8 Years of Modi Government ನೂತನ ತಂತ್ರಜ್ಞಾನದೊಂದಿಗೆ ದಾಪುಗಾಲು; ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಭಾರತದ ಸಾಧನೆ ಅದ್ವಿತೀಯ

Space policy ಮೋದಿ ಸರ್ಕಾರ 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಖಾಸಗಿ ವಲಯವನ್ನು ಒಳಗೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಂಡಿತು. ಇದು ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯೀಕರಣವನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುತ್ತದೆ.

8 Years of Modi Government ನೂತನ ತಂತ್ರಜ್ಞಾನದೊಂದಿಗೆ ದಾಪುಗಾಲು; ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಭಾರತದ ಸಾಧನೆ ಅದ್ವಿತೀಯ
ನರೇಂದ್ರ ಮೋದಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: May 26, 2022 | 8:00 AM

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಭಾರತೀಯ ಬಾಹ್ಯಾಕಾಶ ಯಾನದಲ್ಲಿ(Indian spaceflight) ಹೆಚ್ಚಿನ ಆಸಕ್ತಿಯನ್ನು ಪ್ರದರ್ಶಿಸಿದ್ದಾರೆ. 2017 ರಲ್ಲಿ ದಕ್ಷಿಣ ಏಷ್ಯಾ ಸಂಪರ್ಕ ಉಪಗ್ರಹದ (South Asia Satellite )ಉಡಾವಣೆ ಇದಕ್ಕೆ ಸೂಕ್ತ ಉದಾಹರಣೆ. ಅದೇ ವೇಳೆ ಬಾಹ್ಯಾಕಾಶ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ಸಕ್ರಿಯಗೊಳಿಸಲು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರವು ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಖಾಸಗಿ ಕೈಗಾರಿಕೆಗಳ ಒಳಗೊಳ್ಳುವಿಕೆಯನ್ನು ಹೆಚ್ಚಿಸುವತ್ತ ಗಮನಹರಿಸಿದೆ. ಅಕ್ಟೋಬರ್ 2021 ರಲ್ಲಿ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಪ್ರಾರಂಭಿಸಿ, ಭಾರತದಲ್ಲಿ ಬಾಹ್ಯಾಕಾಶ ಕ್ಷೇತ್ರದ ವ್ಯಾಪ್ತಿ ಹೆಚ್ಚಿಸಲು ಖಾಸಗಿ ಕೈಗಾರಿಕೆಗಳಿಂದ ಸಲಹೆಗಳನ್ನು ಆಹ್ವಾನಿಸಿದರು. ಭಾರತದ ಬಾಹ್ಯಾಕಾಶ ನೀತಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳೆರಡೂ ಹಲವು ದಶಕಗಳಿಂದ ಕಡಿಮೆ ಆದ್ಯತೆಯ ವಿಷಯವಾಗಿತ್ತು. ಭಾರತದ ವಿಜ್ಞಾನಿಗಳ ಮಹತ್ತರ ಸಾಧನೆಗಳ ಹೊರತಾಗಿಯೂ, ಭಾರತದ ಬಾಹ್ಯಾಕಾಶ ನೀತಿ/ಕಾರ್ಯಕ್ರಮಗಳ ಅಭಿವೃದ್ಧಿ ಕುಂಠಿತಗೊಂಡಿತ್ತು. ಈ ಅನುಕೂಲಕರವಲ್ಲದ ವಾತಾವರಣವು ಅನೇಕ ಯುವ ಮತ್ತು ಪ್ರತಿಭಾವಂತ ಭಾರತೀಯ ವಿಜ್ಞಾನಿಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ವಿದೇಶದಲ್ಲಿ ನೆಲೆಸಲೇ ಬೇಕಾದ ಕಾರಣ ಪ್ರತಿಭಾ ಪಲಾಯನಕ್ಕೂ ಕಾರಣವಾಗಿತ್ತು.

