AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Halloween 2023: ಹ್ಯಾಲೋವೀನ್ ಮತ್ತು ಕುಂಬಳಕಾಯಿಯ ನಡುವಿನ ಸಂಬಂಧವೇನು? ಈ ಹಬ್ಬದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ 

ಹ್ಯಾಲೋವೀನ್ ಹಬ್ಬವನ್ನು ಹೆಚ್ಚಾಗಿ ಅಮೇರಿಕಾ, ಇಂಗ್ಲೇಂಡ್ ಮತ್ತು ಇತರೆ ಯುರೋಪಿಯನ್ ದೇಶಗಳಲ್ಲಿ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಚರಿಸಲು ಕಾರಣವೇನು, ಹಾಗೂ ಈ ಹಬ್ಬದಲ್ಲಿ ಕುಂಬಳಕಾಯಿಯ ಪ್ರಾಮುಖ್ಯತೆಯೇನು ಎಂಬುದನ್ನು ತಿಳಿಯೋಣ.

Halloween 2023: ಹ್ಯಾಲೋವೀನ್ ಮತ್ತು ಕುಂಬಳಕಾಯಿಯ ನಡುವಿನ ಸಂಬಂಧವೇನು? ಈ ಹಬ್ಬದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ 
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2023 | 5:02 PM

ಭಾರತೀಯರಾದ ನಾವು ಗಣೇಶ ಚತುರ್ಥಿ,  ಶ್ರೀಕೃಷ್ಣಜನ್ಮಾಷ್ಟಮಿ, ನವರಾತ್ರಿ  ಇತ್ಯಾದಿ ಪವಿತ್ರ ಹಬ್ಬಗಳನ್ನು ಬಹಳ ವಿಜೃಂಭನೆಯಿಂದ ಆಚರಿಸುವಂತೆ ಪಾಶ್ಚಿಮಾತ್ಯರು ಕ್ರಿಸ್ಮಸ್ ಮತ್ತು ಹ್ಯಾಲೋವೀನ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.  ಪಾಶ್ಚಿಮಾತ್ಯ ದೇಶಗಳಲ್ಲಿ ಜನರು ಹ್ಯಾಲೋವೀನ್ ಪಾರ್ಟಿಯನ್ನು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಜನರು  ದೆವ್ವ, ಪಿಶಾಚಿ, ಪ್ರೇತಾತ್ಮ, ಮಮ್ಮಿ, ರಾಕ್ಷಸರು ಮುಂತಾದ ಭಯಾನಕ ವೇಷಗಳನ್ನು ಧರಿಸಿ ಅದ್ದೂರಿ ಪಾರ್ಟಿಗಳನ್ನು ಆಯೋಜಿಸುತ್ತಾರೆ. ವಿದೇಶದಲ್ಲಿ ಆಚರಿಸಲಾಗುವ ಹ್ಯಾಲೋವೀನ್ ಪಾರ್ಟಿ ಈಗ ಕ್ರಮೇಣ ಭಾರತದಲ್ಲಿಯೂ ಜನಪ್ರಿಯತೆಯನ್ನು ಗಳಿಸುತ್ತಿದೆ.  ಹ್ಯಾಲೋವೀನ್ ಹಬ್ಬದ ಸಂಪ್ರದಾಯ ಎಲ್ಲಿಂದ ಪ್ರಾರಂಭವಾಯಿತು, ಹ್ಯಾಲೋವೀನ್ ಮತ್ತು ಕುಂಬಳಕಾಯಿಯ ನಡುವಿನ ಸಂಬಂಧವೇನು ಹೀಗೆ ಈ ಹಬ್ಬಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಹ್ಯಾಲೋವೀನ್ ಹಬ್ಬವನ್ನು ಯಾವಾಗ ಮತ್ತು ಏಕೆ ಆಚರಿಸಲಾಗುತ್ತದೆ?

ಹ್ಯಾಲೋವೀನ  ಕ್ರಿಶ್ಚಿಯನ್ ಹಬ್ಬವಾಗಿದ್ದು, , ಇದನ್ನು ಪ್ರತಿವರ್ಷ ಸೆಲ್ಟಿಕ್ ಕ್ಯಾಲೆಂಡರ್ನ ಕೊನೆಯ ದಿನ ಅಂದರೆ ಅಕ್ಟೋಬರ್ 31 ನೇ ತಾರೀಕಿನಂದು ಆಚರಿಸಲಾಗುತ್ತದೆ. ಇದರ ಮರುದಿನವನ್ನು ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುತ್ತದೆ. ಇತಿಹಾಸಕಾರರ ಪ್ರಕಾರ ಸುಮಾರು 2000 ಸಾವಿರ ವರ್ಷಗಳ ಹಿಂದೆ ಉತ್ತರ ಯುರೋಪಿನಾದ್ಯಂತ ಹ್ಯಾಲೋವೀನ್ ದಿನವನ್ನು ʼಆಲ್ ಸೆಟ್ಸ್ ಡೇʼ ಎಂದು ಮೊದಲಿಗೆ ಆಚರಿಸಲಾಯಿತು.

