AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚ ಪದಾರ್ಥಗಳಿಂದ ತಯಾರಿಸಿದ ಈ ರಸ ಕೆಟ್ಟ ಕೊಲೆಸ್ಟ್ರಾಲ್​​ಗೆ ಪರಿಹಾರ

ಕೆಟ್ಟ ಕೊಲೆಸ್ಟ್ರಾಲ್​​​​​​ ತಡೆಯಲು ಆಹಾರಗಳ ಮೇಲೆ ನಿಯಂತ್ರಣವನ್ನು ಮಾಡುತ್ತೇವೆ. ಆದರೆ ಆಹಾರವನ್ನು ನಿಯಂತ್ರಣ ಮಾಡುವ ಬದಲು ಇಲ್ಲಿ ನೀಡಿರುವ ಪರಿಹಾರಗಳನ್ನು ಮಾಡಿದ್ರೆ ಹೇಗೆ? ಕೆಟ್ಟ ಕೊಲೆಸ್ಟ್ರಾಲ್​​​​​​ ನಿಯಂತ್ರಣಕ್ಕೆ ಸಿಂಪಲ್​​ ಸಲಹೆಗಳು ಇಲ್ಲಿದೆ ನೋಡಿ. ಈ ಬಗ್ಗೆ ಆಹಾರ ತಜ್ಞೆ ಕಿರಣ್ ಕುಕ್ರೇಜಾ ಅವರು ತಮ್ಮ ತಂದೆಯ ಮೇಲೆ ಪ್ರಯೋಗ ಮಾಡಿದ ಮನೆಮದ್ದನ್ನು ಇಲ್ಲಿ ತಿಳಿಸಿದ್ದಾರೆ ನೋಡಿ.

ಪಂಚ ಪದಾರ್ಥಗಳಿಂದ ತಯಾರಿಸಿದ ಈ ರಸ ಕೆಟ್ಟ ಕೊಲೆಸ್ಟ್ರಾಲ್​​ಗೆ ಪರಿಹಾರ
ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Jul 04, 2025 | 6:15 PM

Share

ಕೊಲೆಸ್ಟ್ರಾಲ್…ಕೊಲೆಸ್ಟ್ರಾಲ್…ಕೊಲೆಸ್ಟ್ರಾಲ್ (Cholesterol) ಎಲ್ಲಿ ಕೇಳಿದ್ರು ಕೊಲೆಸ್ಟ್ರಾಲ್ ಎಂಬ ಪದ ಸಾಮಾನ್ಯವಾಗಿದೆ, ಶೇ. 60ರಷ್ಟು ಜನ ಈ ಕೊಲೆಸ್ಟ್ರಾಲ್​​ನಿಂದ ಬಳಲುತ್ತಿದ್ದಾರೆ. ಆದರೆ ಆದರೆ ಇದರಿಂದ ಪರಿಹಾರ ಕಂಡುಕೊಳ್ಳಲು ಒಂದು ಮಾರ್ಗ ಇದೆ. ಅದೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ ನೋಡಿ. ಕೊಲೆಸ್ಟ್ರಾಲ್ ಬಂದರೆ ಸಾಕು ಎಲ್ಲ ಆಹಾರದ ಮೇಲೆ ನಿಯಂತ್ರಣ ಮಾಡುತ್ತೇವೆ, ಈ ಆಹಾರಗಳನ್ನು ನಿಯಂತ್ರಣ ಮಾಡುವ ಬದಲು, ಪರಿಹಾರವನ್ನು ಹುಡುಕಬಹುದಲ್ಲ. ಕೊಲೆಸ್ಟ್ರಾಲ್​​​​​​ ಪರಿಹಾರ ಮಾಡುವ ಬಗ್ಗೆ ಆಹಾರ ತಜ್ಞೆ ಕಿರಣ್ ಕುಕ್ರೇಜಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಹಸಿರು ರಸದಿಂದ ಕೆಟ್ಟ ಕೊಲೆಸ್ಟ್ರಾಲ್ ತಡೆಯಬಹುದು ಎಂದು ಹೇಳಿದ್ದಾರೆ, ಸ್ವತಃ ಈ ಬಗ್ಗೆ ತಮ್ಮ ತಂದೆಯ ಮೇಲೆಯೇ ಪ್ರಯೋಗ ಮಾಡಿದ್ದಾರೆ. ನೀವು ಮನೆಯಲ್ಲಿ ಈ ಹಸಿರು ರಸವನ್ನು ತಯಾರಿಸಬಹುದು ಮತ್ತು ಅದನ್ನು ಕುಡಿಯಬಹುದು ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣ ಮಾಡಬಹುದು ಎಂದು ಹೇಳಿದ್ದಾರೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಹಸಿರು ರಸ:

