Sign In

By signing in or creating an account, you agree with Associated Broadcasting Company's Terms & Conditions and Privacy Policy.

Mahashivratri 2025: ಮುಟ್ಟಿನ ಸಮಯದಲ್ಲಿ ಮಹಾಶಿವರಾತ್ರಿ ಉಪವಾಸ ಮಾಡುವುದು ಹೇಗೆ? ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು

ಮಹಾಶಿವರಾತ್ರಿ ತುಂಬಾ ಪವಿತ್ರವಾದ ದಿನ. ಈ ದಿನವನ್ನು ತುಂಬಾ ಶ್ರದ್ಧೆಯಿಂದ ಆಚರಣೆ ಮಾಡಬೇಕು. ಈ ದಿನದಂದು ಉಪವಾಸ ಮಾಡಿದ್ರೆ ತುಂಬಾ ಒಳ್ಳೆಯದು. ಈ ಪದ್ಧತಿಯನ್ನು ಹಿಂದೂ ಧರ್ಮದಲ್ಲಿ ಇಂದಿಗೂ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಅದಕ್ಕಾಗಿ ಈ ದಿನದಂದು ಮಹಿಳೆಯರಿಗೆ ಮುಟ್ಟು ಆದ್ರೆ ಯಾವ ರೀತಿಯಲ್ಲಿ ಉಪವಾಸ ಮಾಡಬೇಕು. ಹಾಗೂ ಈ ಸಮಯದಲ್ಲಿ ಉಪವಾಸ ಮಾಡುವುದು ಒಳ್ಳೆಯದೇ ಹಾಗೂ ದೇವರ ಪೂಜೆ ಮಾಡದೇ ಉಪವಾಸ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

Mahashivratri 2025: ಮುಟ್ಟಿನ ಸಮಯದಲ್ಲಿ ಮಹಾಶಿವರಾತ್ರಿ ಉಪವಾಸ ಮಾಡುವುದು ಹೇಗೆ? ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 25, 2025 | 3:17 PM

ಮಹಾಶಿವರಾತ್ರಿಯನ್ನು ಹಿಂದೂ ಧರ್ಮದ ಅತಿ ದೊಡ್ಡ ಹಬ್ಬಗಳಲ್ಲಿ ಒಂದೆಂದು ಹೇಳಲಾಗಿದೆ. ಇದು ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಬರುತ್ತದೆ. ಈ ವರ್ಷ ಈ ಹಬ್ಬವನ್ನು ಫೆಬ್ರವರಿ 26 ರಂದು ಆಚರಿಸಲಾಗುತ್ತದೆ. ಈ ದಿನದಂದು ಅನೇಕ ಭಕ್ತರು ಉಪವಾಸ ವ್ರತ ಆಚರಿಸುತ್ತಾರೆ. ಆದರೆ ಮಹಿಳೆಯರು ಉಪವಾಸದ ಸಮಯದಲ್ಲಿ ಮುಟ್ಟಾದರೆ ಏನು ಮಾಡಬೇಕೆಂದು ಎಂಬುದನ್ನು ಇಲ್ಲಿ ಹೇಳಲಾಗಿದೆ. ಮುಟ್ಟಿನ ಸಮಯದಲ್ಲೂ ಈ ಉಪವಾಸವನ್ನು ಆಚರಿಸಬಹುದೇ? ಇದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಮಹಾಶಿವರಾತ್ರಿಯಂದು ಋತುಚಕ್ರದ ಸಮಯದಲ್ಲಿ ಉಪವಾಸ ಮಾಡಬಹುದೇ?:

ಮಹಾಶಿವರಾತ್ರಿಯ ಉಪವಾಸದ ಸಮಯದಲ್ಲಿ ಋತುಚಕ್ರ ಸಂಭವಿಸಿದರೆ, ಅಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಈ ಉಪವಾಸವನ್ನು ಅಪೂರ್ಣವಾಗಿ ಬಿಡಬಾರದು. ಆದರೆ ಉಪವಾಸ ಪ್ರಾರಂಭವಾಗುವ ಮೊದಲೇ ನಿಮ್ಮ ಮುಟ್ಟು ಪ್ರಾರಂಭವಾಗಿದ್ದರೆ, ಈ ಉಪವಾಸವನ್ನು ಆಚರಿಸದಿರುವುದು ಉತ್ತಮ. ಒಂದು ವೇಳೆ ಈ ಉಪವಾಸವನ್ನು ಮಾಡಬೇಕು ಎಂದರೆ. ದೇವರ ಪೂಜೆ ಮಾಡುವ ಅಗತ್ಯವಿಲ್ಲ. ಈ ಸಮಯದಲ್ಲಿ ನೀವು ಮನಸ್ಸಿನಲ್ಲಿ ಪೂಜೆ ಮಾಡಬಹುದು ಆದರೆ ಪೂಜಾ ಸಾಮಗ್ರಿಗಳನ್ನು ಮುಟ್ಟಬೇಡಿ. ಶಿವನ ಭಕ್ತಿಗೆ ಮನಸ್ಸಿನ ಶುದ್ಧತೆ ಬಹಳ ಮುಖ್ಯ. ಆದ್ದರಿಂದ, ನೀವು ನಿಮ್ಮ ಮನಸ್ಸಿನಲ್ಲಿ ದೇವರನ್ನು ಪೂಜಿಸಿ.

