Nashik Astrologer: ರಹಸ್ಯ ಕ್ಯಾಮರಾಗಳು, ಅಧ್ಯಾತ್ಮದ ಹೆಸರಿನಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋ ಮಾಡಿದ್ದ ಜ್ಯೋತಿಷಿ ಅರೆಸ್ಟ್
ನಾಸಿಕ್ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಜ್ಯೋತಿಷಿ ಅಶೋಕ್ ಖರತ್ ಬಂಧನವಾಗಿದೆ. ರಹಸ್ಯ ಕ್ಯಾಮರಾಗಳ ಮೂಲಕ 58 ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿದಿದ್ದಾನೆ. ಮಾದಕ ದ್ರವ್ಯ ನೀಡಿ, ಆಧ್ಯಾತ್ಮಿಕ ಬೆದರಿಕೆ ಒಡ್ಡಿ ಅತ್ಯಾಚಾರ ಎಸಗುತ್ತಿದ್ದ. ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ರಾಜಕೀಯ ದಿಗ್ಗಜರೊಂದಿಗೆ ಸಂಪರ್ಕ ಹೊಂದಿದ್ದ ಈತನ ಕೃತ್ಯ ಬೆಳಕಿಗೆ ಬಂದಿದೆ.

ನಾಸಿಕ್, ಮಾರ್ಚ್ 24: ರಾಜಕೀಯ ದಿಗ್ಗಜರ ಜ್ಯೋತಿಷ್ಯ ಹೇಳಿ ಪ್ರಸಿದ್ಧಿ ಪಡೆದಿದ್ದ ಮಹಾರಾಷ್ಟ್ರದ ಜ್ಯೋತಿಷಿ(Astrologer)ಯನ್ನು ಅತ್ಯಾಚಾರದ ಆರೋಪದಲ್ಲಿ ಬಂಧಿಸಲಾಗಿದೆ. ಪೆನ್ಡ್ರೈವ್ನಬಲ್ಲಿ 58 ಮಹಿಳೆಯರ ಅಶ್ಲೀಲ ವಿಡಿಯೋ ಲಭ್ಯವಾಗಿದೆ. ಪೊಲೀಸರ ಪ್ರಕಾರ, ಜ್ಯೋತಿಷಿ ಅಶೋಕ್ ಖರತ್ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಎಫ್ಐಆರ್ ಪ್ರಕಾರ, ಖರತ್ ತನ್ನನ್ನು ತಾನು ಕ್ಯಾಪ್ಟನ್, ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ. ಅವನು ಮಹಿಳೆಯರನ್ನು ತನ್ನ ಕಚೇರಿಗೆ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಕರೆತಂದು ಮಾದಕ ದ್ರವ್ಯ ನೀಡುವ ಮೂಲಕ ಅತ್ಯಾಚಾರವೆಸಗುತ್ತಿದ್ದ.
ಸಾಮಾನ್ಯವಾಗಿ ಅವರ ಗಂಡಂದಿರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಮೂಲಕ ಅಥವಾ ಮಾಟಮಂತ್ರದ ಭಯವನ್ನು ಅವರಲ್ಲಿ ತುಂಬಿ ಅತ್ಯಾಚಾರವೆಸಗುತ್ತಿದ್ದ. ಖರತ್ ತನ್ನ ಕಚೇರಿಯಲ್ಲಿ ಗುಪ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ತೇಜಸ್ವಿನಿ ಸತ್ಪುಟೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದೆ.ನವೆಂಬರ್ 2022 ರಿಂದ ಡಿಸೆಂಬರ್ 2025 ರ ನಡುವೆ ಜ್ಯೋತಿಷಿ ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಎಫ್ಐಆರ್ನಲ್ಲಿ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಜ್ಯೋತಿಷಿ ನಾಸಿಕ್ನ ಕೆನಡಾ ಕಾರ್ನರ್ ಪ್ರದೇಶದಲ್ಲಿರುವ ತನ್ನ ಕಚೇರಿಗೆ ಕರೆಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.ಖರತ್ ಅವರು ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲ್ಲೂಕಿನ ಮಿರ್ಗಾಂವ್ನಲ್ಲಿರುವ ಶ್ರೀ ಈಶೇಶ್ವರ ಮಹಾದೇವ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾಗಿದ್ದಾರೆ.ಈ ಹಿಂದೆ ಅನೇಕ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಈ ಜ್ಯೋತಿಷಿಯನ್ನು ಭೇಟಿ ಮಾಡಿದ್ದರು ಎಂದು ವರದಿಯಾಗಿದೆ.
ನವೆಂಬರ್ 2022 ರಲ್ಲಿ, ಆಗಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಅವರ ಸಂಪುಟ ಸಹೋದ್ಯೋಗಿಗಳಾದ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ದೀಪಕ್ ಕೇಸರ್ಕರ್ ಅವರೊಂದಿಗೆ ಮಿರ್ಗಾಂವ್ ದೇವಸ್ಥಾನದಲ್ಲಿ ಖರತ್ ಅವರನ್ನು ಭೇಟಿಯಾಗಿದ್ದರು.
ಖರತ್ ನನ್ನು ಬಂಧಿಸಲು ನಾಸಿಕ್ ಪೊಲೀಸರು ರಹಸ್ಯ ಕಾರ್ಯಾಚರಣೆ ಆರಂಭಿಸಿದ್ದರು. ಪೊಲೀಸರು ಆರೋಪಿಯ ಮನೆಯ ಹೊರಗೆ ಕಳ್ಳ, ಕಳ್ಳ ಎಂದು ಕೂಗುವ ಮೂಲಕ ಭೀತಿಯನ್ನು ಸೃಷ್ಟಿಸಿದರು. ಆಮೇಲೆ ಕಳ್ಳನನ್ನು ಹಿಡಿಯುವ ನೆಪದಲ್ಲಿ ಒಳಗೆ ಹೋಗಿದ್ದರು. ದಾಳಿಯ ಸಮಯದಲ್ಲಿ, ಖಾರತ್ ಅವರ ತೋಟದ ಮನೆಯಲ್ಲಿ ಒಂದು ಪಿಸ್ತೂಲ್, ಜೀವಂತ ಕಾರ್ಟ್ರಿಡ್ಜ್ಗಳು ಮತ್ತು ಬಳಸಿದ ಕಾರ್ಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:03 am, Tue, 24 March 26
