AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ಮ್ಯಾರೇಜ್ ಲೈಫ್ ಖುಷಿಯಾಗಿರಬೇಕಾದ್ರೆ ಸಂಗಾತಿಯ ಮುಂದೆ ಈ ರೀತಿ ವರ್ತಿಸಲೇಬೇಡಿ

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪತಿ ಪತ್ನಿಯ ನಡುವಿನ ಸಣ್ಣ ಪುಟ್ಟ ಜಗಳ ಗಳು ಡೈವೋರ್ಸ್ ಹಂತಕ್ಕೆ ತಲುಪಿದೆ. ಇಲ್ಲಿ ಪ್ರೀತಿ, ಕಾಳಜಿ, ವಿಶ್ವಾಸ, ಗೌರವ ಎನ್ನುವುದು ಬಹಳ ಮುಖ್ಯ ಎನ್ನುವುದನ್ನು ಮರೆತ್ತಿದ್ದಾರೆ. ಹೌದು ಈ ಸಂಬಂಧದಲ್ಲಿ ವಿಚಾರದಲ್ಲಿ ವ್ಯಕ್ತಿಗಳಿಬ್ಬರೂ ಮಾಡುವ ಸಣ್ಣ ಪುಟ್ಟ ತಪ್ಪುಗಳು ದೊಡ್ಡದಾಗಿ ಬಿಡುತ್ತದೆ. ಸಂಬಂಧದಲ್ಲಿ ಎಷ್ಟು ಜಾಗರೂಕರಾಗಿ ವರ್ತಿಸಿದರೂ ಸಾಲದು. ಸಂಗಾತಿಯ ಜೊತೆಗೆ ಈ ರೀತಿಯಾಗಿ ಅಪ್ಪಿತಪ್ಪಿಯೂ ವರ್ತಿಸಲೇ ಬೇಡಿ, ಇದರಿಂದ ಸಂಬಂಧವೇ ಮುರಿದು ಬೀಳಬಹುದು.

Relationship Tips : ಮ್ಯಾರೇಜ್ ಲೈಫ್ ಖುಷಿಯಾಗಿರಬೇಕಾದ್ರೆ ಸಂಗಾತಿಯ ಮುಂದೆ ಈ ರೀತಿ ವರ್ತಿಸಲೇಬೇಡಿ
ಸಾಯಿನಂದಾ
| Edited By: |

Updated on: Jun 10, 2024 | 5:29 PM

Share

ಯಾವ ಸಂಸಾರದಲ್ಲಿ ಜಗಳಗಳು ಇರಲ್ಲ ಹೇಳಿ, ಗಲಾಟೆ, ಮುನಿಸು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸಿ ಸಂಬಂಧವನ್ನು ಗಟ್ಟಿಯಾಗಿಸುತ್ತವೆ. ಆದರೆ ಕೆಲವೊಮ್ಮೆ ವ್ಯಕ್ತಿಯ ಸಣ್ಣ ಸಣ್ಣ ತಪ್ಪುಗಳು, ಎಡವಟ್ಟುಗಳು ಸಂಬಂಧವನ್ನು ದೂರವಾಗಿಸುತ್ತದೆ. ಎಷ್ಟೋ ಈ ಬಾರಿ ಈ ಬಗ್ಗೆ ಯೋಚಿಸುವುದೇ ಇಲ್ಲ. ಕೆಲವರಿಗೆ ಸಂಗಾತಿಯ ಕೆಲ ವರ್ತನೆಗಳು ಉಸಿರುಗಟ್ಟಿಸಬಹುದು. ಒಮ್ಮೆ ಈ ಭಾವನೆಯೂ ಮನಸ್ಸಿನಲ್ಲಿ ಬಂದರೆ ಸಾಕು ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ. ಆದರೆ ಇದನ್ನರಿತು ತಪ್ಪುಗಳನ್ನು ತಿದ್ದಿ ನಡೆದುಕೊಂಡರೆ ಗಂಡ ಹೆಂಡಿರ ನಡುವೆ ಬಾಂಧವ್ಯವು ಗಟ್ಟಿಯಾಗಿರಲು ಸಾಧ್ಯ.

