Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಹಾಡಹಗಲೇ ಚಿನ್ನಭರಣ ಶಾಪ್‌ ಲೂಟಿ: 25 ಕೋಟಿಗೂ ಅಧಿಕ ಬೆಲೆಯ ಆಭರಣಗಳು ದರೋಡೆ

ಬಿಹಾರದ ಆರಾದಲ್ಲಿ ತನಿಷ್ಕ್ ಚಿನ್ನಾಭರಣ ಅಂಗಡಿಯಲ್ಲಿ 25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ಕಳ್ಳರು ದರೋಡೆ ಮಾಡಿರುವಂತಹ ಭೀಕರ ಘಟನೆ ನಡೆದಿದೆ. ಘಟನೆ ಸಂಭವಿಸಿದಾಗ ಪೊಲೀಸರಿಗೆ ಹಲವು ಬಾರಿ ಕರೆ ಮಾಡಿದರೂ, ಸಮಯಕ್ಕೆ ಸ್ಥಳಕ್ಕೆ ಆಗಮಿಸದಿರುವುದು ಟೀಕೆಗೆ ಗುರಿಯಾಗಿದ್ದಾರೆ. ಸದ್ಯ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ.

ಬಿಹಾರದಲ್ಲಿ ಹಾಡಹಗಲೇ ಚಿನ್ನಭರಣ ಶಾಪ್‌ ಲೂಟಿ: 25 ಕೋಟಿಗೂ ಅಧಿಕ ಬೆಲೆಯ ಆಭರಣಗಳು ದರೋಡೆ
ಬಿಹಾರದಲ್ಲಿ ಹಾಡಹಗಲೇ ಚಿನ್ನಭರಣ ಶಾಪ್‌ ಲೂಟಿ: 25 ಕೋಟಿಗೂ ಅಧಿಕ ಬೆಲೆಯ ಆಭರಣಗಳು ದರೋಡೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2025 | 11:05 PM

ಬಿಹಾರ, ಮಾರ್ಚ್​ 10: ಬಿಹಾರದ (Bihar) ಮುಖ್ಯಮಂತ್ರಿ ತಮ್ಮನ್ನ ತಾವೇ ಅಥವಾ ಅವರ ಪಾರ್ಟಿಯ ನಾಯಕರು ಸುಶಾಸನ ಬಾಬು ಅಂತಾ ಬೆನ್ನು ತಟ್ಟಿಕೊಳ್ಳಾರೆ. ಆದರೆ ಅಸಲಿಗೆ ಬಿಹಾರದಲ್ಲಿ ಈಗ ಹಾಡಹಗಲೇ ದರೋಡೆಗಳು (Robbery) ನಡೆಯುತ್ತಿವೆ. ಇದಕ್ಕೆ ಉದಾಹರಣೆ ಇಂದು ಬಿಹಾರ ಆರಾ ನಗರದಲ್ಲಿ ನಡೆದ ಚಿನ್ನಾಭರಣ ಅಂಗಡಿಯ ದರೋಡೆ. ಒಟ್ಟು 25 ಕೋಟಿಗೂ ಅಧಿಕ ಬೆಲೆಯ ಆಭರಣಗಳನ್ನ ದರೋಡೆಕೋರರು ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಬಿಹಾರದ ಬೋಜಪುರ ಜಿಲ್ಲೆಯ ಆರಾ ನಗರದಲ್ಲಿರುವ ತನಿಷ್ಕ ಚಿನ್ನಾಭರಣ ಶಾಪ್‌ಗೆ ಬೆಳಗ್ಗೆ 10.30 ಸುಮಾರಿಗೆ ನುಗ್ಗಿದ ದರೋಡೆಕೋರರು, ಸಿಬ್ಬಂದಿಗೆ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಕೆಯೊಡ್ಡಿದ್ದಾರೆ. ಯಾರಾದ್ರೂ ಹೆಚ್ಚುಕಮ್ಮಿ ಮಾಡಿದ್ರೆ ಶೂಟ್‌ ಮಾಡೋದಾಗಿ ಹೆದರಿಸಿ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸುಮಾರು 30 ನಿಮಿಷಗಳ ಕಾಲ ಶೋರೂಮ್‌ನಲ್ಲಿದ್ದ ದರೋಡೆಕೋರರು ಚಿನ್ನಭರಣದ ಜತೆಗೆ ಶಾಪ್‌ನಲ್ಲಿದ್ದ ನಗದು ಹಣವನ್ನೂ ಲೂಟಿ ಮಾಡಿದ್ದಾರೆ.

ಪೊಲೀಸ್‌ ಸ್ಟೇಷನ್‌ನಿಂದ ಕೇವಲ 600 ಮೀಟರ್‌ ದೂರದಲ್ಲಿ ದರೋಡೆ

ಅಚ್ಚರಿ ಆಘಾತಕಾರಿ ವಿಷಯ ಅಂದರೆ ಈ ಘಟನೆ ಆರಾನಗರದ ಪೊಲೀಸ್‌ ಸ್ಟೇಷನ್‌ನಿಂದ ಕೇವಲ 600 ಮೀಟರ್‌ ದೂರದಲ್ಲಿದ್ದ ಶಾಪ್‌ನಲ್ಲಿ ನಡೆದಿದೆ. ಇನ್ನೂ ಶಾಕಿಂಗ್‌ ಅಂದ್ರೆ ಸುಮಾರು 30 ನಿಮಿಷಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಬಾರಿ ಶಾಪ್‌ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಲೇಟ್‌ ಲತಿಫ್‌ರಂತೆ ತಡವಾಗಿ ಆಗಮಿಸಿದ್ದಾರೆಂದು ಶಾಪ್‌ ಸಿಬ್ಬಂದಿ ಆರೋಪಿಸಿದ್ದಾರೆ.

