Relationships: ನಿಮ್ಮ ಸಂಬಂಧದಲ್ಲಿ ಬಿರುಕು, ಪದೇ ಪದೇ ಭಿನ್ನಾಭಿಪ್ರಾಯ ಬರಲು ಕಾರಣವೆನೆಂದು ತಿಳಿದಿದೆಯೇ?

50 ವರ್ಷಗಳ ಕಾಲ ದಂಪತಿಗಳನ್ನು ಅಧ್ಯಯನ ಮಾಡಿದ ಸಂಶೋಧಕರು ಸಂಬಂಧದಲ್ಲಿ ಬಿರುಕು, ಪದೇ ಪದೇ ಭಿನ್ನಾಭಿಪ್ರಾಯ ಬರಲು ಕಾರಣವೆನೆಂದು ಕಂಡುಹಿಡಿದ್ದಾರೆ.

Relationships: ನಿಮ್ಮ ಸಂಬಂಧದಲ್ಲಿ ಬಿರುಕು, ಪದೇ ಪದೇ ಭಿನ್ನಾಭಿಪ್ರಾಯ ಬರಲು ಕಾರಣವೆನೆಂದು ತಿಳಿದಿದೆಯೇ?

Updated on: Mar 07, 2023 | 2:17 PM

ಸುಮಾರು 50 ವರ್ಷಗಳಲ್ಲಿ 40,000 ದಂಪತಿಗಳನ್ನು ತಮ್ಮ ಅಧ್ಯಯನದ ಒಂದು ಭಾಗವಾಗಿರಿಸಿದ ಮನಶ್ಶಾಸ್ತ್ರಜ್ಞರಾದ ಡಾ. ಜಾನ್ ಗಾಟ್ಮನ್ ಅವರು ಅಧ್ಯಯನದ ಆಧಾರದ ಮೇಲೆ ಸಂಬಂಧಗಳಲ್ಲಿನ ಕಳಪೆ ಮಾತುಕತೆಗಳಿಂದ ಸಂಬಂಧಗಳು ಬಿರುಕು ಬಿಡುತ್ತದೆ ಎಂದು ಕಂಡು ಕೊಂಡಿದ್ದಾರೆ. 50 ವರ್ಷಗಳ ಕಾಲ ದಂಪತಿಗಳನ್ನು ಅಧ್ಯಯನ ಮಾಡಿದ ಸಂಶೋಧಕರು ಸಂಬಂಧದಲ್ಲಿ ಬಿರುಕು, ಪದೇ ಪದೇ ಭಿನ್ನಾಭಿಪ್ರಾಯ ಬರಲು ಕಾರಣವೆನೆಂದು ಕಂಡುಹಿಡಿದ್ದಾರೆ. ಅವುಗಳು ಈ ಕೆಳಗಿನಂತಿವೆ:

ತಿರಸ್ಕಾರ:

ನಿಮ್ಮ ಸಂಗಾತಿಯನ್ನು ಸದಾ ಗೌರವದಿಂದ ಕಾಣುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ನಿಮ್ಮಿಬ್ಬರ ನಡುವೆ ತಿರಸ್ಕಾರ ಭಾವನೆ ಹೆಚ್ಚಾಗುತ್ತಾ ಹೋದ ಹಾಗೆ ಸಂಬಂಧಗಳು ಬಿರುಕು ಬಿಡಲು ಕಾರಣವಾಗುತ್ತದೆ ಡಾ. ಗಾಟ್ಮನ್ ಹೇಳುತ್ತಾರೆ.

ತಿರಸ್ಕಾರವು ಸಂಬಂಧಗಳನ್ನು ಹೇಗೆ ನಾಶಪಡಿಸುತ್ತದೆ?

ನೀವು ನಿಮ್ಮ ಸಂಗಾತಿ ಯಾವುದೇ ಆಕ್ಷಾಂಶೆಗಳನ್ನು ನೆರವೇರಿಸುವಲ್ಲಿ ಸದಾ ಬೆಂಬಲವಾಗಿ ಇರಬೇಕು. ಯಾಕೆಂದರೆ ಅವರಿಗೆ ನಿಮ್ಮ ಬೆಂಬಲವು ಗುರಿಯೆಡೆಗೆ ಮುನ್ನುಗ್ಗಲು ಸದಾ ಬೆನ್ನೆಲುಬಾಗಿರುತ್ತದೆ. ನೀವು ಪ್ರತಿಬಾರೀ ತಿರಸ್ಕಾರ ತೋರಿದರೆ ನಿಮ್ಮ ಸಂಬಂಧದಲ್ಲಿ ನಿಮ್ಮ ಸಂಗಾತಿ ದೂರವಾಗಲು ಬಯಸುತ್ತಾರೆ. ತಮ್ಮ ಸಂವಹನದಲ್ಲಿ ತಿರಸ್ಕಾರವನ್ನು ಬಳಸುವ ವ್ಯಕ್ತಿಗಳು ಕ್ಯಾನ್ಸರ್, ಹೃದ್ರೋಗ, ಮತ್ತು ಶೀತಗಳು ಅಥವಾ ಜ್ವರದಂತಹ ಇತರ ಕಾಯಿಲೆಗಳನ್ನು ಒಳಗೊಂಡಂತೆ ಹೆಚ್ಚಿನ ಪ್ರಮಾಣದ ರೋಗಗಳನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ತೋರಿಸಿದೆ .

ಇದನ್ನು ಓದಿ: ಸಂಗಾತಿಯು ನಿಮ್ಮ ಜೀವನದ ಮೇಲೆ ಪ್ರಭಾವ ಬೀರುವ ಕೆಲವೊಂದು ಅಂಶಗಳು ಯಾವುವು?

ನಿಮ್ಮ ಸಂಬಂಧದಲ್ಲಿ ತಿರಸ್ಕಾರವನ್ನು ತೊಡೆದುಹಾಕುವುದು ಹೇಗೆ?

ನಕಾರಾತ್ಮಕ ಭಾವನೆಗಳನ್ನು ಗುರುತಿಸಿ :
ನಿಮ್ಮಿಬರ ನಡುವಿನ ಮಾತುಕತೆ ಸರಿಯಾಗಿ ಇಲ್ಲದಿದ್ದಾಗ ಅಲ್ಲಿ ಬಿನ್ನಾಭಿಪ್ರಾಯಗಳು, ನಕಾರಾತ್ಮಕ ಭಾವನೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ನಿಮಗೆ ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ಮುಕ್ತವಾಗಿ ಮಾತನಾಡಿ ಬಗೆಹರಿಸಿಕೊಳ್ಳಿ. ಮುಕ್ತ ಮಾತುಕತೆಯಿಂದ ನಿಮ್ಮ ಸಂಗಾತಿಗೆ ಸಮಸ್ಯೆ ಏನು ಎಂಬುದನ್ನು ತಿಳಿದುಕೊಳ್ಳು ಸಾಧ್ಯವಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 2:17 pm, Tue, 7 March 23

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us