AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2025: ನವಜೋಡಿಗೆ ಉಡುಗೊರೆಯಾಗಿ ನೀಡಲಾಗುತ್ತೆ ಈ ಪಟ್ಟದ ಗೊಂಬೆ, ಇಲ್ಲಿದೆ ವಿಶೇಷತೆ

ನವರಾತ್ರಿ ಹಬ್ಬದ ಸಂಭ್ರಮವು ಜೋರಾಗಿದೆ, ಕೆಲವರ ಮನೆಯಲ್ಲಿ ವಿಭಿನ್ನ ಆಕರ್ಷಕ ಗೊಂಬೆಗಳನ್ನು ಕೂರಿಸಲಾಗಿದೆ. ಇದೊಂದು ಸಂಪ್ರದಾಯಿಕ ಆಚರಣೆಯಾಗಿದ್ದು, ಇದರಲ್ಲಿ ಪಟ್ಟದ ಗೊಂಬೆ ತುಂಬಾನೇ ವಿಶೇಷ. ಹೊಸದಾಗಿ ಮದುವೆಯಾದ ಜೋಡಿಗೆ ಈ ಗೊಂಬೆಯನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವು ಇದೆ. ಹಾಗಾದ್ರೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Navaratri 2025: ನವಜೋಡಿಗೆ ಉಡುಗೊರೆಯಾಗಿ ನೀಡಲಾಗುತ್ತೆ ಈ ಪಟ್ಟದ ಗೊಂಬೆ, ಇಲ್ಲಿದೆ ವಿಶೇಷತೆ
ಪಟ್ಟದ ಗೊಂಬೆ
ಸಾಯಿನಂದಾ
|

Updated on: Sep 27, 2025 | 6:54 PM

Share

ದಸರಾ (Dasara) ಎಂದರೆ ಮೊದಲು ನೆನಪಿಗೆ ಬರುವುದೇ ಈ ಗೊಂಬೆಗಳು. ಸಿಂಗರಿಸಿಟ್ಟ ಬಣ್ಣ ಬಣ್ಣದ ಸಾಲು ಬೊಂಬೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ನವರಾತ್ರಿಯ (Navaratri) ಸಂದರ್ಭದಲ್ಲಿ ಪುರಾಣದ ಕಥೆಯನ್ನು ಹೇಳುವ ಈ ಗೊಂಬೆಗಳನ್ನು ತಮ್ಮ ಮನೆಯಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಗುತ್ತದೆ.  ರಾಮಾಯಣ, ಮಹಾಭಾರತ ಕಥೆಗಳು, ಹಳ್ಳಿ ಜೀವನ, ಗಣಪತಿ, ದೇವರ ಪ್ರತಿಮೆಗಳು ಹೀಗೆ ವಿವಿಧ ಕಥೆಗಳನ್ನು ಸಾರುವ ಗೊಂಬೆಗಳನ್ನು ಒಳಗೊಂಡಿರುತ್ತವೆ. ಅದರಲ್ಲೂ ಪಟ್ಟದ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರುತ್ತದೆ. ಹಾಗಾದ್ರೆ ಈ ಪಟ್ಟದ ಗೊಂಬೆಗಳ ವಿಶೇಷತೆಗಳೇನು? ನವಜೋಡಿಗೆ ಈ ಗೊಂಬೆಯನ್ನು ಉಡುಗೊರೆಯಾಗಿ ನೀಡುವುದು ಏಕೆ? ಈ ಬಗ್ಗೆ ನೀವು ತಿಳಿದುಕೊಳ್ಳಿ.