ಕಳೆದ ಎರಡು ದಶಕಗಳಲ್ಲಿ ಸ್ಪೇಸ್‌ಎಕ್ಸ್, ಬ್ಲೂ ಒರಿಜಿನ್, ವರ್ಜಿನ್ ಗ್ಯಾಲಕ್ಟಿಕ್ ಮತ್ತು ಏರಿಯನ್ಸ್ಪೇಸ್‌ನಂತಹ ಖಾಸಗಿ ವಲಯದ ಉದ್ಯಮಗಳು ಬಾಹ್ಯಾಕಾಶದ ಡೊಮೇನ್‌ಗೆ ಹೊಸ ಶಕ್ತಿ ಮತ್ತು ನಾವೀನ್ಯತೆಯನ್ನು ತಂದಿವೆ. ಈ ಕಂಪನಿಗಳು ಇತರ ಬಾಹ್ಯಾಕಾಶ ಪ್ರಯಾಣದ ರಾಷ್ಟ್ರಗಳಲ್ಲಿ ವೆಚ್ಚವನ್ನು ಮತ್ತು ಸಮಯವನ್ನು ಕಡಿಮೆಗೊಳಿಸಿವೆ. ಮತ್ತೊಂದೆಡೆ, ಭಾರತದಲ್ಲಿ ಖಾಸಗಿ ಉದ್ಯಮವನ್ನು ಸರ್ಕಾರದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪೂರೈಕೆದಾರರಾಗಿ ಮಾತ್ರ ಕಡಿಮೆ ಮಾಡಲಾಗಿದೆ.

ಮೋದಿ ಸರ್ಕಾರ 2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಖಾಸಗಿ ವಲಯವನ್ನು ಒಳಗೊಳ್ಳುವ ಪ್ರಾಮುಖ್ಯತೆಯನ್ನು ಅರಿತುಕೊಂಡಿತು. ಇದು ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯೀಕರಣವನ್ನು ಸಕ್ರಿಯಗೊಳಿಸುತ್ತದೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯನ್ನು ಹೆಚ್ಚಿಸುತ್ತದೆ. 2030 ರ ವೇಳೆಗೆ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಶೇ10 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಸಾಧಿಸುವ ಗುರಿಯೊಂದಿಗೆ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಭಾರತವು ಸುಧಾರಣೆಗಳನ್ನು ಕೈಗೊಂಡಿದೆ.

ಇದನ್ನೂ ಓದಿ
Image
8 Years of Modi Government: ದೇಶಗಳನ್ನು ಬೆಸೆದ ಲಸಿಕಾ ಮೈತ್ರಿ; ಪ್ರಧಾನಿ ನರೇಂದ್ರ ಮೋದಿ ಇಟ್ಟ ಚಾಣಾಕ್ಷ ಹೆಜ್ಜೆ
Image
8 Years Of Modi Government: ಆರೋಗ್ಯ ವರ್ಧನೆಗೆ ಮೋದಿ ಬಿಟ್ಟ ಇಂದ್ರಧನುಷ್ ಎಂಬ ಬಾಣದ ಸುತ್ತ
Image
8 Years of Modi Government ಎಂಟು ವರ್ಷಗಳ ಅಧಿಕಾರವಧಿಯಲ್ಲಿ ಜನಹಿತಕ್ಕಾಗಿ ಮೋದಿ ಸರ್ಕಾರ ತಂದ 8 ಪ್ರಮುಖ ಯೋಜನೆಗಳು
Image
Narendra Modi Horoscope: ಸೋಲೇ ಕಾಣದ ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಸನ್ಯಾಸ ಯೋಗ

2007 ಮತ್ತು 2013 ರ ನಡುವೆ ಇಸ್ರೋ 31 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. 2014 ರಿಂದ ಇಸ್ರೋ 300 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಈ ಅವಧಿಯಲ್ಲಿ 45 ಕ್ಕೂ ಹೆಚ್ಚು ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಈ ಹೊತ್ತಲ್ಲಿ ವಿಫಲವಾದ ಸಂಖ್ಯೆಗಳು ಅತ್ಯಂತ ಕಡಿಮೆ ಎಂದೇ ಹೇಳಬಹುದು. ಫೆಬ್ರವರಿ 15, 2017 ರಂದು, ಇಸ್ರೋ ಒಂದೇ ಬಾರಿಗೆ 104 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಅದು ವಿಶ್ವ ದಾಖಲೆಯಾಗಿತ್ತು.

