AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ತ್ರೀ ಶಿಲ್ಪ ಕೊಟ್ಟು ನಮ್ಮಲ್ಲಿ ಆಸೆ ಹುಟ್ಟಿಸಬೇಡಿ’: ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಟ ಅಲೆನ್ಸಿಯರ್ ಹೇಳಿಕೆಗೆ ಆಕ್ರೋಶ

Malayalam actor Alencier Ley Lopez: ಪ್ರಶಸ್ತಿ ಸ್ವೀಕರಿಸಿ ಮನೆಗೆ ಹೋಗಲು ಅಣಿಯಾಗಿದ್ದೆ. ಪ್ರಶಸ್ತಿ ಭಾರವಿತ್ತು. ಮುಖ್ಯಮಂತ್ರಿ ಇದ್ದಿದ್ದರೆ ಹೇಳಬಹುದಿತ್ತು. ಸಾಂಸ್ಕೃತಿಕ ಸಚಿವರು ಇರುವ ಕಾರಣ ಹೇಳುತ್ತೇನೆ. ನಮಗೆ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ನೀಡಲಾಗಿದೆ. ಎಲ್ಲರಿಗೂ ಶ್ರೇಷ್ಠ ನಟ ಪ್ರಶಸ್ತಿ ಸಿಗುತ್ತದೆ. ವಿಶೇಷ ಪ್ರಶಸ್ತಿ ಪಡೆದವರಿಗೆ ಇದಕ್ಕೆ ಚಿನ್ನದ ಲೇಪನವನ್ನಾದರೂ ನೀಡಿ ಕೊಡಬೇಕು. 25000 ರೂಪಾಯಿ ಕೊಟ್ಟು ನನಗೆ ಮತ್ತು ಕುಂಜಾಕೋ ಬೋಬನ್‌ಗೆ ಅವಮಾನ ಮಾಡಬೇಡಿ

‘ಸ್ತ್ರೀ ಶಿಲ್ಪ ಕೊಟ್ಟು ನಮ್ಮಲ್ಲಿ ಆಸೆ ಹುಟ್ಟಿಸಬೇಡಿ’: ಕೇರಳ ರಾಜ್ಯ ಪ್ರಶಸ್ತಿ ವಿಜೇತ ನಟ ಅಲೆನ್ಸಿಯರ್ ಹೇಳಿಕೆಗೆ ಆಕ್ರೋಶ
ಅಲೆನ್ಸಿಯರ್ ಲೇ ಲೋಪೆಜ್
ರಶ್ಮಿ ಕಲ್ಲಕಟ್ಟ
|

Updated on: Sep 15, 2023 | 1:55 PM

Share

ತಿರುವನಂತಪುರಂ ಸೆಪ್ಟೆಂಬರ್ 15ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ (Kerala State Film Award) ಪ್ರದಾನ ಸಂದರ್ಭದಲ್ಲಿ ಮಲಯಾಳಂ ನಟ ಅಲೆನ್ಸಿಯರ್ ಲೇ ಲೋಪೆಜ್ (Alencier Ley Lopez) ಮಹಿಳಾ ವಿರೋಧಿ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ಚಿತ್ರ ನಿರ್ಮಾಪಕರ ಒಂದು ವಿಭಾಗವೂ ನಟನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಗುರುವಾರ ರಾತ್ರಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಅಪ್ಪನ್’ (Appan) ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ  ನಟ ಅಲೆನ್ಸಿಯರ್, “ಈ ಸ್ತ್ರೀ ಶಿಲ್ಪದೊಂದಿಗೆ (ನಮ್ಮನ್ನು) ಪ್ರಚೋದಿಸಬೇಡಿ. ನಮಗೆ ‘ಪುರುಷ ಶಕ್ತಿ’ಯನ್ನು ಪ್ರತಿನಿಧಿಸುವ ಶಿಲ್ಪವನ್ನು ನೀಡಬೇಕು. ಗಟ್ಟಿಗರಾಗಿರುವ ಮುಖ್ಯಮಂತ್ರಿ ಇರುವ ಸ್ಥಳದಲ್ಲಿ ಪುರುಷ ಶಿಲ್ಪ ಮಾತ್ರ ಸೂಕ್ತವಾಗಿರುತ್ತದೆ. ಪುರುಷ ಶಿಲ್ಪವನ್ನು ಸ್ವೀಕರಿಸುವ ದಿನ ನಾನು ನನ್ನ ನಟನೆಯನ್ನು ನಿಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಬಳಿಕ ನಟ ಈ ರೀತಿ ಹೇಳಿದ್ದಾರೆ. ಅಲೆನ್ಸಿಯರ್ ಭಾಷಣ ಆರಂಭಿಸುವ ಮುನ್ನವೇ ಸಿಎಂ ಪಿಣರಾಯಿ ವೇದಿಕೆಯಿಂದ ನಿರ್ಗಮಿಸಿದ್ದರು. ‘ವಿಶೇಷ ತೀರ್ಪುಗಾರರ’ ಪ್ರಶಸ್ತಿ ಮತ್ತು 25,000 ರೂಪಾಯಿ ಬಹುಮಾನದ ವಿರುದ್ಧವೂ ಅಲೆನ್ಸಿಯರ್ ವ್ಯಂಗ್ಯವಾಡಿದ್ದಾರೆ.

