AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oxfam India Survey: ಭಾರತದ ಟಾಪ್ 10​ ಶ್ರೀಮಂತರ ಸಂಪತ್ತಲ್ಲಿ 25 ವರ್ಷಗಳ ತನಕ ಮಕ್ಕಳಿಗೆ ನೀಡಬಹುದಂತೆ ಶಿಕ್ಷಣ

ಭಾರತದ ಅತಿ ಶ್ರೀಮಂತರ ಬಳಿ ಎಷ್ಟು ಸಂಪತ್ತಿದೆ? ಹೆಚ್ಚುವರಿಯಾಗಿ ತೆರಿಗೆ ವಿಧಿಸಿದರೆ ಹಾಗೂ ಆ ಸಂಪತ್ತಿನ ಮೂಲಕ ಏನೆಲ್ಲ ಅಭಿವೃದ್ಧಿ, ಸಾಮಾಜಿಕ ಕಲ್ಯಾಣ ಕೆಲಸಗಳನ್ನು ಮಾಡಬಹುದು ಎಂಬುದನ್ನು ಅಂಕಿ-ಅಂಶಗಳ ಸಹಿತ ಆಕ್ಸ್​ಫಾಮ್ ಸಮೀಕ್ಷೆ ತೆರೆದಿಟ್ಟಿದೆ.

Oxfam India Survey: ಭಾರತದ ಟಾಪ್ 10​ ಶ್ರೀಮಂತರ ಸಂಪತ್ತಲ್ಲಿ 25 ವರ್ಷಗಳ ತನಕ ಮಕ್ಕಳಿಗೆ ನೀಡಬಹುದಂತೆ ಶಿಕ್ಷಣ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jan 17, 2022 | 11:09 AM

Share

ಭಾರತದ ಶತಕೋಟ್ಯಧಿಪತಿಗಳ ಒಟ್ಟಾರೆ ಆಸ್ತಿ ಕೊವಿಡ್- 19 ಬಿಕ್ಕಟ್ಟಿನ ಕಾಲಘಟ್ಟದಲ್ಲಿ ದುಪ್ಪಟ್ಟಿಗೂ ಹೆಚ್ಚಾಗಿದೆ. ಮತ್ತು ಅವರ ಲೆಕ್ಕಾಚಾರವು ಶೇ 39ರಿಂದ 142ಕ್ಕೆ ಹೆಚ್ಚಳವಾಗಿದೆ. ಇನ್ನೂ ಆಸಕ್ತಿಕರ ವಿಚಾರ ಏನೆಂದರೆ, ಅತಿ ಶ್ರೀಮಂತರು ಎಂದು ಟಾಪ್ ಟೆನ್ ಪಟ್ಟಿಯಲ್ಲಿ ಇರುವವರ ಆಸ್ತಿಯ ಮೂಲಕ ದೇಶದ ಮಕ್ಕಳಿಗೆ ಮುಂದಿನ 25 ವರ್ಷ ಶಾಲೆ ಮತ್ತು ಉನ್ನತ ಶಿಕ್ಷಣಕ್ಕೆ ಹಣಕಾಸು ನೆರವು ನೀಡಬಹುದು ಎಂದು ಹೊಸ ಅಧ್ಯಯನವು ಸೋಮವಾರ ತೋರಿಸಿದೆ. ವಾರ್ಷಿಕ ಅಸಮಾನತೆ ಸಮೀಕ್ಷೆಯನ್ನು ದಾವೋಸ್​ನಲ್ಲಿನ ವಿಶ್ವ ಆರ್ಥಿಕ ಫೋರಂನಲ್ಲಿ (World Economic Forum) ಕಾರ್ಯಸೂಚಿ ಸಮೀಕ್ಷೆಯಲ್ಲಿ ಮೊದಲ ದಿನ ಬಿಡುಗಡೆ ಮಾಡಲಾಯಿತು. ಆಕ್ಸ್​ಫಾಮ್ ಇಂಡಿಯಾ (Oxfam India) ಮತ್ತೂ ಮುಂದುವರಿದು, ಒಂದು ವೇಳೆ ದೇಶದ ಅತಿ ಶ್ರೀಮಂತರ ಸಮೂಹದಲ್ಲಿ ಇರುವ ಶೇ 10ರಷ್ಟು ಮಂದಿಗೆ ಕೇವಲ ಶೇ 1ರಷ್ಟು ಹೆಚ್ಚು ತೆರಿಗೆ ವಿಧಿಸಿದರೂ ದೇಶದಲ್ಲಿ 17.7 ಲಕ್ಷ ಹೆಚ್ಚುವರಿ ಆಮ್ಲಜನಕ ಸಿಲಿಂಡರ್ ಒದಗಿಸಬಹುದು ಎಂದಿದೆ. ಅದೇ ರೀತಿ ಶ್ರೀಮಂತಿಕೆ ತೆರಿಗೆಯನ್ನು 98 ಶ್ರೀಮಂತ ಬಿಲಿಯನೇರ್ ಕುಟುಂಬಗಳಿಗೆ ಹಾಕಿದಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮೆ ಆದ ಆಯುಷ್ಮಾನ್​ ಭಾರತ್​ಗೆ ಏಳು ವಷ್ಟಕ್ಕೂ ಹೆಚ್ಚು ಹಣಕಾಸಿನ ನೆರವು ನೀಡಬಹುದು ಎಂದು ಲೆಕ್ಕಾಚಾರ ಮುಂದಿಡುತ್ತದೆ.

