Pregnancy and Infant Loss Remembrance Day 2024: ಗರ್ಭಧಾರಣೆ, ಶಿಶು ನಷ್ಟ ಸ್ಮರಣೆ ದಿನವನ್ನು ಆಚರಿಸುವ ಉದ್ದೇಶವೇನು?

ತಾಯಿಗೆ, ಮಗು ಹೊಟ್ಟೆಯಲ್ಲಿರುವಾಗ ಆಗಲಿ ಅಥವಾ ಹೆರಿಗೆ ಆದ ನಂತರದಲ್ಲಿ ಶಿಶುವಿನ ಸಾವು ತುಂಬಾ ದುಃಖ ನೀಡುತ್ತದೆ. ಎಷ್ಟೇ ತಂತ್ರಜ್ಞಾನ ಮುಂದುವರೆದಿದ್ದರೂ ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಯಿ ಮತ್ತು ಮಗುವಿನ ಆರೋಗ್ಯ ಬಹಳ ಮುಖ್ಯವಾದದ್ದು. ಪ್ರತಿಯೊಂದು ಕುಟುಂಬಕ್ಕೂ ಇಂತಹ ಪರಿಸ್ಥಿತಿಗಳ ಅರಿವಿರಬೇಕಾಗುತ್ತದೆ. ಹಾಗಾಗಿಯೇ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ವಿಶ್ವದಾದ್ಯಂತ "ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ತಿಂಗಳು" ಎಂದು ಆಚರಿಸಲಾಗುತ್ತದೆ, ಇದು ಹೆರಿಗೆ ಮಾತ್ರವಲ್ಲದೆ ಗರ್ಭಪಾತಕ್ಕೆ ಒಳಗಾದ ಭ್ರೂಣ ಮತ್ತು ಜನನದ ನಂತರ ಜೀವನದ ಹೋರಾಟದಲ್ಲಿ ಸೋತ ನವಜಾತ ಶಿಶುಗಳನ್ನು ನೆನಪಿಸಿಕೊಳ್ಳುವ ಗುರಿಯನ್ನು ಹೊಂದಿದೆ.

Pregnancy and Infant Loss Remembrance Day 2024: ಗರ್ಭಧಾರಣೆ, ಶಿಶು ನಷ್ಟ ಸ್ಮರಣೆ ದಿನವನ್ನು ಆಚರಿಸುವ ಉದ್ದೇಶವೇನು?
Pregnancy and Infant Loss Remembrance Day
Follow us
| Updated By: ಅಕ್ಷತಾ ವರ್ಕಾಡಿ

Updated on: Oct 15, 2024 | 11:10 AM

ಯಾವುದೇ ಕುಟುಂಬಕ್ಕಾಗಲಿ, ಅದರಲ್ಲಿಯೂ ತಾಯಿಗೆ, ಮಗು ಹೊಟ್ಟೆಯಲ್ಲಿರುವಾಗ ಆಗಲಿ ಅಥವಾ ಹೆರಿಗೆ ಆದ ನಂತರದಲ್ಲಿ ಶಿಶುವಿನ ಸಾವು ತುಂಬಾ ದುಃಖ ನೀಡುತ್ತದೆ. ಎಷ್ಟೇ ತಂತ್ರಜ್ಞಾನ ಮುಂದುವರೆದಿದ್ದರೂ ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಯಿ ಮತ್ತು ಮಗುವಿನ ಆರೋಗ್ಯ ಬಹಳ ಮುಖ್ಯವಾದದ್ದು. ಪ್ರತಿಯೊಂದು ಕುಟುಂಬಕ್ಕೂ ಇಂತಹ ಪರಿಸ್ಥಿತಿಗಳ ಅರಿವಿರಬೇಕಾಗುತ್ತದೆ. ಹಾಗಾಗಿಯೇ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ವಿಶ್ವದಾದ್ಯಂತ “ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ತಿಂಗಳು” ಎಂದು ಆಚರಿಸಲಾಗುತ್ತದೆ, ಇದು ಹೆರಿಗೆ ಮಾತ್ರವಲ್ಲದೆ ಗರ್ಭಪಾತಕ್ಕೆ ಒಳಗಾದ ಭ್ರೂಣ ಮತ್ತು ಜನನದ ನಂತರ ಜೀವನದ ಹೋರಾಟದಲ್ಲಿ ಸೋತ ನವಜಾತ ಶಿಶುಗಳನ್ನು ನೆನಪಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಗರ್ಭಧಾರಣೆ, ಶಿಶು ನಷ್ಟ ಸ್ಮರಣೆ ದಿನದ ಇತಿಹಾಸ:

ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ದಿನವನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ಅಮೇರಿಕಾ ಮತ್ತು ಕೆನಡಾದಲ್ಲಿ ಪ್ರಾರಂಭಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ರೊನಾಲ್ಡ್ ರೇಗನ್ ಮೊದಲ ಬಾರಿಗೆ ಈ ದಿನವನ್ನು 25 ಅಕ್ಟೋಬರ್ 1988 ರಂದು ಘೋಷಿಸಿದರು (ರೊನಾಲ್ಡ್ ರೇಗನ್, ಆಗಿನ ಯುಎಸ್ಎ ಅಧ್ಯಕ್ಷ). ಬಳಿಕ 2000 ರಲ್ಲಿ, ರಾಬಿನ್ ಬೇರ್, ಲಿಸಾ ಬ್ರೌನ್ ಮತ್ತು ಟಮ್ಮಿ ನೊವಾಕ್ ಅಕ್ಟೋಬರ್ 15 ಅನ್ನು ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ದಿನವೆಂದು ಗುರುತಿಸುವಂತೆ ಫೆಡರಲ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಈ ಮೂವರು ಮಹಿಳೆಯರು ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖವನ್ನು ಅನುಭವಿಸಿದ್ದರು. ಹಾಗಾಗಿ ಅಂದಿನಿಂದ, ಈ ವಿಶೇಷ ದಿನವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ.

ಗರ್ಭಧಾರಣೆ, ಶಿಶು ನಷ್ಟ ಸ್ಮರಣೆ ದಿನದ ಉದ್ದೇಶ:

ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆಯ ಮಾಸವನ್ನು ಆಚರಿಸುವ ಮುಖ್ಯ ಉದ್ದೇಶ, ಗರ್ಭಾವಸ್ಥೆಯಲ್ಲಿ, ಜನನದ ಸಮಯದಲ್ಲಿ ಅಥವಾ ಅದರ ನಂತರ ಮರಣ ಹೊಂದಿದ ಜೀವಗಳನ್ನು ಸ್ಮರಿಸುವುದು ಮಾತ್ರವಲ್ಲ, ಗರ್ಭಪಾತ, ಹೆರಿಗೆ ಮತ್ತು ನವಜಾತ ಶಿಶುಗಳ ಸಾವುಗಳು ಮತ್ತು ಅವುಗಳ ತಡೆಗಟ್ಟುವಿಕೆಯ ಕಾರಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಆಗಿದೆ. ಈ ಕಾರಣದಿಂದಾಗಿ, ಈ ಒಂದು ತಿಂಗಳ ಅವಧಿಯಲ್ಲಿ, ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು ಮತ್ತು ಈ ವಿಷಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಈ 5 ಆಹಾರಗಳನ್ನು ಸೇವಿಸಿ:

