AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3: ಚಂದ್ರನಲ್ಲಿ ಸಲ್ಫರ್ ಪತ್ತೆ, ಚಂದಿರನ ಅಂಗಳದಲ್ಲಿ ಗಂಧಕ ಬಂದಿದ್ದು ಹೇಗೆ?

ಚಂದ್ರನ ಮಣ್ಣಿನಲ್ಲಿ ಗಂಧಕವನ್ನು ನಿರೀಕ್ಷಿಸಿರಲಿಲ್ಲ. ಆದರೆ ರೋವರ್‌ನ ಎರಡು ಕಾರ್ಯವಿಧಾನಗಳು ಸಲ್ಫರ್ ಇರುವಿಕೆಯನ್ನು ದೃಢಪಡಿಸಿದವು. ಅಲ್ಯೂಮಿನಿಯಂ, ಸಿಲಿಕಾನ್, ಕ್ಯಾಲ್ಸಿಯಂ, ಕಬ್ಬಿಣವನ್ನು ನಿರೀಕ್ಷಿಸಲಾಗಿತ್ತು ಮತ್ತು ಅವುಗಳು ಸಹ ಕಂಡುಬಂದಿವೆ. ಚಂದ್ರಯಾನ-3 ಬಂದಿಳಿದ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರನ ಮಣ್ಣು ಮತ್ತು ಕಲ್ಲುಗಳು ಯಾವುವು? ಇದು ಇತರ ಎತ್ತರದ ಪ್ರದೇಶಗಳಿಗಿಂತ ಹೇಗೆ ಭಿನ್ನವಾಗಿದೆ? ಚಂದ್ರಯಾನ-3 ರೋವರ್ ತನ್ನ ವೈಜ್ಞಾನಿಕ ಉಪಕರಣಗಳೊಂದಿಗೆ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಿರುವ ಪ್ರಶ್ನೆಗಳು ಎಂದು ಇಸ್ರೋ ಹೇಳಿದೆ.

ಚಂದ್ರಯಾನ-3: ಚಂದ್ರನಲ್ಲಿ ಸಲ್ಫರ್ ಪತ್ತೆ, ಚಂದಿರನ ಅಂಗಳದಲ್ಲಿ ಗಂಧಕ ಬಂದಿದ್ದು ಹೇಗೆ?
ಚಂದ್ರಯಾನ-3
Follow us
ರಶ್ಮಿ ಕಲ್ಲಕಟ್ಟ
|

Updated on: Aug 31, 2023 | 7:43 PM

ದೆಹಲಿ ಆಗಸ್ಟ್ 31: ಚಂದ್ರಯಾನ-3ರ (Chandrayaan-3) ಪ್ರಗ್ಯಾನ್ ರೋವರ್ (Pragyan rover) ಈಗಾಗಲೇ ಚಂದ್ರನ ಮೇಲೆ ಸಲ್ಫರ್ (Sulphur)ಮತ್ತು ಆಮ್ಲಜನಕ ಸೇರಿದಂತೆ ಹಲವಾರು ಧಾತುಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ಗುರುವಾರ, ಪ್ರಗ್ಯಾನ್ ರೋವರ್‌ನ ಮತ್ತೊಂದು ಉಪಕರಣವು ಚಂದ್ರನ (Moon) ದಕ್ಷಿಣ ಧ್ರುವದಲ್ಲಿ ಗಂಧಕವನ್ನು ಕಂಡು ಕೊಂಡಿದೆ ಎಂದು ಇಸ್ರೋ ದೃಢಪಡಿಸಿದೆ. ಆಗಸ್ಟ್ 23 ರಂದು ಚಂದ್ರಯಾನ 3 ಯಶಸ್ವಿಯಾಗಿ ಬಂದಿಳಿದ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಲ್ಫರ್ ಪತ್ತೆಯಾದ ನಂತರ ಅದು ಹೇಗೆ ಬಂತು ಎಂಬುದರ ಬಗ್ಗೆ ವಿಜ್ಞಾನಿಗಳು ಚಿಂತನೆ ನಡೆಸುತ್ತಿದ್ದಾರೆ. ಹೀಗೆ ಸಲ್ಫರ್ ಅಥವಾ ಗಂಧಕ ಇರಬೇಕಾದರೆ ಅಲ್ಲಿ ಅವು ತನ್ನಿಂದತಾನೇ ಉದ್ಭವವಾಗಿದೆಯೇ, ಜ್ವಾಲಾಮುಖಿಯೇ ಅಥವಾ ಉಲ್ಕಾಶಿಲೆಯೇ ಎಂಬುದರ ಬಗ್ಗೆ ವಿಜ್ಞಾನಿಗಳು ಶೋಧ ನಡೆಸುತ್ತಿದ್ದಾರೆ.

