AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Role In Parenting: ತಂದೆ ಹಾಗೂ ಮಗುವಿನ ನಡುವೆ ಬಾಂಧವ್ಯ ಶುರುವಾಗುವುದು ಯಾವಾಗ?

ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು.

Father's Role In Parenting: ತಂದೆ ಹಾಗೂ ಮಗುವಿನ ನಡುವೆ ಬಾಂಧವ್ಯ ಶುರುವಾಗುವುದು ಯಾವಾಗ?
Father's Role In Parenting
TV9 Web
| Updated By: ನಯನಾ ರಾಜೀವ್|

Updated on:Jul 20, 2022 | 3:14 PM

Share

ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು. ತಂದೆ ಹಾಗೂ ಮಗುವಿನ ಬಾಂಧವ್ಯದ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್  ನೀಡಿರುವ ಮಾಹಿತಿ ಇಲ್ಲಿದೆ. ಕೇವಲ ಮಗುವನ್ನು ಪಡೆಯುವ ಬಗ್ಗೆ ಮಾತ್ರವಲ್ಲ, ನಿಮ್ಮ ಪತ್ನಿಗೆ ಯಾವ ರೀತಿ ಹೆರಿಗೆ ಮಾಡಿಸಿಕೊಳ್ಳುವುದು ಇಷ್ಟ, ಹೆರಿಗೆಯ ಬಗ್ಗೆ ಯಾವ ರೀತಿ ಭಯ ಆಕೆಯ ಮನಸ್ಸಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ, ಹಾಗೆಯೇ ಆಕೆಯ ನಂಬಿಕೆಯನ್ನೂ ಗೌರವಿಸುವುದು ಮುಖ್ಯವಾಗುತ್ತದೆ.

ಹಾಗೆಯೇ ಯಾವ ರೀತಿಯ ಹೆರಿಗೆಯಿಂದ ಯಾವ ಪ್ರಯೋಜನವಾಗುತ್ತದೆ, ಯಾವ ರೀತಿಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಿ. ಹಾಗೆಯೇ ಮಗು ಹಾಗೂ ತಾಯಿಯ ನಡುವೆ ಇದ್ದಂತೆಯೇ ಮಗು ಹಾಗೂ ತಂದೆಯ ನಡುವೆಯೂ ಬಾಂಧವ್ಯ ಇರುತ್ತದೆ. ಹೆರಿಗೆಯಾದ ತಕ್ಷಣವೇ ಮಗುವನ್ನು ಎತ್ತಿಕೊಳ್ಳಿ.

ಇದು ಕೇವಲ ಕರ್ತವ್ಯವಲ್ಲ ಜೀವನಪೂರ್ತಿ ಹಸಿರಾಗಿ ಉಳಿಯುವ ನೆನಪುಗಳ ಜತೆಗೆ ನಿಮ್ಮ ಹಾಗೂ ನಿಮ್ಮ ಮಗುವಿನ ಬಾಂಧವ್ಯ ಅಲ್ಲಿಂದಲೇ ಗಟ್ಟಿಯಾಗುತ್ತಾ ಹೋಗುತ್ತದೆ.

ಮತ್ತಷ್ಟು ಓದಿ

ಮಗುವನ್ನು ಮೊದಲು ಎತ್ತಿಕೊಂಡಾಗ ಆಗುವ ಖುಷಿಯೇ ಬೇರೆ, ಆದರೆ ಕೆಲವು ತಂದೆಯಂದಿರಿಗೆ ಭಯ, ಮಗುವನ್ನು  ಎತ್ತಿಕೊಳ್ಳುವುದು ಸರಿಯಾಗದಿದ್ದರೆ ಮಗುವಿಗೇನಾದರೂ ತೊಂದರೆಯಾದರೆ ಎಂಬುದು, ಆದರೆ ಆ ಭಯದಲ್ಲಿ ನಿಮಗೆ ಸಿಗುವ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಧೈರ್ಯವಿರಲಿ, ಒಮ್ಮೆ ನಿಮ್ಮ ಕೈಯಲ್ಲಿ ಮಗುವನ್ನು ಎತ್ತಿಕೊಂಡು ನೋಡಿ ಆಗ ನಿಮಗಾಗುವ ಖುಷಿಯೇ ಬೇರೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 11:02 am, Mon, 18 July 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?