  1. ಒಣ ಹಣ್ಣುಗಳು:ಗರ್ಭಾವಸ್ಥೆಯಲ್ಲಿ ಪ್ರೊ ಟಿನ್ ಮತ್ತು ಡಿಎಚ್ಎ ಗಾಗಿ, ನೀವು ಒಣ ಹಣ್ಣುಗಳನ್ನು ಅಂದರೆ ಡ್ರೈ ಫ್ರೂಟ್ಸ್ ಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನಬಹುದು. ಇವು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
  2. ಡೈರಿ ಉತ್ಪನ್ನಗಳು: ಗರ್ಭಾವಸ್ಥೆಯಲ್ಲಿ, ಸ್ಕಿಮ್ಡ್ ಹಾಲು, ಚೀಸ್, ಮೊಸರು, ಮಜ್ಜಿಗೆ ಅಥವಾ ಹಾಲಿನ ಉತ್ಪನ್ನಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದು ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಆಗದಂತೆ ತಡೆಯುತ್ತದೆ.
  3. ತರಕಾರಿಗಳು: ಗರ್ಭಾವಸ್ಥೆಯಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪೋಷಕಾಂಶಗಳು ಬೇಕಾಗುತ್ತವೆ. ಈ ಅಗತ್ಯವನ್ನು ಹಸಿರು ಎಲೆಗಳ ತರಕಾರಿಗಳು ಪೂರೈಸುತ್ತವೆ. ಆದ್ದರಿಂದ, ಹಸಿರು ತರಕಾರಿಗಳನ್ನು ಸಾಧ್ಯವಾದಷ್ಟು ತಿನ್ನಬೇಕು.
  4. ಕಬ್ಬಿಣದ ಅಂಶವಿರುವ ಆಹಾರ: ಆರೋಗ್ಯಕರ ಗರ್ಭಧಾರಣೆಗಾಗಿ ಆಹಾರದಲ್ಲಿ ಕಬ್ಬಿಣದ ಅಂಶವನ್ನು ಸೇರಿಸುವುದು ಬಹಳ ಮುಖ್ಯ. ಆದ್ದರಿಂದ ತರಕಾರಿಗಳು, ದಾಳಿಂಬೆ, ದ್ವಿದಳ ಧಾನ್ಯಗಳು, ಲಿಚಿ, ಒಣದ್ರಾಕ್ಷಿ, ಅಂಜೂರವನ್ನು ಪ್ರತಿದಿನ ಸೇವಿಸಿ. ಇವು ದೇಹ ಕಬ್ಬಿಣದ ಅಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
  5. ಕ್ಯಾಲ್ಸಿಯಂ ಇರುವ ಆಹಾರ: ಮಗುವಿನ ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಹೆಚ್ಚಿನ ಕ್ಯಾಲ್ಸಿಯಂ ಅತ್ಯಗತ್ಯ. ಇದು ಬೆನ್ನು ನೋವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಹೆಚ್ಚು ಕ್ಯಾಲ್ಸಿಯಂ ಮತ್ತು ವಿಟಮಿನ್ ಸಮೃದ್ಧ ಆಹಾರವನ್ನು ಸೇವಿಸಬೇಕು.

ಇದನ್ನೂ ಓದಿ: ಇಂದು ವಿಶ್ವ ವಿದ್ಯಾರ್ಥಿಗಳ ದಿನ : ಅಬ್ದುಲ್ ಕಲಾಂ ಜನ್ಮದಿನದಂದೇ ಏಕೆ ಆಚರಿಸಲಾಗುತ್ತದೆ?

ಗರ್ಭಾವಸ್ಥೆಯಲ್ಲಿ ಯಾವ ಆಹಾರಗಳನ್ನು ತಪ್ಪಿಸಬೇಕು:

  • ಸಂಸ್ಕರಿಸಿದ ಆಹಾರವನ್ನು ಎಂದಿಗೂ ಬಳಸಬೇಡಿ ಅವುಗಳನ್ನು ತಪ್ಪಿಸಿ.
  • ಅತಿಯಾದ ಉಪ್ಪನ್ನು ಸೇವಿಸುವುದನ್ನು ತಪ್ಪಿಸಿ.
  • ಅತಿಯಾಗಿ ಕರಿದ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ.
  • ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯನ್ನು ತಪ್ಪಿಸಬೇಕು.
  • ಹೆಚ್ಚು ಕೊಬ್ಬು ಮತ್ತು ಸಕ್ಕರೆ ಅಂಶವಿರುವ ವಸ್ತುಗಳಿಂದ ದೂರವಿರಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ತನಿಖೆಯ ನಂತರ ಪೂರ್ಣ ಮಾಹಿತಿ ನೀಡುತ್ತೇವೆ: ಡಾ ಶರಣಪ್ಪ, ಪೊಲೀಸ್ ಕಮೀಶನರ್
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಧಾರಾಕಾರ ಮಳೆ: ಬೆಳ್ಳಂಬೆಳಗ್ಗೆಯೇ ಶುರುವಾಯ್ತು ರಗಳೆ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಧಾರಾಕಾರ ಮಳೆ; ಕೆಲಸಕ್ಕೆ ಹೋಗುವ ಜನರಿಗೆ ರಗಳ
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
‘ನಾನು ಅನ್​ಫಿಟ್ ಅನಿಸುತ್ತಿದೆ’; ಕಣ್ಣೀರು ಹಾಕಿದ ಧನರಾಜ್ ಆಚಾರ್
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಹುಂಡಿ‌ ಎಣಿಕೆ ಕಾರ್ಯ, ಕಾಣಿಕೆಹಣ ಎಷ್ಟಿದೆ?
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Daily Devotional: ಕನಸಿನಲ್ಲಿ ಹಾವುಗಳು ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಶುಭ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