ಭಾರತೀಯ ಬಾಹ್ಯಾಕಾಶ ಪ್ರಯತ್ನಗಳ ವಾಣಿಜ್ಯೀಕರಣವನ್ನು ಹೆಚ್ಚಿಸಲು 2020 ರಲ್ಲಿ ಏಕ ಗವಾಕ್ಷಿ ನೋಡಲ್ ಏಜೆನ್ಸಿ, IN-SPACe (ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ) ಪ್ರಾರಂಭಿಸಲಾಯಿತು. IN-SPAce ಖಾಸಗಿ ಕಂಪನಿಗಳು ಕೇವಲ ಪೂರೈಕೆದಾರರು ಅಥವಾ ಮಾರಾಟಗಾರರಾಗುವ ಬದಲು ಸ್ವತಂತ್ರವಾಗಿ ಭಾಗಿಯಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಪ್ರಧಾನಿ ಮೋದಿ ಸರ್ಕಾರ 2020 ರಲ್ಲಿ ಬಾಹ್ಯಾಕಾಶ ಚಟುವಟಿಕೆಗಳ ಎಲ್ಲಾ ಹಂತಗಳಲ್ಲಿ ಖಾಸಗಿ ಘಟಕಗಳ ಭಾಗವಹಿಸುವಿಕೆಯನ್ನು ಸಹ ಅನುಮತಿಸಲಾಗಿದೆ.

ಭಾರತವು 350 ಕ್ಕೂ ಹೆಚ್ಚು ಖಾಸಗಿ ಬಾಹ್ಯಾಕಾಶ ಸಂಸ್ಥೆಗಳನ್ನು ಹೊಂದಿದೆ.ಅಮೆರಿಕ, ಯುಕೆ, ಕೆನಡಾ ಮತ್ತು ಜರ್ಮನಿ ನಂತರ ವಿಶ್ವದಲ್ಲಿ ಭಾರತಐದನೇ ಸ್ಥಾನದಲ್ಲಿದೆ. 2021 ರಿಂದ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಯ ಪ್ರಸ್ತಾಪಗಳು ಶೇ 30 ಏರಿಕೆಯಾಗಿವೆ.

ಎಂಎಸ್ಎಂಇಗಳು, ಸ್ಟಾರ್ಟ್ ಅಪ್‌ಗಳು ಮತ್ತು ಖಾಸಗಿ ಸಂಸ್ಥೆಗಳಿಂದ ಬಾಹ್ಯಾಕಾಶ ಚಟುವಟಿಕೆಗಳಿಗೆ ಸಂಬಂಧಿಸಿದ 40 ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು IN-SPAce ಸ್ವೀಕರಿಸಿದೆ. ಸ್ಟಾರ್ಟ್‌ಅಪ್ ಇಂಡಿಯಾ ಪೋರ್ಟಲ್‌ನಲ್ಲಿ ಸುಮಾರು 75 ಸ್ಟಾರ್ಟ್‌ಅಪ್‌ಗಳು ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದಲ್ಲಿ ನೋಂದಾಯಿಸಿಕೊಂಡಿವೆ.

ಫೆಬ್ರವರಿ 2021ರಲ್ಲಿ 19 ಉಪಗ್ರಹಗಳನ್ನು ಕಕ್ಷೆಗೆ ಹಾರಿಸುವ ಮೂಲಕ ಎನ್ಎಸ್ಐಎಲ್ ತನ್ನ ಚೊಚ್ಚಲ ವಾಣಿಜ್ಯ ಉಡಾವಣೆಯನ್ನು ನಡೆಸಿತು.  ಆರು ಬಾಹ್ಯಾಕಾಶ ತಂತ್ರಜ್ಞಾನ ಇನ್ಯುಬೇಷನ್ ಕೇಂದ್ರಗಳು ಇದೀಗ ಕಾರ್ಯನಿರ್ವಹಿಸುತ್ತಿವೆ. ಇವು ಅಗರ್ತಲಾ, ತಿರುಚ್ಚಿ, ಜಲಂಧರ್, ರೂರ್ಕೆಲಾ, ನಾಗ್ಪುರ ಮತ್ತು ಭೋಪಾಲ್‌ನಲ್ಲಿವೆ.

