
ಶ್ರೀಕೃಷ್ಣ ಜನ್ಮಾಷ್ಟಮಿಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲರ ಮನೆಯಲ್ಲಿ ಹಬ್ಬಕ್ಕೆ ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಪ್ರತಿ ವರ್ಷವು ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Shri Krishna Janmashtami) ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 16 ರಂದು ಆಚರಿಸಲಾಗುತ್ತಿದೆ. ಕೃಷ್ಣ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ಕೈಯಲ್ಲಿ ಕೊಳಲನು ಊದುತಾ ಗೋಪಿಕೆಯರ ಮನಸ್ಸು ಕದ್ದ ಕಳ್ಳ ಕೃಷ್ಣ. ಆದರೆ ಈ ಕೃಷ್ಣನನ್ನು ನೀಲ ಮೇಘ ಶ್ಯಾಮ ಹೆಸರಿನಿಂದಲೂ ಕರೆಯಲಾಗುತ್ತದೆ. ಈ ಮುಕುಂದನನ್ನು ನೀಲಿ ಬಣ್ಣದಿಂದ ಚಿತ್ರಿಸಲಾಗಿದ್ದು, ಎಲ್ಲರ ನೆಚ್ಚಿನ ಕೃಷ್ಣನ ಮೈ ಬಣ್ಣ ನೀಲಿ ಎಂಬ ಈ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದ್ರೆ ಕೃಷ್ಣನ ಮೈ ಬಣ್ಣ ನೀಲಿ ಯಾಕೆ? ಎನ್ನುವುದು ನಿಮಗೆ ತಿಳಿದಿದೆಯೇ, ಈ ಕುರಿತಾದ ಮಾಹಿತಿ ಇಲ್ಲಿದೆ.
ಕೃಷ್ಣನ ಮೈ ಬಣ್ಣ ನೀಲಿಯೇ?
ಶ್ರೀಕೃಷ್ಣನದ್ದು ಮೈ ಬಣ್ಣ ನೀಲಿ ಎನ್ನಲಾಗಿದೆ. ಆದರೆ ಕೃಷ್ಣನ ಮೈ ಬಣ್ಣ ಪೂರ್ಣ ನೀಲಿಯಲ್ಲವಂತೆ. ಹಾಗಂತ ಕಪ್ಪು ಬಣ್ಣವೂ ಅಲ್ಲ. ಆದರೆ ಕೃಷ್ಣನ ಶಕ್ತಿಯ ಹಾಗೂ ಪ್ರಭೆಯ ನೀಲಿ ಬಣ್ಣವನ್ನು ಕಂಡವರು ಕೃಷ್ಣನನ್ನು ನೀಲಿ ಬಣ್ಣದಲ್ಲಿಯೇ ಗುರುತಿಸಿದ್ದಾರೆ. ಹೀಗಾಗಿ ಶ್ರೀಕೃಷ್ಣ ಪರಮಾತ್ಮನನ್ನು ನೀಲ ಮೇಘ ಶ್ಯಾಮ ಎಂದು ಕರೆಯಲಾಗುತ್ತದೆ.
ಶ್ರೀಕೃಷ್ಣನನ್ನು ನೀಲಿ ಬಣ್ಣದಲ್ಲಿ ಚಿತ್ರಿಸಲು ಇದು ಕಾರಣ
ಇದನ್ನೂ ಓದಿ: Krishna Janmashtami 2025: ರಾಧ-ಕೃಷ್ಣ ವೇಷ ತೊಡುವುದಕ್ಕೆ ವಯಸ್ಸಿನ ಮಿತಿಯಿದೆಯೇ?
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