ಮಹಾ ಶಿವರಾತ್ರಿಯ ಪೂಜೆಯನ್ನು ಹೇಗೆ ಮಾಡಬೇಕು?:

ಮಹಾ ಶಿವರಾತ್ರಿಯ ಪೂಜೆಯಲ್ಲಿ ನೇರವಾಗಿ ಭಾಗವಹಿಸಬಾರದು. ನಿಮ್ಮ ಜಾಗದಲ್ಲಿ ಬೇರೆ ಯಾರಾದರೂ ಪೂಜೆ ಮಾಡಿಸಬಹುದು. ಈ ಸಮಯದಲ್ಲಿ ದೇವರ ವಿಗ್ರಹ, ಪೂಜಾ ಸಾಮಗ್ರಿಗಳು ಮತ್ತು ಕಾಣಿಕೆಗಳನ್ನು ಮುಟ್ಟುವುದನ್ನು ತಪ್ಪಿಸಿ. ಸಂಪೂರ್ಣ ಭಕ್ತಿಯಿಂದ, ನಿಮ್ಮ ಮನಸ್ಸಿನಲ್ಲಿ ಶಿವನ ಹೆಸರನ್ನು ಪಠಿಸಿ.

ಋತುಚಕ್ರದ ಸಮಯದಲ್ಲಿ ಪೂಜೆಯನ್ನು ಏಕೆ ನಿಷೇಧಿಸಲಾಗಿದೆ?:

ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಯಾವುದೇ ಪೂಜೆಯನ್ನು ಮಾಡಬಾರದು ಎಂದು ವಿದ್ವಾಂಸರು ಹೇಳುತ್ತಾರೆ. ಏಕೆಂದರೆ ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹೆಚ್ಚಿನ ಶಕ್ತಿಯು ಹರಿಯುತ್ತದೆ. ಈ ಶಕ್ತಿಯನ್ನು ದೇವರು ಸಹ ಸಹಿಸುವುದಿಲ್ಲ ಎಂದು ಹೇಳಲಾಗುತ್ತದೆ. ಒಬ್ಬ ಮಹಿಳೆ ತನ್ನ ಋತುಚಕ್ರದ ಸಮಯದಲ್ಲಿ ತುಳಸಿಗೆ ನೀರು ಸುರಿದಾಗ, ತುಳಸಿಯೂ ಒಣಗುತ್ತದೆ ಎಂಬ ಮಾತು ಕೂಡ ಇದೆ. ಅದಕ್ಕಾಗಿಯೇ ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಶಿವನಿಗೆ ಪ್ರಿಯ ಈ ತಂಬಿಟ್ಟು ಉಂಡೆ, ಮಾಡೋದು ಹೇಗೆ? ಇಲ್ಲಿದೆ ರೆಸಿಪಿ

ಮುಟ್ಟು ಆದನಂತರ ಎಷ್ಟುಗಳ ದಿನಗಳ ಬಳಿಕ ಆಕೆ ಪೂಜೆ ಮಾಡಬಹುದು?

ಮುಟ್ಟಿನ ಐದನೇ ದಿನದಂದು ತಲೆಸ್ನಾನ ಮಾಡಿ. ಪೂಜೆ ಮಾಡಬಹುದು ಅಥವಾ ಪೂಜೆಯಲ್ಲಿ ಭಾಗವಹಿಸಬಹುದು. ಮತ್ತೊಂದೆಡೆ, ಎರಡು ಅಥವಾ ಮೂರು ದಿನಗಳ ಕಾಲ ಋತುಚಕ್ರ ಇರುವ ಮಹಿಳೆಯರು ನಾಲ್ಕನೇ ದಿನ ಸ್ನಾನ ಮಾಡಿ ನಂತರ ಪೂಜೆಯಲ್ಲಿ ಭಾಗವಹಿಸಬಹುದು. ಆದರೆ 7 ದಿನಗಳ ಕಾಲ ಋತುಚಕ್ರ ಇರುವ ಮಹಿಳೆಯರು ಎಂಟನೇ ದಿನದಿಂದ ಪೂಜೆಯನ್ನು ಪ್ರಾರಂಭಿಸಬಹುದು. ಆದರೆ ಮುಟ್ಟಿನ 5 ದಿನಗಳ ನಂತರವೂ ಅಗತ್ಯ ಆಚರಣೆಗಳಲ್ಲಿ ಭಾಗವಹಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