ಸಲ್ಫರ್ ಸಾಮಾನ್ಯವಾಗಿ ಜ್ವಾಲಾಮುಖಿ ಚಟುವಟಿಕೆಗಳಿಂದ ಹುಟ್ಟಿಕೊಂಡಿದೆ. ಆದರೆ ವಿಜ್ಞಾನಿಗಳು ಚಂದ್ರನ ಮೇಲೆ ಸಲ್ಫರ್ ದೃಢಪಡಿಸಿದ ಉಪಸ್ಥಿತಿಯ ಮೇಲೆ ಇನ್ನೂ ಯಾವುದೆ ಹೆಚ್ಚಿನ ಮಾಹಿತಿ ನೀಡಿಲ್ಲ. ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಆನ್‌ಬೋರಾಡ್ ಪ್ರಗ್ಯಾನ್ ರೋವರ್ ಗಂಧಕವನ್ನು ಪತ್ತೆ ಮಾಡಿತ್ತು,. ಈಗ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪ್ (APXS) ಸಲ್ಫರ್ ಮತ್ತು ಇತರ ಕೆಲವು ಸಣ್ಣ ಅಂಶಗಳನ್ನು ಪತ್ತೆ ಮಾಡಿದೆ.

“Ch-3 ರ ಈ ಸಂಶೋಧನೆಯು ಈ ಪ್ರದೇಶದಲ್ಲಿ ಸಲ್ಫರ್ (S) ಮೂಲಕ್ಕೆ ಹೊಸ ವಿವರಣೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳನ್ನು ಒತ್ತಾಯಿಸುತ್ತದೆ: ಇದು ಆಂತರಿಕವಾಗಿರುವುದೇ, ಜ್ವಾಲಾಮುಖಿ ಅಥವಾ ಉಲ್ಕಾಶಿಲೆಯೇ ಎಂದು ಇಸ್ರೋ ಚಂದ್ರಯಾನ-3 ಅಪ್ಡೇಟ್ ಹಂಚಿಕೊಂಡಿದೆ.

ಚಂದ್ರನ ಮೇಲೆ ಸಲ್ಫರ್: ಇದು ಏನು ಸೂಚಿಸುತ್ತದೆ?

ಚಂದ್ರನ ಮಣ್ಣಿನಲ್ಲಿ ಗಂಧಕವನ್ನು ನಿರೀಕ್ಷಿಸಿರಲಿಲ್ಲ. ಆದರೆ ರೋವರ್‌ನ ಎರಡು ಕಾರ್ಯವಿಧಾನಗಳು ಸಲ್ಫರ್ ಇರುವಿಕೆಯನ್ನು ದೃಢಪಡಿಸಿದವು. ಅಲ್ಯೂಮಿನಿಯಂ, ಸಿಲಿಕಾನ್, ಕ್ಯಾಲ್ಸಿಯಂ, ಕಬ್ಬಿಣವನ್ನು ನಿರೀಕ್ಷಿಸಲಾಗಿತ್ತು ಮತ್ತು ಅವುಗಳು ಸಹ ಕಂಡುಬಂದಿವೆ. ಚಂದ್ರಯಾನ-3 ಬಂದಿಳಿದ ದಕ್ಷಿಣ ಧ್ರುವ ಪ್ರದೇಶದಲ್ಲಿ ಚಂದ್ರನ ಮಣ್ಣು ಮತ್ತು ಕಲ್ಲುಗಳು ಯಾವುವು? ಇದು ಇತರ ಎತ್ತರದ ಪ್ರದೇಶಗಳಿಗಿಂತ ಹೇಗೆ ಭಿನ್ನವಾಗಿದೆ? ಚಂದ್ರಯಾನ-3 ರೋವರ್ ತನ್ನ ವೈಜ್ಞಾನಿಕ ಉಪಕರಣಗಳೊಂದಿಗೆ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಿರುವ ಪ್ರಶ್ನೆಗಳು ಎಂದು ಇಸ್ರೋ ಹೇಳಿದೆ.

