AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಬೆಂಗಳೂರಲ್ಲಿ ಗಂಟೆಗಳ ಆಧಾರದಲ್ಲಿ ಬಾಡಿಗೆಗೆ ಸಿಗ್ತಾರಂತೆ ಬಾಯ್​ಫ್ರೆಂಡ್ಸ್​

ಪ್ರೀತಿ ಕೈಕೊಟ್ಟಿದೆ, ಪ್ರೇಮಿ ದೂರಾಗಿದ್ದಾನೆ, ಆತ ನಿಜವಾಗಿಯೂ ನಿಮ್ಮನ್ನು ಪ್ರೀತಿಸಿಯೇ ಇರಲಿಲ್ಲ ಎನ್ನುವ ಫೀಲಿಂಗ್​ನಲ್ಲಿರಬೇಡಿ. ಇವೆಲ್ಲವನ್ನು ಹಿಮ್ಮೆಟ್ಟಿ ಒಂದು ಹೆಜ್ಜೆ ಮುಂದಿಡಿ.

Relationship: ಬೆಂಗಳೂರಲ್ಲಿ ಗಂಟೆಗಳ ಆಧಾರದಲ್ಲಿ ಬಾಡಿಗೆಗೆ ಸಿಗ್ತಾರಂತೆ ಬಾಯ್​ಫ್ರೆಂಡ್ಸ್​
Friend
TV9 Web
| Edited By: |

Updated on: Sep 26, 2022 | 2:32 PM

Share

ಪ್ರೀತಿ ಕೈಕೊಟ್ಟಿದೆ, ಪ್ರೇಮಿ ದೂರಾಗಿದ್ದಾನೆ, ಆತ ನಿಜವಾಗಿಯೂ ಪ್ರೀತಿಸಿಯೇ ಇರಲಿಲ್ಲ ಎನ್ನುವ ಫೀಲಿಂಗ್​ನಲ್ಲಿರಬೇಡಿ. ಇವೆಲ್ಲವನ್ನು ಹಿಮ್ಮೆಟ್ಟಿ ಒಂದು ಹೆಜ್ಜೆ ಮುಂದಿಡಿ. ಜೀವನವೆಂದ ಮೇಲೆ ಪ್ರೀತಿ, ಅಟ್ರ್ಯಾಕ್ಷನ್, ಮೋಸ ಇವೆಲ್ಲವನ್ನೂ ಇದ್ದೇ ಇರುತ್ತದೆ. ಅದಕ್ಕೂ ಮೀರಿದ್ದು ಕೂಡ ಜೀವನದಲ್ಲಿದೆ ಎಂಬುದನ್ನು ಮರೆಯಬೇಡಿ. ಅದೆಲ್ಲಾ ಹಾಗಿರಲಿ, ಈಗ ವಿಷಯಕ್ಕೆ ಬರೋಣ, ಬೆಂಗಳೂರಿನ ಟೆಕ್ಕಿಗಳು ವೆಬ್​ಸೈಟ್​ ಒಂದನ್ನು ಸಿದ್ಧಪಡಿಸಿದ್ದು, ಗಂಟೆಗಳ ಆಧಾರದಲ್ಲಿ ಬಾಯ್​ಫ್ರೆಂಡ್​ನ್ನು ಬಾಡಿಗೆ ನೀಡುತ್ತಂತೆ.

ಹೌದು, ಅನೇಕರು ಜೀವನದಲ್ಲಿ ಒಂಟಿಯಾಗಿರುತ್ತಾರೆ, ಅವರು ತಮಗಾಗಿ ಗೆಳೆಯ, ಗೆಳತಿಯರನ್ನು ಹುಡುಕುತ್ತಾರೆ. ಅವರು ಗೆಳೆಯ, ಗೆಳತಿಯರನ್ನು ಬಾಡಿಗೆಗೆ ಪಡೆಯಬಹುದು.

ಏಕಾಂಗಿಯಾಗಿರುವವರು, ಜೀವನದಲ್ಲಿ ತುಂಬಾ ನೊಂದವರು, ಪ್ರೀತಿಯ ವಂಚನೆಗೊಳಗಾದವರಿಗೆ ಈ ಪೋರ್ಟಲ್ ಸಹಾಯಕವಾಗಿದೆ. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತದೆ, ಏಕೆಂದರೆ ಈ ನಗರವು ಇತ್ತೀಚಿನ ಸ್ಟಾರ್ಟ್-ಅಪ್‌ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಟೆಕ್ಕಿಗಳು ToYBoY ಹೆಸರಿನ ಪೋರ್ಟಲ್ ಅನ್ನು ಪ್ರಾರಂಭಿಸಿದ್ದಾರೆ, ಇದು ನಗರದ ಜನರಿಗೆ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

tribuneindia.com ನ ಸುದ್ದಿಯ ಪ್ರಕಾರ, ಬಾಡಿಗೆಗೆ ಬಾಯ್‌ಫ್ರೆಂಡ್ ಪಡೆಯುವ ಮೂಲಕ ತಮ್ಮ ಒಂಟಿತನವನ್ನು ಹೋಗಲಾಡಿಸಬಹುದು. ನೀವು ಗಂಟೆಗೆ ಹಣ ಪಾವತಿಸಿ ಸೇವೆಯಲ್ಲಿ ಗೆಳೆಯನನ್ನು ನೇಮಿಸಿಕೊಳ್ಳಬಹುದು. ಅದೇ ರೀತಿ ಮುಂಬೈ ಮೂಲದ ಯುವಕ ಕೌಶಲ್ ಪ್ರಕಾಶ್ ‘ RABF ಎಂಬ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಖಿನ್ನತೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಜನರಿಗೆ ಸಹಾಯ ಮಾಡಲು ಅಪ್ಲಿಕೇಶನ್ ಆರಂಭಿಸಲಾಗಿದೆ.

ಈ ಅಪ್ಲಿಕೇಶನ್‌ಗಳು ಇತರ ಡೇಟಿಂಗ್ ಅಪ್ಲಿಕೇಶನ್‌ಗಳಿಗಿಂತ ಭಿನ್ನವಾಗಿವೆ. ನೀವು ಗೆಳೆಯನನ್ನು ನೇಮಿಸಿಕೊಳ್ಳಲು ಬಯಸಿದರೆ, ನಂತರ ಹೋಗಿ ಖಾತೆಯನ್ನು ರಚಿಸಿ ಮತ್ತು ನಿಮ್ಮ ಆಯ್ಕೆಯ ವ್ಯಕ್ತಿಯನ್ನು ಆರಿಸಿ. ನಂತರ, ನೀವು ನಿಮ್ಮ ಸ್ಥಳವನ್ನು ಸೇರಿಸಬಹುದು ಮತ್ತು ನಿಮ್ಮ ಆದ್ಯತೆಯ ವ್ಯಕ್ತಿಯನ್ನು ಭೇಟಿ ಮಾಡಬಹುದು. ಈ ಅಪ್ಲಿಕೇಷನ್ ಪ್ಲೇಸ್ಟೋರ್​ನಲ್ಲಿ ಲಭ್ಯವಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?