ಗಡಿ ಸಂಘರ್ಷ: ಮಿಜೋರಾಂ ರಾಜ್ಯದ ನಾಗರಿಕನ ಮೇಲೆ ಅಸ್ಸಾಂ ಪೊಲೀಸರ ಗುಂಡಿನ ದಾಳಿ

ಘಟನೆಯಲ್ಲಿ, ಗಡಿಭಾಗವನ್ನು ಕಾವಲು ಕಾಯುತ್ತಿದ್ದ ಅಸ್ಸಾಂ ಪೊಲೀಸ್ ಗುಂಡಿನ ದಾಳಿಯಿಂದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಈ ಬಗ್ಗೆ ಅಸ್ಸಾಂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಪೊಲೀಸ್ ಉಪ ಆಯುಕ್ತ ತಿಳಿಸಿದ್ದಾರೆ.

ಗಡಿ ಸಂಘರ್ಷ: ಮಿಜೋರಾಂ ರಾಜ್ಯದ ನಾಗರಿಕನ ಮೇಲೆ ಅಸ್ಸಾಂ ಪೊಲೀಸರ ಗುಂಡಿನ ದಾಳಿ
ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷ (ಸಂಗ್ರಹ ಚಿತ್ರ)
Updated By: ganapathi bhat

Updated on: Aug 17, 2021 | 9:29 PM

ದೆಹಲಿ: ಮಿಜೋರಾಂ ಅಸ್ಸಾಂ ಗಡಿಭಾಗದಲ್ಲಿ ಮಂಗಳವಾರ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಅಸ್ಸಾಂ ಪೊಲೀಸ್ ನೆರೆಯ ರಾಜ್ಯ ಮಿಜೋರಾಂನ ಒಬ್ಬ ನಾಗರಿಕನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಹಾಗೂ ದಾಳಿಯಿಂದ ಒಬ್ಬ ಗಾಯಗೊಂಡಿದ್ದಾನೆ ಎಂಬ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭಾರತದ ಈಶಾನ್ಯ ಭಾಗದ ಎರಡು ರಾಜ್ಯಗಳ ನಡುವೆ ಸುಮಾರು ಮೂರು ವಾರಗಳ ಹಿಂದೆ ಹಿಂಸಾಚಾರ ನಡೆದಿತ್ತು. ಮಿಜೋರಾಂ ಹಾಗೂ ಅಸ್ಸಾಂನ ಪೊಲೀಸ್ ಪಡೆಗಳ ನಡುವೆ ಹಿಂಸಾಚಾರ ಏರ್ಪಟ್ಟಿತ್ತು. ಜುಲೈ 20 ರಂದು ನಡೆದ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದರು ಮತ್ತು ಸುಮಾರು 50 ಮಂದಿ ಗಾಯಗೊಂಡಿದ್ದರು.

ಕೊಲೈಸ್ಬ್ ಜಿಲ್ಲೆಯ ಪೊಲೀಸ್ ಉಪ ಆಯುಕ್ತ ಹೆಚ್. ಲಾಲ್ತ್​ಲಾಂಗಿಯಾನ, ಅಸ್ಸಾಂನ ಹೈಲಕಂಡಿ ಜಿಲ್ಲೆಯ ಗಡಿಭಾಗದಲ್ಲಿ ಸುಮಾರು ರಾತ್ರಿ 2 ಗಂಟೆಯ ವೇಳೆಗೆ ಗಲಭೆ ನಡೆದಿತ್ತು ಎಂದು ಹೇಳಿದ್ದಾರೆ. ವೈರಂಗ್ಟೆ ಎಂಬ ಗ್ರಾಮದ ಮೂವರು ಐಟ್ಲಾಂಗ್ ಪ್ರದೇಶದ ತಮ್ಮ ಗೆಳೆಯನ ಮನೆಯಿಂದ ಮಾಂಸ ಕೊಂಡುತರಲು ಹೋದಾಗ ಘಟನೆ ನಡೆದಿತ್ತು ಎಂದು ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ, ಗಡಿಭಾಗವನ್ನು ಕಾವಲು ಕಾಯುತ್ತಿದ್ದ ಅಸ್ಸಾಂ ಪೊಲೀಸ್ ಗುಂಡಿನ ದಾಳಿಯಿಂದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಈ ಬಗ್ಗೆ ಅಸ್ಸಾಂ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಪೊಲೀಸ್ ಉಪ ಆಯುಕ್ತ ತಿಳಿಸಿದ್ದಾರೆ.

ಇದನ್ನೂ ಓದಿ: 4 ಟ್ರಕ್​ಗಳನ್ನು ಧ್ವಂಸಗೊಳಿಸಿ, ಮೊಟ್ಟೆಗಳನ್ನು ಒಡೆದು ದಾಂಧಲೆ; ಅಸ್ಸಾಂ-ಮಿಜೋರಾಂ ಗಡಿ ಮತ್ತೆ ಉದ್ವಿಗ್ನ

ಗಡಿ ಸಂಘರ್ಷ: ಅಸ್ಸಾಂ ಅಧಿಕಾರಿಗಳ ವಿರುದ್ಧ ಎಫ್ಐಆರ್ ಹಿಂಪಡೆಯಲು ಮಿಜೋರಾಂ ನಿರ್ಧಾರ

(Assam Police gunfire on Mizoram Civilians Tension Escalates in Northeast Division States)

Published On - 9:28 pm, Tue, 17 August 21