ಕಳೆದ ವರ್ಷ ಕೊರೊನಾ ಎರಡನೇ ಅಲೆಯ ವೇಳೆ ಆಮ್ಲಜನಕ ಸಿಲಿಂಡರ್​ಗೆ ಮತ್ತು ಇನ್ಷೂರೆನ್ಸ್ ಕ್ಲೇಮ್​ಗೆ ಭಾರೀ ಬೇಡಿಕೆ ಕಂಡುಬಂತು. ಸಂಪತ್ತಿನ ಅಸಮಾನತೆ ಬಗ್ಗೆ ಆಖ್ಸ್​ಫಾಮ್ ವರದಿ ಇನ್ನೂ ಮುಂದುವರಿದು, 142 ಭಾರತೀಯರ ಬಳಿ ಒಟ್ಟಾರೆಯಾಗಿ 53 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತಿದೆ. ಭಾರತದಲ್ಲಿ ಶೇ 40ರಷ್ಟು ಅತಿ ಬಡವರು ಎನಿಸಿಕೊಂಡು ತಳಮಟ್ಟದಲ್ಲಿ ಇರುವ 55.5 ಕೋಟಿ ಜನರ ಬಳಿ ಒಟ್ಟಾರೆ ಸಂಪತ್ತು 49 ಲಕ್ಷ ಕೋಟಿ ರೂಪಾಯಿ ಇದ್ದರೆ, ಭಾರತದ ಅತಿ ಶ್ರೀಮಂತರು ಎನಿಸಿಕೊಂಡ 98 ಮಂದಿ ಬಳಿ ಹೆಚ್ಚೂ ಕಡಿಮೆ ಅದೇ ಪ್ರಮಾಣದ ಆಸ್ತಿ ಇದೆ.

10 ಮಂದಿ ಅತಿ ಶ್ರೀಮಂತ ಭಾರತೀಯರು ತಲಾ 10 ಲಕ್ಷ ಯುಎಸ್​ಡಿ ಅಂತ ಖರ್ಚು ಮಾಡಿದರೂ (ದಿನಕ್ಕೆ 7 ಕೋಟಿ ರೂಪಾಯಿಗೂ ಹೆಚ್ಚು) ತಮ್ಮೆಲ್ಲ ಸಂಪತ್ತನ್ನು ಖಾಲಿ ಮಾಡುವುದಕ್ಕೆ 84 ವರ್ಷ ಬೇಕಾಗುತ್ತದೆ. ಮಲ್ಟಿ ಮಿಲಿಯನೇರ್​ಗಳು ಮತ್ತು ಬಿಲಿಯನೇರ್​ಗಳ ಮೇಲೆ ವಾರ್ಷಿಕ ಸಂಪತ್ತಿನ ತೆರಿಗೆ ಹಾಕಿದರೆ 7830 ಕೋಟಿ ಅಮೆರಿಕನ್ ಡಾಲರ್​ನಷ್ಟು ಒಂದು ವರ್ಷಕ್ಕೆ ಸಂಗ್ರಹ ಆಗುತ್ತದೆ. ಆ ಮೊತ್ತದಿಂದ ಸರ್ಕಾರದ ಆರೋಗ್ಯ ಬಜೆಟ್ ಶೇ 271ರಷ್ಟು ಹೆಚ್ಚಿಸಬಹುದು. ಆರಂಭದಲ್ಲಿ ಕೊವಿಡ್​ ಕಾಣಿಸಿಕೊಂಡಿದ್ದು ಆರೋಗ್ಯ ಬಿಕ್ಕಟ್ಟು ಎಂಬಂತೆ. ಆದರೆ ಈಗ ಆರ್ಥಿಕತೆಗೆ ಸಂಬಂಧಿಸಿದ್ದಾಗಿದೆ. ಭಾರತದ ಶೇ 10ರಷ್ಟು ಅತಿ ಶ್ರೀಮಂತರು ಶೇ 45ರಷ್ಟು ರಾಷ್ಟ್ರೀಯ ಸಂಪತ್ತನ್ನು ಹೊಂದಿದ್ದರೆ, ತಳ ಮಟ್ಟದಲ್ಲಿ ಇರುವ ಶೇ 50ರಷ್ಟು ಜನಸಂಖ್ಯೆಯ ಬಳಿ ಕೇವಲ ಶೇ 6ರಷ್ಟಿದೆ.

ಸರ್ಕಾರದಿಂದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಗಾಗಿ ಮಾಡುತ್ತಿರುವ ವೆಚ್ಚ ಸಾಕಾಗುತ್ತಿಲ್ಲ. ಇದರಿಂದಾಗಿ ಆರೋಗ್ಯ ಮತ್ತು ಶಿಕ್ಷಣ ಖಾಸಗೀಕರಣ ಆಗುತ್ತಿದೆ. ಆ ಕಾರಣಕ್ಕೆ ಸಂಪೂರ್ಣ ಮತ್ತು ಸುರಕ್ಷಿತ ಕೊವಿಡ್- 19 ಚೇತರಿಕೆ ಎಂಬುದು ಸಾಮಾನ್ಯ ನಾಗರಿಕರಿಗೆ ಕೈಗೆ ಎಟುಕದಂತಾಗಿದೆ.

ಇದನ್ನೂ ಓದಿ: Top 10 Richest Indians: ಫೋರ್ಬ್ಸ್​ ಇಂಡಿಯಾ ಭಾರತದ ಅತಿ ಶ್ರೀಮಂತರ ಟಾಪ್​ 10 ಪಟ್ಟಿ ಇಲ್ಲಿದೆ; ಯಾರಿಗೆ ಯಾವ ಸ್ಥಾನ?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