವೆಂದರೆ ಬಿಳಿ ವಿನೆಗರ್ ಮತ್ತು ಡಿಟರ್ಜೆಂಟ್. ಕಾಲರ್‌ಗೆ ಸ್ವಲ್ಪ ಲಿಕ್ವಿಡ್ ಡಿಟೆರ್ಜಂಟ್ ಹಚ್ಚಿ, ನಂತರ ಅದರ ಮೇಲೆ 1-2 ಚಮಚ ಬಿಳಿ ವಿನೆಗರ್ ಸುರಿಯಿರಿ. ಅದನ್ನು 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಬ್ರಷ್ ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಇದು ಕಲೆಗಳನ್ನು ಸುಲಭವಾಗಿ ತೆಗೆದುಹಾಕಬಹುದು.

ಡಿಶ್‌ವಾಶ್‌ ಲಿಕ್ವಿಡ್‌ ಮತ್ತು ಶಾಂಪೂ: ಒಂದು ಬಟ್ಟಲಿನಲ್ಲಿ ಸ್ವಲ್ಪ ಪ್ರಮಾಣದ ಪಾತ್ರೆ ತೊಳೆಯುವ ದ್ರವವನ್ನು ಸಮಾನ ಪ್ರಮಾಣದ ಶಾಂಪೂ ಜೊತೆ ಬೆರೆಸಿ. ಅದನ್ನು ನೇರವಾಗಿ ಶರ್ಟ್‌ನ ಕಾಲರ್‌ಗೆ ಹಚ್ಚಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಬ್ರಷ್‌ನಿಂದ ಸ್ಕ್ರಬ್ ಮಾಡಿ, ತೊಳೆಯಿರಿ. ಇದು ಎಣ್ಣೆಯಂತಹ ಮೊಂಡುತನದ ಕಲೆಗಳನ್ನು ಸಹ ತೆಗೆದುಹಾಕುತ್ತದೆ.

ಇದನ್ನೂ ಓದಿ: ಟೊಮೆಟೊದಲ್ಲಿ ಎರಡು ವಸ್ತುಗಳನ್ನು ಬೆರೆಸಿ ಮನೆಯ ಮೂಲೆಗಳಲ್ಲಿಟ್ಟರೆ ಜಿರಳೆಗಳ ಕಾಟವೇ ಇರೋದಿಲ್ಲ

ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ:

ಕಾಲರ್‌ನಲ್ಲಿ ಅಂಟಿರುವ ಕಲೆಯನ್ನು ತೆಗೆಯುವಾಗ ಈ ಕೆಲವು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಖ್ಯ, ಇಲ್ಲದಿದ್ದರೆ ಅದು ಬೇಗನೆ ಹರಿದು ಹೋಗಬಹುದು ಅಥವಾ ಹಾಳಾಗಬಹುದು.

  • ಬ್ರಷ್‌ನಿಂದ ಕಾಲರ್ ಅನ್ನು ಎಂದಿಗೂ ತುಂಬಾ ಗಟ್ಟಿಯಾಗಿ ಉಜ್ಜಬೇಡಿ; ಇದರಿಂದ ಬಟ್ಟೆಗೆ ಹಾನಿಯಾಗಬಹುದು.
  • ಬಣ್ಣದ ಶರ್ಟ್‌ಗಳ ಮೇಲೆ ನಿಂಬೆ ಅಥವಾ ಬ್ಲೀಚ್ ಅನ್ನು ಎಚ್ಚರಿಕೆಯಿಂದ ಬಳಸಬೇಕು.
  • ಈ ಮೇಲಿನ ಪರಿಹಾರಗಳನ್ನು ಬಳಸುವ ಮೊದಲು, ಹಳೆಯ ಉಡುಪಿನ ಮೇಲೆ ಪ್ಯಾಚ್ ಟೆಸ್ಟ್‌ ಮಾಡಲು ಮರೆಯದಿರಿ. ಬಟ್ಟೆ ಬಣ್ಣ ಮಸುಕಾದರೆ, ಅದನ್ನು ಬಳಸುವುದನ್ನು ತಪ್ಪಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