Turbo Ventilators: ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಈ ರೀತಿಯ ತಿರುಗುವ ಮಷೀನ್ ಗಳನ್ನು ಯಾಕೆ ಇಟ್ಟಿರುತ್ತಾರೆ ಗೊತ್ತಾ?

ನೀವೂ ಕೂಡ ನಿಮ್ಮ ಸುತ್ತಲಿನ ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಸಣ್ಣ ಪಾತ್ರೆಯಂತಹ ಆಕಾರವನ್ನು ನೋಡಿರಬಹುದು. ಸೂರ್ಯನ ಬೆಳಕಿನಲ್ಲಿ ಇದು ತುಂಬಾ ಪ್ರಕಾಶಮಾನವಾಗಿ ಕಾಣುತ್ತದೆ. ಆದರೆ ಈ ಮಷೀನ್​​ ಯಾಕೆ ಬಳಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Turbo Ventilators: ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಈ ರೀತಿಯ ತಿರುಗುವ ಮಷೀನ್ ಗಳನ್ನು ಯಾಕೆ ಇಟ್ಟಿರುತ್ತಾರೆ ಗೊತ್ತಾ?
Turbo VentilatorsImage Credit source: IndiaMART
Follow us
|

Updated on: Nov 21, 2023 | 12:10 PM

ಸಾಮಾನ್ಯವಾಗಿ ನಾವೆಲ್ಲರೂ ನಮ್ಮ ಸುತ್ತಲೂ ಇಂತಹ ಅನೇಕ ವಿಷಯಗಳನ್ನು ನೋಡುತ್ತೇವೆ, ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತೇವೆ. ಅಂತಹ ವಿಷಯಗಳಲ್ಲಿ, ಫ್ಯಾಕ್ಟರಿಗಳ ಮೇಲೆ ಸ್ಟೀಲ್​​​​ ಪಾತ್ರೆಯಂತೆ ಕಾಣುವ ತಿರುಗುವ ಮಷೀನ್ ಕೂಡ ಒಂದು . ಹೌದು, ನೀವೂ ಕೂಡ ನಿಮ್ಮ ಸುತ್ತಲಿನ ಕಾರ್ಖಾನೆಗಳ ಮೇಲ್ಛಾವಣಿಯ ಮೇಲೆ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಸಣ್ಣ ಪಾತ್ರೆಯಂತಹ ಆಕಾರವನ್ನು ನೋಡಿರಬಹುದು. ಸೂರ್ಯನ ಬೆಳಕಿನಲ್ಲಿ ಇದು ತುಂಬಾ ಪ್ರಕಾಶಮಾನವಾಗಿ ಕಾಣುತ್ತದೆ. ಆದರೆ ಈ ಮಷೀನ್​​ ಯಾಕೆ ಬಳಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಈ ಮಷೀನ್ ಗಳನ್ನು ವಿಂಡ್ ಟರ್ಬೋ ವೆಂಟಿಲೇಟರ್ ಎಂದು ಕರೆಯುತ್ತಾರೆ. ಇದಲ್ಲದೇ ಏರ್ ವೆಂಟಿಲೇಟರ್, ಟರ್ಬೈನ್ ವೆಂಟಿಲೇಟರ್, ರೂಫ್ ಎಕ್ಸ್‌ಟ್ರಾಕ್ಟರ್ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸಾಮಾನ್ಯವಾಗಿ ದೊಡ್ಡ ಕಾರ್ಖಾನೆಗಳು ಹಾಗೂ ಅನೇಕ ದೊಡ್ಡ ರೈಲು ನಿಲ್ದಾಣಗಳ ಮೇಲ್ಛಾವಣಿಗಳ ಮೇಲೆ ತಿರುಗುವುದನ್ನು ಸಹ ಕಾಣಬಹುದು.

ಇದನ್ನೂ ಓದಿ: Most Expensive Fruits: ವಿಶ್ವದ ಅತ್ಯಂತ ದುಬಾರಿ ಹಣ್ಣುಗಳು ಇಲ್ಲಿದೆ

ಈ ತಿರುಗುವ ಮಷೀನ್ ಕಾರ್ಯವೇನು?

ಮೇಲ್ಛಾವಣಿಯಲ್ಲಿ ಅಳವಡಿಸಲಾಗಿರುವ ಟರ್ಬೊ ವೆಂಟಿಲೇಟರ್‌ಗಳ ಫ್ಯಾನ್‌ಗಳು ಮಧ್ಯಮ ವೇಗದಲ್ಲಿ ಚಲಿಸುತ್ತವೆ. ಕಾರ್ಖಾನೆಗಳು ಅಥವಾ ಆವರಣದೊಳಗೆ ಮಷೀನ್ ಗಳು ಹೆಚ್ಚು ಕೆಲಸ ಮಾಡುವುದರಿಂದ ಶಾಖ ಉತ್ಪತ್ತಿಯಾಗುತ್ತದೆ ಇದರಿಂದ ಕೆಲಸಗಾರರಿಗೆ ಬಿಸಿ ಎನಿಸುತ್ತದೆ ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಿಸಿ ಶಾಖವನ್ನು ಹೊರ ಹಾಕಲು ವಿಂಡ್ ಟರ್ಬೋ ವೆಂಟಿಲೇಟರ್ ಬಳಸಲಾಗುತ್ತದೆ. ಇದು ಬಿಸಿಗಾಳಿಯನ್ನು ಹೊರಹಾಕಿದಾಗ, ಕಿಟಕಿ ಮತ್ತು ಬಾಗಿಲುಗಳಿಂದ ಬರುವ ತಾಜಾ ಮತ್ತು ನೈಸರ್ಗಿಕ ಗಾಳಿಯು ಕಾರ್ಖಾನೆಗಳಲ್ಲಿ ದೀರ್ಘಕಾಲ ಉಳಿಯುತ್ತದೆ, ಇದು ಉದ್ಯೋಗಿಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಟರ್ಬೊ ವೆಂಟಿಲೇಟರ್ ಬಿಸಿ ಗಾಳಿಯನ್ನು ಹೊರಹಾಕುವುದು ಮಾತ್ರವಲ್ಲದೆ ಕಾರ್ಖಾನೆಗಳಿಂದ ಕೆಟ್ಟ ವಾಸನೆಯನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲ ಹವಾಮಾನ ಬದಲಾದಾಗ ಒಳಗಿನ ತೇವಾಂಶವನ್ನೂ ಹೊರಹಾಕುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​