  • ಸಂಗಾತಿಯನ್ನು ಭಾವನೆಗಳಿಂದ ಅಥವಾ ಮಾತಿನಿಂದ ಟ್ಟಿಹಾಕುವುದು ಒಳ್ಳೆಯದಲ್ಲ. ನಿಮ್ಮ ಪತ್ನಿ ಅಥವಾ ಪತಿಯು ಏನೇ ಮಾಡಲು ಹೊರಟರೂ ತಡೆದು ನಿಲ್ಲಿಸುವುದು. ಇದು ನಿಮ್ಮ ಜೊತೆಗೆ ಬದುಕುವ ವ್ಯಕ್ತಿಗೆ ಹಿಂಸೆ ಅನಿಸಬಹುದು, ಇದನ್ನೇ ಕಾರಣವಾಗಿಟ್ಟುಕೊಂಡು ದಾಂಪತ್ಯದಿಂದ ಹೊರ ಬರುವ ಸಾಧ್ಯತೆಯೇ ಹೆಚ್ಚು.
  • ಸಂಬಂಧದಲ್ಲಿ ಯಾವತ್ತಿಗೂ ಹಳೆಯ ಪ್ರೇಮಿಯ ಬಗ್ಗೆ ಅಥವಾ ಹಳೆಯ ಸಂಬಂಧದ ಬಗ್ಗೆ ಮಾತನಾಡಲೇಬೇಡಿ. ಇಬ್ಬರೂ ಒಂದೇ ಸೂರಿನಲ್ಲಿ ಬದುಕುತ್ತಿರುವ ಕಾರಣ, ಹಳೆಯ ಸಂಬಂಧಗಳನ್ನು ಕೆದಕುವುದು ಒಳ್ಳೆಯದಲ್ಲ. ಇದರಿಂದ ಗಂಡ ಹೆಂಡಿರ ಉತ್ತಮ ಸಂಬಂಧವು ಹಾಳಾಗುತ್ತದೆ.
  • ಅನಗತ್ಯ ವಿಚಾರಗಳನ್ನು ಪದೇ ಪದೇ ಮಾತನಾಡುವುದು ನಿಮ್ಮ ಸಂಗಾತಿಗೆ ಇಷ್ಟವಾಗದೇ ಇರಬಹುದು. ಈ ವಿಚಾರ ಗೊತ್ತಿದ್ದರೂ ಆ ವಿಷಯಗಳನ್ನೇ ಇಬ್ಬರೇ ಇರುವಾಗ ಪ್ರಸ್ತಾಪಿಸುವುದು ಖಂಡಿತವು ಒಳ್ಳೆಯದಲ್ಲ. ಇದರಿಂದ ಇಬ್ಬರೂ ಮೂಡ್ ಹಾಳಾಗುತ್ತದೆ.
  • ಸಂಗಾತಿಯನ್ನು ಅನುಮಾನ ದೃಷ್ಟಿಯಿಂದ ನೋಡುವುದು ಕೂಡ ಸಂಬಂಧವು ಹಾಳಾಗುವುದಕ್ಕೆ ಮುಖ್ಯ ಕಾರಣ. ಪತಿಯನ್ನು ಪತ್ನಿಯೂ, ಪತ್ನಿಯನ್ನು ಪತಿಯು ಪ್ರೀತಿಸುತ್ತಿರುವುದು ತಿಳಿದರೂ ಕೂಡ ಅವರ ಮೇಲೆ ಸಂಶಯ ಪಡುವುದು ಸರಿಯಲ್ಲ. ಸಂಗಾತಿಯ ಮೊಬೈಲ್ ಚೆಕ್ ಮಾಡುವುದು, ಅವರ ನಡೆ ನುಡಿಯ ಬಗ್ಗೆ ಪ್ರಶ್ನಿಸುವುದು. ಇದರಿಂದ ಇಬ್ಬರ ಮನಸ್ಥಿತಿಯನ್ನು ಹಾಳು ಮಾಡುತ್ತದೆ.
  • ಸಂಗಾತಿಯ ಮೇಲೆ ಕೋಪ ಮಾಡಿಕೊಳ್ಳುವುದು, ಮುನಿಸಿಕೊಳ್ಳುವುದು ಸಹಜ. ಆದರೆ ಸಿಟ್ಟಿನಿಂದ ಬಾಯಿಗೆ ಬಂದಂತೆ ಬೈಯಬೇಡಿ. ಈ ವೇಳೆ ಮಾತು ಎಲ್ಲೇ ಮೀರಿ ಹೋಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಸಂಗಾತಿಯ ಮೇಲೆ ಕೋಪ ಬಂದಾಗ ಆದಷ್ಟು ಶಾಂತರೀತಿಯಲ್ಲಿಯೇ ವರ್ತಿಸಿ, ಇಲ್ಲವಾದರೆ ಮೌನವಹಿಸಿ ಬಿಡಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!