ಹ್ಯಾಲೋವೀನ್ ಹಬ್ಬದ ಆಚರಣೆ ಮೊದಲು ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳಲ್ಲಿ ಪ್ರಾರಂಭವಾಯಿತು ಎಂದೂ ಹೇಳಲಾಗುತ್ತದೆ.  ಹ್ಯಾಲೋವೀನ್ ದಿನದಂದು ಭೂತದ ವೇಷವನ್ನು ಧರಿಸುವುದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಕ್ರಿಶ್ಚಿಯನ್ ಸಮುದಾಯದಲ್ಲಿದೆ.  ಈ ಕಾರಣದಿಂದಲೇ ಜನರು ಈ ದಿನ ದೆವ್ವ, ಭೂತ, ಪ್ರೇತಾತ್ಮ ಹೀಗೆ ಭಯಾನಕ ವೇಷಗಳನ್ನು ಧರಿಸಿ ಹ್ಯಾಲೋವೀನ್ ಪಾರ್ಟಿ ಮಾಡುತ್ತಾರೆ. ಈ ಹಬ್ಬದಂದು ಮಕ್ಕಳು  ಅಕ್ಕಪಕ್ಕದ ಮನೆಗೆ ಹೋಗಿ ಚಾಕೋಲೇಟ್ ಹಾಗೂ ಇತರೆ ಸಿಹಿಗಳನ್ನು  ಹಂಚುತ್ತಾರೆ.

ಹ್ಯಾಲೋವೀನ್  ದಿನದಂದು ಸತ್ತವರ ಆತ್ಮ ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು  ಈ ಆತ್ಮಗಳು ಮನುಷ್ಯರಿಗೆ ತೊಂದರೆ ಕೊಡುತ್ತದೆ ಎಂಬ ನಂಬಿಕೆಯಿದೆ. ಈ ದುಷ್ಟಶಕ್ತಿಗಳನ್ನು ಎದುರಿಸಲು ಜನರು ಕೂಡಾ ದೆವ್ವ ಮತ್ತು ಪಿಶಾಚಿಗಳಂತೆ ಭಯಾನಕ ವೇಷಗಳನ್ನು ಧರಿಸುತ್ತಾರೆ. ಮತ್ತು ಎಲ್ಲೆಡೆ ಕುಂಬಳಕಾಯಿಂದ ಪ್ರೇತದ ಮುಖವನ್ನು ರಚಿಸಿ ಅದರೊಳಗೆ ಮೇಣದ ಬತ್ತಿಯನ್ನು ಬೆಳಗಿಸಿ ಇಡುತ್ತಾರೆ.  ಮಾತ್ರವಲ್ಲದೆ ಆ ಆತ್ಮಗಳನ್ನು ಓಡಿಸಲು ಎಲ್ಲೆಡೆ ಬೆಂಕಿಯನ್ನು ಹಾಕಲಾಗುತ್ತದೆ ಮತ್ತು ಆ ಬೆಂಕಿಗೆ ಸತ್ತ ಪ್ರಾಣಿಗಳ ಮೂಳೆಯನ್ನು  ಎಸೆಯಲಾಗುತ್ತದೆ.

ಇದನ್ನೂ ಓದಿ: ಮರಣವೇ ಮಹಾನವಮಿ: ದಾವಣಗೆರೆ ಯುವತಿಯರಿಂದ ಭರ್ಜರಿ ಹ್ಯಾಲೋವೀನ್‌ ಸಂಭ್ರಮಾಚರಣೆ!

ಹ್ಯಾಲೋವಿನ್ ಪಾರ್ಟಿಯಲ್ಲಿ ಕುಂಬಳಕಾಯಿಯ ಮಹತ್ವ:

