AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ ಪಾಲಿಕೆ ಅಸ್ಪತ್ರೆಗಳಲ್ಲಿ ಬೆಡ್ ಕೊರತೆ, ಸೋಂಕಿತರಿಗೆ ಕುರ್ಚಿಯಲ್ಲಿ ಕೂರಿಸಿ ವೆಂಟಿಲೇಟರ್ ವ್ಯವಸ್ಥೆ!

ಪುಣೆ ಮಹಾನಗರಸಭೆ ಅಧೀನದಲ್ಲಿರುವ ಜಂಬೋ ಆಸ್ಪತ್ರೆಯಲ್ಲಿ 400 ಬೆಡ್​ಗಳು ಲಭ್ಯವಿವೆ ಅದರೆ ಆಮ್ಲಜನಕ ವ್ಯವಸ್ಥೆಯಿರುವ ಒಂದು ಬೆಡ್​ ಕೂಡ ಅಲ್ಲಿ ಲಭ್ಯವಿಲ್ಲ.

ಪುಣೆ ಪಾಲಿಕೆ ಅಸ್ಪತ್ರೆಗಳಲ್ಲಿ ಬೆಡ್ ಕೊರತೆ, ಸೋಂಕಿತರಿಗೆ ಕುರ್ಚಿಯಲ್ಲಿ ಕೂರಿಸಿ ವೆಂಟಿಲೇಟರ್ ವ್ಯವಸ್ಥೆ!
ಪುಣೆಯ ವೈಸಿಎಮ್ ಆಸ್ಪತ್ರೆ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Apr 06, 2021 | 10:10 PM

ಪುಣೆ: ನಗರದ ಹೊರವಲಯದಲ್ಲಿನ ನಗರ ಪೌರಾಡಳಿತ ಸ್ವಾಮ್ಯದ ವೈಸಿಎಮ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಅಕ್ಷರಶಃ ಬೆಡ್​ಗಳಿಲ್ಲದಂತಾಗಿದ್ದು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸೋಂಕಿತರಿಗೆ ಅಸ್ಪತ್ರೆಯ ಪ್ರವೇಶ ಪ್ರದೇಶದಲ್ಲಿರುವ ಕುರ್ಚಿಗಳ ಮೇಲೆ ಕುಳ್ಳಿರಿಸಿ ಆಮ್ಲಜನಕ ಒದಗಿಸಲಾಗುತ್ತಿದೆ. ವೈಸಿಎಮ್ ಆಸ್ಪತ್ರೆಯ ವಿವಿಧ ವಿಭಾಗಗಲ್ಲಿ 400 ಬೆಡ್​ಗಳ ವ್ಯವಸ್ಥೆಯಿದ್ದರೂ ಶನಿವಾರದವರೆಗೆ ಒಂದೇ ಒಂದು ಬೆಡ್ ಲಭ್ಯವಿರಲಿಲ್ಲ. ಹಾಗೆಯೇ, ತೀವ್ರನಿಗಾ ಘಟಕದಲ್ಲಿನ ಎಲ್ಲ 55 ಬೆಡ್​ಗಳನ್ನು ರೋಗಿಗಳಿಗೆ ನೀಡಲಾಗಿದೆ. ಹಾಗಾಗಿ, ಹಲವಾರು ರೋಗಿಗಳನ್ನು ಪ್ರವೇಶ ದ್ವಾರದ ಬಳಿಯಿರುವ ಕುರ್ಚಿಗಳ ಮೇಲೆ ಕೂರಿಸಿ ಅಮ್ಲಜನಕ ಒದಗಿಸಲಾಗುತ್ತಿದೆ.

ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಆಸ್ಪತ್ರೆಯ ಡಾ. ರಾಜೇಂದ್ರ ವಾಬ್ಲೆ ಅವರು ಆಸ್ಪತ್ರೆಯಲ್ಲಿ ಒಂದೇ ಒಂದು ಬೆಡ್ ಲಭ್ಯವಿಲ್ಲದ ಕಾರಣ ಅನಿವಾರ್ಯತೆಗಳ ಮೊರೆ ಹೋಗಬೇಕಾಗಿದೆ ಎಂದು ಹೇಳಿದರು ‘ಪುಣೆ ನಗರ  ಪಾಲಿಕೆ ವ್ಯಾಪ್ತಿಯ ಮತ್ತು ಹೊರಭಾಗದಿಂದ ಚಿಕಿತ್ಸೆಗಾಗಿ ಬರುತ್ತಿರುವ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಹಾಗಾಗಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಪ್ರವೇಶ ದ್ವಾರದ ಬಳಿಯಿರುವ ಕುರ್ಚಿಗಳ ಮೇಲೆ ಕೂರಿಸಿ ಆಕ್ಸಿಜನ್ ಒದಗಿಸಲಾಗುತ್ತಿದೆ. ಅವರಿಗೆ ಬೆಡ್ ಸಿಗುವವರೆಗೆ ನಾವು ಹಾಗೆ ಮಾಡದೆ ವಿಧಿಯಿಲ್ಲ. ಸೋಂಕಿತನೊಬ್ಬನ ಅನಾರೋಗ್ಯದ ತೀವ್ರತೆಯನ್ನು ಆಧರಸಿ ನಾವು ಆಮ್ಲಜನಕ ಒದಗಿಸುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇವೆ. ತೀರ ಸಂಕಷ್ಟದಲ್ಲಿರುವ ಸೋಂಕಿತನಿಗೆ ನಾವು ಚಿಕಿತ್ಸೆ ಒದಗಿಸದಿರುವುದು ಸಾಧ್ಯವಿಲ್ಲ. ಅಂಥವರಿಗೆ ನಾವು ಕೂಡಲೇ ಆಕ್ಸಿಜನ್ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಎಂದು ಡಾ. ವಾಬ್ಲೆ ಹೇಳಿದರು.

ಈ ಸ್ಥಿತಿ ಹೀಗೆಯೇ ಮುಂದುವರಿದರೆ, ಪೌರಾಡಳಿತ ಸ್ವಾಮ್ಯದಲ್ಲಿರುವ ನಗರದ ಇತರ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಮಾಡಲಾಗುವುದೆಂದು ಡಾ. ವಾಬ್ಲೆ ಹೇಳಿದರು. ಪುಣೆ ಮಹಾನಗರಸಭೆ ಅಧೀನದಲ್ಲಿರುವ ಜಂಬೋ ಆಸ್ಪತ್ರೆಯಲ್ಲಿ 400 ಬೆಡ್​ಗಳು ಲಭ್ಯವಿವೆ ಅದರೆ ಆಮ್ಲಜನಕ ವ್ಯವಸ್ಥೆಯಿರುವ ಒಂದು ಬೆಡ್​ ಕೂಡ ಅಲ್ಲಿ ಲಭ್ಯವಿಲ್ಲ. ‘ನಮ್ಮಲ್ಲಿ 400 ಬೆಡ್​ಗಳಿವೆ, ಆದರೆ ಅಕ್ಸಿಜನ್ ವ್ಯವಸ್ಥೆ ಹೊಂದಿರುವ 200 ಬೆಡ್​ ಮತ್ತು ಐಸಿಯುನಲ್ಲಿನ 60 ಬೆಡ್​ಗಳು ರೋಗಿಗಳಿಂದ ಆಕ್ರಮಿಸಲ್ಪಟ್ಟಿವೆ. ಆದರೆ, ಹೆಚ್ ಡಿ ಯು (ಹೈ ಡಿಪೆಂಡೆನ್ಸಿ ಯುನಿಟ್) ನಲ್ಲಿ 100 ಬೆಡ್​ಗಳು ಲಭ್ಯವಿವೆ’ ಎಂದು ಅಸ್ಪತ್ರೆಯ ಸಿಇಒ ಡಾ ಸಂಗ್ರಾಮ್ ಕಪಾಲೆ ಹೇಳಿದರು.