ಈ ಹಸಿರು ರಸವನ್ನು ತಯಾರಿಸಲು, ಅರ್ಧ ಸೋರೆಕಾಯಿ, ಒಂದು ಸೌತೆಕಾಯಿ, ಕೊತ್ತಂಬರಿ ಎಲೆಗಳು, ಪುದೀನ ಎಲೆಗಳು, ಅರ್ಧ ನಿಂಬೆ ರಸ ಮತ್ತು ಅರ್ಧ ಗ್ಲಾಸ್ ನೀರು ಬೇಕಾಗುತ್ತದೆ. ಎಲ್ಲವನ್ನೂ ಒಟ್ಟಿಗೆ ಬೆರೆಸಿ ಜ್ಯೂಸ್​​ ಮಾಡಿ. ಈ ರಸವನ್ನು ಕುಡಿಯುವುದರಿಂದ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ
Image
ಶನಿ ದೇವರಿಂದ ಕಲಿಯಲೇಬೇಕಾದ ಜೀವನ ಪಾಠಗಳು
Image
ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ
Image
ಪ್ರತಿದಿನ 2 ಕಪ್ ಕಾಫಿ ಕುಡಿಯಿರಿ, ನಿಮ್ಮ ವಯಸ್ಸು ಕಾಣುವುದೇ ಇಲ್ಲ: ಸಂಶೋಧನೆ
Image
ಶಾಪಿಂಗ್‌ ಮಾಡುವಾಗ ಹಣ ಉಳಿಸಲು ಈ ಸಲಹೆ ಪಾಲಿಸಿ

ಇದನ್ನೂ ಓದಿ: ಅಡುಗೆ ಮನೆಯೇ ಇಲ್ಲದ ಭಾರತದ ವಿಶಿಷ್ಟ ಹಳ್ಳಿ ಇದು, ಊಟ ತಿಂಡಿಗಾಗಿ ಏನ್ ಮಾಡ್ತಾರೆ ಇಲ್ಲಿನ ಜನ ಗೊತ್ತಾ?

ಇಲ್ಲಿದೆ ನೋಡಿ ವಿಡಿಯೋ:

ಕೊಲೆಸ್ಟ್ರಾಲ್ ಕಡಿಮೆ ಮಾಡುವ ರಸಗಳು:

  • ಶುಂಠಿ ಮತ್ತು ನಿಂಬೆ ರಸದಿಂದ ತಯಾರಿಸಿದ ಗಿಡಮೂಲಿಕೆ ಚಹಾವು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ಚಹಾ ಮಾಡಿ ಕುಡಿಯಬಹುದು. ಇದನ್ನು ಮಾಡುವ ವಿಧಾನ ತುಂಬಾ ಸುಲಭ, ಶುಂಠಿಯ ತುಂಡುಗಳನ್ನು ಕತ್ತರಿಸಿ ನೀರಿನಲ್ಲಿ ಕುದಿಸಿ. ಅದನ್ನು ಫಿಲ್ಟರ್ ಮಾಡಿ ಒಂದು ಕಪ್‌ಗೆ ಸುರಿಯಿರಿ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಈ ಚಹಾವನ್ನು ಕುಡಿಯಿರಿ. ಈ ಗಿಡಮೂಲಿಕೆ ಚಹಾವು ಉರಿಯೂತದ ಗುಣಗಳಿಂದ ಸಮೃದ್ಧವಾಗಿದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಜೇನುತುಪ್ಪ ಮತ್ತು ಬೆಳ್ಳುಳ್ಳಿ ನೀರು ಕೂಡ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯನ್ನು ಪುಡಿಮಾಡಿ ಮತ್ತು ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಟೀ  ಚಮಚ ಜೇನುತುಪ್ಪವನ್ನು ಸೇರಿಸಿ. ಈ ನೀರನ್ನು ಬೆಚ್ಚಗಿನ ನೀರಿನಲ್ಲಿ ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
  • ಅರಿಶಿನ ಹಾಲನ್ನು ಸಹ ಸೇವಿಸಬಹುದು. ಬೆಳಿಗ್ಗೆ ಅಥವಾ ಸಂಜೆ ಅರಿಶಿನ ಹಾಲನ್ನು ಕುಡಿಯುವುದರಿಂದ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದು ಪ್ರಯೋಜನಕಾರಿ.
  • ಆಮ್ಲಾ ರಸವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡುತ್ತದೆ. ಇದನ್ನು ಕುಡಿಯುವುದರಿಂದ ದೇಹವು ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳನ್ನು ಪಡೆಯುತ್ತದೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