ಹ್ಯಾಲೋವೀನ್ ಹಬ್ಬ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಕುಂಬಳಕಾಯಿ. ಈ ಹಬ್ಬದಂದು ಜನರು ಕುಂಬಳಕಾಯಿಯನ್ನು ಮನೆಗೆ ತೆಗೆದುಕೊಂಡು ಬಂದು ಅದರೊಳಗಿನ ತಿರುಳುಗಳನ್ನು ತೆಗೆದು ಸ್ವಚ್ಛಗೊಳಿಸಿ  ಅದರಲ್ಲಿ ಪ್ರೇತದ ಮುಖವನ್ನು ರಚಿಸುತ್ತಾರೆ. ಹೀಗೆ ಕುಂಬಳಕಾಯಿಯಲ್ಲಿ ಪ್ರೇತದ ಮುಖವನ್ನು ರಚಿಸಿ  ನಂತರ ಅದರೊಳಗೆ ಮೇಣಬತ್ತಿಯನ್ನು ಅಥವಾ ದೀಪಗಳನ್ನು ಬೆಳಗಿಸಿ ಇಡುತ್ತಾರೆ. ಕತ್ತಲೆಯಲ್ಲಿ ಇದು ಇನ್ನಷ್ಟು ಭಯಾನಕವಾಗಿ ಕಾಣುತ್ತದೆ. ಪಾಶ್ಚಿಮಾತ್ಯರ ನಂಬಿಕೆಯ ಪ್ರಕಾರ ಇದು ಪೂರ್ವಜರ ಸಂಕೇತವಾಗಿದೆ. ಹಾಗಾಗಿ ಈ ಹಬ್ಬದಲ್ಲಿ ಕುಂಬಳಕಾಯಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.  ಮತ್ತು ಹಬ್ಬ ಮುಗಿದ ಬಳಿಕ  ಈ ಕುಂಬಳಕಾಯಿಯನ್ನು ಹೂಳಲಾಗುತ್ತದೆ.

ಪಾಶ್ಚಿಮಾತ್ಯ ದೇಶದ  ರೈತರ ನಂಬಿಕೆಯ ಪ್ರಕಾರ ಈ ದಿನ ದುಷ್ಟ ಶಕ್ತಿಗಳು ಹೊಲಗಳಿಗೆ ಬಂದು ಬೆಳೆ ಹಾನಿ ಮಾಡುತ್ತವೆ, ಅದಕ್ಕಾಗಿಯೇ ಕುಂಬಳಕಾಯಿಯಲ್ಲಿ ದೆವ್ವದ ಆಕೃತಿಯನ್ನು ರಚಿಸಿ, ಅದರಲ್ಲಿ ಮೇಣದ ಬತ್ತಿಯನ್ನು ಬೆಳಗಿಸಿ ದುಷ್ಟಶಕ್ತಿಗಳನ್ನು ಓಡಿಸಲಾಗುತ್ತದೆ. ನಂತರ ಆ ಕುಂಬಳಕಾಯಿಯನ್ನು ಹೂಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ಯುವಮುಖಂಡರನ್ನು ಸೆಳೆಯುವಲ್ಲಿ ಈಶ್ವರಪ್ಪ ವಿಫಲರಾದಂತೆ ಕಾಣಿಸುತ್ತದೆ
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ರಾಜಶೇಖರ್
ನಮ್ಮಿಂದ ಆದ ಅಗೌರವವನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು; ರಾಜಶೇಖರ್
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
ಅರಬ್ಬೀ ಸಮುದ್ರದಲ್ಲಿ ಭಾರೀ ಅಲೆಗಳು: ಮಂಗಳೂರಿನ ಎಲ್ಲಾ ಬೀಚ್​ಗಳಿಗೆ ನಿರ್ಬಂಧ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
‘ಥಗ್ ಲೈಫ್’ ಬಿಡುಗಡೆ ಆದರೆ, ಪರೋಕ್ಷ ಎಚ್ಚರಿಕೆ ಕೊಟ್ಟ ಪ್ರವೀಣ್ ಶೆಟ್ಟಿ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ಗೋಲ್ಡ್ ಸುರೇಶ್ ವಿರುದ್ಧ ಲಕ್ಷ ಲಕ್ಷ ವಂಚನೆ ಮಾಡಿದ ಆರೋಪ
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ರಾಮೋಜಿ ಫಿಲ್ಮ್​ಸಿಟಿಯಲ್ಲಿ 16 ಮಹಾನಟಿಯರ ಭರ್ಜರಿ ಫೋಟೋಶೂಟ್
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಕಲೇಶಪುರ: ರಸ್ತೆಯಲ್ಲೇ ಕಾಡಾನೆಗಳ ಪರೇಡ್! ಬೆಚ್ಚಿಬಿದ್ದ ಗ್ರಾಮಸ್ಥರು
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
ಸಚಿವ ಶಿವರಾಜ್ ತಂಗಡಗಿ ಬೆಂಗಾವಲು ಪಡೆ ವಾಹನ ಅಪಘಾತ, ಇಬ್ಬರಿಗೆ ಗಾಯ
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
Daily Devotional: ಈ 5 ವಿಷಯಗಳನ್ನ ಯಾರಿಗೂ ಹೇಳಬಾರದು
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ
ಸೂರ್ಯ ಮಿಥುನ ರಾಶಿಯಲ್ಲಿ, ಇಂದು ಯಾರಿಗೆಲ್ಲಾ ಶುಭ ದಿನ ತಿಳಿಯಿರಿ