ಇದನ್ನೂ ಓದಿ
Image
ಏರ್‌ ಇಂಡಿಯಾ ವಿಮಾನದ ಟಾಯ್ಲೆಟ್‌ ಬ್ಲಾಕ್‌: ಮಧ್ಯ ‘U’ಟರ್ನ್‌ ಹೊಡೆದ ವಿಮಾನ
Image
ಏಪ್ರಿಲ್ 1, 2025 ರಿಂದ ಎಲ್ಲ ಬ್ಯಾಂಕ್​ಗಳ ಯುಪಿಐ ವಹಿವಾಟುಗಳು ಸ್ಥಗಿತ?
Image
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
Image
ಲಲಿತ್ ಮೋದಿ ಕೈತಪ್ಪಿದ ವಾನೋಟೂ ಪಾಸ್​ಪೋರ್ಟ್

ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನದ ಟಾಯ್ಲೆಟ್‌ ಬ್ಲಾಕ್‌: ಮಾರ್ಗ ಮಧ್ಯದಲ್ಲೇ ಅಮೆರಿಕಕ್ಕೆ ಹಿಂದಿರುಗಿದ ವಿಮಾನ

ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ದರೋಡೆಕೋರರು ಎಸ್ಕೇಪ್‌ ಆಗಿದ್ದರು. ಆದರೂ ಸಿಕ್ಕ ಮಾಹಿತಿ ಮೇಲೆ ಭೇಟೆ ಆರಂಭಿಸಿದ ಪೊಲೀಸರು, ಲೂಟಿಕೋರರ ಅಡಗುದಾಣ ಪತ್ತೆ ಹಚ್ಚಿ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಲ್ಲಿ ಇಬ್ಬರು ಗಾಯಗೊಂಡಿದ್ದು, ಇನ್ನುಳಿದವರು ಎಸ್ಕೇಪ್‌ ಆಗಿದ್ದಾರೆ. ಗಾಯಗೊಂಡವರನ್ನ ಅರೆಸ್ಟ್‌ ಮಾಡಲಾಗಿದ್ದು, ಇತರರ ಭೇಟೆ ಮುಂದುವರಿದಿದೆ. ಅಂದ ಹಾಗೆ ಈ ಎಲ್ಲ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ತನಿಖೆ ಮುಂದುವರಿದಿದೆ.

ವರದಿ: ಬ್ಯೂರೋ ರಿಪೋರ್ಟ್‌, ಟಿವಿ9.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಅಪ್ಪುನ್ ಜಾತ್ರಿಯಲ್ಲಿ ಕಬ್ಬಿನ ಜ್ಯೂಸ್, ಐಸ್ ಕ್ಯಾಂಡಿಗೆ ಭರ್ಜರಿ ಬೇಡಿಕೆ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಶಾಸಕರನ್ನೂ ಬಿಡದ ಕಳ್ಳರು: ಬಿಜೆಪಿ ಎಂಎಲ್​ಎ ಕಚೇರಿಗೆ ನುಗ್ಗಿ ಕಳ್ಳತನ
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಮುಟ್ಟಲು ಹೋದರೆ ಆಕಾಶ-ಭೂಮಿ ಒಂದಾಗುವ ಹಾಗೆ ಅರಚುತ್ತಾಳೆ: ಶ್ರೀಕಾಂತ್
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಸೋಂಕಿತ ಸೂಜಿ ಚುಚ್ಚುವ ಪ್ರಯತ್ನ ಯಾರಿಂದ ನಡೆದಿತ್ತು ಅಂತ ರಂಗನಾಥ್ ಹೇಳಲ್ಲ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಒಂದು ರಾತ್ರಿ ಮಲಗಲು 5000 ರೂ.: ಪತ್ನಿಯ ಕರಾಳ ಮುಖ ಬಿಚ್ಚಿಟ್ಟ ಪತಿ
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ಗೌಡರನ್ನು ನೂಕಿದ ಅಭಿಮಾನಿಗಳು
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಲೋಡ್‌ ಶೆಡ್ಡಿಂಗ್‌: ವಿದ್ಯುತ್​ ಇಲ್ಲದೇ ರೈತರು, ವಿದ್ಯಾರ್ಥಿಗಳು ಪರದಾಟ!
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಮೊದಲ ಬಾರಿ ಶಾಸಕನಾಗಿರುವ ಧೀರಜ್ ಬಹಳಷ್ಟು ಅರ್ಥಮಾಡಿಕೊಳ್ಳಬೇಕಿದೆ: ಕೆಎಂಎಸ್
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಒತ್ತುವರಿ ತೆರವು ಕಾರ್ಯಾಚರಣೆಯಿಂದ ಕುಮಾರಸ್ವಾಮಿ ಭಯಗೊಂಡಿಲ್ಲ: ಮಂಜು
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ
ಯಾದಗಿರಿ ಜಿಲ್ಲೆಯ ಜನ ಹನಿಹನಿ ನೀರಿಗಾಗಿ ಪರಿತಪಿಸುತ್ತಿದ್ದಾರೆ: ಶರಣಗೌಡ