ಪಟ್ಟದ ಗೊಂಬೆಯ ವಿಶೇಷ

ದಸರಾದ ವೇಳೆ ತಮ್ಮ ಮನೆಯಲ್ಲಿ ಕೂರಿಸುವ ಗೊಂಬೆಗಳಲ್ಲಿ ಈ ಪಟ್ಟದ ಗೊಂಬೆಗಳಿಗೆ ಹೆಚ್ಚು ಪ್ರಾಮುಖ್ಯತೆ, ಅಲಂಕಾರ ಮತ್ತು ಗೌರವವನ್ನು ನೀಡಲಾಗುತ್ತದೆ. ಈ ಪಟ್ಟದ ಗೊಂಬೆಗಳನ್ನು ಶ್ರೀನಿವಾಸ-ಪದ್ಮಾವತಿ ಅಥವಾ ಶಿವ-ಪಾರ್ವತಿಯಂತಹ ದೇವತಾ ಸ್ವರೂಪಗಳಾಗಿ ಪೂಜಿಸುವುದು ವಿಶೇಷ.ಮುಖ್ಯವೆಂದು ಪರಿಗಣಿಸಲಾಗುವ ಈ ಪಟ್ಟದ ಗೊಂಬೆಗಳು ಗಂಡು ಹೆಣ್ಣನ್ನು ಪ್ರತಿನಿಧಿಸುತ್ತದೆ.

ಇದನ್ನೂ ಓದಿ: Navaratri 2025: ಮೈಸೂರು ದಸರಾಕ್ಕಿಂತ ಕುಡ್ಲದ ದಸರಾ ಭಿನ್ನ; ಶಾರದಾ ದೇವಿಯ ವಿಗ್ರಹವೇ ಪ್ರಮುಖ ಆಕರ್ಷಣೆ

ಇದನ್ನೂ ಓದಿ
Image
ಮಧುಮೇಹಿಗಳೇ... ನವರಾತ್ರಿ ಹಬ್ಬದ ನಿಮ್ಮ ಉಪವಾಸ ಈ ರೀತಿ ಇರಲಿ
Image
ಮೈಸೂರು ದಸರಾಕ್ಕಿಂತ ಕುಡ್ಲದ ದಸರಾ ವಿಭಿನ್ನ, ಆಕರ್ಷಣೆ
Image
ನವರಾತ್ರಿಯ ಮೊದಲ ದಿನ ದೇವಿಗೆ ನೈವೇದ್ಯವಾಗಿ ಮಖಾನಾ ಪಾಯಸ ಅರ್ಪಿಸಿ
Image
ನವರಾತ್ರಿಯ 9 ದಿನ ಈ ನವ ವರ್ಣದ ಬಟ್ಟೆಗಳನ್ನು ಧರಿಸಿದರೆ ಶುಭವಂತೆ

ಪಟ್ಟದ ಗೊಂಬೆ ನೀಡುವುದರ ಹಿಂದಿದೆ ಈ ಕಾರಣ

ಪಟ್ಟದ ಗೊಂಬೆಗಳು ವಿವಾಹವಾದ ಗಂಡು ಹೆಣ್ಣಿನ ಜೋಡಿಯಾಗಿದೆ. ಕೆಲವು ಕಡೆಗಳಲ್ಲಿ ಈ ಗೊಂಬೆಯನ್ನು ಮದುವೆಯ ಸಂಪ್ರದಾಯದ ವೇಳೆ ಮಗಳಿಗೆ ನೀಡುವ ಸಂಪ್ರದಾಯವು ತಲೆಮಾರುಗಳಿಂದಲೂ ಬಂದಿದೆ. ಹೌದು, ಮಗಳು ಮದುವೆಯಾದಾಗ ಪೋಷಕರು ಸಂಪ್ರದಾಯದಂತೆ ಒಂದು ಜೊತೆ ಪಟ್ಟದ ಗೊಂಬೆಗಳನ್ನು ನವಜೋಡಿಗೆ ನೀಡುತ್ತಾರೆ. ಇದು ಹೊಸ ಕುಟುಂಬ ಪ್ರಾರಂಭಿಸಲು ಮತ್ತು ಗೊಂಬೆ ಹಬ್ಬದ ಸಂಪ್ರದಾಯವನ್ನು ಮುಂದುವರಿಸಲು ಹೇಳುವುದರ ಸಂಕೇತ ಎನ್ನಲಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