ಸಲ್ಫರ್ ಇರುವಿಕೆಯು ಚಂದ್ರನ ಮೇಲ್ಮೈಯಲ್ಲಿ ನೀರಿನ ಮಂಜುಗಡ್ಡೆ ಇರಬಹುದೆಂದು ಸೂಚಿಸುತ್ತದೆ. ಅಥವಾ, ಇತ್ತೀಚೆಗೆ ಸಲ್ಫರ್ ಬಿಡುಗಡೆಗೆ ಕಾರಣವಾಗುವ ಜ್ವಾಲಾಮುಖಿ ಸ್ಫೋಟವಿರಬಹುದು.

ಇದನ್ನೂ ಓದಿ: ಮುಂದಿನ 7 ದಿನಗಳಲ್ಲಿ ಮುಗಿಯಲಿದೆ ಭಾರತದ ಚಂದ್ರಯಾನ-3; ಇಲ್ಲಿಯವರೆಗೆ ಯಾವೆಲ್ಲ ಚಟುವಟಿಕೆ ನಡೆದಿದೆ?

ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಹೇಗೆ ಕೆಲಸ ಮಾಡುತ್ತದೆ?

ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಚಂದ್ರನ ಮೇಲೆ ಸಲ್ಫರ್ ಇರುವಿಕೆಯನ್ನು ದೃಢಪಡಿಸಿದ ಇತ್ತೀಚಿನ ತಂತ್ರವಾಗಿದೆ. ಇಸ್ರೋ ಪ್ರಕಾರ, APXS ಉಪಕರಣವು ಚಂದ್ರನಂತಹ ಕಡಿಮೆ ವಾತಾವರಣವನ್ನು ಹೊಂದಿರುವ ಗ್ರಹಗಳ ಮೇಲ್ಮೈಯಲ್ಲಿ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯ ಇನ್-ಸಿಟು ವಿಶ್ಲೇಷಣೆಗೆ ಸೂಕ್ತವಾಗಿರುತ್ತದೆ. ಇದು ಮೇಲ್ಮೈ ಮಾದರಿಯ ಮೇಲೆ ಆಲ್ಫಾ ಕಣಗಳು ಮತ್ತು ಎಕ್ಸ್-ಕಿರಣಗಳನ್ನು ಹೊರಸೂಸುವ ವಿಕಿರಣಶೀಲ ಮೂಲಗಳನ್ನು ಒಯ್ಯುತ್ತದೆ. ಮಾದರಿಯಲ್ಲಿ ಇರುವ ಪರಮಾಣುಗಳು ಅಸ್ತಿತ್ವದಲ್ಲಿರುವ ಅಂಶಗಳಿಗೆ ಅನುಗುಣವಾಗಿ ವಿಶಿಷ್ಟವಾದ ಎಕ್ಸ್-ರೇ ರೇಖೆಗಳನ್ನು ಹೊರಸೂಸುತ್ತವೆ. ಈ ವಿಶಿಷ್ಟವಾದ X- ಕಿರಣಗಳ ಶಕ್ತಿಗಳು ಮತ್ತು ತೀವ್ರತೆಯನ್ನು ಅಳೆಯುವ ಮೂಲಕ, ಸಂಶೋಧಕರು ಅಲ್ಲಿರುವ ಧಾತುಗಳನ್ನು ಕಂಡುಹಿಡಿಯಬಹುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ಸೇತುವೆಗಳ ಎತ್ತರ ಹೆಚ್ಚಿಸಿ ಮರುನಿರ್ಮಾಣ ಮಾಡುವ ಅವಶ್ಯಕತೆ ಇದೆ
ಸೇತುವೆಗಳ ಎತ್ತರ ಹೆಚ್ಚಿಸಿ ಮರುನಿರ್ಮಾಣ ಮಾಡುವ ಅವಶ್ಯಕತೆ ಇದೆ