Kannada News National Azadi Ka Amrit Mahotsav: How did Bengaluru get the name Sadashivnagar? Here are 5 facts about Mangalore's freedom fighter
Azadi Ka Amrit Mahotsav: ಬೆಂಗಳೂರಿನಲ್ಲಿ ಸದಾಶಿವನಗರ ಎಂಬ ಹೆಸರು ಹೇಗೆ ಬಂತು? ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರನ 5 ಸಂಗತಿಗಳು ಇಲ್ಲಿದೆ
ಕಾರ್ನಾಡ್ ಸದಾಶಿವ ರಾವ್ ಅವರು ಕರ್ನಾಟಕದ ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು 1881 ರಲ್ಲಿ ಜನಿಸಿದರು ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.
ಕಾರ್ನಾಡ್ ಸದಾಶಿವ ರಾವ್ ಅವರು ಕರ್ನಾಟಕದ ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು 1881 ರಲ್ಲಿ ಜನಿಸಿದರು ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರ ಬಗ್ಗೆ ಐದು ಸಂಗತಿಗಳು ಇಲ್ಲಿವೆ.
ಕಾರ್ನಾಡ್ ಸದಾಶಿವ ರಾವ್ ಅವರು ವಕೀಲರಾಗಿದ್ದು, ಮಹಿಳೆಯರು, ವಿಶೇಷವಾಗಿ ವಿಧವೆಯರು ಮತ್ತು ಕೆಳವರ್ಗದ ಜನರು, ಮುಖ್ಯವಾಗಿ ಹರಿಜನರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು.
ಅವರು ತಮ್ಮ ಪತ್ನಿ ಶಾಂತಾಬಾಯಿಯೊಂದಿಗೆ ಮಹಿಳಾ ಸಭೆಯನ್ನು ಸ್ಥಾಪಿಸಿದರು ಮತ್ತು ವಿಧವೆಯರು ಮತ್ತು ಮಹಿಳೆಯರಿಗೆ ತಮ್ಮ ಸ್ವಂತ ಹಣವನ್ನು ಗಳಿಸಲು ಸಾಧ್ಯವಾಗುವಂತೆ ಹೊಲಿಗೆ ಮತ್ತು ಬುಟ್ಟಿ ತಯಾರಿಕೆಯಂತಹ ಉಪಯುಕ್ತ ಕೌಶಲ್ಯಗಳನ್ನು ಕಲಿಸಿದರು. ಇದರ ಜೊತೆಗೆ ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣವನ್ನೂ ನೀಡಿದರು.
ಅಸ್ಪೃಶ್ಯತೆಯನ್ನು ತೊಡೆದುಹಾಕಲು ದಕ್ಷಿಣ ಕನ್ನಡದ ಅಸ್ಪೃಶ್ಯ ವರ್ಗದ ಇನ್ನೊಬ್ಬ ಸಾಮಾಜಿಕ ಕಾರ್ಯಕರ್ತ ಕುದ್ಮುಲ್ ರಂಗ ರಾವ್ ಅವರೊಂದಿಗೆ ಕೆಲಸ ಮಾಡಿದರು.
ಗಾಂಧಿಯವರ ಸತ್ಯಾಗ್ರಹ ಚಳವಳಿಗೆ ಸ್ವಯಂಸೇವಕರಾಗಿ ಕರ್ನಾಟಕದಿಂದ ಇವರು ಮೊದಲಿಗರು. ರಾವ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸ್ತರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ
Azadi Ka Amrit Mahotsav: ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಕನ್ನಡಿಗರ ಅಪರೂಪದ ಸಾಧನೆ !
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ರೈಲು ದರೋಡೆ ನಡೆಸಿದ ಅಶ್ಫಾಕ್ ಉಲ್ಲಾ ಖಾನ್ ತಮ್ಮ ಪ್ರಾಣ ಸ್ನೇಹಿತನೊಂದಿಗೆ ಗಲ್ಲಿಗೇರಿದರು!
ಆಜಾದಿ ಕಾ ಅಮೃತ್ ಮಹೋತ್ಸವ್: ಇಡೀ ಭಾರತವನ್ನು ಬ್ರಿಟಿಷರು ಆಳುತ್ತಿದ್ದರೂ ಖಾನ್ ಬಹದ್ದೂರ್ ಖಾನ್ರ ಬರೇಲಿ ಮಾತ್ರ ಸ್ವತಂತ್ರವಾಗಿತ್ತು!
ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರು, ಆದರೆ ತಮ್ಮ ಉಳಿತಾಯದ ಬಹುಪಾಲು ಸಾಮಾಜಿಕ ಕೆಲಸ ಮತ್ತು ಸ್ವಾತಂತ್ರ್ಯ ಚಳುವಳಿಗಾಗಿ ಖರ್ಚು ಮಾಡಿದರು. ರಾವ್ ಅವರು 1937ರಲ್ಲಿ ತಮ್ಮ 55 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ನಿಧನರಾದ ಕಾರಣ ಸ್ವತಂತ್ರ ಭಾರತವನ್ನು ನೋಡಲು ಬದುಕಲಿಲ್ಲ.
ಬೆಂಗಳೂರಿನ ಸದಾಶಿವನಗರ ಪ್ರದೇಶ, ಮಂಗಳೂರಿನ ಕೆಎಸ್ ರಾವ್ ರಸ್ತೆ ಮತ್ತು ಮಂಗಳೂರಿನ ಕೇಂದ್ರ ಗ್ರಂಥಾಲಯಕ್ಕೆ ಕಾರ್ನಾಡ್ ಸದಾಶಿವ ರಾವ್ ಅವರ ಹೆಸರನ್ನು ಇಡಲಾಗಿದೆ.