2020 ರಲ್ಲಿ ಭಾರತದಲ್ಲಿ ಬಾಹ್ಯಾಕಾಶ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸಲು ಸ್ಪೇಸ್‌ಕಾಮ್ ಡೊಮೇನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಿಗೆ ಚೌಕಟ್ಟನ್ನು ಒದಗಿಸಲು, ಡ್ರಾಫ್ಟ್ ಸ್ಪೇಸ್‌ಕಾಮ್ ನೀತಿಯನ್ನು ಪ್ರಾರಂಭಿಸಲಾಯಿತು.  ಡಿಫೆನ್ಸ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (DSRO) ನಿಂದ ಬೆಂಬಲಿತವಾಗಿರುವ ಡಿಫೆನ್ಸ್ ಸ್ಪೇಸ್ ಏಜೆನ್ಸಿ (DSA), ವಿರೋಧಿಗಳ ಬಾಹ್ಯಾಕಾಶ ಸಾಮರ್ಥ್ಯವನ್ನು ತಗ್ಗಿಸಲು, ಅಡ್ಡಿಪಡಿಸಲು, ನಾಶಮಾಡಲು ಶಸ್ತ್ರಾಸ್ತ್ರಗಳನ್ನು ರಚಿಸಲು ಸ್ಥಾಪಿಸಲಾಗಿದೆ.

2021 ರಲ್ಲಿ ಪ್ರಧಾನಿ ಮೋದಿಯವರು ಭಾರತೀಯ ಬಾಹ್ಯಾಕಾಶ ಸಂಸ್ಥೆ (ISpA) ಅನ್ನು ಪ್ರಾರಂಭಿಸಿದರು. ISpA ಪ್ರಧಾನಮಂತ್ರಿಯವರ ‘ಆತ್ಮನಿರ್ಭರ್’ ಪ್ರಯತ್ನಗಳನ್ನು ಉತ್ತೇಜಿಸುವ ಸಲುವಾಗಿ ಇಸ್ರೋ ಮತ್ತು ಖಾಸಗಿ ಮಧ್ಯಸ್ಥಗಾರರ ನಡುವೆ ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸುತ್ತದೆ. ಈ ಸರ್ಕಾರ ಬಾಹ್ಯಾಕಾಶ ತಂತ್ರಜ್ಞಾನದ ಅತ್ಯುತ್ತಮ ಬಳಕೆ ಮತ್ತು ವರ್ಧಿತ ಅಭಿವೃದ್ಧಿಯ ಪ್ರಯತ್ನಗಳಲ್ಲಿ ಸೇವೆಗಳ ವಿತರಣೆಯಲ್ಲಿ ಅದರ ಬಳಕೆಯನ್ನು ಖಚಿತಪಡಿಸಿದೆ.

ಬಾಹ್ಯಾಕಾಶ ನೀತಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ಸಾಧನೆಗಳು

1. ಭಾರತೀಯ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (IRNSS)- ಇದನ್ನು NavIC ಎಂದು ಕರೆಯಲಾಗುತ್ತದೆ

2. ಮಿಷನ್ ಶಕ್ತಿ (ASAT – ಉಪಗ್ರಹ ವಿರೋಧಿ ಆಯುಧ)

3. ಭಾರತದ ಮಾರ್ಸ್ ಆರ್ಬಿಟರ್ ಮಿಷನ್‌ನ ಯಶಸ್ವಿ ಕಕ್ಷೆಯ ನಿಯೋಜನೆ

4 PSLV-C43 ಇಂದ HysIS ಮಿಷನ್

5. ಕಲಾಂ SAT

6. GSLV – MKIII ಉಡಾವಣೆ

ಬಹು ನಿರ್ಣಾಯಕ ಕಾರ್ಯಗಳು

1. ಗಗನ್ ಯಾನ್

2. ಚಂದ್ರಯಾನ – 3

3. NISAR

4. ಆದಿತ್ಯ – L1

5. RISAT – 1A

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