ಸಮಾರಂಭದಲ್ಲಿ ಅಲೆನ್ಸಿಯರ್ ಮಾತು

‘ಪ್ರಶಸ್ತಿ ಸ್ವೀಕರಿಸಿ ಮನೆಗೆ ಹೋಗಲು ಅಣಿಯಾಗಿದ್ದೆ. ಪ್ರಶಸ್ತಿ ಭಾರವಿತ್ತು. ಮುಖ್ಯಮಂತ್ರಿ ಇದ್ದಿದ್ದರೆ ಹೇಳಬಹುದಿತ್ತು. ಸಾಂಸ್ಕೃತಿಕ ಸಚಿವರು ಇರುವ ಕಾರಣ ಹೇಳುತ್ತೇನೆ. ನಮಗೆ ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ನೀಡಲಾಗಿದೆ. ಎಲ್ಲರಿಗೂ ಶ್ರೇಷ್ಠ ನಟ ಪ್ರಶಸ್ತಿ ಸಿಗುತ್ತದೆ. ವಿಶೇಷ ಪ್ರಶಸ್ತಿ ಪಡೆದವರಿಗೆ ಇದಕ್ಕೆ ಚಿನ್ನದ ಲೇಪನವನ್ನಾದರೂ ನೀಡಿ ಕೊಡಬೇಕು. 25000 ರೂಪಾಯಿ ಕೊಟ್ಟು ನನಗೆ ಮತ್ತು ಕುಂಜಾಕೋ ಬೋಬನ್‌ಗೆ ಅವಮಾನ ಮಾಡಬೇಡಿ. ನಮಗೆ ಪ್ರಶಸ್ತಿ ಮೊತ್ತ ಹೆಚ್ಚಳ ಮಾಡಬೇಕು. ಗೌತಮ್ ಘೋಷ್ ಅವರಲ್ಲಿ ವಿನಂತಿ, ವಿಶೇಷ ತೀರ್ಪುಗಾರ ಪ್ರಶಸ್ತಿ ನೀಡಿ ನಮ್ಮನ್ನು ಅವಮಾನಿಸಬೇಡಿ. ಎಲ್ಲರಿಗೂ ಒಳ್ಳೆಯ ಪ್ರಶಸ್ತಿಗಳು ಸಲ್ಲಬೇಕು, ವಿಶೇಷ ತೀರ್ಪುಗಾರ ಪ್ರಶಸ್ತಿಗೆ ಚಿನ್ನ ಲೇಪಿತ ಪ್ರಶಸ್ತಿ ನೀಡಬೇಕು.

ಈ ಸ್ತ್ರೀ ವಿಗ್ರಹ ಕೊಟ್ಟು ನಮ್ಮನ್ನು ಪ್ರಚೋದಿಸಬೇಡಿ. ಇನ್ನು ಮುಂದೆಯಾದರೂ ಗಟ್ಟಿಗ ಮುಖ್ಯಮಂತ್ರಿ ಇರುವಲ್ಲಿ ಮಹಿಳಾ ಪ್ರತಿಮೆ ನೀಡಿ ಅವಮಾನ ಮಾಡಬೇಡಿ. ಯಾವಾಗ ನಾನು ಪುರುಷ ಪ್ರತಿಮೆ ಸ್ವೀಕರಿಸುತ್ತೇನೋ ಅಂದು ನಾನು ನಟನೆಯನ್ನು ನಿಲ್ಲಿಸುತ್ತೇನೆ ಎಂದು ಅಲೆನ್ಸಿಯರ್ ಹೇಳಿದ್ದಾರೆ.

ಇದನ್ನೂ ಓದಿ:  ‘ಜವಾನ್’ ಚಿತ್ರದಲ್ಲಿ ನಟಿಸಲು ಒಂದು ರೂಪಾಯಿನೂ ಪಡೆದಿಲ್ಲ ದೀಪಿಕಾ ಪಡುಕೋಣೆ; ಕಾರಣವೇನು?

ಮಹಿಳೆ/ಟ್ರಾನ್ಸ್‌ಜೆಂಡರ್‌ ವಿಭಾಗದಲ್ಲಿ ಪ್ರಶಸ್ತಿ ಸ್ವೀಕರಿಸಿದ ನಿರ್ದೇಶಕಿ ಶ್ರುತಿ ಶರಣ್ಯಮ್‌, ಅಲೆನ್ಸಿಯರ್‌ ಹೇಳಿಕೆ ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಅಲೆನ್ಸಿಯರ್ ಹೇಳಿಕೆಗೆ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದ ಅವರು, ಪ್ರಶಸ್ತಿಯ ಮೂಲಕ ಪಿತೃಪ್ರಭುತ್ವದ ವಿರುದ್ಧ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಸಿಎಂ ಹೇಳಿದ ಕೆಲವೇ ನಿಮಿಷಗಳಲ್ಲಿ ನಟ ಈ ರೀತಿ ಹೇಳಿಕೆ ನೀಡಿರುವುದು ದುರದೃಷ್ಟಕರ. “ನನ್ನ ಕೈಯಲ್ಲಿರುವ ‘ಮಹಿಳೆ’ ವಿಶೇಷವಾದುದು ಎಂದು ಪ್ರಶಸ್ತಿ ಹಿಡಿದಿರುವ ಚಿತ್ರದೊಂದಿಗೆ ಶ್ರುತಿ ಈ ರೀತಿ ಬರೆದಿದ್ದಾರೆ.

ನಟ ಸಂತೋಷ್ ಕೀಝತ್ತೂರು ಮತ್ತು ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಕೂಡಾ ನಟನ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅಲೆನ್ಸಿಯರ್ ಪ್ರಶಸ್ತಿಯನ್ನು ಹಿಂದಿರುಗಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಅಲೆನ್ಸಿಯರ್ ವಿರುದ್ಧ ಅವರ ಮಹಿಳಾ ಸಹೋದ್ಯೋಗಿಯೊಬ್ಬರು MeToo ಆರೋಪವನ್ನು ಎತ್ತಿದ್ದರು. ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರ ಅವರು ದೂರನ್ನು ಮುಂದುವರಿಸಲಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