ಪ್ರತಿದಿನ ಆಸ್ಪತ್ರೆಗೆ 100 ಹೊಸ ಸೋಂಕಿತರು ದಾಖಲಾಗುತ್ತಿದ್ದಾರೆ ಎಂದು ಡಾ ಕಪಾಲೆ ಹೇಳಿದರು. ಆಸ್ಪತ್ರೆಗೆ ಬರುವ ವ್ಯಕ್ತಿಯ ಸೋಂಕಿನ ತೀವ್ರತೆ ಮೇಲೆ ದಾಖಲು ಮಾಡಿಕೊಳ್ಳುವ ನಿರ್ಧಾರವನ್ನು ನಾವು ತೆಗೆದುಕೊಳ್ಳುತ್ತಿದ್ದೇವೆ. ರೋಗಿಯಲ್ಲಿ ಗಂಬೀರವಲ್ಲದ ರೋಗಲಕ್ಷಣಗಳು ಕಾಣಿಸಿದರೆ ಮನೆಯಲ್ಲೇ ಕ್ವಾರಂಟೈನ್ ಆಗುವ ಸಲಹೆಯನ್ನು ನಾವು ನೀಡುತ್ತಿದ್ದೇವೆ. ಒಂದು ಪಕ್ಷ ಅವರಿಗೆ ವೆಂಟಿಲೇಟರ್​ ಅವಶ್ಯಕತೆಯಿದೆ ಎಂದು ನಮಗೆ ಅನಿಸಿದರೆ ದಾಖಲು ಮಾಡಿಕೊಳ್ಳುತ್ತೇವೆ ಇಲ್ಲವೇ ಸೌಲಭ್ಯಗಳು ಲಭ್ಯವಿರುವ ಅಸ್ಪತ್ರೆಗೆ ರೆಫರ್ ಮಾಡುತ್ತಿದ್ದೇವೆ,’ ಎಂದು ಡಾ ಕಪಾಲೆ ಹೇಳಿದರು.

ಅಸ್ಪತ್ರೆಯ ಸಾಮರ್ಥ್ಯವನ್ನು ಹಂತಹಂತವಾಗಿ ಹೆಚ್ಚಿಸಿಲಾಗುವುದೆಂದು ವೈದ್ಯರು ಹೇಳಿದರು. ಏತನ್ಮಧ್ಯೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು ಕಳೆದ 24 ಗಂಟೆಗಳಲ್ಲಿ 96,982 ಹೊಸ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ, ಛತ್ತೀಸ್​ಗಡ್, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ, ಮಧ್ಯಪ್ರದೇಶ, ಹಾಗೂ ಗುಜರಾತ್​ನಲ್ಲಿ ಮೊದಲಾದ ಎಂಟು ರಾಜ್ಯಗಳಲ್ಲಿ ಸಹ ಹೊಸ ಪ್ರಕರಣಗಳು ಹೆಚ್ಚಿದ್ದು ದೇಶದ ಪ್ರಕರಣಗಳ ಪೈಕಿ ಶೇಕಡಾ 80ರಷ್ಟು ಈ ರಾಜ್ಯಗಳಲ್ಲೇ ಕಂಡುಬರುತ್ತಿವೆ, ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ತಿಳಿಸುತ್ತದೆ.

ಇದನ್ನೂ ಓದಿ: Covid-19 India Update: ಭಾರತದಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಸೋಂಕು, ಗುರುವಾರ ಮುಖ್ಯಮಂತ್ರಿಗಳೊಂದಿಗೆ ನರೇಂದ್ರ ಮೋದಿ ಸಭೆ

Published On - 7:35 pm, Tue, 6 April 21

ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