AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Role In Parenting: ತಂದೆ ಹಾಗೂ ಮಗುವಿನ ನಡುವೆ ಬಾಂಧವ್ಯ ಶುರುವಾಗುವುದು ಯಾವಾಗ?

ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು.

Father's Role In Parenting: ತಂದೆ ಹಾಗೂ ಮಗುವಿನ ನಡುವೆ ಬಾಂಧವ್ಯ ಶುರುವಾಗುವುದು ಯಾವಾಗ?
Father's Role In Parenting
TV9 Web
| Edited By: |

Updated on:Jul 20, 2022 | 3:14 PM

Share

ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು. ತಂದೆ ಹಾಗೂ ಮಗುವಿನ ಬಾಂಧವ್ಯದ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್  ನೀಡಿರುವ ಮಾಹಿತಿ ಇಲ್ಲಿದೆ. ಕೇವಲ ಮಗುವನ್ನು ಪಡೆಯುವ ಬಗ್ಗೆ ಮಾತ್ರವಲ್ಲ, ನಿಮ್ಮ ಪತ್ನಿಗೆ ಯಾವ ರೀತಿ ಹೆರಿಗೆ ಮಾಡಿಸಿಕೊಳ್ಳುವುದು ಇಷ್ಟ, ಹೆರಿಗೆಯ ಬಗ್ಗೆ ಯಾವ ರೀತಿ ಭಯ ಆಕೆಯ ಮನಸ್ಸಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ, ಹಾಗೆಯೇ ಆಕೆಯ ನಂಬಿಕೆಯನ್ನೂ ಗೌರವಿಸುವುದು ಮುಖ್ಯವಾಗುತ್ತದೆ.

ಹಾಗೆಯೇ ಯಾವ ರೀತಿಯ ಹೆರಿಗೆಯಿಂದ ಯಾವ ಪ್ರಯೋಜನವಾಗುತ್ತದೆ, ಯಾವ ರೀತಿಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಿ. ಹಾಗೆಯೇ ಮಗು ಹಾಗೂ ತಾಯಿಯ ನಡುವೆ ಇದ್ದಂತೆಯೇ ಮಗು ಹಾಗೂ ತಂದೆಯ ನಡುವೆಯೂ ಬಾಂಧವ್ಯ ಇರುತ್ತದೆ. ಹೆರಿಗೆಯಾದ ತಕ್ಷಣವೇ ಮಗುವನ್ನು ಎತ್ತಿಕೊಳ್ಳಿ.

ಇದು ಕೇವಲ ಕರ್ತವ್ಯವಲ್ಲ ಜೀವನಪೂರ್ತಿ ಹಸಿರಾಗಿ ಉಳಿಯುವ ನೆನಪುಗಳ ಜತೆಗೆ ನಿಮ್ಮ ಹಾಗೂ ನಿಮ್ಮ ಮಗುವಿನ ಬಾಂಧವ್ಯ ಅಲ್ಲಿಂದಲೇ ಗಟ್ಟಿಯಾಗುತ್ತಾ ಹೋಗುತ್ತದೆ.

ಮತ್ತಷ್ಟು ಓದಿ

ಮಗುವನ್ನು ಮೊದಲು ಎತ್ತಿಕೊಂಡಾಗ ಆಗುವ ಖುಷಿಯೇ ಬೇರೆ, ಆದರೆ ಕೆಲವು ತಂದೆಯಂದಿರಿಗೆ ಭಯ, ಮಗುವನ್ನು  ಎತ್ತಿಕೊಳ್ಳುವುದು ಸರಿಯಾಗದಿದ್ದರೆ ಮಗುವಿಗೇನಾದರೂ ತೊಂದರೆಯಾದರೆ ಎಂಬುದು, ಆದರೆ ಆ ಭಯದಲ್ಲಿ ನಿಮಗೆ ಸಿಗುವ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಧೈರ್ಯವಿರಲಿ, ಒಮ್ಮೆ ನಿಮ್ಮ ಕೈಯಲ್ಲಿ ಮಗುವನ್ನು ಎತ್ತಿಕೊಂಡು ನೋಡಿ ಆಗ ನಿಮಗಾಗುವ ಖುಷಿಯೇ ಬೇರೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 11:02 am, Mon, 18 July 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್